ಶನಿವಾರ, ಫೆಬ್ರವರಿ 26, 2011

ವರಕವಿ ಬೇಂದ್ರೆಯವರ ನಾಕುತಂತಿ ಕವನ - ಉಪನ್ಯಾಸ

ಗೆಳೆಯರೆ,

ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದ
ವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ
ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆ

ದಿನ: 27/ 02/ 2011 ಭಾನುವಾರ
ಸಮಯ: 10:30 ರಿಂದ 12:30

ವಿಳಾಸ : ಆಕೃತಿ ಪುಸ್ತಕ ಮಳಿಗೆ
ನಂ: 31/1, 12 ನೇ ಮುಖ್ಯರಸ್ತೆ,
3 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560010

ಹತ್ತಿರದ ಗುರುತು: ಇ ಎಸ್ ಐ ಆಸ್ಪತ್ರೆ ಹತ್ತಿರ

ದಾರಿ ತಪ್ಪಿದರೆ ಕರೆ ಮಾಡಿ: 9886694580

ಬನ್ನಿ ಭಾಗವಹಿಸಿ..ಚರ್ಚಿಸಿ... ನಿಮ್ಮ ಗೆಳೆಯರನ್ನೂ ಕರೆತನ್ನಿ...

ಶುಕ್ರವಾರ, ಫೆಬ್ರವರಿ 04, 2011

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಂಚಿಕೆಯಲ್ಲಿ ಅಕ್ರಮ

೨ಜಿ ತರಂಗಾಂರಗಳ ಹಂಚಿಕೆಯಲ್ಲಿ ಅಕ್ರಮ, ಕರ್ನಾಟಕದ ಮುಖ್ಯಮಂತ್ರಿ, ಮಂತ್ರಿಗಳ ಭೂಹಗರಣಗಳಷ್ಟು ಈ ಹಗರಣ ದೊಡ್ಡದಲ್ಲದಿದ್ದರೂ, ರಾಜಕಾರಣಿಗಳನ್ನು ತಿದ್ದಬೇಕಾಗಿರುವ ಈ ಅಕ್ಷರಲೋಕದ ಕೆಲವು ಗಣ್ಯರ ನೈತಿಕ ದೀವಾಳಿತನವನ್ನು ತೋರಿಸುತ್ತದೆ.,

ವಿಷಯ ಇಂತಿಷ್ಟು. ಬೆಂಗಳೂರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಟಕ್ಕೆ ಪುಸ್ತಕ ಮಾರಾಟಗಾರರಿಗೆ ಆಹ್ವಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಒಬ್ಬರಿಗೇ ಒಂದೇ ಮಳಿಗೆ ಎಂದು ಪ್ರಕಟಿಸಲಾಗಿತ್ತು. ನಾನು ಮಳಿಗೆಗೆ ೨೦೦೦/- ದುಡ್ಡನ್ನು ನೀಡಿ ಹೆಚ್ಚುವರಿ ಒಂದು ಮಳಿಗೆ ಬೇಡಿಕೆಯಿತ್ತಾಗಲೂ ಅವರು ಹೊಡೆಸಿದ್ದ ನಿಯಮಗಳ ಸುತ್ತೋಲೆಯನ್ನು ನೀಡಿ ಹೆಚ್ಚುವರಿ ಮಳಿಗೆಯನ್ನು ನಿರಾಕರಿಸಿದ್ದರು.

ಇಂದು ಸಮ್ಮೇಳನದ ಜಾಗಕ್ಕೆ ತಲುಪಿದಾಗ ಅಲ್ಲಿನ ಚಿತ್ರಣವೇ ಬೇರೆ.
೧) ೨ ಮಳಿಗೆ, ಮೂರು ಮಳಿಗೆ, ಆರು ಮಳಿಗೆ ತೆರೆದಿದ್ದಾರೆ, ಕೆಲವು ಪುಸ್ತಕ ಮಾರಾಟಗಾರರು/ಪ್ರಕಾಶಕರು!
೨) ಈ ಒಂದಕ್ಕಿಂದ ಹೆಚ್ಚಿರುವ ಎಲ್ಲಾ ಮಳಿಗೆಗಳು ಮೂಲೆಯಿಂದಲೇ ಪ್ರಾರಂಭವಾಗುತ್ತವೆ!

ಸಾರ್ವಜನಿಕರು ಆಸ್ಥೆಯಿಂದ ನೋಡುತ್ತಿರುವ ಸಮ್ಮೇಳನದ ಒಂದು ಪ್ರಮುಖ ಅಂಗವಾದ ಪುಸ್ತಕ ಪ್ರದರ್ಶನವನ್ನು ಪಾರದರ್ಶಕವಾಗಿ ಅಯೋಜಿಸುವುದು ಅಷ್ಟೋಂದು ಕಷ್ಟವೇ? ದೊಡ್ಡ ಮಟ್ಟದಲ್ಲಿ ಬೆಳೆದಿರುವ ಪ್ರಕಾಶಕರ/ ಪುಸ್ತಕ ಮಾರಾಟಗಾರರ ಸ್ವತ್ತೇ ಈಗ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ?