ಸೋಮವಾರ, ಸೆಪ್ಟೆಂಬರ್ 28, 2009

ಸಿಂಗರಿಸಿಕೊಂಡ ಬೆಂಗಳೂರು ಗೋಡೆಗಳು..

ಸಮರಸ ಸಂಪಾದಕೀಯದಲ್ಲಿ..

ಬಿ ಬಿ ಎಂ ಪಿ ಪ್ರಾರಂಭಿಸಿರುವ, ಗೋಡೆಗಳ ಸ್ವಚ್ಚತೆ ಆಂದೋಲನಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಹೇಳಬೇಕು. ಆಂಟಿಸಿದ ಚಲನಚಿತ್ರದ ಜಾಹೀರಾತಿನ, ಧರಣಿಗಳ ಭಿತ್ತಿಪತ್ರಗಳು, ಕೆಲವೆಡೆ ಅವುಗಳು ಹರಿದು ಕುಲಗೆಟ್ಟ ಗೋಡೆಗಳನ್ನು ನೋಡಿ ಅಸಹ್ಯವೆನಿಸುತ್ತಿದ್ದಾಗ, ಆ ಗೋಡೆಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳನ್ನು, ಕಲೆಗಳನ್ನು ಹಾಗೂ ಇತರೆ ಸಾಮಾನ್ಯ ಕಲಾಕೃತಿಗಲನ್ನು ಗೋಡೆಗಳ ಮೇಲೆ ಸುಂದರವಾಗಿ ಚಿತ್ರಿಸಲಾಗುತ್ತಿದೆ. ಇದರಿಂದ ಗೋಡೆ ಮತ್ತು ಬೆಂಗಳೂರು ನಗರದ ಅಂದ ಹೆಚ್ಚುವುದಲ್ಲದೆ, ಸಾಕಷ್ಟು ಜನಕ್ಕೆ ಗೊತ್ತಿಲ್ಲದ ಪ್ರವಾಸಿ ಸ್ಥಾನಗಳ ಒಂದು ಸಣ್ಣ ಚಿತ್ರಣ ಕೂಡ ದೊರಕುತ್ತಿದೆ. ಬಿ ಬಿ ಎಂ ಪಿ ಯಷ್ಟೇ ಅಲ್ಲದೇ ಗೋಡೆಗಳ ಮೇಲೆ ಅತ್ಯುತ್ತಮವಾಗಿ ಚಿತ್ರ ಬಿಡಿಸುತ್ತಿರುವ ಕಲಾವಿದರಿಗೂ ನಮನ.


bird


ದಾರಿ ತಪ್ಪಿದ ಲೇಖನ


ಪ್ರಕಾಶ್ ಬೆಳವಾಡಿಯವರು ಡಿ ಎನ್ ಎ ದೈನಿಕ ಪತ್ರಿಕೆಯ ೨೨/ಸೆಪ್ಟಂಬರ್/೨೦೦೯ ರ ಸಂಪಾದಕೀಯದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಗೋಡೆಗಳನ್ನು ಅಂದಗೊಳಿಸುವ ಇಡೀ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ. ಕಲೆಯ ಕೊಲೆ ಎಂದಿದ್ದಾರೆ(Art attack). ಆದರೆ ಈ ಲೇಖನವನ್ನು ಓದಿದ ಮೇಲೆ ಅನ್ನಿಸುವುದು, ಯಾವುದೋ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ, ಬಿ ಬಿ ಎಂ ಪಿ ಮೇಲಿನ ಅಸಹನೆಯಿಂದಲೋ(ಬೇರೆ ಯಾವುದೋ ಕಾರಣಕ್ಕೆ), ಅಥವಾ ಕಲಾವಿದಯ ಆಯ್ಕೆಯ ಪ್ರಕ್ರಿಯೆ ತಮಗೆ ಇಷ್ಟವಾಗಿಲ್ಲವೆಂದೋ, ಅಥವಾ ಕಲಾವಿದರ ನಡುವಿನ ಮತ್ಸರವೋ, ಅಥವಾ ಗೋಡೆ ಮೇಲೆ ಬರೆಯುವ ಕಲಾವಿದರೆಂಬ ಅಸಡ್ಡೆಯೋ ಬರೆದಿರುವ ಚಿತ್ರಗಳು ಕಳಪೆಯೆಂದು ಸಾರಾಸಗಟಾಗಿ ಟೀಕಿಸಿದ್ದಾರೆ. ಬಿ ಬಿ ಎಂ ಪಿ, ಗೋಡೆಗಳನ್ನು ಅಂದಗೊಳಿಸುವ ಕ್ರಿಯೆಯಲ್ಲಿ ದಾರಿ ತಪ್ಪಿದೆ ಎಂದಿದ್ದಾರೆ. ಆದರೆ ಇವರ ಆಧಾರರಹಿತ ಟೀಕೆಗಳನ್ನು ಓದಿದಾಗ ದಾರಿ ತಪ್ಪಿರುವುದು ಬೆಳವಾಡಿಯವರ ಲೇಖನವೆಂದೆನಿಸುತ್ತದೆ.

ಮುಂದೆ ಓದಿ

1 ಕಾಮೆಂಟ್‌:

  1. ನಾನು ಅವರು ಬರೆಯುವಾಗ ಫೋಟೊ ತೆಗೆದಿದ್ದೇನೆ. ಚಿತ್ರಗಳೆಲ್ಲಾ ತುಂಬಾ ಚೆನ್ನಾಗಿವೆ. ಕಚಡ ವಾಲ್ ಪೋಷ್ಟರುಗಳಿಗಿಂತ ಇದು ಮೇಲೆಲ್ಲವೇ....

    ಪ್ರತ್ಯುತ್ತರಅಳಿಸಿ