ಮಂಗಳವಾರ, ಅಕ್ಟೋಬರ್ 31, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೩

ನಮ್ಮ ಕವಿಗಳ ನೆನೆಸಿಕೊಳ್ಳುತ್ತಾ ಮುಂದುವರೆಯೋಣ!!
ದಾ ರಾ ಬೇಂದ್ರೆ.. ಮೊನ್ನೆ ಅಕ್ಟೋಬರ್ ೨೬ ನೆಯ ತಾರೀಖು ಇವರ ಪುಣ್ಯ ತಿಥಿ!!

ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಸೃಷ್ಟಿಸಿದ ಮಹಾನ್ ಕವಿ. ಇವರು ಬಹುಶಹಃ ಕಾವ್ಯದ ಎಲ್ಲಾ ಮಗ್ಗಲುಗಳಲ್ಲೊ ಕೈ ಆಡಿಸಿಬಿಟ್ಟಿದ್ದಾರೆ.. ಪ್ರಕೃತಿ ರಮಣೀಯತೆ (ಮೂಡಲ ಮನೆಯ, ಮುಗಿಲ ಮಾರಿಗೆ, ಶ್ರಾವಣ , ಘಮ ಘಮ, ಹಕ್ಕಿ ಹಾರುತಿದೆ, ಉತ್ತರ ಧ್ರುವದಿಮ್), ರೌದ್ರತೆ (ನೀ ಹಿಂಗ ನೋಡಬ್ಯಾಡ ನನ್ನ), ಅಧ್ಯಾತ್ಮಿಕತೆ ( ಪರಮಾಣು ನಾನು, ಬದುಕು ಮಾಯೆಯ ಮಾಟ, ಕುಣಿಯೋಣ ಬಾರ, ಯುಗ ಯುಗಾದಿ), ಭಾವನಾತ್ಮಕ (ನಾರಿ ನಿನ್ನ ಮಾರೀ ಮ್ಯಾಗ, ನಾನು ಬಡವಿ), ಸಮಾಜಿಕ ಪಿಡುಗು (ಕುರುಡು ಕಾಂಚಾಣ)... ಹೀಗೆ ಪಟ್ಟಿ ಮಾಡ್ತಾ ಹೋದ್ರೆ ವರ್ಷಾನುಗಟ್ಟಲೆ ಇವರ ಕಾವ್ಯ ಗಳನ್ನು ವಿಂಗಡಣೆ ಮಾಡಬೇಕಾಗುತ್ತೆ.. ಯಾಕೆಂದರೆ ಒಂದೊಂದು ಪದ್ಯಗಳಲ್ಲೂ ಸುಮಾರು ಭಾವಗಳು ಅಡಗಿರುತ್ತವೆ...

ಈ ಪದ್ಯ ಬೇಂದ್ರೆ ಯವರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟಂತ ನಾಕು ತಂತಿ ಕವನ ಸಂಕಲದ್ದು!!!

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಆದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕತ್ತುವಂತ ಮೂರ್ತಿ
ಕಿವಿಗೆ ಮುತ್ತಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೆ ಗಳಿಗೆ ಮೈಯ ತುಮ್ಬ
ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

ಬೆಳಗು!!!

ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ,
ನುಣ್ಣ-ನ್ನೆರಕಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ,
ದೇವನು ಜಗವೆಲ್ಲಾ ತೋಯ್ದಾ

ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೆ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ- ಪಟಪತನೇ ಒಡೆದು

ಎಲೆಗಳ ಮೆಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೆ ಇದ ತಂದು
ಈಗ ಇಲ್ಲಿಗೇ ತಂದು

ತಂಗಾಳೀಯಾ ಕೈಯೊಳಗಿರಿಸೀ
ಎಸಳಿನಾ ಚವರಿ
ಹೂವಿನ ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ ಮೈಯೆಲ್ಲಾ ಸವರಿ

ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಷ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಮ್ಮಾ
ಇದು ಬರಿ ಬೆಳಗಲ್ಲೋ ಅಣ್ಣಾ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ