ಶನಿವಾರ, ಜುಲೈ 24, 2010

ಪುಸ್ತಕ ಪರಿಚಯ : ತುಂಗಾ

ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.


ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.

ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ