ಮಂಗಳವಾರ, ಸೆಪ್ಟೆಂಬರ್ 05, 2006

AKKAನಿಗೊಂದು ಪತ್ರ...

AKKAನಿಗೊಂದು ಪತ್ರ...

ಪ್ರೀತಿಯ ಅಕ್ಕನಿಗೆ ಸಾಷ್ಟಾಂಗ ನಮಸ್ಕಾರಗಳು...
ನೀ ಅಲ್ಲೆಲ್ಲೋ ವಿದೇಶದಲ್ಲಿದ್ಕೊಂಡು ನಮ್ ಭಾಷೆ ಕನ್ನಡಕ್ಕೋಸ್ಕರ
ಬಹಳ ದುಡಿತಾ ಇದ್ಯ ಅಂತ ಕೇಳಿ ಬಹಳ ಖುಷಿ ಆಯ್ತು ಕಣಕ್ಕ....

ದಟ್ಸ್ ಕನ್ನಡ.ಕಾಮ್ ನಲ್ಲಿ ಎಲ್ಲಾ ಒದ್ತಾ ಇರ್ತೀನ್ ಅಕ್ಕ.. ಚಾಚು ತಪ್ದೆ ಪ್ರತಿ ಅಂಕಣಾನು ಒದ್ತೀನಿ ನಿನ್ ಬಗ್ಗೆ.. ನಿಂದು ಎಲ್ಲಾ ಭಾವ ಚಿತ್ರಗಳ್ನೂ ನೋಡ್ದೆ ಕಣಕ್ಕ.. ಬಲ್ ಪಸಂದಾಗವೆ!!!

ಅಕ್ಕಾ.. ನಿನ್ ವಿಷ್ಯ ಕೆಳ್ದಾಗ್ಲೆಲ್ಲಾ ನಿನ್ನ ನೊಡ್ಬೇಕು ಅಂತ ಬಲ್ ಆಸೆ ಆತಾದ್ ಕಣಕ್ಕ!!!

ಆದ್ರೆ ನಾನೇನ್ ರಾಜಕಾರಣೀನ??? ಸಾಹಿತೀನ??? ನಟನ??? ಕಲಾವಿದನ??? ಧರ್ಮ ಗುರೂನ??
ಹಾಳಾಗ್ ಹೊಗ್ಲಿ ದುಡ್ಡಿರೊ ಶ್ರೀಮಂತಾನ???

ಇಲ್ಲ ಕಣಕ್ಕ.. ನಾನು ಬರೀ ಒಬ್ಬ ಸಾಮಾನ್ಯ ಸಾಹಿತ್ಯಾಭಿಮಾನಿ!!!!

"ಶ್ರೀ ಸಾಮಾನ್ಯನೆ ಭಘವತ್ ಮಾನ್ಯಮ್!!!
ಶ್ರೀ ಸಾಮಾನ್ಯನೆ ಭಘವತ್ ಧನ್ಯಮ್!!!"

ಅಂತ ಕುವೆಂಪು ಬರ್‍ದಿರೋ ಕವನಾನ ನಾನೆ ಅವಾಗ್ ಅವಾಗ್ ಹಾಡ್ಕೊಂಡ್ ಕುಷಿ ಪಡ್ತಾ ಇರ್‍ತೀನ್ ಕಣಕ್ಕ....

ಅದೆಷ್ಟೋ ದೂರ ಇರೋ ದೇಶಕ್ಕೆ ನಮ್ ಲಲ್ಲೂ ರೈಲು ಕೂಡ ಹೋಗೊಲ್ವಂತೆ!!! ಇಲ್ಲಾ ಅಂದ್ರೆ ಹತ್ಕೊಂಡ್ ನಾನ್ ಬಂದ್ಬಿಡ್ತಿದ್ದೆ.... ಇರ್‍ಲಿ ಬಿಡು...

ಅಕ್ಕಾ ನಾವೇನೂ ಕಡ್ಮೆ ಇಲ್ಲಾ... ನಾವು ಕನ್ನಡಾನ ಉಳ್ಸೋಕ್ಕೆ
ದೊಡ್ ಸಮ್ಮೇಳನಾನೆ ಮಾಡ್ಬೇಕು ಅಂತಿದ್ದೀವಿ..(ಪ್ರತೀ ವರ್ಷ ಮಾಡ್ತೀವಿ..ನಮ್ಮಲ್ಲೂ ಊಟ ಬಲ್ ಜೋರು!!!)

ನೀನು ಬಂದ್ಬಿಡಕ್ಕ ನಿನ್ ಪರಿವಾರ ಎಲ್ಲಾ ಕಟ್ಕೊಂಡು..

ಗೊತ್ತಲ್ಲಕ್ಕ ಶಿವಮೊಗ್ಗ??? ಅದೆ ಕಣಕ್ಕ ಜೊಗ್ ಜಲ್ಪಾತ ಐತೆಲ್ಲ...
ಅದೂ ಕೂಡ ನಿಮ್ ನಯಾಗ್ರ ತರಾನೆ... ನಮ್ ದೇಶಕ್ಕೆ!!!!

ಅಕ್ಕ ಇನ್ನೊಂದ್ ವಿಷ್ಯ ಅಂದ್ರೆ ಈ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಯಾರ್ ಗೊತ್ತ???
ನಮ್ ನಿತ್ಯೋತ್ಸವ ಕವಿ ಇಲ್ವ?? ಡಾ. ನಿಸ್ಸಾರ್ ಅಹಮದ್!!!

ಅಕ್ಕಾ.. ಆದ್ರೆ ನಮ್ದು ಬಡ್ ದೇಶ... ಚಂದ ಎತ್ತಾಣ ಅಂದ್ರೆ ಒನ್ದ್ ನಯಾ ಪೈಸಾನೂ ಹುಟ್ಟಲ್ಲಾ ಕಣಕ್ಕ...
ಸಾಹಿತ್ಯ ಏನ್ ಹೊಟ್ಟೆ ತುಂಬ್ಸ್ತಾದೇನಕ್ಕ??? ಅಂತಾರೆ ಜನ!!! ಅದೂ ಒಂದ್ ತರ ನಿಜಾನೆ ಬಿಡು!!!

ಇನ್ನು ನಮ್ಮ ಸರ್ಕಾರ ದುಡ್ ಕೊಡ್ತೀವಿ ಕೊಡ್ತೀವಿ, ಇವೊತ್ ಕೊಡ್ತೀವಿ ನಾಳೆ ಕೊಡ್ತೀವಿ ಅಂತಾ ಕೊನೇಗ್ ಕೈ ಎತ್ಬಿಡ್ತಾರ್ ಕಣಕ್ಕಾ...
ಅವ್ರೂ ಚೆನ್ನಾಗ್ ತಿಳ್ಕೊಂಡ್ಬಿಟ್ಟಾವ್ರೆ ಕಣಕ್ಕ .. ಕನ್ನಡಕ್ಕಾಗಿ ಕೈ ಎತ್ತು ... ನಿನ್ನ ಕೈ
ಕಲ್ಪವೃಕ್ಷ ವಾಗುವುದು ಅಂತ... ನಮ್ ಮಹಾಕವಿ ಹೇಳಿಲ್ವ...

ಆ "ಕೈ ಎತ್ತು" ಅನ್ನೋದ್ಕೆ ಹೊಸ ಅರ್ಥಾನೆ ಬಂದ್ ಬಿಟ್ಟೈತ್ ಕಣಕ್ಕ ನಮ್ ರಾಜಕಾರಣಿಗಳಿಂದ!!!

ಅಕ್ಕಾ ಅಲ್ಲೆನೊ ಬಹಳ ಜನ ಇದಾರಂತೆ... ಸಾಹಿತ್ಯ ಅಂದ್ರೆ ಮುಗಿ ಬೀಳ್ತಾರಂತೆ!!!!
ನಮ್ಮಲ್ಲು ಇದಾರಕ್ಕ!!! ಅರ್ಧ ಜನ ಸಾಹಿತ್ಯ ಸಮ್ಮೇಳನಕ್ಕೆ ಬರೋದೆ ಅಲ್ಲಿ ಸಿಗೊ ನಳಪಾಕಕ್ಕೆ!!!
ಅಯ್ಯೋ ನಮ್ಗ್ಯಾಕ್ ಬಿಡಕ್ಕ.. ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅಂತ..
ಏನೊ ನಮ್ಗೂ ಜನ ಬಂದ್ರೆ ಸಾಕು.. ಅದೆ ಖುಷಿ...

ಮತ್ತೆ ಅಕ್ಕಾ ೨೦೦೮ ಕ್ಕೆ ತಿರ್‍ಗ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳ್ನ ಮಾಡ್ತ್ಯಂತೆ!!! ಬಹಳ ಖುಷಿ ಆತಾಯ್ತ್ ಕಣಕ್ಕ...

ಆದ್ರೆ ಅಕ್ಕಾ ನನ್ದೊಂದು ಮಾತು.. ಚಿಕ್ ಹುಡ್ಗ ಎನೋ ಹೇಳ್ತಾ ಇದ್ದೀನಿ...
ತಪ್ಪು ಅನ್ಸ್ದ್ರೆ ಹೊಟ್ಟೇಗ್ ಹಾಕ್ಕೊಂಡ್ಬಿಡು.... ಅಷ್ಟೊಂದ್ ದೂರ ಇದ್ಕೊಂಡ್ ನೀನ್ ಈ ಕೆಲ್ಸ ಎಲ್ಲ ಮಾಡ್ದ್ರೆ ನಮ್ ಜನಕ್ಕೆ ಕೆಲ್ಸ ಕಾರ್ಯ ಎಲ್ಲ ಬಿಟ್ ಅಲ್ಲೀಗ್ ಬರೋಕ್ ಕಷ್ಟಾ... ಅದ್ಕೇ...........
ನೀ ಮುಂದಿನ್ ಸಮ್ಮೆಳ್ನಾನ ನಮ್ಮ ಕರುನಾಡಲ್ಲೆ ಯಾಕ್ ಮಾಡ್ಬಾರ್ದಕ್ಕ?????

ಖರ್ಚೂ ಕಡ್ಮೆ ಆಗುತ್ತಂತೆ!!!
ಆಗ್ಲೆ ಹೇಳ್ದಂಗೆ ನಿಮ್ಮಲ್ಲಿ ಸಾಹಿತ್ಯ ಅಂದ್ರೆ ಜನ ಬೇಜಾರ್ ಮಾಡ್ಕೊಳ್ದೆ ದೇಣ್ಗೆ ಕೊಡ್ತಾರಂತೆ!!!

ಎಲ್ಲ ತಂದು ಇಲ್ಲೆ ಇನ್ನೂ ಭವ್ಯವಾಗಿ ಮಾಡ್ಬೋದ್ ಅಲ್ವೇನಕ್ಕ??? ೫ ಕೊಟಿ ಕನ್ನಡಿಗ್ರು ನೊಡ್ಬೋದು ನಿನ್ನಾ!!!

ನಿನ್ನ ನೊಡ್ಬೇಕು ಅನ್ನೊ ನನ್ ಆಸೆ ಕೂಡ ಪೂರೈಸುತ್ತೆ!!!!
ನಿಂಗೂ ಕೆಲ್ಸ ಕಾರ್ಯ ಬಿಟ್ ಬರೋಕ್ಕೆ ಕಷ್ಟ ಆಗ್ಬೋದು.. ನೊಡಕ್ಕ ಇನ್ನೊಂದ್ ಸಾರಿ ಯೋಚ್ನೆ ಮಾಡು!!!

ಇತಿ ನಿನ್ನ ತಮ್ಮ,
ಗುರುಪ್ರಸಾದ್ ಡಿ ಎನ್