ಬುಧವಾರ, ಜನವರಿ 06, 2010

ಬೆಲೆ ಏರಿಕೆ ಮತ್ತು ದಿನಕರ ಚೌಪದಿ

ದಿನಸಿಗಳು, ತರಕಾರಿಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ, ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ಬರೆದಿರುವ ಈ ಚೌಪದಿಗಳನ್ನೋದಿ..


[caption id="attachment_718" align="aligncenter" width="200" caption="ಚಿತ್ರಕೃಪೆ: http://nirpars.blogspot.com/"]ಚಿತ್ರಕೃಪೆ: http://nirpars.blogspot.com/[/caption]

ತಿನ್ನೋಣ ಗೆಣಸು


ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.

ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.

ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-

ಬೆಳದಿಂಗಳಾಗಿ ಹೊಳೆಯುವುದು ಅಮಾವಾಸ್ಯೆ.


ಬೆಲೆಗಳ ಆಕಾಶ ಯಾತ್ರೆ


ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ

ಚಿಕ್ಕೆಯಾದವು ಎಂದು ಹೇಳುವರು, ನಾರಿ.

ಜನಗಳೆಲ್ಲಾ ವಿಮಾನದ ಮೇಲೆ ಕೂತು

ನಭಕೇರಿದರೆ ಮಾತ್ರ ಕೇಸರಿಭಾತು


ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ