ನೀವು ಮಲೆನಾಡಿನ ಪ್ರಕೃತಿ ಸೊಬಗಿನಲ್ಲಿ ವಿಶ್ರಾಂತಿಯನ್ನು ಪಡೆಯಲು ಬಯಸುತ್ತಿರುವಿರಾದರೆ, ಇಲ್ಲೊಂದು ವಿಶ್ರಾಂತಿಧಾಮವಿದೆ. ನಿಮಗೆ ಮಲೆನಾಡಿನ ಮನೆಯ ವಾತಾವರಣ, ಅತ್ಮೀಯ ಆತಿಥ್ಯ, ಮಲೆನಾಡಿನ ಊಟ - ಅದೂ ಅಡಿಗೆ ಮನೆಯಲ್ಲೇ, ಇವುಗಳೆಲ್ಲಾ ನಿಮ್ಮನ್ನು ಆಕರ್ಷಿಸುವುದಾದರೆ ಶಿವಮೊಗ್ಗದ ಸೊರಬದಿಂದ ಸುಮಾರು ೧೦ ಕಿ ಮೀ ದೂರದಲ್ಲಿರುವ ಕಂತನಹಳ್ಳಿ ಗೃಹ ವಿಶ್ರಾಂತಿಧಾಮಕ್ಕೆ ಒಮ್ಮೆ ಹೋಗಿ ವಿಶ್ರಮಿಸಬಹುದು.
ಸುಮಾರು ೪೦ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಸಾಯವನ್ನು ಮಾಡಿಕೊಂಡಿರುವ ’ಶ್ರೀನಿವಾಸ ಮೂರ್ತಿ (ಗನು)’ ಮತ್ತು ’ವಿನೂತನ’ ದಂಪತಿಗಳು ಬಂದು ನೆಲೆಸುವವರಿಗೆ ಅಚ್ಚುಕಟ್ಟಾದ ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಜನ ಹೆಚ್ಚಿದಾಗ ತಮ್ಮ ಮನೆಯ ಉಪ್ಪರಿಗೆಯ ಮೇಲೂ ಮಲಗಲು ಅವಕಾಶ ಕೊಡುತ್ತಾರಂತೆ. ಮುಂದೆ ಓದಿ
ಸೋಮವಾರ, ಆಗಸ್ಟ್ 24, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ