ಮಂಗಳವಾರ, ಜನವರಿ 23, 2007

The Guru


with some compulsions i happened to watch this movie in shankarnag theatre by spending 150 Rs. Spending 150 Rs was the saddest part because i had spent almost same amount for 2 'large' vodka in nagarjuna, just before the movie without which i would have gone mad in theatre. Two contrasting experiences (drinking vodka and watching Guru) .


This movie…. as usual hyped up, like its contemporaries ( like movies directed by Mr.Karan Johar or like RDB [:D]). The movie clearly upholds maNiratnam's management skills(note : he is a management graduate before a director). Seems like he has used all the management principles he has learnt to promote the film.


I remember one forward which was flooding my mail box. It was about the attitudes of the characters in this movie... But after watching the movie , I think.. either the movie is junk or the mail.. since they are not mutually exclusive, by transitivity rule ( or by some xyz logical rule) both are junk...


If I have to describe the first half of the movie, i can do it in one word. First half is "bakwaas".. (except for some stupendous cinematography in some songs).
A minute to go for the interval, there comes Mr. Chota bachan's dailogue..(I do not remember the complete dialogue) ye kapaDe mehanat se paaya hai...... guru se laDne ke liye guru bankar aaO.. kyOnki guru Ek hee hai...


Even though my hindi is decent enough and knew the meaning of the word 'mehanat' , after seeing the first half of the movie and listening to the dialogue, i was confused and later clarified the meaning of mehanat with my friend.. (mani has failed to show any ‘mehanat’ in the movie)
I still kept wondering what this "kyonki guru Ekee hai" meant.. i could not control my laughter (Ohohohohohoohoohohoho).. and i was screaming "swalpa T M" mai bhi guru hoo....


Hmmmm…..if i could describe the first half of the movie in a word the second half was no better.. but not to deny that had little stuff…..there was also some news around that this movie is about one of the biggest industrialists MR Dir ambaani..
In the second half , our hero builds numerous factories,he does all kinds illegal activities, he bribes politicians for getting favours, he converts non convertibile debentures into shares,collects lots of money from public.
The media (maadhavan) does its best to expose all his misdeeds. Finally our hero is busted, and a case is registered against the hero..
A share holders’ meeting happens in an open ground when it is raining.. (what a scene man!!! muhahahhahahahaa) .The people there abuse our hero for eating up their money, interestingly the same people later applaud our hero after the court scene, about which i will be speaking, shortly.


This court scene is the climax.. this goes on for 3-4 days.. The first three days our hero saves all his energy by not speaking….(i think such great ideas can only occur to people like Arindam and maNi …. They both can actually jointly direct a movie...) and these 3 days the case does not seem to be in favour of our hero at all….
Then the last day!! Mr. Mani has tried hard to give an ayn rand style ending to the movie, but he has failed terribly . Our hero is given 5 mins to argue ( final 5 mins of torture to the audience) , who finishes it in 4 and half mins( giving 30 seconds bonus).. and because of which he gets a standing ovation in the court hall but here in the theatre viewers enthused that film is getting over, they give "running" ovation. After our hero's lecture, out of 14 cases, 12 cases cleared.. our hero is acquitted.. This scene is no worse than vijayakant's scene in which he gives "shock to current itself "or the baalaNNa's train stopping scene or Rajni's style of splitting a bullet with a knife and killing 2 villians with the same bullet.


MaNiratnam has tried to capture a dozen issues at one go.. some of them include loyalty(this is not problem), unemployment, poverty, globalization, a little of objectivism theory also.. but he does not do justice to any of these issues.. towards the end of the movie one cannot figure out what the movie is all about (only mallikaa sheravat's dance ramains in the mind... :D )


I think abhishek's acting is pretty good, which is the saving grace for the movie.


I am still wondering what aishwarya rai was actually doing in the movie.. There is no scope for people to complain about her over acting…. Thanks to maNi... since there is no scope for aishwarya to act!!!! But MaNiratnam could have used some puppet instead of her and could have saved crores..
But what will he lose?? "yaardO duDDu.. yallamman jaatre!!! "


Mithun chakraborthy, Madhavan, Vidya balan have done good work in their limited roles.


About the songs….one song is good.. sorry two!! Aishwary's barsO is also good... the first one is mallika's bar dance. There is one really stupid song when the twins are born to MR hero.. "Ek lelo.. Ek muft..." maNi has tried to introduce humour into the movie through this song which ultimately turns out to be stupid and torturous.


I hope this movie would not be sent across to the Oscars... I was stunned when I read that the dirty commercial movie RDB was sent to Oscars, Later badly kicked out. There are n number indian art movies, which are wonderfully directed by some great directors like gireesh kaasaravaLLi ( there are many more) which can be sent to oscars. I fail to understand how they send such hopeless movies to oscars...


finally, mEre baap kehtaa the.. hindi filme mat dEkhna bETa... paisa kharch hO jaayEgaa.. dhimaak karaab hOga!! maine dEkha!! aur ye review likha...

ಸೋಮವಾರ, ಜನವರಿ 22, 2007

ಏಳೆನ್ನ ಮನದನ್ನೆ!!!


ಇತ್ತೀಚಿಗೆ ನಾವು ಚಲನಚಿತ್ರ, ಧಾರಾವಾಹಿಗಳಲ್ಲಿ ನೋಡಿರುವುದು, ಬೆಳಗಿನ ಜಾವದಲ್ಲಿ ಹೆಂಡತಿ ಶುಭ್ರವಾಗಿ ಸ್ನಾನ ಮಾಡಿ, ಕಣ್ಣು ಕುಕ್ಕುವ ಸೀರೆಯನ್ನುಟ್ಟು ಕೈಯಲ್ಲಿ ಕಾಫ಼ಿ ಲೋಟ ಹಿಡಿದು ಬಂದು, ಗಂಡನಿಗೆ ಗುಡ್ ಮಾರ್ನಿಂಗ್ (ಶುಭೋದಯ ಅಲ್ಲ) ಹೇಳಿ, ಇನ್ನೇನು ಕಾಫ಼ಿ ಗಂಡನ ಕೈಗೆ ಕೊಡುವಷ್ಟರಲ್ಲಿ, ಗಂಡ ಆ ಕಾಫ಼ಿ ಲೋಟವನ್ನು ಪಕ್ಕದ ಮೇಜಿನ ಮೇಲಿಟ್ಟು ಹೆಂಡತಿಯನ್ನು ಬೆಳಗ್ಗೆಯೇ ರಂಗ ಕ್ರೀಡೆಗೆ ಎಳೆಯುವುದು... ಇದು ನಂತರ ಅಯ್ಯೊ ಇದೇನ್ರಿ ಬೆಳಗ್ಗೆ ಬೆಳಗ್ಗೆ?? ಇತ್ಯಾದಿ ಸಂಭಾಷಣೆಗಳಿಂದ ಮುಂದುವರೆಯುತ್ತದೆ... ಇನ್ನೂ ಮದುವೆಯಾಗದಿರುವ, ಮಧ್ಯಮ ವರ್ಗದ ಕುಟುಂಬದಿಂದ ( ಎಲ್ಲಿ ಬೆಳಗ್ಗೆಯೇ ಗಂಡ ಮತ್ತೆ ಹೆಂಡತಿ ಇಬ್ಬರೂ ಒಟ್ಟಿಗೆ ಎದ್ದು, ಕೆಲಸಗಳನ್ನು ಶುರು ಮಾಡಿ, ಬೆಳಗ್ಗೆಯೇ ಜಗಳವಾಡಿ, ಸ್ನಾನ ಮಾಡೋದನ್ನೇ ಮರೆತು ತಮ್ಮ ಕಛೇರಿಗಳಿಗೆ ಹೊರಡಲು ಸನ್ನದ್ಧರಾಗುವ ) ಬಂದ ನನ್ನಂತವನಿಗೆ ಮೇಲಿನ ಚಲನಚಿತ್ರ ದೃಶ್ಯ ಕೃತಕ/ನಾಟಕೀಯವಾಗಿ ಕಂಡು ಬಂದರೂ.. ಇವುಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಸರ್ವೇ ಸಾಮಾನ್ಯ ನೋಡ್ತಾನೆ ಇರ್‍ತೀವಿ.

ಆದ್ರೆ ಇಂದು ನನ್ನ ತಲೆ ಕೊರೆಯುತ್ತಿರುವ ವಸ್ತು/ವಿಷಯ ಅಂದ್ರೆ ಗಂಡ/ಹುಡುಗ ತನ್ನ ಹೆಂಡತಿ/ಪ್ರೇಯಸಿಯನ್ನು ಎಬ್ಬಿಸಿವುದು.. ಶೀರ್ಷಿಕೆ ನೋಡಿದ್ದೀರಿ.. ಏಳೆನ್ನ ಮನದನ್ನೆ... ಒಂದು ತರಹ ಕಿವಿಗೆ ಹಿತವಾಗಿ ಕೇಳಿಸುವುದಿಲ್ಲವೇ ಈ ಪ್ರಾಸಬದ್ಧ ಪದಗಳು??? ಪ್ರೇಯಸಿಗೆ ಬದಲಾಗಿ ಉಪಯೋಗಿಸಿರುವ ಈ ಮನದನ್ನೆ ಎಂಬುವ ಪದ ಬಹಳ ಹಿತವಾಗಿಲ್ಲವೆ/ಭಾವಪೂರ್ಣವಾಗಿಲ್ಲವೆ??? ಆದರೆ ಈ ಪದ ಹೇಗೆ ಉದ್ಭವ ಆಯ್ತು?? ಇದರ ಮೂಲ ಏನು ಅನ್ನೋದು ನನ್ನ ತಲೆಯನ್ನ ಕಾಡ್ತಾ ಇರ್‍ಓ ಇನ್ನೊಂದು ಸಂಗತಿ...

ನಾನು ಈ ಪದಗಳನ್ನು ನೋಡಿರೋದು.. ಕೇಳಿರೋದು ಎಲ್ಲಿ ಅಂತ ಹೇಳ್ಬಿಡ್ತೀನಿ...
ಮೊದಲೆಯನದಾಗಿ.. ಉಮರನ ಒಸಗೆ ಗೊತ್ತಿರ್‍ಬೇಕು ನಿಮ್ಗೆ...( ಡಿ ವಿ ಜಿ ಯವರು ಒಮರ್ ಖಯ್ಯಾಮ್ ಎನ್ನುವ ಪರ್ಷಿಯನ್ ಕವಿಯ ಮುಕ್ತಕಗಳನ್ನ , ಆಂಗ್ಲ ಭಾಷೆಗೆ ಅನುವಾದಿಸಿರುವ ಫ಼ಿಟ್ಸ್ ಗೆರಾಳ್ಡ್ ನ ರುಬಾಯತ್ ಆಫ಼್ ಒಮರ್ ಕಯ್ಯಾಮ್ ಎಂಬ ನಾಲ್ಕು ಸಾಲಿನ ಪದ್ಯಗಳ ಅನುವಾದ.. ಕವಿ ತನ್ನ ಭಾವಕ್ಕೆ ಸ್ವಲ್ಪ ಬದಲಾವಣೆ ಮಾಡಿದ್ದಾರೆ.. ಅಂದರೆ ಇದು ಅಕ್ಷರಶಃ ಅನುವಾದ ಅಲ್ಲ ಅಂತ )

ಇದರ ಮೊದಲ ಕವನ,

ಏಳೆನ್ನ ಮನದೆನ್ನೆ ! ನೋಡು, ಪೊಳ್ತರೆ ಬಂದು
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು
ತಾರೆಯರಳುಗಳನಲ್ಲಿಂದ ಚೆಲ್ಲಾಡಿಹನು
ನಿದ್ದೆ ಸಾಕಿನ್ನೀಗ, ಮುದ್ದುಣುಗಿ ಬಾರೆ.

ಇದರ ಮೂಲ ಅಂದ್ರೆ ಫ಼ಿಟ್ಸ್ ಗೆರಾಳ್ಡ್ ಇಂಗ್ಳೀಷ್ ನಲ್ಲಿ ಹೇಗ್ ಬರ್‍ದಿದ್ದಾನೆ ಅಂತ ನೋಡಿಬಿಡೋಣ..

Awake! for Morning in the bowl of Night
Has flung the stone that puts the stars to fight:
And Lo! the Hunter of the east has caught
The Sultan's Turret in a Noose of Light

ಈ ದೃಶ್ಯಗಳೇನೂ ಸಹಜ ಅಂತ ಹೇಳ್ತಾ ಇಲ್ಲಾ... ಆದ್ರೆ ಪ್ರೇಯಸಿ/ಹೆಂಡತಿಯನ್ನು ಬೆಳಗಿನ ಜಾವದಲ್ಲಿ ಎಬ್ಬಿಸೋದನ್ನ ಎಷ್ಟು ಭಾವಪೂರ್ಣವಾಗಿ ಚಿತ್ರಿಸಲ್ಪಟ್ಟಿದೆ ಅಲ್ಲವೆ?? ಬರೀ ಹೆಂಡತಿ ಗಂಡನನ್ನು ಎಚ್ಚರ ಮಾಡುವುದನ್ನೇ ನೋಡಿರುವ/ ಕೇಳಿರುವ ನಮಗೆ ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಆ ವಿಚಿತ್ರದಲ್ಲಿ ರೋಮಾಂಚನಗೊಳಿಸುವ ಭಾವುಕತೆ ಇಲ್ಲವೆ???

ಇವೇ ಪದಗಳು ಸಿ ಅಶ್ವಥ್ ರಾಗ ಸಂಯೋಜನೆಯಲ್ಲಿ, ಜಿ ವಿ ಅತ್ರಿ ಯವರು ಹಾಡಿರುವ ಏಳೆನ್ನ ಮನದನ್ನೆ ಹಾಡಿನಲ್ಲಿ ಕೇಳಿರ್‍ತೀವಿ,
ಇದನ್ನ ರಚನೆ ಮಾಡಿರುವವರು ಚನ್ನವೀರ ಕಣವಿಯವರು...

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ,
ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ ಮಾಟಗಾತಿ!

ಹೀಗೆ ಮುಂದುವರೆಯುತ್ತಾ, ಸ್ವಲ್ಪ ನಿಸರ್ಗದ ರಮಣೀಯತೆಯ ವರ್ಣನೆಯಿಂದ ಕೂಡಿ ಕೊನೆಯ ಚರಣ ಹೀಗೆ ಕೊನೆಗೊಳ್ಳುತ್ತದೆ...

ಲಲಿತ ಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ;
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕತೆ ಹೇಳು
ಒಂದು ಚಣ ಜಗವನ್ನೆ ಮರೆತು ಬಿಡುವೆ.

ಇದು ಉಷೆಯ ಗೆಳತಿ ಪದ್ಯ.. ಮಧು ಚಂದ್ರ ಎಂಬ ಕವನ ಸಂಕಲನದಲ್ಲಿದೆ..

ಈ ಕವನ ಸಂಕಲನದಲ್ಲಿ ಇಷ್ಟೇ ರೋಮಾಂಚನಗೊಳಿಸುವ ಇನ್ನೊಂದು ಕವನದ ಎರಡು ಚರಣಗಳನ್ನು ನೆನೆಸಿಕೊಳ್ಳಲೇಬೇಕಾಗಿದೆ?

ಬಾ ಮಲ್ಲಿಗೆ
ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ
ಬೆಳುದಿಂಗಳು
ನಮ್ಮೊಲುಮೆಯ ಕರೆಗೆ!

ಚೆಲುವಾಗಿದೆ
ಬನವೆಲ್ಲವು
ಗೆಲುವಾಗಿದೆ ಮನವು;
ಉಸಿರುಸಿರಿಗು
ತಂಪೆರಚಿದೆ
ನಿನ್ನೆದೆ ಪರಿಮಳವು.

ಮಧುಚಂದ್ರದಲ್ಲಿ ಮನದನ್ನೆಯ ಮನ ತಣಿಸಲು ಎಂತಹ ಅದ್ಭುತ ಸಾಲುಗಲ್ಲವೆ??

ಹೀಗೆ ಕುವೆಂಪು ಕೂಡ ಮನದನ್ನೆಯನ್ನು ಎಬ್ಬಿಸಲು ಒಂದು ಕವನ ಕೊಟ್ಟಿದ್ದಾರೆ ನಮಗೆ!! ಅಲ್ಲಿ ಮನದನ್ನೆ ಎಂಬ ಪದದ ಪ್ರಯೋಗ ಆಗಿಲ್ಲಾ ಅಷ್ಟೆ.. (ಕವನ ಸಂಕಲನ - ಚಂದ್ರ ಮಂಚಕೆ ಬಾ ಚಕೋರಿ)

ಏಳು, ರಮಣಿ, ಏಳು! ಅದೋ
ಪೂರ್ವದಿಶಾದೇವಿಯಾರ್‍ಯ
ಮೂಡುತಿಹನು ಉದಯಸೂರ್‍ಯ;
ಕೈಮುಗಿದು ಮಣಿ!
ಜಗತ್ ಪ್ರಾಣ ಶಕ್ತಿ ಸಿಂಧು,
ಜಗಜ್ಜೀವ ಹೃದಯ ಬಂಧು,
ದೇವ ದಿನಮಣಿ!

ಇದೂ ಕೂಡ ಹೀಗೆ ಮುಂದುವರೆಯುತ್ತ.. ಪ್ರಕೃತಿ ಸೌಂದರ್ಯದ ಸವಿಯುಣಿಸುತ್ತಾ, ಕೊನೆಯ ಚರಣ ಹೀಗಿದೆ.

ನಿದ್ದೆ ಸಾಕು, ಏಳು, ರಮಣಿ;
ಮೂಡಿ ಬಂದನದೋ ಖಮಣಿ!
ಕೈಮುಗಿದು ಮಣಿ!
ನಮ್ಮ ಬಾಳ್ಗೆ ಬೆಳಕೆ ಕಣ್ಣು;
ಪ್ರಾಣಕಮೃತ ರಸದ ಹಣ್ಣು
ದೇವ ದಿನಮಣಿ!

ಆದರೆ ನನಗೆ ಇಲ್ಲಿ ಒಂದು ದ್ವಂದ್ವ ಇದೆ.. ಇಲ್ಲಿ ಕವಿ ತಮ್ಮ ಮನದನ್ನೆಗೆ ರಮಣಿಯೆಂದು ಕರೆದು ಎಬ್ಬಿಸ್ತಾ ಇದಾರ?? ಅಥವಾ ಬೆಳಗಿನ ಜಾವದಲ್ಲಿ ರವಿ ಸೌಂದರ್ಯಕ್ಕೆ ಮರುಳಾಗಿ ತಮ್ಮಲ್ಲಿರುವ ರಮಣೀಯತೆಯನ್ನು ಹೊಡೆದೆಬ್ಬಿಸುತ್ತಿದ್ದಾರಾ ಎಂಬುದು!!!!

ಇನ್ನು ಬರೀ ಮನದನ್ನೆಯನ್ನು ಬೆಳಗಿನ ಜಾವದಲ್ಲಿ ಎಚ್ಚರ ಮಾಡೋದೇ ಆಗೋಯ್ತೆಲ್ಲಾ!!! ಇಲ್ಲಾ.. ನಮ್ಮ ಕವಿ ಮನದನ್ನೆಯನ್ನು ಮಲಗಿಸಲು ಕೂಡ ನಮಗೆ ಒಂದು ಕವನ ಬರೆದು ಕೊಟ್ಟಿದ್ದಾರೆ.. ಈ ಜೋಗುಳಾನ ನೋಡೋಣವೆ??

(ಕವಿ - ಕುವೆಂಪು, ಕವನ ಸಂಕಲನ - ಪ್ರೇಮ ಕಾಶ್ಮೀರ, ಕವನ - ಇಂದಾಗಲಿ)

ಮಲಗು ಮನದನ್ನೆ, ಮಲಗೆಲೆಗೆ ಚೆನ್ನೆ;
ಕೊಳದ ತಾವರೆಯ ಹೃದಯದಲಿ ತುಂಬಿ
ಸೆರೆಯಾಗಿದೆ.
ಮಲಗೆ ಮನದನ್ನೆ, ಮಲಗು ಜೇನನ್ನೆ,
ದಣಿದ ರವಿಬಿಂಬವದ್ರಿಮಂಚದಲಿ
ಮರೆಯಾಗಿದೆ.
.....
.....
.....
.....

ಕೊನೆಯ ಚರಣ

ಮಲಗು ಮನದನ್ನೆ, ಮಲಗೆನ್ನ ಚೆನ್ನೆ;
ನಿನ್ನ ಹೂಗೆನ್ನೆಗಳಲೆನ್ನ ಕೆನ್ನೆ
ಒಂದಾಗಲಿ.
ಮಲಗು ಮಲಗೆನ್ನೆ, ಬಾಳಿರುಳ ಜೊನ್ನೆ:
ಅಂದಿಂದು ನೆನ್ನೆ ನಾಳೆಯಲಿ ಸೊನ್ನೆ
ಇಂದಾಗಲಿ!

ನೆನ್ನೆ ನಾಳೆಗಳು ಸೊನ್ನೆ, ಇಂದು ನಿನ್ನ ಹೂಗೆನ್ನೆಯಲಿ ನನ್ನ ಕೆನ್ನೆ ಒಂದಾಗಲಿ.. ರಸಿಕತೆಯಿಲ್ಲವೆ... ಈ ಮನದನ್ನೆ ಎಂಬ ಪದ ಈ ಕವನಕ್ಕೆ ರಸಿಕತೆಯನ್ನು ತುಂಬಿಲ್ಲವೆ???

ಹೀಗೆ ಇವೆಲ್ಲವನ್ನೂ ನೆನೆಯುತ್ತಾ.. ನನ್ನ ಪ್ರಶ್ನೆಗಳಿಗೆ ಅರ್ಥ/ಉತ್ತರ ಸಿಕ್ತಾ ಅನ್ನೋದನ್ನೆ ಮರೆತೆ!!!! ಇಷ್ಟೆಲ್ಲಾ ಸವಿಯುಂಡ ಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರ ಹುಡ್ಕೋದ್ರಲ್ಲಿ ಅರ್ಥವಿದೆಯೆ???

ಕುವೆಂಪು ಕವಿ ವಾಣಿ ಕೇಳಿಲ್ಲವೆ??

ಅನಂತದಿಂ ದಿಗಂತದಿಮ್ ಅನಂತದಿಂ ದಿಗಂತದಿಮ್
ಅನಂತದಾ ದಿಗಂತದಿಮ್ ಅನಂತದಾ ದಿಗಂತದಿಮ್
ನೋಡೆ ನೋಡೆ ಮೂಡಿತೊಂದು ಮೋಡ ಗೋಪುರ
ಗಿರಿಯ ಬಿತ್ತರ ಶಿಖರದೆತ್ತರ
ಅನುಭವಿಸುವ ರಸಋಷಿಮತಿಗತಿ ಮಹತ್ತರ

......
.....
.....
......

ಮಾತಿಗೊಂದು ಅರ್ಥ ಬೇಕೆ?
ಅರ್ಥವಿದ್ದರಷ್ಟೆ ಸಾಕೆ?
ಮೋಡಗಳನು ನೋಡಿ ಕಲಿ
ಅರ್ಥ ಅಲ್ಪ ಎಂದು ತಿಳಿ

ಹೀಗೆ ಮುಂದುವರೆಯುತ್ತ..

ದೂರವಾಗು ಅರ್ಥ ವ್ಯರ್ಥ ವೆಂಬ ವ್ಯಾಧಿಗೆ ಎಂಬ ಸಾಲು ಬರುತ್ತೆ... ಪೂರ್ಣ ಕವನ ಸಿಕ್ತಾ ಇಲ್ಲ...

ಹೀಗೆ ಅರ್ಥ ವ್ಯರ್ಥದ ಬಗ್ಗೆ ಯೋಚನೆ ಬಿಟ್ಟು.. ನನಗೆ ರಸವುಣಿಸಿದ ಈ ಕವನಗಳನ್ನು ಮತ್ತೆ ಮೆಲುಕು ಹಾಕುವುದೇ ಯೋಗ್ಯವಲ್ಲವೆ?? ನನ್ನ ಮನದನ್ನೆಗೆ ಮುಂದೊಂದು ದಿನ ಇವನ್ನೆಲ್ಲ ಹಾಡಿ ಅವಳ ಮನತಣಿಸಬಹುದಲ್ಲವೆ??

ಗುರು...

ಬುಧವಾರ, ಜನವರಿ 10, 2007

ಬಸ್ಸಿನ ಬೆನ್ನೇರಿ .....


ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಬ್ಲಾಗನ್ನು ಪುನರುಜ್ಜೀವನ/ಜೀರ್ಣೋದ್ಧಾರ ಮಾಡೋಣ ಅನ್ಸ್ತಾ ಇದೆ.
ಆದ್ರೆ ವಿಷಯಗಳ ಕೊರೆತು ಬಂದೆರಗಿಬಿಟ್ಟಿದೆ ನಂಗೆ!!! ಆದ್ರ್‍ಊ ಏನಾದ್ರು ಬರ್‍ಯೋಣ.....

ಬೆಂಗಳೂರು ಬಸ್ಸಿನಲ್ಲಿ ಪ್ರಯಾಣ ಮಾಡೋದು ಅಂದ್ರೆ ಒಂದು ವಿಶಿಷ್ಟ ಅನುಭವ.. ಕೆಲವು ಬಾರಿ ನಿಮ್ಮ ತಲೆಯಲ್ಲಿ ಎಷ್ಟೇ ದುಗುಡ ಇದ್ರೂ ಅದ್ನ ಮರೆಸೋ ಅಂತ ಪ್ರಸಂಗಗಳು ಬಹಳ ನಡೀತ ಇರುತ್ತವೆ.. ಇಂತಹವುಗಳಲ್ಲಿ ಬಹಳಷ್ಟು, ಸಣ್ಣ ವಿಷಯಗಳಿಗೆ ಅಲ್ಲಿ ನಡೆಯುವ ಬೈದಾಟ, ಕಿತ್ತಾಟ ಗಳು... ಬಸ್ಸಿನಲ್ಲಿ ಓಡಾಡಿ ಜಗಳ ಆಡಿ ಮನಸ್ಸು ಕೆಡ್ಸ್ಕೋಳ್ಳೋವ್ರು ಒಂದು ರೀತಿ ಆದ್ರೆ ಅದನ್ನ ಬರೀ ನೋಡಿ ಆನಂದ ಪಡೊವ್ರು ಇನ್ನೊಂದು ರೀತಿ ಜನ... ಇನ್ನೊಂದು ಜಾತಿ ಜನ ಇದಾರೆ... ಅವ್ರು ಆ ಜಗಳದಲ್ಲಿ ತಮ್ಮನ್ನೂ ತೊಡಗಿಸಿಕೊಂಡು ( ಸಾಮಾನ್ಯವಾಗಿ ಯಾರು ಬಲಿಷ್ಟವಾಗಿರ್‍ತಾನೋ ಅವನ ಪಕ್ಷಕ್ಕೆ ಸೇರ್‍ಕೋಂಡ್ ಬಿಡ್ತಾರೆ) ಮಜಾ ಮಾಡ್ತಾರೆ... ಇವರಿಂದಾ ಆ ಪ್ರಸಂಗಕ್ಕೆ ಒಂದು ತರಾ ರಂಗು ಬರುತ್ತೆ...

ಹೇಗೆ ಮದುವೆ ಸಮಾರಂಭಗಳಲ್ಲಿ ಬಿಟ್ಟಿ ಊಟ ಕಂಠ ಪೂರ್ತಿ ತಿಂದಾಗ, ಮೇಲೆ ಗಂಟಲು,ಕೆಳಗೆ ಗುದನಾಳದ ವರೆಗೂ ತುಂಬಿ ಹೋಗಿರುತ್ತೋ ಹಾಗೆ ಬಿ ಎಮ್ ಟಿ ಸಿ ವಾಹವೆಲ್ಲಾ ತುಂಬಿ ತುಳುಕಿ ಮುಂದೆ ಮತ್ತು ಹಿಂದಿನ ಬಸ್ ಕಿಂಡಿಗಳಲ್ಲಿ ಜನ ನೇತಾಡ್ತಾ, ಜೋಕಾಲಿ ಆಡ್ತಾ ಇದ್ರು.. ಒಬ್ಬ ಫ಼ುಟ್ ಬೋರ್‍ದ್ಡ್ ಹೋಡೀತ ಇದ್ದ ಯುವಕನ್ನ ನಿರ್ವಾಹಕ ಕೊಲ್ಲುವಂತೆ ಕಣ್ಣಿನಿಂದಲೆ ದುರುಗುಟ್ಟಿ ನೋಡಿದ... ಹಿಂದಿನ ಬಸ್ ಬಾಗಿಲಿನ ಒಂದು ಕಂಬಕ್ಕೆ ಜೋತು ಬಿದ್ದು ಯಾವುದೋ ಹುಡುಗಿಯ ನೆನಪಿನಲ್ಲಿದ್ದ ಆ ಪಡ್ಡೆ ಯುವಕನಿಗೆ ಇವ ದುರುಗುಟ್ಟಿದ್ದು ಯಾವ್ದೋ ಹುಡಿಗಿ ಕಣ್ಣು ಹೊಡೆದ ಹಾಗೆ ಕಾಣಿಸಿರ್‍ಬೇಕು.. ಅವ ತನ್ನ ಪಾಡಿಗೆ ತಾನು ಬಾಯಲ್ಲಿ ಪಾನ್ ಪರಾಗೋ / ಗಮ್ಮೋ ಅಗೆಯುತ್ತಿದ್ದನ್ನ ನೋಡಿ ನಿರ್ವಾಹಕನಿಗೆ ಇನ್ನೂ ರೇಗಿ ಆ ಹುಡ್ಗನ್ನ ಹೀಗೆಂದು ಛೇಡಿಸ್ದ...
ಬಹುಶಹಃ ಒಬ್ಬನಿಗೆ ಬೈದ್ರೆ ಬೇರೆಯವರೆಲ್ಲ ಅರಿತುಕೊಂಡು ಮೇಲೆ ಬರೋ ಅಂತಾ ಮಾನವಂತರು ಅಂದ್ಕೊಂಡಿದ್ದಾ ಅನ್ಸುತ್ತೆ...

ನಿರ್ವಾಹಕ : ಏನ್ ಗುರು ಏನ್ ಕಾಲ್ಗೆ ಫ಼ೆವಿಕಾಲ್ ಏನಾದ್ರು ಮೆತ್ಕೊಂಡಿದ್ಯ?? ಮೇಲ್ ಬತ್ತಾನೆ ಇಲ್ಲಾ... ಅತ್ವ ಹುಟ್ಟಿದ್ದೇ ಈ ಪುಟ್ ಬೋರ್‍ಡ್ ಮೇಲಾ??

ಆ ಯುವಕನಿಗೆ ಒಂದು ತರಾ ಮುಜುಗರ/ಬೇಸರ/ಮಾನಭಂಗ ಎಲ್ಲಾ ಒಟ್ಗೆ ಆಗಿ ಸ್ವಲ್ಪ ಕೋಪಾ ಬಂದ್ರೂ ಸಹನೆಯಿಂದ ತನ್ನ ಮಾತಿನ ವರಶೆ ತೋರ್‍ಸೇ ಬಿಡೋಣ ಅಂತ ನಿರ್ವಾಹಕರಿಗೆ ಹೀಗೆಂದ...

ಯುವಕ : ಓಹೋಹೊ ಕಂಡಕ್ಟ್ರ್‍ಎ ಹೌದ್ ಹೌದು.. ದಿನಾ ನಿನ್ ಪುಟ್ ಬೋರ್‍ಡ್ ಮೇಲೆ ಅದೆಷ್ಟು ಜನ ನಿಂತು ಓಡಾಡ್ತಾರೋ.. ಅವ್ರೆಲ್ಲಾ ನಿನ್ ಪುಟ್ ಬೋರ್‍ಡ್ ಮೇಲೇ ಹುಟ್ಟಿರೋದು... (ಹೀಗೆಂದ ತಕ್ಷಣ ಅಕ್ಕ ಪಕ್ಕ ಇದ್ದೋರ್ಗೆಲ್ಲಾ ಸ್ವಲ್ಪ ಮುಜುಗರ ಆದ್ರೂ ಅವ ನಿರ್ವಾಹಕರಿಗೆ ಬೈತಾ ಇರೋದು ಅಂತ ನೆನಪಿಸಿಕೊಂಡು ಗೊಣಗ್ತಾ ಇದ್ರು...)

ಯುವಕ ಮುಂದುವರೆಸಿದ... ಗುರೂ.. ಬಿ ಎಮ್ ಟಿ ಸಿ ಅಂತ ಬೋರ್‍ಡ್ ಕಿತ್ತಾಕಿಸ್ಬಿಡು.... ಹೊಸದಾಗಿ ಬರ್ಸ್ಕೋ... ಸಂಚಾರಿ ಹೆರಿಗೆ ಆಸ್ಪತ್ರೆ ಅಂತ.... ನಿನ್ ಶರ್‍ಟ್ ಮೇಲೆ ನಿರ್ವಾಹಕ ರಮೇಶ್ ಅಂತ ಬೋರ್‍ಡ್ ಐತೆಲ್ಲಾ ಅದ್ನೂ ತೆಗ್ಸಿ ಹೆರಿಗೆ ತಙ್ ಅಂತ ಬರ್ಸ್ಕೋಂಡ್ ಬಿಡು.. ಒಳ್ಳೆ ಕಮಾಯಿ ಐತೆ...( ಇಷ್ಟೆ ಸಾಕಾಗಿತ್ತೇನೋ.. ಆದ್ರೆ ಬಿಸಿ ರಕ್ತದ ಹುಡ್ಗ ಬಿಡ್ಲಿಲ್ಲಾ... ಒಂದೇ ಸಮ ಉಸಿರು ಬಿಡ್ದೆ ಹೇಳ್ತಾನೆ ಇದ್ದ... ನಿರ್ವಾಹಕ ಬೈಯ್ಯೋಕ್ಕೆ ಹೋದ್ರೂ ಆ ಯುವಕನ ಏರಿದ ಧ್ವನಿಯಲ್ಲಿ ತನ್ನದು ಕ್ಷೀಣ ಅನ್ನೋದ್ನ ತಿಳ್ಕೊಂಡು.. ಅವ ನಿಲ್ಲ್ಸಿದ್ ಮೇಲೆ ತಾನು ಏನೇನ್ ಬೈಬೇಕು ಅಂತ ಮನಸ್ಸಿನಲ್ಲೆ ಯೋಚಿಸತೊಡಗಿದ.. ಆದ್ರೆ ಆ ಯುವಕ ನಿಲ್ಸೋ ಹಾಗೆ ಇರ್‍ಲಿಲ್ಲಾ..)

ಈ ಚಾಕ್ರಿ ಹಿಡಿದ್ ಮೇಲಾದ್ರು ಮುಂದೆ ಹೆಂಗ್ಸ್ರು ಮಕ್ಳೂ ಮೇಲೆ ಬೀಳೋದ್ ಬಿಟ್ಟು ನಿಯತ್ನಿಂದ ಹೆರ್ಗೆ ಮಾಡು.... (ಹೀಗೆಂದ ತಕ್ಷಣ ನಿರ್ವಾಹಕರಿಗೆ.. ಯಾಕಯ್ಯ ನಿಮ್ಮೆಂಗುಸ್ರು ಮುಂದೆ ಇದಾಳೇನಪ್ಪಾ ಅಂತ ಕೇಳ್ಬೇಕೂ ಅಂದ್ಕೊಂಡ್ರೂ ಸುಮ್ನೆ ಆದ್ರು) ಯುವಕ ಮುಂದುವರೆದು ಕೇಳೇ ಬಿಟ್ಟಾ...ನಿಮ್ ಹೆಂಗುಸ್ರೂಗು ಇಲ್ಲೇನಾ ಹೆರ್‍ಗೆ ಆಗಿದ್ದು??...

ಇಲ್ಲಿವರ್‍ಗೂ ಸುಮ್ನೆ ಇದ್ದ ನಿರ್ವಾಹಕನಿಗೆ ಒಮ್ಮೆಲೇ ತನ್ನ ಹೆಂಡತಿ ಬಗ್ಗೆ ಆಡಿದ ಅನುಚಿತ ಮಾತುಗಳಿಂದ ಚೇಳು ಕಡಿದವನಂತನಾಗಿ...

ಇಬ್ಬರೂ ಕಾದಾಟಕ್ಕೆ ನಿಂತರು...ಮಾತಿನ ಎಲ್ಲೆ ಇಬ್ಬರಲ್ಲೂ ಮೀರ್‍ತು...
ಅಪ್ಪ ಅಮ್ಮನ ಹೆಂಡತಿ ಜಾತಿ ಮಕ್ಕಳ ಬಗ್ಗೆ ಲೀಲಾ ಜಾಲವಾಗಿ ಬೈದಾಡಿದ್ರು... ಫ಼ುಟ್ ಬೋರ್ಡ್ನಲ್ಲಿದ್ದ ಹಲವು ಜಾಣ ಪ್ರಯಾಣಿಕರು ಜಾಗ ಮಾಡಿಕೊಂಡು ಒಳಗೆ ಬಂದ್ರು.... ಇನ್ನುಳಿದ ಭಂಢ ಫ಼ುಟ್ ಬೋರ್‍ಡ್ ಪ್ರಯಾಣಿಕರು ಯುವಕನ ಜೊತೆಗೂ, ಕೆಲವು ಪ್ರಯಾಣಿಕರೂ ನಿರ್ವಾಹಕನ ಕಡೆಗೂ ಸೇರಿ ಮಾತಿನ ಆರ್ಭಟಗಳು ಜಾಸ್ತಿ ಆಗಿ... ಬರೀ ಅಪ್ಪ/ಅಮ್ಮನ ಬೈಗುಳಗಳಷ್ಟೇ ಸ್ಪಷ್ಟವಾಗಿ ಕೇಳ್ಸ್ತಾ ಇದ್ದೊ... ಇಬ್ಬರೂ ಕೈ ಮಿಲಾಯಿಸುವ ಮಟ್ಟಕ್ಕೆ ಹೋದ್ರೂ.. ತಮ್ಮ ತಮ್ಮ ಪರವಾಗಿ ನಿಂತ ಪ್ರಯಾಣಿಕರ ಶ್ರೀರಕ್ಷೆಯಿಂದ ಬರೀ ಮಾತುಗಳ ಕಾದಾಟಕ್ಕೆ ನಿಯಮಿತಗೊಂಡಿತ್ತು...

ನಾನಂತೂ ಒಂದು ಜಾಗದಲ್ಲಿ ಕೂತು ನೋಡುತ್ತಿದ್ದವನಿಗೆ ನಾನು ಇಳಿಯಬೇಕಾಗಿದ್ದ ನಿಲ್ದಾಣಕ್ಕೆ ಆಗಲೆ ತಲುಪಿರುವ ಅರಿವೇ ಇರಲಿಲ್ಲ... ಬಸ್ ನಿಂತಾಗ.. ಇಂತಹ ಒಳ್ಳೆಯ, ಉಚಿತ ಮನರಂಜನೆ ಬಿಟ್ಟು ಹೋಗ್ಬೇಕೆಲ್ಲಾ ಅಂತ ಮನಸ್ಸಿಲ್ಲದ ಮನಸ್ಸಿನಿಂದ, ಕಾದಾಟದ ನಡುವೆ ಜಾಗ ಮಾಡಿ ಇಳಿದೆ... ಮನೆಯವರೆಗೂ ಈ ಜಗಳವನ್ನೆ ಮತ್ತೆ ಮೆಲುಕು ಹಾಕುತ್ತಾ ನಡೆದೆ....

ಗುರುವಾರ, ನವೆಂಬರ್ 02, 2006

ಸುವರ್ಣ ಕನ್ನಡ ರಾಜ್ಯೋತ್ಸವ - ಕನ್ನಡ ಕವಿಗಳಿಗೆ ನಮನ - ೪

ನೆನ್ನೆಯ ಸುವರ್ಣ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ರಾಜ್ಯದಾದ್ಯಂತ ಆಚರಿಸಲ್ಪಟ್ಟಿತು.. ಏಕೀಕರಣಕ್ಕೆ ದುಡಿದ, ಮತ್ತು ಕನ್ನಡದ ಏಳಿಗೆಗೆ ಶ್ರಮಿಸಿದ ಹಲವು ಪ್ರಮುಖ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಮೂಲಕ (ಹಲವು ವಿವಾದಗಳ ನಡುವೆ) ಗೌರವಿಸಲಾಯಿತು. ಈ ಮಧ್ಯೆ ಈ ವರ್ಷದ ವಿಶಿಷ್ಟವಾದ ಪ್ರಶಸ್ತಿ ರಾಷ್ಟ್ರಕವಿ ಪ್ರಶಸ್ತಿ.

ಈ ರಾಷ್ಟ್ರಕವಿ ಪ್ರಶಸ್ತಿಯನ್ನು ಡಾ. ಜಿ ಎಸ್ ಶಿವರುದ್ರಪ್ಪ ನವರಿಗೆ ಕೊಡಲಾಗಿದೆ. ವಿಶೇಷ ಏನಪ್ಪ ಅಂದ್ರೆ ಈ ಪ್ರಶಸ್ತಿ ಪಡೆದ ಮೂರನೆಯ ವ್ಯಕ್ತಿ/ಕವಿ ಇವರು. ಇದಕ್ಕಿಂತ ಮುಂಚೆ ಈ ಗೌರವಕ್ಕೆ ಪಾತ್ರರಾದವರು ಕುವೆಂಪು ಮತ್ತೆ ಗೋವಿಂದ ಪೈ (ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಕವನ ಬರೆದ ಮಹಾನ್ ಕವಿ).

ಡಾ ಜಿ ಎಸ್ ಶಿವರುದ್ರಪ್ಪನವರು ತಮ್ಮ ವಿಮರ್ಶೆಗಳಿಗೆ ಮತ್ತು ಕಾವ್ಯ ಮೀಮಾಂಸೆಗಳಿಗೆ ಬಹಳ ಪ್ರಸಿದ್ಧರು. ಇವರ ಕವನಗಳಂತೂ ಬಹಳ ಸುಪ್ರಸಿದ್ಧ. ಇವರ ಬಹಳಷ್ಟು ಕವನಗಳು ಭಾವಗೀತೆಗಳಾಗಿ ಹೆಸರಿಸಲ್ಪಟ್ಟು ಹೆಸರಾಂತ, ಖ್ಯಾತ ಸಂಗೀತ ನಿರ್ದೇಶಕರ/ಹಾಡುಗಾರರ (ಮೈಸೂರು ಅನಂತಸ್ವಾಮಿ, ಸಿ ಅಶ್ವಥ್ ) ದುಡಿಮೆಯಿಂದ ಧ್ವನಿಸುರ್‍ಇಳಿಗಳಾಗಿ ಹೊಮ್ಮಿವೆ.. ಇವನ್ನು ನೀವುಗಳು ಕೊಂಡು ಕೇಳಿ.. ನಿಮ್ಮ ತನುಮನಗಳನ್ನು ತಣಿಸದೆ ಬಿಡಲಾರವು!!!

ಹೀಗೆ ಇವರ ಕೆಲವೊಂದು ಪದ್ಯಗಳನ್ನು ನೆನೆಸಿಕೊಳ್ತಾ...

ಅನ್ವೇಷಣೆ ( ಇದು ನನ್ನ ಅತ್ಯಂತ ಅಚ್ಚು ಮೆಚ್ಚಿನ ಗೀತೆ)

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮಳೊಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೊ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ

ತೃಪ್ತಿ


ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ .

ಮಂಗಳವಾರ, ಅಕ್ಟೋಬರ್ 31, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೩

ನಮ್ಮ ಕವಿಗಳ ನೆನೆಸಿಕೊಳ್ಳುತ್ತಾ ಮುಂದುವರೆಯೋಣ!!
ದಾ ರಾ ಬೇಂದ್ರೆ.. ಮೊನ್ನೆ ಅಕ್ಟೋಬರ್ ೨೬ ನೆಯ ತಾರೀಖು ಇವರ ಪುಣ್ಯ ತಿಥಿ!!

ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಸೃಷ್ಟಿಸಿದ ಮಹಾನ್ ಕವಿ. ಇವರು ಬಹುಶಹಃ ಕಾವ್ಯದ ಎಲ್ಲಾ ಮಗ್ಗಲುಗಳಲ್ಲೊ ಕೈ ಆಡಿಸಿಬಿಟ್ಟಿದ್ದಾರೆ.. ಪ್ರಕೃತಿ ರಮಣೀಯತೆ (ಮೂಡಲ ಮನೆಯ, ಮುಗಿಲ ಮಾರಿಗೆ, ಶ್ರಾವಣ , ಘಮ ಘಮ, ಹಕ್ಕಿ ಹಾರುತಿದೆ, ಉತ್ತರ ಧ್ರುವದಿಮ್), ರೌದ್ರತೆ (ನೀ ಹಿಂಗ ನೋಡಬ್ಯಾಡ ನನ್ನ), ಅಧ್ಯಾತ್ಮಿಕತೆ ( ಪರಮಾಣು ನಾನು, ಬದುಕು ಮಾಯೆಯ ಮಾಟ, ಕುಣಿಯೋಣ ಬಾರ, ಯುಗ ಯುಗಾದಿ), ಭಾವನಾತ್ಮಕ (ನಾರಿ ನಿನ್ನ ಮಾರೀ ಮ್ಯಾಗ, ನಾನು ಬಡವಿ), ಸಮಾಜಿಕ ಪಿಡುಗು (ಕುರುಡು ಕಾಂಚಾಣ)... ಹೀಗೆ ಪಟ್ಟಿ ಮಾಡ್ತಾ ಹೋದ್ರೆ ವರ್ಷಾನುಗಟ್ಟಲೆ ಇವರ ಕಾವ್ಯ ಗಳನ್ನು ವಿಂಗಡಣೆ ಮಾಡಬೇಕಾಗುತ್ತೆ.. ಯಾಕೆಂದರೆ ಒಂದೊಂದು ಪದ್ಯಗಳಲ್ಲೂ ಸುಮಾರು ಭಾವಗಳು ಅಡಗಿರುತ್ತವೆ...

ಈ ಪದ್ಯ ಬೇಂದ್ರೆ ಯವರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟಂತ ನಾಕು ತಂತಿ ಕವನ ಸಂಕಲದ್ದು!!!

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಆದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕತ್ತುವಂತ ಮೂರ್ತಿ
ಕಿವಿಗೆ ಮುತ್ತಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೆ ಗಳಿಗೆ ಮೈಯ ತುಮ್ಬ
ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

ಬೆಳಗು!!!

ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ,
ನುಣ್ಣ-ನ್ನೆರಕಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ,
ದೇವನು ಜಗವೆಲ್ಲಾ ತೋಯ್ದಾ

ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೆ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ- ಪಟಪತನೇ ಒಡೆದು

ಎಲೆಗಳ ಮೆಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೆ ಇದ ತಂದು
ಈಗ ಇಲ್ಲಿಗೇ ತಂದು

ತಂಗಾಳೀಯಾ ಕೈಯೊಳಗಿರಿಸೀ
ಎಸಳಿನಾ ಚವರಿ
ಹೂವಿನ ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ ಮೈಯೆಲ್ಲಾ ಸವರಿ

ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಷ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಮ್ಮಾ
ಇದು ಬರಿ ಬೆಳಗಲ್ಲೋ ಅಣ್ಣಾ...

ಸೋಮವಾರ, ಅಕ್ಟೋಬರ್ 30, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨
ದಿವಂಗತ, ಶ್ರೀಮಾನ್ ಜೆ ಪಿ ರಾಜರತ್ನಂ...
ಈ ಮಹಾನ್ ಕವಿ ಕನ್ನಡ ಜನತೆಗೆ ತಮ್ಮ ನಾಯಿ ಮರಿ ಕವನದಿಂದ ಚಿರ ಪರಿಚಿತ.. ಇವರ ಶಿಶು ಗೀತೆಗಳು ಬಹಳ ಪ್ರಸಿದ್ಧ.. ಉದಾಹರಣೆಗೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು, ರೊಟ್ಟಿ ಅಂಗಡಿ ಕಿಟ್ಟಪ್ಪ.. ನೀವು ಇವುಗಳನ್ನು ಮರೆತಿದ್ದರೆ ದಯವಿಟ್ಟು ಒಂದು ಈ ಶಿಶುಗೀತೆಗಳ ಪುಸ್ತಕವನ್ನು ಕೊಂಡು ಓದಿ.. ಮುಂದೆ ನಿಮ್ಮ ಮಕ್ಕಳಿಗೆ ಕಲಿಸಬಹುದು!!!

ಇವರು ಶಿಶು ಗೀತೆಗಳನ್ನು ಬರೆಯಲು ಸಿಕ್ಕ ಪ್ರೇರಣೆ ಒಂದು ಕುತೂಹಲಕಾರಿ ಕಥೆ. ರಾಜರತ್ನಂ ರವರು ಕನ್ನಡದಲ್ಲಿ ಎಮ್ ಎ (ಆಗಿನ ಕಾಲದಲ್ಲಿ ಕನ್ನಡ ಎಮ್ ಎ ಪದವಿ ಪಡೆಯುವವರ ಸಂಖ್ಯೆ ಬೆರಳಷ್ಟು) ಪದವಿ ಪಡೆದಿದ್ದರೂ ಕೆಲಸವಿಲ್ಲದೆ ಮನೆಯಲ್ಲಿ ಇದ್ದಾಗ, ತಂದೆಯ ಅನಾರೋಗ್ಯದ ಕಾರಣದಿಂದ ಪ್ರಾಥಮಿಕ ಶಾಲೆಯಲ್ಲಿ (೨ ನೆಯ ತರಗತಿಗೆ) ಬದಲಿ ಶಿಕ್ಷಕರಾಗಿ ನೇಮಕಗೊಂಡರಂತೆ... ಎನೂ ಪೂರ್ವೋತ್ತರ ಅಭ್ಯಾಸ ಇಲ್ಲದೆ ಪಾಠ ಮಾಡಲು ತರಗತಿಗೆ ಬಂದಾಗ ೨ ನೆ ತರಗತಿಯ ಪಠ್ಯ ದಲ್ಲಿರುವ ಕ್ಲಿಷ್ಟತೆ (ಗದ್ಯ ಮತ್ತೆ ಪದ್ಯ ಎರಡರಲ್ಲೂ...ರಾಜರತ್ನಂ ರವರಿಗೆ ಅಲ್ಲ.. ೨ ನೆ ತರಗತಿಯ ಮಕ್ಕಳಿಗೆ) ಅರ್ಥವಾಗಿ ತಾವೆ ಶಿಶು ಸಾಹಿತ್ಯಕ್ಕೆ ಕೈ ಹಾಕಿದರಂತೆ....

ಇನ್ನು ಇವರ ಅತ್ಯುತ್ತಮ ಕವನ ಸಂಕಲನಗಲೆಂದರೆ ರತ್ನನ ಪದಗಳು ಮತ್ತು ನಾಗನ ಪದಗಳು.. ಇವು ಕನ್ನಡದ ಅತ್ಯಂತ ಉತ್ತಮ ಕವನಗಳ ಸಾಲಿನಲ್ಲಿ ಸೇರಬೇಕಾದಂತವು.. ಇವುಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು ನಲಿವುಗಳನ್ನು ಚಿತ್ರಿಸಿ, ಕಷ್ಟಗಳನ್ನು ಹೇಗೆ ಮರೆಯೋದು, ನೆಮ್ಮದಿ ಬಾಳ್ವೆ ನಡೆಸೋದು ಹೇಗೆ ಎಂಬುದರ ಬಗ್ಗೆ ಸರಳ ಕುಡುಕನ ಮಾತುಗಳಲ್ಲಿ ರಚಿತವಾಗಿವೆ...

ಕೆಲವು ಪದ್ಯಗಳನ್ನು ನೆನೆಯೋಣವೆ??

ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಈಗ ತುರ್ತು ಕೆಲಸದಿಂದ ಉಳಿದ ಕವನಗಳನ್ನು ನಾಳೆ ಬರೆದು ಕಳಿಸುತ್ತೇನೆ...

ರಾಜರತ್ನಂ ಪದ್ಯಗಳನ್ನು ಮುಂದುವರೆಸಿ

ಕನ್ನಡ ಪದಗೊಳ್

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!

ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
ಅಂತ ಔನ್ ಎನಾರ್ ಅಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

ಯೆಂಡ ಬುಟ್ಟೆ ಯೆಡ್ತೀನ್ ಬುಟ್ ಬುಡ್!
ಅಂತ ಔನ್ ಎನಾರ್ ಅಂದ್ರೆ
ಕಳ್ದೋಯ್ತ್ ಅಂತ ಕುಣದಾಡ್ತೀನಿ
ದೊಡ್ದ್ ಒಂದ್ ಕಾಟ! ತೊಂದ್ರೆ!

ಕನ್ನಡ್ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ
ಅಂತ ಔನ್ ಅಂದ್ರೆ- ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ- ಎಲ್ಲ!
ಕನ್ನಡ್ ಸುದ್ದೀಗ್ ಎನ್ರ ಬಂದ್ರೆ
ಮಾನ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ ಮನಸನ್ನ್ ನೀ ಕಾಣೆ

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನದ್ ಪದಗೊಳ್ ನುಗ್ಲಿ!

ರತ್ನನ್ ಪರ್ಪಂಚ


ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ

ಅಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪ್ರಪಂಚ

ಎನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರ್ಪಂಚದ್ ಅಂಚ
ದಾಟ್ಕಂಡಿ ಆರಾಡ್ತಾ
ಕನ್ನಡದಲ್ ಪದವಾಡ್ತ
ಇಗ್ಗೋದು ರ್‍ಅತ್ನನ್ ಪರ್ಪಂಚ

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ..
ನಾವ್ ಕಂಡಿಲ್ಲ ಆ ತಂಚ ವಂಚ
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ
ಎನಿದ್ರೆನು? ನಡತೇನ
ಚೆಂದಾಗ್ ಇಟ್ಕೊಳ್ಳದೆ ಅಚ್ಛ
ಅಂದ್ಕೊಂಡಿ ಸುಖವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಛ
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೇಳ್ದಂಗೆ
ಕುಣಿಯಾದೆ ರ್‍ಅತ್ನನ್ ಪರ್ಪಂಚ


ಜೈ ಭುವನೇಶ್ವರಿ...

"ಕನ್ನದದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು" --- ಕುವೆಂಪು

ಭಾನುವಾರ, ಅಕ್ಟೋಬರ್ 29, 2006

ಎದೆ ತುಂಬಿ ನೋಡಿದೆವು.....

ಎದೆ ತುಂಬಿ ನೋಡಿದೆವು.....

ಈ ಶೀರ್ಶಿಕೆ ನೋಡಿದಾಕ್ಷಣ ನಿಮಗೆ ಹೊಳೆದಿರಬಹುದು ಈ ಬರವಣಿಗೆಯ ವಿಷಯ.. ಸುಮಾರು ತಿಂಗಳು,ವರ್ಷಗಳಿಂದ ಪ್ರತಿ ಭಾನುವಾರ ರಾತಿ ೯-೦೦ ಕ್ಕೆ ಈ-ಟಿವಿ ಕನ್ನಡ ವಾಹಿನಿಯವರು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಒಂದು ನಮನ ಸಲ್ಲಿಸೋಣವೆ??? ಟಿವಿ ಅಂದ್ರೆ ಒಂದು ಮಹಾ ಬೇಜಾರಿನ ಪೆಟ್ಟಿಗೆ ( ಮೂರ್ಖರ ಪೆಟ್ಟಿಗೆ ಅನ್ನೋದ್ಕಿಂತ ಸೂಕ್ತವಾದ ಹೆಸರು ಅನ್ಸುತ್ತೆ!!!. ಬೇಜಾರ್ ಪೆಟ್ಟಿಗೆ ಅಂದ್ರೆ ಬೇಜಾರ್ ಕಳ್ಯೋದು ಅಂತಲ್ಲ ನೆನಪಿರಲಿ..) ಆಗಿರೋ ಸಂದರ್ಭದಲ್ಲಿ,ಕನ್ನಡ ಜನರನ್ನು ಹಿಡಿದು ಟಿವಿ ಮುಂದೆ ಒಂದೂ ವರೆ ಘಂಟೆ ಕೂರಿಸುವಲ್ಲಿ ಸಫಲರಾಗಿದ್ದಾರೆ ಎಂದರೆ ಅತಿಶಯವಾಗಲಾರದು!!!!

ಅದ್ರಲ್ಲೂ ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ಮಕ್ಕಳ ವಿಶೇಷ ಕಾರ್ಯಕ್ರಮಾನ ಹೊಗಳಲು ಮಾತುಗಳೆ ಇಲ್ಲ.. ಎಲ್ಲ ಪುಟಾಣಿ ಮಕ್ಕಳು.. ಅವ್ರ ಪ್ರತಿಭೆ ನೋಡಿದ್ರೆ ನಂಗೆ ಕೆಲವು ಅಸೂಯೆ ಆಗ್ತಾ ಇತ್ತು.. ನಾನು ಇದ್ದೀನಿ ಕೆಲ್ಸಕ್ಕೆ ಬಾರದವನು/ಅನಾವಶ್ಯಕ ಅನ್ನಿಸ್ತಾ ಇತ್ತು... ಈ ಚಿಕ್ಕ ವಯಸ್ಸಿಗೆ ಎಷ್ಟು ಚೆನ್ನಾಗಿ ಹಾಡ್ತಾರೆ.. ನಿಜ್ವಾಗ್ಲೂ ಎದೆ ತುಂಬಿ ಬಂತು!!!

ಈ ಸಂದರ್ಭದಲ್ಲಿ ಕೊನೆಯ ಹಂತಕ್ಕೆ ತಲುಪಿರುವ ಒಬ್ಬ ಸ್ಪರ್ಧಿಯನ್ನು ನೆನೆಸಿಕೊಳ್ಳಬೇಕು ಅನ್ನಿಸ್ತಾ ಇದೆ.. ಇವಳು ಪ್ರಾರ್ಥನಾ ಶಾಲೆಯಲ್ಲಿ ೩ ನೆ ತರಗತಿಯಲ್ಲಿ ಒದ್ತಾ ಇರೋ ಚಿಕ್ಕ ಹುಡುಗಿ.. ಚಿಕ್ಕ ಹುಡುಗಿ ಅನ್ನೋದ್ಕಿಂತ ಪಾಪು ಅನ್ನಬಹುದು.. ಪ್ರಾಯಶಃ ಎಲ್ಲಾ ಸ್ಪರ್ಧಿಗಳಲ್ಲೂ ಚಿಕ್ಕವಳು ಎನ್ನಬಹುದು. ಆದ್ರೆ ವಯಸ್ಸಿಗೆ ಮೀರಿದ ಪ್ರತಿಭೆ!!!! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಇವಳಿಗೆ ಹೇಳಿ ಮಾಡಿಸಿದ ಹಾಗಿದೆ!!!! ಎಲ್ಲಾ ಸುತ್ತುಗಳಲ್ಲೂ ಒಳ್ಳೊಳ್ಳೆ ಗೀತೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅದ್ಭುತವಾಗಿ ಹಾಡಿ ತೀರ್ಪುಗಾರರ, ವೀಕ್ಷಕರ , ಕಾರ್ಯಕ್ರಮ ಸಂಚಾಲಕ/ನಿರೂಪಕ ಬಾಲ ಸುಬ್ರಮಣ್ಯ ರವರ ಮನ ಸೂರೆಗೊಂಡಿದ್ದಾಳೆ ಎಂದರೆ ತಪ್ಪಾಗಲಾರದು...

ಈ ಪಾಪು ನಂಗೆ ಇಷ್ಟ ಆದ್ದರಿಂದ ವಿಶೆಷವಾಗಿ ಒಂದೆರಡು ಮಾತುಗಳನ್ನು ಬರೆದೆ!! ಆದರೆ ಒಟ್ಟಾಗಿ ಎಲ್ಲಾ ಮಕ್ಕಳೂ ಅದ್ಭುತ... ಒಂದೂ ವರೆ ಘಂಟೆ ನನ್ನಂತೂ ಟಿ ವಿ ಮುಂದೆ ಬೇರೆ ಏನೂ ಕೆಲ್ಸಾನ ಸಮಾನಾಂತರವಾಗಿ (paralelly ಅನ್ನೋದ್ನ ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದೀನಿ.. ಎಷ್ಟು ಸಮಂಜಸವೋ ಗೊತ್ತಿಲ್ಲ.. ನೀವೆ ವಿಚಾರ ಮಾಡಿ) ಮಾಡೋಕ್ ಬಿಡದೆ ಗಮನ ಇಟ್ಟು ನೋಡೊ ಹಾಗೆ ಮಾಡಿದ ಕಾರ್ಯಕ್ರಮ!!!

ಒಂದೆರಡು ಬಾರಿ ಎಸ್ ಪಿ ಬಿ ಮಕ್ಕಳನ್ನು ಅನುಕರಿಸಲು ಪ್ರಯತ್ನಿಸಿದಾಗ, ಕನ್ನಡವನ್ನು ಅನರ್ಥಗೊಳಿಸಿ ಮಾತಾಡಿದಾಗ ( ಅವರು ಇಷ್ಟು ಕನ್ನಡ ಕಲ್ತಿರೋದ್ಕೆ ನನ್ನ ಪ್ರಣಾಮ.. ನಿಜವಾಗ್ಲೂ ಹೆಮ್ಮೆ ಆಗುತ್ತೆ),ಕೆಲವು ಬೇಡವಾದ ಹಿತವಚನಗಳನ್ನು ಕೊಟ್ಟಾಗ, ಹಂಸಲೇಖ ರವರ ಸಾಹಿತ್ಯವನ್ನು ಅತಿಶಯವಾಗಿ ಹೊಗಳಿದಾಗ ( ವಿಶೇಷವಾಗಿ ಆ ಕಾರಂಜಿ ಕೆರೆ ಹಾಡು ಬಂದಾಗ... ) ಮನಸ್ಸಿನಲ್ಲಿ ಬೇಜಾರು ಸುಳೀತಾ ಇತ್ತು.. ಆದ್ರೆ ಅದು ಕ್ಷಣಿಕ!!! ಮತ್ತೆ ಮಕ್ಕಳು ಹಾಡೋಕ್ಕೆ ಶುರು ಮಾಡ್ಬಿಡ್ತಿದ್ರು!!!!

ಈ ವಾರದ ಕೊನೆ ಹಂತದ ಕಾರ್ಯಕ್ರಮ ಕೂಡ ಬಹಳ ಚೆನ್ನಾಗಿತ್ತು!!! ಈ ಕೊನೆ ಹಂತ ಮುಂದಿನ ವಾರ ಮುಂದುವರೆಯುತ್ತದೆ ಅಂದಾಗ, ಮುಂದಿನ ವಾರವೂ ಸಿಗುವ ರಸದೌತಣವನ್ನು ನೆನೆದು ಅತೀವ ಆನಂದವಾಯ್ತು!!!

ಕನ್ನಡ ಇ-ಟಿವಿ ವಾಹಿನಿಗೂ, ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿರುವ ಕೆನರಾ ಬ್ಯಾಂಕಿಗೂ, ನಡೆಸಿಕೊಡುತ್ತಿರುವ ಎಸ್ ಪಿ ಬಿ ರವರಿಗೂ, ಕಾರ್ಯಕ್ರಮದ ಸ್ಪರ್ಧಿಗಳಿಗೂ, ವಾದ್ಯ ವೃಂದದವರಿಗೂ, ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿರುವ ವೀಕ್ಷಕ ವರ್ಗಕ್ಕೂ ಜಾಹೀರಾತುದಾರರಿಗೂ, ತೀರ್ಪುಗಾರರಾಗಿ ಆಗಮಿಸುತ್ತಿರುವ ಖ್ಯಾತ ಸಂಗೀತಗಾರರಿಗೂ, ಮತ್ತು ತೆರೆಯ ಮರೆಯಲ್ಲಿ ದುಡಿದ ಇತರ ಕಲಾವಿದ/ಜನರಿಗೂ ನನ್ನ ತುಂಬು ಎದೆಯ ಧನ್ಯವಾದಗಳು... ವಂದನೆಗಳು...

ನಿಮ್ಮ ಕಾರ್ಯಕ್ರಮವನ್ನು ಎದೆ ತುಂಬಿ ನೋಡಿದೆನು!!!!!

ಶನಿವಾರ, ಅಕ್ಟೋಬರ್ 28, 2006

ಬೆಂಗಳೂರು ಯಾರಿಗೆ ಸೇರ್‍ಬೇಕು ???

ಬೆಂಗಳೂರು ಯಾರಿಗೆ ಸೇರ್‍ಬೇಕು ???
ಈ ಸ್ವಲ್ಪ ದಿನದ ಹಿಂದೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಬಹಳ ವಿಜೃಂಭಣೆಯಿಂದ ನಡೆಯಿತು. ಅದರ ಜೊತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಒಂದು ಬೃಹತ್ ಸಮಾವೇಶ ಕೂಡ ಜರುಗಿ ಅದರಲ್ಲಿ ಮಹಾರಾಷ್ಟ್ರದ ಸದರಿ ಉಪಮುಖ್ಯಮಂತ್ರಿ ಭಾಗವಹಿಸಿ ಅಸಂಭದ್ಧ ಭಾಷಣ ಕೂಡ ಬಿಗಿದ್ರು.. ಬಿಗ್ದ ಅನ್ನೋದ್ ಸೂಕ್ತ ಅನ್ಸುತ್ತೆ. ಬೆಳಗಾವಿಯಲ್ಲಿ ಮರಾಠಿಗಳು ಇರೋದ್ರಿಂದ ಅದ್ನ ಮಹಾರಾಷ್ಟ್ರಕ್ಕೆ ಸೇರಿಸ್ಬೇಕಂತೆ.. ಎಂತಹ ದುರುದೃಷ್ಟಕರ ಉದ್ದೇಶ!!! ಹಾಗಾದ್ರೆ ನಾವು ಊಟಿ (ಇದರ ಮೂಲ ಹೆಸರು ಉದಕ ಮಂಡಲ.. ಕನ್ನಡದ್ದು) , ಸೊಲ್ಲಾಪುರ, ಕಾಸರಗೋಡು ಇವೆಲ್ಲಾ ಕಡೆಗಳಲ್ಲೂ ಜಗಳ ತೆಗಿಬೋದಲ್ವ!! ಆದರೆ ಕನ್ನಡಿಗರು ಉದಾರರು.. ಸೌಜನ್ಯರು.. ಆದ್ದರಿಂದಲೇ ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಬರೀ ಶೇಕಡ ೨೮!! ಆಶ್ಚರ್ಯ ಆಗ್ಬೋದು.. ಆದ್ರೆ ಕನ್ನಡಿಗರಿಗೆ ದುಖಃ ಆಗೋಲ್ಲಾ.. ನಮ್ಮವರು ಪರೋಪಕಾರಿಗಳು.. ಪರರ ಉಪಕಾರಕ್ಕಾಗಿ ತಮ್ಮ ಭಾಷೇನೆ ಮರೆತು ಇತರ ಭಾಷೆಗಳನ್ನು ಕಲಿಯೊವಷ್ಟು ಉದಾರ ಮನೋಭಾವನೆ.. ಎಷ್ಟೇ ಆಗ್ಲಿ ಉದಾರೀಕರಣ ಯುಗ ಅಲ್ವೇ.. ನಮ್ಮ ಕನ್ನಡಿಗರ ನರ ನಾಡಿಗಳಲ್ಲೂ ಹರೀತಾ ಇದೆ ಉದಾರೀಕರಣ ರಕ್ತ.. ಸರಿ ವಿಷಯದಿಂದ ಪಲ್ಲಟ ಆಗೋದು ಬ್ಯಾಡ..

ನಾ ಹೇಳ್ಬೇಕು ಅಂತಾ ಇದ್ದಿದ್ದು ಇಷ್ಟು.. ಹೀಗೇ ಬೆಳಗಾವಿ ಅಧಿವೇಶನ ನಡಿತಾ ಇರೋ ಸಂಧರ್ಭದಲ್ಲಿ ನಾವು (ನಾನು, ನಿತಿನ, ರವೀಶ, ಶ್ರೀಹರ್ಷ) ಎಂದಿನಂತೆ ಮಧ್ಯಾಹ್ನದ ಭೋಜನ ಮುಗಿಸಿ ರಾಜ್ಯದ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡ್ತಾ ಕೂತೊ. ಹೀಗೆ ಮಹಾರಾಷ್ಟ್ರ ಬೆಳಗಾವೀನ ನುಂಗೋಕ್ಕೆ ಹೂಡ್ತಾ ಇರೋ ಸಂಚು, ಶಿವರಾಜ್ ಪಾಟೀಲ್ ಒತ್ತಡಕ್ಕೆ ಮಣಿದು ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಾಜನ್ ವರದಿ ಅನುಷ್ಟಾನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದ್ದು ಎಲ್ಲಾ ಚರ್ಚೆ ಆಗ್ತಾ ಇತ್ತು.

ಆಗ ಒಂದು ಯೋಚ್ನೆ ಬಂತು ನಿತಿನನ ತಲೇಗೆ.. ಹೀಗೆ ಆಯಾ ಪ್ರದೇಶದ ಭಾಷಾ ಜನಸಾಂದ್ರತೆ (ಒಂದು ಪ್ರದೇಶದಲ್ಲಿ ಒಂದು ಭಾಷೆಯನ್ನು ಬಳ್ಸೋ ಮಂದಿ (ಭಾಷಿಕರು) ಜಾಸ್ತಿ ಇರೋ ಆಧಾರದ ಮೇರೆಗೆ) ಪ್ರಕಾರ ಹೀಗೆ ಕಿತ್ತಾಡ್ತಾ ಹೋದ್ರೆ
ಬೆಂಗ್ಳೂರ್‍ನ ಯಾವ ರಾಜ್ಯಕ್ಕೆ ಸೇರಿಸ್ಬೇಕು??? ಬಸವನಗರದಲ್ಲಿ ಬಹು ಮಂದಿ ಕೇರಳಾದ ಜನ ಇದಾರೆ.. ಅವರಿಗೆ ಬಹು ಮಂದಿಗೆ ಕನ್ನಡ ಬರೋದೆ ಇಲ್ಲ.. ಇದ್ನ ಕೇರಳಕ್ಕೆ ಕೊಟ್ಬಿಡೋಣ?? ಇನು ಶ್ರೀರಾಮಪುರ, ಚಾಮರಾಜ ಪೇಟೆ ಹೀಗೆ ಇಲ್ಲೆಲ್ಲಾ ಬರೀ ತಮಿಳರೇ ಇರೋದು.. ಅದ್ನ ತಮಿಳ್ನಾಡಿಗೆ ಕೊಟ್ಬಿಡೋಣ??

ಒಂದು ಕೈ ಮುಂದೆ ಹೋಗಿ ನಮ್ಮ ನಮ್ಮ ದುಷ್ಟ ರಾಜಕಾರಣಿಗಳು ಶಿವಾಜಿನಗರದಲ್ಲಿ ಬಹುಮಂದಿ ಉರ್ದು ಭಾಷಿಕರೇ ಇರೋದು ಇದ್ನ ಕಾಶ್ಮೀರಕ್ಕೆ ಸೇರ್ಸಿ ಅಂದ್ರೆ??? ಒಂದು ಹೆಜ್ಜೆ ಇನ್ನೂ ಮುಂದೆ ಹೋಗಿ ಪಾಕೀಸ್ತಾನಕ್ಕೆ ಸೇರ್ಸಿ ಅಂದ್ಬಿಟ್ರೆ, ಇಲ್ಲೂ ಒಂದು ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿ ಮಾಡೋ ಅಂತ ನೀಚತನಕ್ಕೆ ನಮ್ಮ ರಾಜಕಾರಣಿಗಳು ಇಳಿಯೋಲ್ಲ ಅನ್ನೋಕ್ಕೆ ಆಗೊಲ್ಲ!!! (ಮೊನ್ನೆ ಉಗ್ರಗಾಮಿಗೆ ಗಲ್ಲು ಶಿಕ್ಷೆ ಕೊಡಬೇಡಿ... ಕ್ಷಮಾದಾನ ಕೊಡಿ.. ಅಂತ ದೇಶಾದಾದ್ಯಂತ ಒಡಕು ಸೃಷ್ಟಿಸಿದ ನೀಚರು ಈ ಹೇಸಿಗೆ ಕೆಲ್ಸಕ್ಕೂ ಕೈ ಹಾಕಲಾರರೆ??).. ಆಮೇಲೆ ಮಹಾತ್ಮ ಗಾಂಧಿ ರಸ್ತೆ ಸುತ್ತ ಮುತ್ತಲ ಪ್ರದೇಶಗಳನ್ನು ಇಂಗ್ಲೆಂಡಿಗೆ ಕೊಟ್ಟು ನಾವು ಕನ್ನಡಿಗರು ಎಲ್ಲಿ ಹೋಗುವ???

ಬೆಳಗಾವಿಯಲ್ಲಿ ಮರಾಠಿಗರಿಗೇನು ಮರಾಠಿ ಶಾಲೇಗಳ ಕೊರತೆ ಇಲ್ಲ.. ಜನ ಸಾಮಾನ್ಯರಿಗೆ ಅಲ್ಲಿ ಕನ್ನಡ ಮರಾಠಿ ಎರಡೂ ಒಂದೆ.. ಬೇರೆ ಬೇರೆ ಅಲ್ಲ.. ಎಲ್ಲರಿಗೂ ಸಾಮಾನ್ಯವಾಗಿ ಎರಡೂ ಭಾಷೆಗಳಲ್ಲಿ ಪ್ರಾವೀಣ್ಯತೆ ಇರುತ್ತೆ.. ಕರ್ನಾಟಕದಲ್ಲಿ ಅವರಿಗೆ ಎನೂ ಕೊರತೆ ಇಲ್ಲ... ಇನ್ನು ಕೊರತೆ ಯಾರೀಗ್ ಇರೋದು?? ಮಹಾರಾಷ್ಟ್ರದ ರಾಜಕಾರಣಿಗಳಿಗೆ!! ಮಹಾರಾಷ್ಟ್ರ ಏಕೀಕರಣ ಸಮಿತಿ ಅಂತ ಮಾಡ್ಕೋಂಡು ಧಾಂಧಲೆ ಎಬ್ಬಿಸ್ತಾ ಇರೋ ತಲೆ ಹಿಡುಕರಿಗೆ!!

ಇದಕ್ಕೆ ಪರಿಹಾರ ಏನು??? ಒಂದು ಬಾರಿ ಭಾಷಾವಾರು ಪ್ರಾಂತ್ಯ ರಚನೆ ಆದಮೇಲೆ ಅದನ್ನ ಎಲ್ಲಾರು ಒಪ್ಪಿಕೊಳ್ಳಬೇಕು.. ಅದನ್ನ ರಾಜಾಕೀಯ ದುರುದ್ದೇಶಕ್ಕೆ ಬಳಸೋದು ಸಲ್ಲ... ಯಾರು ಎಷ್ಟೆ ಅರಚಿ ಕಿರುಚಿದರೂ ಬೆಳಗಾವಿ ನಮ್ಮದು ಎಂಬ ಪ್ರತ್ಯುತ್ತರವನ್ನು ಸಮರ್ಪಕವಾಗಿ ಕೊಡ್ಬೇಕು!!! ಯಾವ ಏನ್ ತಿಪ್ಪೂರ್ ಲಾಗ ಹೊಡೆದ್ರೂ ಮಹಾಜನ್ ವರದಿಯೇ ಅಂತಿಮ (ಈ ಆಯೋಗ ಎರಡೂ ರಾಜ್ಯಗಳ ಒಪ್ಪಿಗೆಯಿಂದ ರಚಿಸಲ್ಪಟ್ಟಿದ್ದು ಎಂಬುದು ಪ್ರಮುಖ ಅಂಶ) ಅನ್ನೋ ನಿಳುವಳಿ ಯನ್ನು ತಾಳಿ ಬೆಳಗಾವಿಯಲ್ಲಿರೋ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಲು ಶ್ರಮ ಪಡಬೇಕು.. ಕನ್ನಡಿಗರೆಲ್ಲಾ ಒಂದಾಗಿ ಭಾಷಾಭಿಮಾನ ಪ್ರದರ್ಶಿಸಬೇಕು.. ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಯಶಸ್ವಿ ಬಂದ್ ಒಂದು ಉದಾಹರಣೆ. ಅದರಿಂದ ಸ್ವಲ್ಪ ನಷ್ಟ ಆಗಿರ್‍ಬೋದು.. ಆದರೆ ಭಾಷೆ, ರಾಜ್ಯ ಬೆಳವಣಿಗೆ ಆ ನಷ್ಟ ತೃಣ ಸಮಾನ!!! ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬಲ್ಲೆವು ಅಂತ ಸ್ಪಷ್ಟ ಸಂದೇಶ ಕೊಟ್ಟಿದ್ದೀವಿ ಇಡೀ ದೇಶಕ್ಕೆ....

ಜೈ ಕರ್ನಾಟಕ ಮಾತೆ!!!!

ಶುಕ್ರವಾರ, ಅಕ್ಟೋಬರ್ 27, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಗೆಳೆಯರೆ,

ಸುವರ್ಣ ಕನ್ನಡ ರಾಜ್ಯೋತ್ಸವ ಸನ್ನಿಹಿತವಾಗ್ತಾ ಇರೋ ಅಂತ ಸಂದರ್ಭದಲ್ಲಿ ನಮ್ಮ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟ ನಮ್ಮ ಸಾಹಿತಿಗಳನ್ನು ನೆನೆಯಲು ಒಂದು ಸುವರ್ಣಾವಕಾಶ.

ಈ ನಿಟ್ಟಿನಲ್ಲಿ ದಿನವೂ ಒಬ್ಬ ಕವಿಯ ಬಗ್ಗೆ ನೆನೆಯೋಣ.. ಅವರ ಕೆಲವು ಕಾವ್ಯಗಳನ್ನು ಮೆಲುಕು ಹಾಕೋಣ..

ಕುವೆಂಪು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಇವರ ಅತ್ಯುತ್ತಮ ಕೃತಿಗಳು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ. ಒಂದು ಬಾರಿ ಇವುಗಳನ್ನು ಓದಿ. ನೀವು ಕುವೆಂಪೂರವರ ಅಭಿಮಾನಿಗಳಾಗುವುದರಲ್ಲಿ ಸಂಶಯವೇ ಇಲ್ಲ.ಈ ಕೃತಿಗಳು ನಿಮ್ಮನ್ನು ಎಲ್ಲಾ ಭಾವಗಳಿಗೂ ಕೊಂಡೊಯ್ಯುವುದಲ್ಲದೆ ಸಮಾಜದ ಮೌಢ್ಯಗಳನ್ನು ಎತ್ತಿ ತೋರಿಸುತ್ತವೆ.

ಇವರ ಕೃತಿಗಳ ಬಗ್ಗೆ ಹೇಳಲು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಮಾತು. ಆದರೂ ಅವರನ್ನು ನೆನೆಸಿಕೊಳ್ಳಲು ಈ ಎರಡು ಅತ್ಯುತ್ತಮ ಕಾವ್ಯಗಳನ್ನು ನೋಡುವ..

ಅನಿಕೇತನ

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ

ಓ ನನ್ನ ಚೇತನ....

ಎಲ್ಲಿಯು ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು

ಓ ನನ್ನ ಚೆತನ....

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಓ ನನ್ನ ಚೇತನ
ಆಗು ನೀ ಅನಿಕೇತನ

ನಾಡಗೀತೆ
ಜಯ ಹೇ ಕರ್ನಾಟಕ ಮಾತೆ!

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ ,
ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ;
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಈಗ ಕನ್ನಡ ಕರಣನ ಸರದಿ

ನನ್ನ ಈ ಬ್ಲಾಗು ಸ್ವಲ್ಪ ಚಟುವಟಿಕೆಯಿಂದ ಇರಲಿ ಅಂತ ಈ ಹಿಂದೆ ಬರೆದಿದ್ದನ್ನೆಲ್ಲಾ ಈಗ ಪ್ರಕಟಿಸ್ತಾ ಇದ್ದೀನಿ...

ಈಗ ಕನ್ನಡ ಕರಣನ ಸರದಿ

ಈ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿ ಕಾಣಬಹುದು!!! ಆದರೆ ನೀವು ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ ಐಶ್ವರ್ಯ ನೋಡಿದ್ದರೆ ನಿಮಗೆ ಸುಳಿವು ಸಿಕ್ಕಿರುತ್ತೆ. ಹೌದು ಇದು ನಮ್ಮ ಕನ್ನಡದ ಕರಣ್ ಜೋಹರ್ ಎಂದೇ ಕರೆಯಬಹುದಾದ ಇಂದ್ರಜಿತ್ ಲಂಕೇಶರ(ನಿರ್ದೇಶನದ) ಮೂರನೆ ಸಾಹಸ 'ಐಶ್ವರ್ಯ' ಚಿತ್ರದ ವಿಮರ್ಶೆ!!!

ಈ ಚಿತ್ರದಲ್ಲಿ ಬಹಳ ಕಡೆ Itch gaurd ಜಾಹೀರಾತಿನ ಬಳಕೆ ಆಗಿದೆ. ಬಹುಶಃ ನಿರ್ದೇಶಕರು ಮೊದಲೇ ಊಹೆ ಮಾಡಿದ ಹಾಗಿದೆ!! ಈ ಚಿತ್ರ ನೋಡಿ ಜನ ಮೈ ಕೈ ಪರಚಿಕೊಳ್ಳೋದ್ ಅಂತು ನಿಜಾ.. ಯಾಕೆ ಇದಕ್ಕೆ ಪೂರಕವಾದ ಒಂದು ಉತ್ಪನ್ನಕ್ಕೆ ಜಾಹೀರಾತು ಪ್ರಚಾರಕ ಆಗ್ಬಾರ್‍ದು ಅಂತಾ?? ಬಹಳ ನಿಜ ನಿರ್ದೇಶಕರೇ.. ನಿಮ್ಮ ಊಹೆ ಸಂಪೂರ್ಣ ನಿಜ.. ನಾವೆಲ್ಲಾ ಮೈ ಕೈ ಪರ್ಚ್ಕೊಂಡಿದ್ದಂತೂ ಸತ್ಯ!! ನಮ್ಗೆ ಮುಂಚಿತವಾಗಿ ಗೊತ್ತಿರ್‍ಲಿಲ್ಲ..Itch gaurd ತಗೊಂಡ್ ಹೋಗ್ಬೇಕು ಅಂತ.. ಇನ್ನು ಮುಂದೆ ಹೋಗೋರ್‍ಗೆ ಸಹಾಯ ಆಗ್ಲಿ ಅನ್ನೊ ಉದ್ದೇಶವೇ ಈ ವಿಮರ್ಶೆ.

ಇನ್ನು ಸಂಭಾಶಣೆಯಂತೂ ಬಹಳ ಹಳಸು ಮತ್ತೆ ಎಳಸು.. ಹಳಸು ಯಾಕಂದ್ರೆ ಬಹಳ ಚಿತ್ರ ವಿಮರ್ಶೆಗಳಲ್ಲಿ ಬರ್‍ದಿದಾರೆ.. (ಉದಾ: ಪ್ರಜಾವಾಣಿ) ಬಹುಶಃ ಎಲ್ಲ ಹಾಸ್ಯ ದೃಶ್ಯಗಳೂ/ಸಂಭಾಷಣೆ ತಮಿಳು ತೆಲುಗು ಚಿತ್ರಗಳಿಂದ(ಉದಾ: ಗಝನಿ.. ಇದೂ ಕೂಡ ಆಂಗ್ಲ ಚಲನಚಿತ್ರ memento ದ ನಕಲು ಅನ್ನೋದ್ನ ಮರೀಬಾರ್‍ದು) ಯಥಾವತ್ತಾಗಿ ಎತ್ತಿರೋದಂತೆ!!! ಇನ್ನು ಎಳಸು ಯಾಕಂದ್ರೆ ಯಾವ ಸಂಭಾಷಣೆಯೂ ಮನಸ್ಸಿಗೆ ಮುದ ಕೊಡೊಲ್ಲಾ.. ಬದಲಿಗೆ ಬರೀ ಹಿಂಸೆ(ಮನಸ್ಸಿಗೆ ಹಿಂಸೆ)!!! ಉಪೇಂದ್ರನ ನಟನೆ ಮತ್ತೆ ಸಂಭಾಷಣೆ ಎಣ್ಣೆ ಸೀಗೆಕಾಯಿ...

ಇನ್ನು ಬಹಳ ಹೊಲಸು ಎಂದರೆ ಓಮ್ ಪ್ರಕಾಶ್ ರಾವ್ ರವರ ನಟನೆ.. ಕೆರ್‍ಕೊಂಡಿದ್ದೆಲ್ಲಾ ಗಾಯ ಆಗೋದು ಈ ಮಹಾಶಯ ಚಿತ್ರದಲ್ಲಿ ಬರೋ ೧೫ ನಿಮಿಷಗಳ ಸಮಯದಲ್ಲಿ.. ಬಹಳ ಅತಿರೇಕದ ನಟನೆ.. ಯಾವಾಗ ಕಣ್ಮರೆ(ಚಿತ್ರದಿಂದ) ಆಗ್ತಾನೋ ಅಂತ ಜನ ಕಾಯ್ತಾ ಇರ್‍ತಾರೆ.. ಓಮ್ ಪ್ರಕಾಶ್ ರಾವ್ ರವರೆ ಎಲ್ಲಾ ನಿರ್ದೆಶಕನೂ ನಟ ಆಗೋಕ್ ಆಗೊಲ್ಲಾ... ಎಲ್ಲರೂ ಉಪ್ಪಿ ಆಗೋಕ್ ಆಗೊಲ್ಲಾ...

ಶರಣ್ ಬರ್‍ತಾರೆ.. ಹೊಗ್ತಾರೆ... ಯಾರೂ ನಗೋಲ್ಲಾ.. ಅಂತಾ ಉತ್ತಮ ಹಾಸ್ಯನಟನನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡಿರೋದೆ ಹಾಸ್ಯಾಸ್ಪದ..

ಇನ್ನು ದೊಡ್ಡಣ್ಣ ಮತ್ತೆ ಕೋಮಲ್ ಕೂಡ ಇದಕ್ಕೆ ಹೊರತಲ್ಲ.. ಆದರೆ ತಕ್ಕ ಮಟ್ಟಿಗೆ ಪರವಾಗಿಲ್ಲ ಎನ್ನಬಹುದು..

ಡೈಸಿ ಬೊಪಣ್ಣಂದೂ ಅದೇ ಕಥೆ... ಹಿಂಸೆ!!!

ಮೊದಲೆ ಹೇಳ್ದೆ ಉಪ್ಪಿ ಬಗ್ಗೆ.. ಆದ್ದರಿಂದ ಉಪ್ಪಿ ಸಾಧಾರಣ ಅನ್ನಬಹುದು...

ಇನ್ನು ಸಾಧುಕೋಕಿಲ ಒಂದತ್ತು ನಿಮಿಷ ಕಚಗುಳಿ ಕೊಡುತ್ತಾರೆ ಎನ್ನುವುದು ಸಮಾಧಾನದ ವಿಷಯ..

ನಾವು ಹೊಗಿದ್ದ್ ಬೇರೆ ಆ ಕಿತ್ತೋದ್ ಚಿತ್ರ ಮಂದಿರ ಸಾಗರ್!!!! ಅಲ್ಲಿ ಕಾಲು ಅಲ್ಲಾಡಿಸ್ದ್ರೆ ಸಾಕು ಎದ್ರೂಗ್ ಕೂತ ಮಹರಾಯ ಚಿತ್ರ ನೊಡೋದ್ ಬಿಟ್ಟು ನನ್ನ ಕಾಲೇ ನೋಡ್ಕೋಂಡ್ ಕೂತ್ ಬಿಡ್ತಿದ್ದ.. ನಂಗೆ ಕೆರ್‍ಕೊಳ್ಳೊಕ್ಕೂ ಆಗ್ದು ಬಿಡೊಕ್ಕೂ ಆಗ್ದು!!! ಸರಿ ಸರಿ ಇದು ಚಿತ್ರ ಮಂದಿರದ ವಿಮರ್ಶೆ ಆಗೋದು ಬೇಡ.. ಇದ್ನ ಇಷ್ಟೊಂದು ದುಖದಿಂದ ಯಾಕ್ ಹೆಳ್ತಾ ಇದ್ದೀನಿ ಅಂದ್ರೆ ಈ ಮಹಾ ನಿರ್ದೇಶಕನ ಎಲ್ಲ ಕೆಟ್ಟ ಚಿತ್ರಗಳನ್ನೂ (ತುಂಟಾಟ, ಮೊನಾಲೀಸಾ, ಐಶ್ವರ್ಯ) ಈ ಕೆಟ್ಟ ಚಿತ್ರ ಮಂದಿರದಲ್ಲೇ ದುಡ್ಡು ಕೊಟ್ಟು ನೋಡಿದ್ದು.. :-( ಆ ದುಖಃ ತಡ್ಕೋಳ್ಳಾಕ್ ಆಗ್ದೆ ಹೇಳ್ಬಿಟ್ಟೆ..

ಇನ್ನು ಮನಸ್ಸಿಗೆ ಮುದ ಕೊಡುವ ಸಂಗತಿ ಚಿತ್ರದಲ್ಲಿ ಅಂದ್ರೆ ೩ ಹಾಡುಗಳು.. ಕಣ್ ಮನಗಳನ್ನು ತಣಿಸುತ್ತವೆ.. ಇವು ಇಲ್ಲಿ ಸ್ವಾಭಾವಿಕ Itch gaurd ಎಂದೇ ಹೇಳಬಹುದು.. ಚಲನಚಿತ್ರದ ಆಕರ್ಷಣೆ ಈ ಮೂರು ಹಾಡುಗಳು ಮತ್ತು ದೀಪಿಕಾ ಪಡುಕೋಣೆ ಎಂಬ ಬೆಡಗಿಯ ಅದ್ಭುತ ಸೌಂದರ್ಯ!!
ಕುನಾಲ್ ಗಾಂಜಾವಾಲ್ ರವರ ಗಾಯನ ಬಹಳ ಚೆನ್ನಾಗಿದೆ.
ಹಾಡುಗಳೆಂದರೆ ಹುಡುಗಿ ಹುಡುಗಿ.. ಇದು ದೀಪಿಕಾಳ ಮುಖ ಸೌಂದರ್ಯಕ್ಕೆ ಮೀಸಲಾದರೆ ಇನ್ನೆರಡು ಹಾಡುಗಳು (ಮನ್ಮಥಾ,ಐಶ್ವರ್ಯ ಐಶ್ವರ್ಯ) ಅಂಗ ಸೌಂದರ್ಯವನ್ನು ಮೆರೆಯುತ್ತವೆ.. ಇವುಗಳನ್ನು ವಿವರಿಸೋಕ್ಕೆ ಪುಟಗಳೆ ಬೇಕು.. ನೀವೆ ಕಣ್ಣಾರೆ ಸವಿಯುವುದು ವಾಸಿ.. :D

ಈ 'ಪದ ಜೋಡನೆ' (ಈಗಿನ ಹಾಡುಗಳಿಗೆ ಇನ್ನೊಂದು ಹೆಸರು) ಬಹಳ ಕೆಟ್ಟದಾಗಿದೆ.. 'ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ'.. ಪ್ರೀತಿ ನಾಮಪದ/ಗುಣಾತ್ಮಕ/ಕ್ರಿಯಾಪದಗಳಾಗಿ ಬಳಕೆಯಾಗಿದೆ.. ಇದನ್ನ ಬರೆದವ ಇದ್ನೆ ಸೃಜನಶೀಲತೆ ಅಂದ್ಕೊಂಡ್ ಬಿಟ್ಟಿದಾನೇನೊ?? ಇದು ಬಹಳ ವಿಷಾದಕರ ಸಂಗತಿ.. ಈ ರೀತಿ ಕನ್ನಡವನ್ನು ಕನ್ನಡ ಚಿತ್ರಗಳಲ್ಲೆ ಕೊಲ್ತಾ ಇರೋದು :-(

ಪಡುಕೋಣೆಯ ನಟನೆ ಪರವಾಗಿಲ್ಲ.. ಮೊದಲನೆ ಚಿತ್ರವಾದರೂ ಅಬ್ಬರದ ನಟನೆ ಇಲ್ಲಾ.. ಇನ್ನೂ ಸುಧಾರಿಸಿಕೊಳ್ಳಬಹುದಿತ್ತು.. ಆದರೆ ಜನರಿಗೆ ಬೇಕಾದ್ದನ್ನು ಅವರು ಕೊಟ್ಟಿದ್ದಾರೆ.. ಅವರು ತಮ್ಮ ಕಾರ್ಯದಲ್ಲಿ ಸಫಲಗೊಂಡಿದ್ದಾರೆ ಎನ್ನಬಹುದು..

ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ್ದ ಛಾಪನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಇದ್ದಾರೆ ಅನ್ನೋದಕ್ಕೆ ಈ ಚಿತ್ರ ಇನ್ನೊಂದು ನಿದರ್ಶನ...

ಜೇಬಲ್ಲಿ ಜಾಸ್ತಿ ದುಡ್ಡು ಕಡೀತಾ ಇದ್ರ್‍ಎ... ಇಂದ್ರಜಿತ್ ಕೈಲೇ ಕೆರ್‍ಸ್ಕೋಬೇಕು ಅನ್ನೋ ಮನಸ್ಸಿದ್ದರೆ ನೋಡಬಹಿದಾದ ಚಿತ್ರ...

ನನ್ನ ದುಖಃ ನಾ ತೋಡ್ಕೊಂಡೆ.. ನೋಡೋದು ಬಿಡೋದು ನಿಮಗೆ ಬಿಟ್ಟಿದ್ದು...

ಕಿರು ಸೂಚನೆ: ಈ ಮೇಲಿನದ್ದೆಲ್ಲಾ ನನ್ನ ವ್ಯಯಕ್ತಿಕ ಅಭಿಪ್ರಾಯಗಳಾಗಿರುತ್ತವೆ. ನೀವು ಕರಣ್, ಇಂದ್ರಜಿತ್, ಉಪ್ಪಿಯವರ ಅಭಿಮಾನಿಗಳಾಗಿದ್ದು ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ..

ಗುರುಪ್ರಸಾದ್ ಡಿ ಎನ್