ಶುಕ್ರವಾರ, ಅಕ್ಟೋಬರ್ 29, 2010

’ನುಡಿ’ದರೆ...

ಇಂದು ಬೆಳಗ್ಗೆ ಅಳ್ವಾಸ್ ’ನುಡಿಸಿರಿ’ಗ ಇಂದು ಬೆಳಗ್ಗೆ ಕರ್ನಾಟಕದ ವಿವಿಧ ಕಲಾವಿದರ ತಂಡದಿಂದ ಲಯ ವಾದ್ಯಗಳ ಮೇಳಗಳ ಪ್ರದರ್ಶನದೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. ಲಯ ವಾದ್ಯಗಳ ಪ್ರದರ್ಶನ ಅದ್ಭುತವಾಗಿತ್ತು. ಕೇಳಲು, ನೋಡಲು ಆನಂದ. ವೈದೇಹಿಯವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ, ವೇದಿಕೆಗೆ ಕರೆತರುವುದನ್ನೂ ನೋಡುವುದೇ ಚಂದ. ಈ ಉನ್ಮಾದದಲ್ಲಿ ನೆನ್ನೆಯ ಕಹಿಯನ್ನು ಮರೆತಿದ್ದೆ.



ನಂತರದ ಘಟನೆಗಳು ಮತ್ತೆ ಮನಸ್ಸಿಗೆ ಬೇಸರವನ್ನು ತಂದವು. ನೆನ್ನೆಯ ಬ್ಲಾಗ್‌ನಲ್ಲಿ ಹೆಸರಿಸಿದ ವ್ಯಕ್ತಿಗೆ ವಿಷಯ ತಿಳಿದು ನಮ್ಮ ಮಳಿಗೆಗೆ ಬಂದು ಕಿರುಚಾಡಲು ಪ್ರಾರಂಬಿಸಿದ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರಿಂದ ನಾನೂ ಆ ಶಬ್ದಗಳನ್ನು ಅವರಿಗೆ ತಿರುಗಿಸಬೇಕಾಯಿತು! ನೀವು ಕೃತಘ್ನರು. ಮುಂದಿನ ವರ್ಷದಿಂದ ಬರಲೇಬೇಡಿ. ಊಟ ಹಾಕ್ತೀವಿ! ನಿಮಗೆ ವಸತಿ ಕೊಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಬ್ಲಾಗ್‌ನಲ್ಲಿ ಬರೆದಿದ್ದೀರಿ, ___________ (ಅವಾಚ್ಯ ಶಬ್ದಗಳು)..

ಸ್ವಲ್ಪ ಸಮಯದ ನಂತರ ಕೆಲ ಸಹೃದಯ ಗೆಳೆಯರು, ಈ ತಪ್ಪಿನ ವಿರುದ್ಧ ಧ್ವನಿ ಎತ್ತಿದ್ದರಿಂದ ಕಿರುಚಾಡಿದ ವ್ಯಕ್ತಿ ಮತ್ತು ಸಂಘಟನೆಯ ಕೆಲ ಸದಸ್ಯರೂ ಬಂದು ನನ್ನ ಕ್ಷಮೆ ಕೇಳಿದರು. ಆದ್ದರಿಂದ ಈ ಸಮಸ್ಯೆಯನ್ನು ಬೆಳಸದೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ. ಆದರೆ ಕೆಲವು ಸ್ಪಷ್ಟೀಕರಣಗಳೊಂದಿಗೆ!

ನಾನು ಅವರ ವಸತಿಯನ್ನೂ ನಿರಾಕರಿಸಿದ್ದೇನೆ. ಅವರ ಊಟವನ್ನೂ ಕೂಡ. ನಾವು ಕೊಟ್ಟ ೨೦೦೦/- ರೂಪಾಯಿ ಅವುಗಳನ್ನು ಒಳಗೊಂಡಿವೆ ಎಂದು ತಿಳಿದು ಒಪ್ಪಿಕೊಂಡಿದ್ದೆನೇ ಹೊರತು ಅವರ ಮರ್ಜಿಗೆ ಬಿದ್ದಲ್ಲ. ಅಕ್ಕ ಪಕ್ಕದ ಮಳಿಗೆಗಳ ವಾರಸುದಾರರು ಹೇಳುವಂತೆ ಅವೆಲ್ಲವೂ ನಾವು ಪಾವತಿಸಿರುವ ಹಣದಲ್ಲಿಯೇ ಕೊಡವೇಕಾದ ಅನುಕೂಲಗಳು. ಇಲ್ಲೂ ಪಾರದರ್ಶಕತೆಯಿಲ್ಲ. ನನಗೆ ಅವರ ಫೇವರ್‌ಗಳು ಅನವಶ್ಯಕ!

ಅಳ್ವಾಸ್ ನುಡಿಸಿರಿ ಕಾರ್ಯಕ್ರಮ ಸಂಘಟನೆ ಹೆಸರುವಾಸಿ. ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶ ಸಂಘಟನೆ ತನ್ನ ನ್ಯೂನ್ಯತೆಗಳನ್ನು ತಿದ್ದಿಕೊಂಡು ಹೆಚ್ಚು ಬೆಳೆಯಲಿ ಎಂಬ ಉದ್ದೇಶದಿಂದಷ್ಟೇ! ಅಲ್ವಾಸ್ ನುಡಿಸಿರಿಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದರಿಂದ ನನಗೆ ಯಾವುದೇ ರೀತಿಯ ವ್ಯಯಕ್ತಿಕ ಲಾಭಗಳಿಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನದ ಅತ್ಯಂತ ದೊಡ್ಡ ಆಕರ್ಷಣೆ ಮತ್ತು ಅಗತ್ಯ ಪುಸ್ತಕ ಮೇಳ. ನೀವು ಕರೆಸುವ ಸಾಹಿತಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನೇ ಒದಗಿಸಿ. ಅವರ ಪುಸ್ತಕಗಳನ್ನು ಮಾರಾಟ ಮಾಡುವ ಪುಸ್ತಕ ಮಾರಾಟಗಾರರಿಗೆ ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿ! ನಮಗೂ ಕನ್ನಡದ ಕಳಕಳಿಯಿದೆ.

ಇನ್ನು, ನುಡಿಸಿರಿ ಎಂಬ ಹೆಸರಿಟ್ಟಿದ್ದೀರಿ. ನಿಮ್ಮ ಕಾರ್ಯಕ್ರಮ ಸಂಘಟಕರಿಗೆ ಒಂದು ಕಿವಿಮಾತು ಅವಶ್ಯಕ! "ನುಡಿದರೆ........ " ಇದನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಹುತೇಕ ಜನಕ್ಕೆ ಗೊತ್ತಿರಬೇಕು.
_____________________________________________________________________________________
ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು.
_____________________________________________________________________________________
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಭರಾಟೆಯಲ್ಲಿ, ಘೋಷ್ಠಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲವೆಲ್ಲ ಎಂಬುದೇ ಸಂಕಟ!

ಗುರುವಾರ, ಅಕ್ಟೋಬರ್ 28, 2010

ಅಲ್ವಾಸ್ ನುಡಿಸಿರಿಯ ಲಿಫ್ಟ್ ಗಣ್ಯರಿಗೆ ಮಾತ್ರವೇ?

ನೆನ್ನೆ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.

ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!

ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್‌ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.

ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!

೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.

೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!

೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರ‍ೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.

೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!

೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!

ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?

ಶನಿವಾರ, ಆಗಸ್ಟ್ 21, 2010

ಸಚಿವನ ಕಾರಿಗೆ ಅಡ್ಡ ಬಂದ ಹಸುವಿಗೆ ಚಿತ್ರಹಿಂಸೆ, ಸಾವು! ’ಗೋಹತ್ಯಾ ನಿಷೇಧ ಕಾಯಿದೆ’ಗೆ ತಿದ್ದುಪಡಿ ಚಿಂತನೆ!

ನೆಲಮಂಗಲದ ಬೈಪಾಸ ರಸ್ತೆಯ ಬಳಿ ಧಾವಿಸುತ್ತಿದ್ದ ಮಾನ್ಯ ಸಚಿವ ಬಚ್ಚಾ ಗೌಡನ ಕಾರಿಗೆ ಅಡ್ಡ ಬಂದದ್ದರಿಂದ, ಚಿತ್ರ ಹಿಂಸೆ ಅನುಭವಿಸಿ ಸಾವಿಗೀಡಾದ ದನದ ದಾರುಣ ಕಥೆ, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲ ಬ್ಯೂರೋ ಇಂದ ಸಮರಸ ಠೀವಿಯ ಭಾತ್ಮೀದಾರ, ಹೈಬ್ರಿ ಜೆರ್ಸಿ ವರದಿ ಕೊಟ್ಟಿದ್ದಾರೆ. ಮುಂದೆ ಓದಿ.

ನಡೆದದ್ದು ಹೀಗೆ, ತುಮಕೂರು ಸಮೀಪದ ಪ್ರಸಿದ್ಧ ಮಠದಲ್ಲಿ ಗೋಹತ್ಯಾ ನಿಷೇಧದ ಬಗ್ಗೆ ಭಾಷಣ ಮಾಡಲು ತೆರಳುತ್ತಿದ್ದಾಗ, ನೆಲಮಂಗಲದ ಬೈಪಾಸ್ ಬಳಿ ಒಂದು ಸೀಮೆ ಹಸು ಮಾನ್ಯ ಸಚಿವ ಬಚ್ಚಾ ಗೌಡರ ಕಾರಿಗೆ ಅಡ್ಡ ಹಾದು ಹೋದದ್ದರಿಂದ ಕಾರು ಚಲನೆಯಲ್ಲಿ ನಿದಾನವಾಗಿ, ನಿಲ್ಲಿಸಬೇಕಾದ ಸಂದರ್ಭ ಒದಗಿತು. ತಕ್ಷಣ ಕೆಳಗಿಳಿದ ಕಾರಿನ ಚಾಲಕ, ಈ ಹಿಂದಿನಂತೆ ಕೆಟ್ಟದಾಗಿ ವರ್ತಿಸದೆ, ರಸ್ತೆ ದಾಟಿ ನಿಂತಿದ್ದ ದನಕ್ಕೆ ನಯವಾಗಿ “ಏಯ್ ದನ ಕಣ್ಣ ಕಾಣಕ್ಕಿಲ್ವ, ಮಿನಿಸ್ಟ್ರು ಕಾರ್ ಬತ್ತಾ ಐತೆ ಅಂತ” ಕೇಳಿದ್ದಾಗ್ಯೋ, ಉತ್ತರಿಸದೆ ತನ್ನ ಪಾಡಿಗೆ ತಾನು ಮೆಲುಕು ಹಾಕಿಕೊಂಡು ಶಾಂತವಾಗಿ ನಿಂತಿದ್ದ ದನದವನ್ನು ಕಂಡು ಕೆರಳಿದ ಮಾನ್ಯ ಸಚಿವ ಬಚ್ಚಾ ಗೌಡರು ಕೆರಳಿ, ದನದ ಮೂಗು ದಾರವನ್ನು ಜಗ್ಗಿಸಿದ್ದಲ್ಲದೆ, ದನದ ಬಾಲವನ್ನು ಹಿಡಿದು ಜಗ್ಗಿಸಿ, ಬಾರುಗೋಲಿನಿಂದ ಹಿಗ್ಗಾ ಮುಗ್ಗ ಥಳಿಸಿದರೆಂದು ’ಪ್ರತ್ಯಕ್ಷ-ದನಗಳಿಂದ’ ತಿಳಿದು ಬಂದಿದೆ. ಅಲ್ಲದೆ ’ದನ ಕಾಯವ್ನೆ’ ಎಂದು ಮಾನವನ ಜಾತಿಗೆ ಹೋಲಿಸಿ ಆ ದನಕ್ಕೆ ಅವಾಚ್ಯವಾಗಿ ಬೈದರೆಂದೂ ಸುದ್ದಿ ಬಂದಿದೆ. ಥಳಿತದಿಂದ ಗಾಯಗೊಂಡ ದನ ಸ್ವಲ್ಪ ಸಮಯದ ನಂತರ ಅಸು ನೀಗಿತೆಂದೂ ತಿಳಿದು ಬಂದಿದೆ.
ಮುಂದೆ ಓದಿ

ಬುಧವಾರ, ಜುಲೈ 28, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….

ಸಮರಸದಲ್ಲಿ ಗೋಪಾಲರು ಬರೆದಿರುವ ಈ ಹಾಸ್ಯ ಲೇಖನ ಓದಿ...
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ “ಕಟ್… ಕಟ್…. ” ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. “ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ”. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ. ಮುಂದೆ ಓದಿ

ಮಂಗಳವಾರ, ಜುಲೈ 27, 2010

ಇಂದಿನ ರಾಜಕೀಯ ಪಕ್ಷಗಳ ದೊಂಬರಾಟ, ಮತ್ತು ಅವಕ್ಕೆ ಕೆಲವು ಸಲಹೆಗಳು

ಸಮರಸ ಸಂಪಾದಕೀಯಕ್ಕೆ ವಿವೇಕ್ ಬರೆದ ಈ ಲೇಖನ ಓದಿ!

ಪ್ರಸ್ಥುತ ಕರ್ನಾಟಕದ ರಾಜಕೀಯ ಪುನ: ರಂಗೇರಿದೆ. ಕಾಂಗ್ರೇಸ್, ಬಿಜೆಪಿ, ಜನತಾದಳಗಳು ತಮ್ಮದೇ ಆದ ನಡವಳಿಕೆಯಿಂದ ಜನರಲ್ಲಿ ಚರ್ಚೆಗೊಳಪಡುತ್ತಿರುವುದು. ಈ ಸಂದರ್ಭದಲ್ಲಿ ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ತಾತ್ಸಾರ ಉಂಟಾಗಿ ಎಲ್ಲರೂ ಕೊನೆಯಲ್ಲಿ ರಾಜಕೀಯವನ್ನು ಒಂದು ಮನರಂಜನೆಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಮೌಲ್ಯಯುತ ರಾಜಕೀಯದ ಕೊಡುಗೆಯನ್ನು ನೀಡಿದ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೇ ನಮ್ಮ ಸಮಾಜದ ಅಧ:ಪತನದ ಕುರುಹುಗಳು ಅಲ್ಲಿಂದಲ್ಲೇ ಕಂಡು ಬರುತ್ತಿವೆ. ಹಿಂದೆ ಬೇರೆ ರಾಜ್ಯದ ರಾಜಕೀಯದ ಸುದ್ದಿಯನ್ನು ಕಥೆಯಂತೆ ಕೇಳುತ್ತಿದ್ದ ಕರ್ನಾಟಕದ ಜನತೆ ಇಂದು ನಮ್ಮ ಎದುರಿಗೆ ರಾಜಕೀಯ ದೊಂಬರಾಟವನ್ನು ನೋಡುವ ಸ್ಥಿತಿ ಬಂದಿರುವುದು. ಈ ಸಂದರ್ಭದಲ್ಲಿ ಯಾರು ನಮ್ಮ ರಾಜ್ಯದಲ್ಲಿ ಹಿತವರು? ಎಂಬ ಪ್ರಶ್ನೇ ನಾವೇ ಹಾಕಿಕೊಂಡರೆ ಉತ್ತರ ಮತಹಾಕಿದ ನಾವೇ ಮೂರ್ಖರು ಎಂಬಂತೆ ಆಗಿರುವುದು. ಈ ಹಿನ್ನಲೆಯಲ್ಲಿ ಪ್ರಸ್ಥುತ ರಾಜಕೀಯ ಪಕ್ಷದ ಸ್ಥಿತಿಯನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಮುಂದೆ ಓದಿ

ಶನಿವಾರ, ಜುಲೈ 24, 2010

ಪುಸ್ತಕ ಪರಿಚಯ : ತುಂಗಾ

ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.


ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.

ಮುಂದೆ ಓದಿ

ಮಂಗಳವಾರ, ಜುಲೈ 13, 2010

ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ



ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!

ಹಿರಿಯರೊಬ್ಬರ ’ಅಥಿತಿ ಮತ್ತು ಸಂಸ್ಕೃತಿ’ ಪ್ರಬಂಧವನ್ನು ಓದಲು ಕೇಳಿಕೊಂಡಾಗ, ಅದರಲ್ಲಿರುವ ಕೆಲವು ಸಾಲುಗಳನ್ನು ಎಲ್ಲರ ಮುಂದೆ ಓದುವುದು ಸರಿ ಬರುವುದಿಲ್ಲ ಎಂದುಕೊಂಡು, ಈಗಾಗಲೇ ’ಸಮ್ಮೇಳನ’ದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದರಿಂದ, ’ರಕ್ಷಕ ಅನಾಥ’ ಪ್ರಬಂಧವನ್ನೇ ಓದಿದರು. ರಕ್ಷಕ ಅನಾಥದ ಕಥೆಯನ್ನು ಶ್ರೋತೃಗಳು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಹಂಚಿಕೊಂಡರು. ಕೊನೆಗೆ ವಸುಧೇಂದ್ರರ ಮನೆಯಲ್ಲಿದ್ದ ಆ ಫೋಟೋಗಳ ಗತಿ ಏನಾಯಿತು ಎಂಬ ಪ್ರಶ್ನೆಗೆ, ವಸುಧೇಂದ್ರರ ನಗುವೇ ಉತ್ತರ! ವಸುಧೇಂದ್ರರು ಬರೆಯುವುದು ಹೆಚ್ಚು ಐ.ಟಿ ಕ್ಷೇತ್ರದ ಬಗೆಗೇ ಅಲ್ಲವೇ ಅಂಬುದಕ್ಕೆ, ಹಾಗೇನಿಲ್ಲ, ನನ್ನ ಬಾಲ್ಯದ ದಿನಗಳ ಬಗ್ಗೆ ಬರೆದಿರುವುದೆಲ್ಲಾ ಐ ಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಇನ್ನುಳಿದದ್ದರಲ್ಲಿ ಅದೇ ಹೆಚ್ಚಿರಬಹುದು, ಏಕೆಂದರೆ ನನ್ನ ಅನುಭವಕ್ಕೆ ಬಂದಿರುವುದು ಅವುಗಳೇ ಎಂದರು! ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ರೂಪಿಸುವುದಕ್ಕೆ ಗಂಭೀರ ಚಿಂತನೆ ನಡೆಸುವುದಾಗಿ ಭರವಸೆಯಿತ್ತರು. ಮಕ್ಕಳಿಗೆ ಏನೇ ಮಾಡಿದರೂ ಬಣ್ಣ ಬಣ್ಣವಾಗಿರುತ್ತದೆ. ಕಪ್ಪು ಬಿಳುಪಿನಲ್ಲಿ ಮಾಡಿ ಅವರ ಆಸಕ್ತಿಯನ್ನು ಕುಂದಿಸುವುದಿಲ್ಲವೆಂದರು. ಯಾರೋ ವಸುಧೇಂದ್ರ ರವರನ್ನು ನಿಮ್ಮ ಪುಸ್ತಕಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂದಿದ್ದರಂತೆ. ಅದಕ್ಕೆ ವಸುಧೇಂದ್ರ ಆಯ್ಯೋ, ಮಾಡಲಿ ಬಿಡಿ. ನನ್ನ ಪುಸ್ತಕವನ್ನು ಹಾಗಾದರೂ ಓದಿದರೆ ನನಗೆ ಬಹಳ ಸಂತೋಷ ಎಂದರಂತೆ. ನಾವೇ ಪುಸ್ತಕದ ಬೆಲೆಯನ್ನು ಅಷ್ಟು ಕಡಿಮೆ ಇಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಲು ಪೈರೆಸಿ ಮಾಡುವವರಿಗೆ ಅಷ್ಟು ಸುಲಭವಲ್ಲ ಎಂಬುದು ವಸುಧೇಂದ್ರ ರವರ ನಂಬಿಕೆ. ಟಿ ವಿ ಯಲ್ಲಿ ಪುಸ್ತಕಗಳನ್ನು ಪರಿಚಯಿಸುವಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಬೇಕೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಟಿ ವಿ ಮಾಧ್ಯಮ ಲಗ್ಗೆಯಿಟ್ಟು ಪುಸ್ತಕಗಳನ್ನು ಓದುವರ ಸಂಖ್ಯೆ ಕುಸಿದು, ಅದು ಮತ್ತೆ ಚೇತರಿಸಿಕೊಂಡಿರುವುದನ್ನು ತಿಳಿಸಿ, ನಮ್ಮಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲ. ನಮ್ಮಲ್ಲೂ ಪುಸ್ತಕ ಓದುವ ಅರಿವು ಹೆಚ್ಚುತ್ತದೆ. ಎಲ್ಲದ್ದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು!

ವಸುಧೇಂದ್ರರ ಪರಿಚಯವೇ ಇಲ್ಲದಿದ್ದ ಮಂದಿಗೆ ವಸುಧೇಂದ್ರರ ಪರಿಚಯವಾದ ಖುಷಿ. ವಸುಧೇಂದ್ರರ ಪರಿಚಯವಿದ್ದವರಿಗೆ ಅವರ ಮಾತುಗಳನ್ನು ಕೇಳುವ, ಅವರ ಕಂಠದಲ್ಲೇ ಅವರ ಪ್ರಬಂಧವನ್ನು ಕೇಳುವ ಖುಷಿ. ಶಿವಮೊಗ್ಗದಿಂದ ತಮ್ಮ ನೆಚ್ಚಿನ ಲೇಖಕ ವಸುಧೇಂದ್ರರನ್ನು ಕಾಣಲು ಬಂದಿದ್ದ ಬೋರಣ್ಣನಿಗೆ, ಇವೆಲ್ಲದರ ಜೊತೆಗೆ ಪುಸ್ತಕಗಳಿಗೆ ವಸುಧೇಂದ್ರರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಅವರ ಜೊತೆ ಹರಟಿದ ಸಂತೋಷ!

ಶುಕ್ರವಾರ, ಜುಲೈ 02, 2010

ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!!



ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!



ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಫೋಟೋ ಕೃಪೆ: http://kadalateera.blogspot.com/2009/02/blog-post_15.html

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010


ದಿನಾಂಕ : 11 ಜುಲೈ 2010 ಭಾನುವಾರ

ಸಮಯ: ಬೆಳಗ್ಗೆ 11 ಘಂಟೆಗೆ

ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

ರಕ್ಷಕ ಅನಾಥನ ಬಗ್ಗೆ ಅಕ್ಷರ ವಿಹಾರದಲ್ಲಿ ಹೀಗಿದೆ ಓದಿ..

ರಕ್ಷಕ ಅನಾಥದ ಯಾವ ಪ್ರಬಂಧ ವಸುಧೇಂದ್ರ ಓದಬೇಕೆಂದು ನಿಮಗನ್ನಿಸುತ್ತದೆ? ಕೆಳಗೆ ಪ್ರತಿಕ್ರಿಯಿಸಿ..

ಆಕೃತಿ ಪುಸ್ತಕದ ವತಿಯಿಂದ ರಾಜಾಜಿನಗರದಲ್ಲೊಂದು ಸುಸಜ್ಜಿತ ಪುಸ್ತಕ ಮಳಿಗೆ





ಆಕೃತಿ ಪುಸ್ತಕದ ವತಿಯಿಂದ ರಾಜಾಜಿನಗರದಲ್ಲೊಂದು ಸುಸಜ್ಜಿತ ಪುಸ್ತಕ ಮಳಿಗೆ
ಕಥೆ, ಕಾದಂಬರಿ, ನಾಟಕ, ಆಧ್ಯಾತ್ಮಿಕ, ಸಂಗೀತ, ವ್ಯಕ್ತಿವಿಕಸನ ಇತ್ಯಾದಿ ಎಲ್ಲಾ ಪ್ರಾಕಾರಗಳ ನಿಮ್ಮ ನೆಚ್ಚಿನ ಪುಸ್ತಕಗಳು ಲಭ್ಯ

ಅತ್ಯಾಕರ್ಷಕ ರಿಯಾಯಿತಿಯೊಂದಿಗೆ.

ಆಕೃತಿ ಬುಕ್ಸ್ - ಓದಿ ಓದಿ ಬೆರಗಾಗಿ

ವಿಳಾಸ: ಆಕೃತಿ ಬುಕ್ಸ್
ನಂ. 28 (ಹಳೆ ನಂ: 733), ಎರಡನೇ ಮಹಡಿ, 12ನೇ ಮುಖ್ಯರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ಗುರುತು: ಇ.ಎಸ್.ಐ ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆ ಮೇಲೆ

ಗುರುವಾರ, ಜುಲೈ 01, 2010

ಕನ್ನಡ ಲಿಪಿಯನ್ನು ವಿರೂಪಗೊಳಿಸುತ್ತಿರುವವರ ಗಮನಕ್ಕೆ!

ಇದನ್ನು ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇನ್ನು ಮುಂದಾದರೂ ಪುಸ್ತಕಗಳನ್ನು ಹೊರತರುವಾಗ ಸ್ವಲ್ಪ ಎಚ್ಚರಿಕೆಯಿಂದ ಟೈಪ್ ಮಾಡಲಿ ಎಂಬ ಉದ್ದೇಶದಿಂದಲೇ ಹೊರತು ಯಾರೋ ಒಬ್ಬ ಪ್ರಕಾಶಕನ ತಪ್ಪುಗಳನ್ನು ಎತ್ತಿ ಹಿಡಿದು ತೊರಿಸುವುದಕ್ಕಲ್ಲ!




ಕನ್ನಡವನ್ನು ಗಣಕಯಂತ್ರದಲ್ಲಿ ಟೈಪ್ ಮಾಡಲು ಅಂದವಾದ ಫಾಂಟ್‌ಗಳಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ! ಈ ಕೊರತೆ ಯೂನಿಕೋಡ್ ನಲ್ಲಿ ಟೈಪ್ ಮಾಡಲು ಸಹಾಯ ಮಾಡುವಂತಹ ತಂತ್ರಾಂಶಗಳಲ್ಲಿ ಸ್ವಲ್ಪ ಹೆಚ್ಚು, ಅಂದರೆ ಯೂನಿಕೋಡ್ ಕನ್ನಡ ಫಾಂಟ್ ಗಳು ಅತಿ ವಿರಳ.


ಈ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದ್ದ ತಂತ್ರಾಂಶ "ನುಡಿ". ಆದರೆ ಇದು ಬಳಸುವುದು ANSI ಕೋಡ್‌ಗಳನ್ನ. ಯೋನಿಕೋಡಗಳ, ಆನ್ಸಿ ಕೋಡಗಳ ಚರ್ಚೆ ಸದ್ಯಕ್ಕೆ ಬೇಡ. ಆದರೆ ಈ ನುಡಿ ತಂತ್ರಾಂಶವನ್ನು ಬಳಸುತ್ತಿರುವ ಕನ್ನಡ ಪುಸ್ತಕೋದ್ಯಮದ ಪ್ರಕಾಶಕರು, ’ಪು’, ಪೂ, ಪೊ, ಪೋ ಸಂಯುಕ್ತಾಕ್ಷರಗಳನ್ನು ವಿರೂಪಗೊಳಿಸಿರುವುದು ಬಹಳ ಖೇದಕರವಾದ ಸಂಗತಿ. ನಮಗೆಲ್ಲರಿಗೂ ತಿಳಿದಿರುವಂತೆ ಪ ಅಕ್ಷರಕ್ಕೆ ಉ/ಒ/ಓ/ಒ ಕಾರವನ್ನು ಸೇರಿಸಿದಾಗ,”ಪ’ ಅಕ್ಷರದ ಕೆಳಮಧ್ಯಭಾಗದಿಂದ ಆ ಕೊಂಬುಗಳು/ಓತ್ವಗಳು ಶುರುವಾಗಬೇಕು ಆದರೆ ಈ ’ನುಡ” ತಂತ್ರಾಂಶ ಉಪಯೋಗಿಸಿ ಬರೆದಾಗ ಆ ಕೊಂಬುಗಳು ಪ ಅಕ್ಷರದ ಪಕ್ಕಕ್ಕೆ ಜೋಡಿಸಲಾಗುತ್ತವೆ.ನುಡಿ ತಂತ್ರಾಂಶದ ಫಾಂಟ್ ರೆಂಡರಿಂಗ್ ನಲ್ಲಿರುವ ಈ ತಪ್ಪನ್ನು ಇತ್ತೀಚಿನ ನುಡಿ ತಂತ್ರಾಂಶದಲ್ಲೇನಾದರೂ ಸರಿ ಮಾಡಿದ್ದಾರೇನೋ ಗೊತ್ತಿಲ್ಲ!


ಇತ್ತೀಚೆಗೆ ಬಿಡುಗದೆಯಾದ, ದೇಶಕಾಲದ ವಿಶೇಷ ಸಂಚಿಕೆ, ಭೈರಪ್ಪನವರ ಕವಲು ಪುಸ್ತಕಗಳ ಮೇಲೆ ಕಣ್ಣಾಡಿಸಿದರೆ ಈ ತಪ್ಪುಗಳು ಹೇರಳವಾಗಿ ಕಾಣಿಸಿ ಅಭಾಸವಾಗುತ್ತದೆ.


ನಾವೇನಾದರೂ ನಮ್ಮ ಶಾಲೆಗಳಲ್ಲಿ ಈ ರೀತಿ ಬರೆದದ್ದಾದರೆ ನಮ್ಮ ಮೇಷ್ಟ್ರುಗಳ ಬೆತ್ತದಿಂದ ಒದೆ ಬೇಳುತ್ತಿತ್ತು!


ಪರಿಹಾರ?


ಮುಂದೆ ಓದಿ

ಕನ್ನಡ ಸಾಹಿತ್ಯಕ್ಕೆ ಕುಂದಣವಿಟ್ಟವರ ಹೆಸರಿಗೆ ಅಪಚಾರವೇಕೆ?

ಅ.ನ.ಕೃಷ್ಣರಾಯರು, ’ಕನ್ನಡ ಕುಲ ರಸಿಕರು’ ಎಂಬ ತಮ್ಮ ಪುಸ್ತಕದಲ್ಲಿ ಹೀಗೆನ್ನುತ್ತಾರೆ “ಕನ್ನಡ ಸಾಹಿತ್ಯ ಪ್ರಪಂಚದಲ್ಲೇನಾದರೂ ಸಹೃದಯತೆ, ಸಹನೆ, ಪರರ ಗುಣಗ್ರಹಣ ಶಕ್ತಿಯಿದ್ದರೆ ಅದನ್ನು ತಂದುಕೊಟ್ಟ ಸಿ.ಕೆ. ವೆಂಕಟರಾಮಯ್ಯನವರ ಉಪಕಾರ ನಾವು ಮರೆಯಬಾರದು”. ಕರ್ನಾಟಕದ ಕೆಲ ರಾಜಕಾರಣಿಗಳಿಗೆ ಇಷ್ಟೊಂದುದು ಸೂಚ್ಯವಾದ ಹೇಳಿಕೆ ಅರ್ಥವಾಗದೆ ಹೋಗಬಹುದಾದದ್ದರಿಂದ, ಇದನ್ನೇ ಸ್ವಲ್ಪ ವಿಸ್ತರಿಸಿ, ಕನ್ನಡ, ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಗೌರವ,ಕಾಳಜಿ ಇದ್ದರೆ ಸಿ ಕೆ ವೆಂಕಟರಾಮಯ್ಯನವರ ಹೆಸರನ್ನು ನೀವು ಬೆಳಗದೇ ಹೋದರೂ ಕನಿಷ್ಠ ಪಕ್ಷ ಅಗೌರವ ತರುವಂತಹ ಕೆಲಸವನ್ನು ಮಾಡಬಾರದು.

ಆಗಿರುವ ಅಪಚಾರವೇನು?

ಪದ್ಮಶ್ರೀ ವಿಜೇತ ಪ್ರಥಮ ಕನ್ನಡಿಗ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸ್ಥಾಪಕ-ನಿರ್ದೇಶಕ, ಮೇರು ಸಾಹಿತಿ, ಶ್ರೇಷ್ಠ ವಾಗ್ಮಿ ಸಿ ಕೆ ವೆಂಕಟರಾಮಯ್ಯನವರ ಹೆಸರಿಗೆ ಅಪಚಾರ ತರುವಂತಹ ಒಂದು ಕೆಲಸ ಸದ್ದಿಲ್ಲದೆ ಸಾಗಿರುವುದರಿಂದ ಮೇಲಿನ ಸಾಲುಗಳ ಅನಿವಾರ್ಯತೆ ಕಂಡುಬರುತ್ತಿದೆ. ಕೆಲವು ತಿಂಗಳ ಹಿಂದೆ ಬಿ. ಬಿ. ಎಂ. ಪಿ, ಮಲ್ಲೇಶ್ವರದ ೮ ನೇ ಮುಖ್ಯರಸ್ತೆಯನ್ನು “ಪದ್ಮಶ್ರೀ ಸಿ.ಕೆ ವೆಂಕಟರಾಮಯ್ಯ ರಸ್ತೆ” ಎಂದು ನಾಮಕರಣ ಮಾಡುವ ನಿರ್ಧಾರವನ್ನು ತಳೆದು, ಇದರ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಿತ್ತು. ಈ ನಿರ್ಣಯಕ್ಕೆ ಸಾರ್ವಜನಿಕರು ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಆಲ್ಲದೆ ಈ ನಿರ್ಣಯಕ್ಕೆ ಮಾನ್ಯ ಮುಖ್ಯಮಂತ್ರಿಗಳ ಅನುಮತಿಯೂ ದೊರೆತು, ಈ ವಿಷಯವಾಗಿ ಸರ್ಕಾರದ ಆಜ್ಞೆಯಾಗುವುದರಲ್ಲಿತ್ತೆಂದು ತಿಳಿದು ಬಂದಿದೆ. ಇನ್ನೇನು ರಸ್ತೆಗೆ ಸಿ. ಕೆ. ವೆಂಕಟರಾಮಯ್ಯನವರ ನಾಮಕರಣವಾಗುತ್ತದೆನ್ನುವುದರಲ್ಲಿ, ಒಬ್ಬ ರಾಜಕಾರಣಿ ಮಧ್ಯ ಪ್ರವೇಶಿಸಿ, ಅದೇ ರಸ್ತೆಗೆ ಒಂದು ಸಮುದಾಯವನ್ನು ಪ್ರತಿನಿಧಿಸುವ ಖಾಸಗಿ ಸಂಸ್ಥೆಯ ಹೆಸರಿಡಲು ಸನ್ನದ್ಧರಾಗಿದ್ದಾರೆ! ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರಲ್ಲಿ ಸಿ.ಕೆ. ವೆಂಕಟರಾಮಯ್ಯನವರಿಗೆ ಯಾವುದೇ ವಿಧದಲ್ಲೂ ಸರಿಸಾಟಿಯಾಗಿ ನಿಲ್ಲದ ಆ ಖಾಸಗಿ ಸಂಸ್ಥೆಯ ಹೆಸರನ್ನು ಒಂದು ಪ್ರಮುಖ ರಸ್ತೆಗೆ ಇಡುವ ಔಚಿತ್ಯ ಕಂಡು ಬರುತ್ತಿಲ್ಲವಾದ್ದರಿಂದ ಇದು ಕನ್ನಡ ನಾಡು ನುಡಿಗೆ ಹೋರಾಟ ನಡೆಸಿದ ಅಪ್ರತಿಮ ಕನ್ನಡಿಗನಿಗೆ ತೋರುವ ಅಪಮಾನವಲ್ಲದೆ ಬೇರೇನಿಲ್ಲ. ಮುಂದೆ ಓದಿ

ಶುಕ್ರವಾರ, ಮೇ 28, 2010

ಮೈಸೂರು ಪುಸ್ತಕೋತ್ಸವ -- ಆಕೃತಿ ಪುಸ್ತಕದಿಂದ ಕನ್ನಡ ಪುಸ್ತಕಗಳ ಮಾರಾಟ

ಪುಸ್ತಕ ಪ್ರಿಯರಿಗೆ ಮತ್ತೊಂದು ಹಬ್ಬ!
ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ (ಅರಮನೆ ಎದುರಿನ - ದರಸಾ ವಸ್ತು ಪ್ರದರ್ಶನ ನಡೆಯುವ ಮೈದಾನ) ಮೇ ೨೯ ೨೦೧೦ ರಿಂದ ಜೂನ್ ೦೬ ೨೦೧೦ ರ ವರೆಗೆ ಮೈಸೂರು ಪುಸ್ತಕ ಮೇಳ ಜರುಗಲಿದೆ.

ಸಮಯ : ಮಧ್ಯಾಹ್ನ 2 ಘಂಟೆಯಿಂದ ರಾತ್ರಿ 9 ರವರೆಗೆ
ಆಕೃತಿ ಪುಸ್ತಕದ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಅಭಿರುಚಿಯ ಪುಸ್ತಕಗಳನ್ನು ಕೊಂಡೊಯ್ಯಿರಿ, ರಿಯಾಯಿತಿ ದರದೊಂದಿಗೆ!
ಎಂದಿನಂತೆ ೧೦೦೦/- ಮೌಲ್ಯಕ್ಕಿಂತಲೂ ಹೆಚ್ಚು ಪುಸ್ತಕ ಕೊಂಡವರಿಗೆ ಒಂದು ಚಂದದ "ಆಕೃತಿ ಪುಸ್ತಕ ಜೋಳಿಗೆ" ಉಚಿತ!


ಶನಿವಾರ, ಮೇ 15, 2010

ನನಸಾದ ಪ್ರಕಾಶ್ ರೈ ಸವಿಗನಸು!

ಕನ್ನಡ ಚಿತ್ರರಂಗದ ಮಟ್ಟಿಗೆ, ಕನ್ನಡ ಪ್ರೇಕ್ಷಕರಿಗೆ ಈ ಮಾದರಿ ಚಿತ್ರಗಳು ಕನಸೇ ಎನ್ನಬಹುದು. ಈ ಕನಸನ್ನು ನನಸು ಮಾಡಿರುವುದು ನೆನ್ನೆ ತೆರೆ ಕಂಡಿರುವ ಪ್ರಕಾಶ್ ರೈ ರವರ ಚೊಚ್ಚಲ ನಿರ್ದೇಶನದ ಚಲನಚಿತ್ರ "ನಾನೂ ನನ್ನ ಕನಸು". ಇದು ಕನ್ನಡ ಚಿತ್ರರಂಗಕ್ಕೆ ಭರವಸೆ ಒದಗಿಸಿರುವ ಚಿತ್ರ ಎಂದರೆ ತಪ್ಪಾಗಲಾರದು.

ಚಲನಚಿತ್ರ ಎಂದರೆ ರೋಚಕ ತಿರುವುಗಳು, ಅತಿರಂಜಕ ಅಂತ್ಯ, ಭಾವತಿರೇಕದ ದೃಶ್ಯಗಳು ಎಂಬ ಅತೀ ಸಾಧಾರಣ ಸಿದ್ಧ ಸೂತ್ರಗಳಿಗೆ ಲಕ್ಷ್ಯ ಕೊಡದೆ ಅಪ್ಪ ಮತ್ತು ಮಗಳ ಪ್ರೀತಿಯನ್ನು ಭಾನಾತ್ಮಕ ನೆಲೆಯಲ್ಲಿ ಹಿಡಿದಿಟ್ಟಿರುವ ಚಿತ್ರ ಪ್ರೇಕ್ಷಕರಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ, ಜೀವನೋತ್ಸಾಹದ ಅಲೆಯನ್ನೆಬ್ಬಿಸುತ್ತದೆ.
ಮುಂದೆ ಓದಿ

ಶುಕ್ರವಾರ, ಮೇ 07, 2010

ಏರಿಳಿತವಿಲ್ಲದ ಇಜ್ಜೋಡು

ಕನ್ನಡ ಚಿತ್ರರಂಗದ ಈ ವಿರೋಧಾಭಾಸವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ! ಸಾಮಾನ್ಯವಾಗಿ ವ್ಯವಹಾರಿಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಿಡುಗಡೆಯಾಗುವ ಚಲನಚಿತ್ರಗಳಲ್ಲಿ ಅನಗತ್ಯ, ವಿಪರೀತಿ ಏರಿಳಿತ, ಇನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾದ ಬಹು ನಿರೀಕ್ಷಿತ? ಚಲನಚಿತ್ರ ಎಂ ಎಸ್ ಸತ್ಯು ನಿರ್ದೇಶನದ ಸುಮಾರು ೯೦ ನಿಮಿಷದ ಇಜ್ಜೋಡು ಚಲನಚಿತ್ರ ಕತೆಗ ಅಗತ್ಯವಾದ, ಬೇಕಾದ ಏರಿಳಿತಗಳೇ ಇಲ್ಲವೆಂದೆನಿಸುತ್ತದೆ.
ಮುಂದೆ ಓದಿ

ಶುಕ್ರವಾರ, ಏಪ್ರಿಲ್ 23, 2010

ಪೃಥ್ವಿ – ಈ ವಾರದ ಚಲನ ಚಿತ್ರ

ಇಂದು ಬಿಡುಗಡೆಯಾದ ಪೃಥ್ವಿ ಚಲನಚಿತ್ರ ಹತ್ತರಲ್ಲಿ ಹನ್ನೊಂದನೆಯ ಚಿತ್ರವೆನ್ನಬಹುದಷ್ಟೆ. ಬಳ್ಳಾರಿಯ ಅಕ್ರಮ ಗಣಿಗಾರಿಕೆಯನ್ನು ತೋರಿಸವ ಸಲುವಾಗಿ, ಒಬ್ಬ ಅತೀ ದಕ್ಷ ಜಿಲ್ಲಾಧಿಕಾರಿ ಪಾತ್ರವನ್ನು ಪುನೀತ್ ರಾಜ್‌ಕುಮಾರ್ ಕೈಯಲ್ಲಿ ಪೋಷಿಸಿದ್ದಾರೆ ನಿರ್ದೇಶಕ ಜೇಕಬ್ ವರ್ಗೀಸ್. ಒಂದು ಹೊಡೆದಾಟ, ತಕ್ಷಣ ಒಂದು ಹಾಡಿನಿಂದ ಪ್ರಾರಂಭವಾಗುವ ಚಲನಚಿತ್ರ ಮೊದಲರ್ಧದಲ್ಲಿ ಬಳ್ಳಾರಿಗೆ ಕರೆದೊಯ್ಯುತ್ತದೆ. ಬಳ್ಳಾರಿಯ ಗಣಿಗಾರಿಕೆ, ಧೂಳು, ಆಸ್ಪತ್ರೆಗಳ ದುಸ್ಥಿತಿ, ಗಣಿಗಾರಿಕೆಯಲ್ಲಿ ಕೆಲಸ ಮಾಡುವವರು ವಾಸಿಸುವ ದುಸ್ಥಿತಿಗಳ ಸಾಕ್ಷ್ಯಚಿತ್ರದಂತಿದ್ದು, ಪತ್ರಿಕೆಗಳಲ್ಲಿ ಓದಿರುವ ವಿಷಯಗಳು ಕಣ್ಮುಂದೆ ಬಂದಂತಾಗುತ್ತವೆ. ಇನ್ನು ಚಲನಚಿತ್ರದ ಎರಡನೆಯ ಭಾಗದಲ್ಲಿ ಪುನೀತ್ ರ ವೈಭವೀಕರಣ.

ದಕ್ಷ ಜಿಲ್ಲಾಧಿಕಾರಿ ಗಡಿಯನ್ನು ಸರ್ವೇ ಮಾಡಲು ಹೋದಾಗ ಯಾವ ಪೋಲೀಸರನ್ನೂ ಜೊತೆಗೆ ಕರೆದೊಯ್ಯದಿರುವುದು, ಗಣಿಗಾರಿಕೆ ಸಂಸ್ಥೆಯ ಮಾಲೀಕನ ತಮ್ಮ (ರೌಡಿ) ಜಿಲ್ಲಾಧಿಕಾರಿಯನ್ನು ನಡುರಸ್ತೆಯಲ್ಲೇ ಬೆದರಿಸುವುದು, ಜಿಲ್ಲಾಧಿಕಾರಿಯ ಕಛೇರಿಗೂ ನುಗ್ಗಿ ಬೆದರಿಸಿ ದಾಂಧಲೆ ನಡೆಸುವುದು, ಜಿಲ್ಲಾಧಿಕಾರಿ ತನ್ನ ಕಛೇರಿಯಲ್ಲೇ ಆ ರೌಡಿಯ ಜೊತೆ ಕಿಕ್ ಬಾಕ್ಸಿಂಗ್ ಆಡುವುದು, ನಂತರ ಮಾಧ್ಯಮದವರು ಜಿಲ್ಲಾಧಿಕಾರಿಯನ್ನು ಬೈಯ್ಯುವುದು, ಜಿಲ್ಲಾಧಿಕಾರಿ ಮಾಧ್ಯಮದವರಿಗೆ ಹಿಂತಿರುಗಿ ಬೈಯ್ಯುವುದು ಇವೆಲ್ಲ ಅಸಹಜತೆಯನ್ನು ಎತ್ತಿ ತೋರಿಸುವಂತಿವೆ. ಒಂದು ವಾಸ್ತವಿಕ ಸಮಸ್ಯೆಯನ್ನು ಚಲನಚಿತ್ರದ ವಸ್ತುವಾಗಿಟ್ಟುಕೊಂಡು, ಈ ರೀತಿಯ ಅಸಹಜ ದೃಶ್ಯಗಳನ್ನು ಚಿತ್ರದಲ್ಲಿ ತುರುಕಿದರೆ ಅದು ಪ್ರೇಕ್ಷಕನ ಮನರಂಜನೆಗೂ ನ್ಯಾಯ ಒದಗಿಸುವುದಿಲ್ಲ, ಸಮಸ್ಯೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತೋರಿಸುವುದರಲ್ಲೂ ಯಶಸ್ವಿಯಾಗುವುದಿಲ್ಲ. ಸುಮ್ಮನೆ ಅತಿರಂಜನೆಯಾಗುತ್ತದಷ್ಟೆ! ನಿರ್ದೇಶಕರು ಪ್ರೇಕ್ಷಕರನ್ನು ಮನರಂಜಿಸಲು ಹೊರಟಿದ್ದಾರ? ಅಥವಾ ಒಂದು ಸಮಸ್ಯೆಗೆ ಕನ್ನಡಿ ಹಿಡಯಲು ಪ್ರಯತ್ನಿಸಿದ್ದಾರ? ಎಂಬ ಪ್ರಶ್ನೆ ಕಾಡಿದರೆ ಇವೆರಡನ್ನೂ ಒಟ್ಟಿಗೆ ಮಾಡಲು ಹೋಗಿ ಸೋತಿದ್ದಾರೆ ಅಷ್ಟೆ!

ಮುಂದೆ ಓದಿ

ಬುಧವಾರ, ಮಾರ್ಚ್ 24, 2010

ವಸಂತ ಬಂದ ಋತುಗಳ ರಾಜ

ಬೇಸಿಗೆ ಬಂತೆಂದರೆ ಯುಗಾದಿ ಹಬ್ಬದ ಸಡಗರ, ಮಕ್ಕಳಿಗೆ, ಹೆತ್ತವರಿಗೆ ಪರೇಕ್ಷೇಯ ಒತ್ತಡ, ಪರೀಕ್ಷೆಯ ನಂತರ ರಜಾದಿನಗಳ ಸುಗ್ಗಿ, ಹವಾನಿಯಂತ್ರಣ ಇಲ್ಲದ ಕಡೆ ಕೆಲಸ ಮಾಡುವವರಿಗೆ ಬೇಸಿಗೆಯ ಸೆಖೆ, ಧಗೆ, ಮರಗಳಿಗೆ ಹಳೆ ಎಲೆಗಳನ್ನುದುರಿಸಿ ಚಿಗುರೊಡೆಯುವ ಹೊಸತನ ಹೀಗೆ ಈ ವಸಂತ ಋತು ಒಂದು ರೀತಿಯ ಯಾತನೆ - ಉಲ್ಲಾಸ ಒಟ್ಟೊಟ್ಟಿಗೆ. ಪರಿಸರ ಪ್ರೇಮಿಗಳು ಕವಿಗಳಿಗಂತೂ ಈ ಋತು ಒಂದು ಅದ್ಭುತವೇ ಸರಿ. ಈ ವಸಂತ ಋತುವನ್ನು ಕೆಲವು ಛಾಯಾಚಿತ್ರಗಳೊಂದಿಗೆ, ಕೆಲವು ಖ್ಯಾತ ಕವಿಗಳ ಕವಿತೆಗಳ ತುಣುಕುಗಳನ್ನು ಆಹ್ವಾದಿಸುವುದರೊಂದಿಗೆ ಅನುಭವಿಸೋಣ.


nerale-bannada-hoovu


ವಸಂತ ಎಂದೊಡನೆ ಮೊದಲು ನೆನಪಿಗೆ ಬರುವುದು ಕನ್ನಡದ ಆಚಾರ್ಯ "ಬಿ ಎಂ ಶ್ರೀ" ಯವರ ಅನುವಾದಿತ ಕವಿತೆ


homge-eleya-chiguru


ಮುಂದೆ ಓದಿ

ಗುರುವಾರ, ಮಾರ್ಚ್ 04, 2010

ಇಟ್ಟಿಗೆ ಹೊರುವ ಕತ್ತೆಗಳೂ ಮತ್ತು ನಮ್ಮ ವೃತ್ತಿ ಬದ್ಧತೆಯೂ..

ವಿವೇಕ್ ಸಮರಸದಲ್ಲಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಹ ಪ್ರಶ್ನೆ ಎತ್ತಿದ್ದಾರೆ.. ಓದಿ ಪ್ರತಿಕ್ರಿಯಿಸಿ...
[caption id="attachment_797" align="alignnone" width="522" caption="ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ ಕತ್ತೆಗಳು"]ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ  ಕತ್ತೆಗಳು[/caption]
ಅಧಿಕಾರ ಮತ್ತು ಅಂತಸ್ತಿನ ಬೆನ್ನು ಹತ್ತಿ ಕರ್ತವ್ಯ ಮರೆತಿರುವ ಜನಪ್ರತಿಗಳು, ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳು, ಕಛೇರಿ ಮುಂದೆ ಒದಿವೇಳೆ ಮಲಗಿರುವ, ರೇಸ ಕೋರ್ಸಗೆ, ಬಾರಿಗೆ, ಮತ್ತು ಮ್ಯಾಚ್ ನೋಡಲು ಹೋಗಿರುವ ಸಿಬ್ಬಂದಿಗಳು, ಶಾಲೆಗೆ ಗೈರು ಹಾಜರಾದ ಶಿಕ್ಷಕರು, ವಾರಗಟ್ಟಲೆ ಅಂಗನವಾಡಿಗೆ ಬರದ ಶಿಕ್ಷಕಿ ಈ ಎಲ್ಲ ವಿಷಯಗಳು ಸುದ್ದಿಯ ರೂಪದಲ್ಲಿ ವಿವಿಧ ಮಾದ್ಯಮದಲ್ಲಿ ಬರುವುದನ್ನು ಎಲ್ಲರೂ ನೋಡಿರುವೆವು. ಇಂದಿನ ಜನಪ್ರತಿನಿಧಿಗಳು, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹೆಚ್ಚಿನ ಖಾಸಗಿ ಸಂಸ್ಥೆಗಳಲ್ಲಿ ಅಂದರೆ ಮನುಷ್ಯ ಕಾರ್ಯನಿರ್ವಹಿಸುವ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ವ್ಥತ್ತಿಯ ಬಗ್ಗೆ ಪ್ರಾಮಾಣಿಕತೆಯಿಂದ ಬದ್ದತೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತಿಚೀನ ದಿನದಲ್ಲಿ ಬಂದಿರುವುದು. ಉತ್ತಮ ಕಾರ್ಯನಿರ್ವಹಣೆಗಾಗಿ ಸಿಗಬೇಕಾದ ಪ್ರಶಸ್ತಿಗಳು, ಸನ್ಮಾನಗಳು ಇತ್ತೀಚೀನ ದಿನದಲ್ಲಿ ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಸಿಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ರೀತಿಯಾಗಿ ಮಾನವನ ಕಾರ್ಯನಿರ್ವಹಣೆಯ ಎಲ್ಲಾ ಕೇತ್ರದಲ್ಲಿಯೂ ವೃತ್ತಿ ಬದ್ದತೆಯ ಕೊರತೆಯೂ ಕಂಡು ಬರುವುದು. ಈ ಸಂದರ್ಭದಲ್ಲಿ ನಾವು ನಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಮುಂದೆ ಒದಿ

ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ?

ವಿವೇಕ್ ಸಮರಸದಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.. ತಿಳಿ ಹಾಸ್ಯದಿಂದ ಕೂಡಿರುವ ಈ ಲೇಖನವನ್ನು ಓದಿ..

ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಯಾರಿಗೂ ಕೆಲಸವೂ ಇಲ್ಲ ಪುರಸತ್ತು ಇಲ್ಲದಂತ ಪರಿಸ್ಥಿತಿ. ಎಪ್ರಿಲ್ ಮೇ ತಿಂಗಳು ಬಂತು ಬಂದರೆ ಮುಗಿಯಿತು ಶಾಲಾ ಕಾಲೇಜಿಗೆ ರಜೆ, ಜೋರಾಗಿ ಮದುವೆ, ಮುಂಜಿ, ಗೃಹಪ್ರವೇಶದ ಭರಾಟೆ ಪ್ರತಿಯೊಂದು ಮನೆಯಲ್ಲಿಯೂ ಹತ್ತಾರು ಆಮಂತ್ರಣ ಪತ್ರಿಕೆಗಳು. ಒಂದು ಕಡೆ ಬಿಸಿಲಿನ ಝಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ. ಕಾರಣ ಆಮಂತ್ರಣ ಕೊಟ್ಟವರು ಬೇಸರ ಮಾಡಿಕೊಳ್ಳುವರು, ಅವರು ನಮ್ಮ ಮನೆಯಲ್ಲಿ ಕಾರ್ಯವಾದಾಗ ಬರುವುದಿಲ್ಲ ಎಂಬ ಭಯ ಇರುವುದು. ಮುಖ್ಯವಾಗಿ ಅಲ್ಲಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಹುದುಗಿರುವ ಆಶೆ.
ಈ ಸಭೆ ಸಮಾರಂಭವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಯಾಕಾಗಿ ಈ ರೀತಿ ವರ್ತಿಸುತ್ತಿರುವರು ಎಂದು ಅನಿಸುವುದು. ಆದರೂ ಅದು ಹಿಂದಿನಿಂದ ನಡೆದುಕೊಂಡ ಬಂದ ರೀತಿಯಾಗಿದೆ. ವಿವಿಧ ರೀತಿಯ ಜನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಬಗೆಯ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಸ್ವತಂತ್ರರು : ಚಿಕ್ಕಮಕ್ಕಳಿವರು ಇವರಿಗೆ ಪಾಪ ಯಾರ ಮದುವೆ ಅಥವಾ ಮುಂಜಿ ಎಂಬುದು ತಿಳಿದಿಲ್ಲ. ಒಟ್ಟಾರೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೋಗಿರುವರು. ಸಮಾರಂಭದಲ್ಲಿ ನೀಡುವ ಶರಬತ್ತು ಕುಡಿದು, ಅದರ ಪೈಪನ್ನು ಕೂಡಿಸುವುದು ಯಾರು ಹೆಚ್ಚು ಸೇರಿಸಿರುವರು ಎಂದು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುವುದು ಇವರ ಕಾರ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ತಮ್ಮ ಬಾಲ್ಯವೇ ಮರೆತು ಹೋಗುತ್ತಿರುವಾಗ ಚಿಕ್ಕ ಮಕ್ಕಳಿಗೆ ಸ್ವತಂತ್ರ್ಯ ಸಿಗುವುದೇ ಈ ರೀತಿಯ ಸಮಾರಂಭಗಳಿಗೆ ಹೋದಾಗ. ಆ ಮಕ್ಕಳಿಗೆ ಈ ಬೇಸಿಗೆ ಧಗೆಯಲ್ಲಿ ಬಟ್ಟೆಯೇ ಬೇಕು ಏನಿಸುವುದಿಲ್ಲ ಆದರೇನು ಮಾಡುವುದು ಅಮ್ಮನ ಒತ್ತಾಯದಿಂದ ಧರಿಸಲೇಬೇಕಾದ ಅನಿವಾರ್ಯತೆ ಇರುವುದು.
ಸೂಚಕಗಳು :
* ಕುಡಿದು ಒಗೆದಿರುವ ಶರಬತ್ತು ಪೈಪ್ ಅಥವಾ ಬಟ್ಟೆಯ ಪ್ಲಾಸ್ಟಿಕ್ ಕವರ್‌ನ್ನು ಆರಿಸುತ್ತಾ ಇರುವರು.
* ಇನ್ನೊಂದು ಶರಬತ್ತು ಬೇಕು, ಬೊಂದಿ ಪ್ಯಾಕೇಟ್ ಬೇಕು ಎಂದು ಅಳುತ್ತಾ ಇರುವರು.
* ಮಹೂರ್ತದ ಕಲ್ಪನೆ ಇರುವುದಿಲ್ಲ.
* ತಮ್ಮದೇ ಗುಂಪಿನೊಂದಿಗೆ ಆಟವಾಡುತ್ತಾ ಇರುವರು. ವಾದ್ಯ ಬಾರಿಸಿದಾಗ ಒಬ್ಬರೇ ಇದ್ದರೇ ಡ್ಯಾನ್ಸ ಮಾಡುತ್ತಾ ಇರುವರು. ಮುಂದೆ ಒದಿ

ಬುಧವಾರ, ಫೆಬ್ರವರಿ 17, 2010

ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಪುಸ್ತಕ ಮಳಿಗೆ

ಗೆಳೆಯರೇ,

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ನಮ್ಮ (ಆಕೃತಿ ಬುಕ್ಸ್ http://www.aakrutibooks.com/) ಪುಸ್ತಕ ಮಳಿಗೆಯಿರುತ್ತದೆ.

೧೦೦೦/- ರೂಗಳಿಗಿಂತ ಹೆಚ್ಚು ಮೊತ್ತದ ಪುಸ್ತಕಗಳನ್ನು ಕೊಂಡವರಿಗೆ ಉಚಿತ "ಆಕೃತಿ ಪುಸ್ತಕ ಜೋಳಿಗೆ" ದೊರೆಯುತ್ತದೆ.



ನಿಮ್ಮ ಪುಸ್ತಕಗಳನ್ನು ತುಂಬಿಕೊಂಡು, ಹೆಗಲಿಗೆ ನೇತುಹಾಕಿಕೊಂಡು ಹೋಗಲು ಅನುವು ಮಾಡಿಕೊಡುವ ಈ ಚೀಲವನ್ನೊಮ್ಮೆ ನೋಡಿ..



ನಾನು ಅಭಿಯಂತರನ ಕೆಲಸಕ್ಕೆ ಸ್ವಲ್ಪ ದಿನದ ವಿರಾಮ ಕೊಟ್ಟು ಪುಸ್ತಕೋದ್ಯಮಕ್ಕೆ ಇಳಿದಿದ್ದೇನೆ.. ನಿಮ್ಮೆಲ್ಲರ ಸಹಕಾರ ಇರಲಿ..

ಗುರುವಾರ, ಫೆಬ್ರವರಿ 11, 2010

ಕನ್ನಡ ಸಾಹಿತ್ಯ ಸಮ್ಮೇಳನ ೨೦೧೦

೭೬ ನೆಯ ಅಖಿಲ ಭಾರತ್ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೦ ರ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ನಿಮ್ಮ ಗದಗ್ ಪ್ರವಾಸದ ಯೋಜನೆ ಕೂಡಲೇ ತಯಾರಿಸಿ.


kannada-saahitya-sammelana-1


ಮುಂದೆ ನೋಡಿ

ಗುರುವಾರ, ಫೆಬ್ರವರಿ 04, 2010

ಜೈಪುರ ಸಾಹಿತ್ಯೋತ್ಸವದ ಒಂದು ಸಣ್ಣ ವರದಿ

ಜನವರಿ ೨೧ರಿಂದ ೨೫ ರ ವರೆಗೆ ಜರುಗಿದ ಜೈಪುರ ಸಾಹಿತ್ಯೋತ್ಸವ ಒಂದು ಅದ್ಭುತ ಅನುಭವ. ಹವಾಮಾನ ವೈಪರೀತ್ಯದಿಂದ ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ಥವ್ಯಸ್ಥವಿದ್ದರೂ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮ ಶ್ಲಾಘನೀಯ.


ಐದು ದಿನ ನಡೆದ ಈ ಉತ್ಸವದಲ್ಲಿ, ನಾಲ್ಕು ವೇದಿಕೆಗಳಲ್ಲಿ ಸಮಾನಾಂತರವಾಗಿ ೪ ಘೋಷ್ಟಿಗಳು ನಡೆದವು. ಪ್ರತಿಯೊಂದು ಘೋಷ್ಟಿಗೂ ೧ ಘಂಟೆಯ ಸಮಯ ನಿಗದಿಯಾಗಿತ್ತು. ಸುಮಾರು ೪೫ ನಿಮಿಷಗಳ ಚರ್ಚೆ ನಂತರ ೧೫ ನಿಮಿಷಗಳು ಶ್ರೋತೃಗಳ ಜೊತೆ ಸಂವಾದ. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದದ್ದು ಮತ್ತು ನಿಗದಿತ ಸಮಯಕ್ಕೆ ಮುಕ್ತಾಯವಾದದ್ದು ಪ್ರಶಂಸನೀಯ. ಎಲ್ಲಾ ಘೋಷ್ಟಿಗಳಿಗೂ ಎಲ್ಲರಿಗೂ ಮುಕ್ತ ಆಹ್ವಾನ. ಯಾವ ಆಸನವೂ ಗಣ್ಯರಿಗೆ ಕಾಯ್ದಿರಿಸಲಾಗಿರಲಿಲ್ಲ. ಅಲ್ಲಿ ಎಲ್ಲರೂ ಗಣ್ಯರು ಎಲ್ಲರೂ ನಗಣ್ಯರು.


ಕಾರ್ಯಕ್ರಮದ ಉದ್ಘಾಟನೆಯಲ್ಲಿ, ’Nine Lives' ಖ್ಯಾತಿಯ ಸಾಹಿತಿ ವಿಲ್ಲಿಯಮ್ ಡ್ಯಾಲಿಂಪರ್ಲ್ ಹೇಳಿದಂತೆ, ವಿಕ್ರಮ ಚಂದ್ರ ರಂತಹ ಬರಹಗಾರರನ್ನು ನಾವು ಸಿಡ್ನಿ ಸಾಹಿತ್ಯೋತ್ಸವ ಮತ್ತು ಮುಂತಾದ ಅಂತರಾಷ್ಟ್ರೀಯ ಸಾಹಿತ್ಯೋತ್ಸವಗಳಲ್ಲಿ ಕಾಣುತ್ತೇವೆ. ಆದರೆ ಭಾರತದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಕಡಿಮೆ. ಅಂತಹವರನ್ನು ಇಲ್ಲಿಗೆ ಕರೆತರುವ ಉದ್ದೇಶವೇ ಈ ಕಾರ್ಯಕ್ರಮದ್ದು ಎಂದರು.

[caption id="attachment_747" align="aligncenter" width="300" caption="ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ"]ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ[/caption]


ಮುಂದೆ ಓದಿ

ಬುಧವಾರ, ಫೆಬ್ರವರಿ 03, 2010

ನಾಳೆ ಬಸ್‌ನಲ್ಲೇ ಓಡಾಡಿ..

ಬೆಂಗಳೂರಿನ ವಾಹನ ದಟ್ಟನೆಗೆ ಬೇಸತ್ತು "ಥೂ.. ಎಷ್ಟು ಸಮಯ ಹಾಳು" ಎಂದು ಶಪಿಸದವರು ಬಹುಶಃ ಇರಲಿಕ್ಕಿಲ್ಲ. ಒಮ್ಮೆಯಾದರೂ, ವಾಹನ ದಟ್ಟನೆಗೆ ಬೈದು, ಸರ್ಕಾರದೆಡೆಗೋ, ಸಂಚಾರಿ ಪೋಲೀಸರೆಡೆಗೋ ಬೆರಳು ಮಾಡಿ ಸುಮ್ಮನಾಗಿ ಬಿಡುತ್ತೇವೆ. ಈ ವಾಹನ ದಟ್ಟನೆ ಎಂಬ ನರಕ ಸದೃಶ ಸೃಷ್ಟಿಯಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಹೆಚ್ಚಿನ ಸಮಯ ಯೋಚಿಸುವುದೇ ಇಲ್ಲ.

bus-hideeri

ಮುಂದೆ ಓದಿ

ಗುರುವಾರ, ಜನವರಿ 14, 2010

ಸೂರ್ಯಕಾಂತಿ -- ಚಿತ್ರ ವಿಮರ್ಶೆ

ಬಾಡಿದ ಸೂರ್ಯಕಾ೦ತಿ -- ರವೀಶ
ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ಸೂರ್ಯಕಾ೦ತಿ ಚಿತ್ರವೇನೋ ಅದ್ಭುತ ಎನ್ನಬಹುದಾದ ಉಜ್ಬೇಕಿಸ್ತಾನದ ತಾಣಗಳಲ್ಲಿ ತೆರೆದುಕೊಳ್ಳುತ್ತದೆ. ಆದರೆ ನ೦ತರ ಕತೆಯು ನೀವು ಊಹಿಸಬಹುದಾದ ರೀತಿಯಲ್ಲಿಯೇ ಮು೦ದೆ ಸಾಗಿ ಕೊನೆಯಾಗುತ್ತದೆ.

ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.
ಮುಂದೆ ಓದಿ

“ಕಥಾಸಂಧಿ” ಕಾರ್ಯಕ್ರಮದ ಭಾವಚಿತ್ರಗಳು

ಕಳೆದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ’ಕೇಂದ್ರ ಸಾಹಿತ್ಯ ಅಕಾದೆಮಿ’ ವತಿಯಿಂದ "ಕಥಾಸಂಧಿ" ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ’ದೇಶಕಾಲ’ ತ್ರೈಮಾಸಿಕ ಪತ್ರಿಕೆ ಖ್ಯಾತಿಯ, ಖ್ಯಾತ ಕಥೆಗಾರ ವಿವೇಕ್ ಶಾನಭಾಗ್ ರವರು ತಮ್ಮ ಕಥೆಯಾದ "ನಿರ್ವಾಣ" ಕಥೆಯನ್ನು ಓದಿದರು. ನಂತರ ಅರ್ಥಪೂರ್ಣ ಸಂವಾದ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾದೆಮಿಯ ಮಾಜಿ ಅಧ್ಯಕ್ಷ ಯು ಆರ್ ಅನಂತಮೂರ್ತಿ, ಪ್ರಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲವು ಭಾವಚಿತ್ರಗಳು ಇಲ್ಲಿ.


kathaasandhi


ಮುಂದೆ ನೋಡಿ

ಬುಧವಾರ, ಜನವರಿ 06, 2010

ಬೆಲೆ ಏರಿಕೆ ಮತ್ತು ದಿನಕರ ಚೌಪದಿ

ದಿನಸಿಗಳು, ತರಕಾರಿಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ, ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ಬರೆದಿರುವ ಈ ಚೌಪದಿಗಳನ್ನೋದಿ..


[caption id="attachment_718" align="aligncenter" width="200" caption="ಚಿತ್ರಕೃಪೆ: http://nirpars.blogspot.com/"]ಚಿತ್ರಕೃಪೆ: http://nirpars.blogspot.com/[/caption]

ತಿನ್ನೋಣ ಗೆಣಸು


ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.

ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.

ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-

ಬೆಳದಿಂಗಳಾಗಿ ಹೊಳೆಯುವುದು ಅಮಾವಾಸ್ಯೆ.


ಬೆಲೆಗಳ ಆಕಾಶ ಯಾತ್ರೆ


ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ

ಚಿಕ್ಕೆಯಾದವು ಎಂದು ಹೇಳುವರು, ನಾರಿ.

ಜನಗಳೆಲ್ಲಾ ವಿಮಾನದ ಮೇಲೆ ಕೂತು

ನಭಕೇರಿದರೆ ಮಾತ್ರ ಕೇಸರಿಭಾತು


ಮುಂದೆ ಓದಿ

ಸೋಮವಾರ, ಜನವರಿ 04, 2010

ಎರಡು ಚಿತ್ರ ವಿಮರ್ಶೆಗಳು

ಪೋಲೀಸ್ ಕ್ವಾರ್ಟರ್ಸ್ — ಭಾವಾತಿರೇಕದ ಮೂಟೆ

ಹೋದ ವಾರ ತೆರೆ ಕಂಡ, ಸೈನೈಡ್ ನಿರ್ಮಿಸಿದ ತಂಡದಿಂದ ನಿರ್ಮಿತವಾಗಿರುವ ಚಲನಚಿತ್ರ ಎಂಬ ನಿರೀಕ್ಷೆಯಿಂದ ನೋಡಿದ ಈ ಚಿತ್ರ ಭಾರಿ ನಿರಾಸೆಯನ್ನು ತಂದಿತು. ೧೯೯೨ ರ ಭಾಬ್ರಿ ಮಸೀದಿ ಧ್ವಂಸ ಗಲಭೆಯಲ್ಲಿ ಅರಳಿದ ಒಂದು ಸತ್ಯ ಪ್ರೇಮ ಕಥೆ ಅಧಾರಿತ ಚಿತ್ರ ಎಂಬ ಜಾಹೀರಾತಿನೊಂದಿಗೆ ಬಿಡುಗಡೆಯಾಗಿರುವ ಈ ಚಲನಚಿತ್ರದ ಕಥೆ ಅತೀ ಸಾಧಾರಣವಾದದ್ದು.

police-quarters

ಇಬ್ಬರು (ವಿಶ್ವಣ್ಣ ಮತ್ತು ವೆಂಕಟೇಶ್ ಗೌಡ -- ಚಲನಚಿತ್ರದ ಹೆಸರುಗಳು) ಪೋಲೀಸ್ ಪೇದೆಗಳು. ಬೇರೆ ಬೇರೆ ಜಾತಿಯವರು, ಆದರೆ ಪ್ರಾಣ ಸ್ನೇಹಿತರು. ವೆಂಕಟೇಶ್ ತನ್ನ ಕುಟುಂಬವನ್ನು ಧಿಕ್ಕರಿಸಿ ಕೆಳಜಾತಿ ಎನ್ನಿಸಿಕೊಳ್ಳುವ ವರ್ಗದಿಂದ ಬಂದಿರುವ ಅನಾಥೆಯನ್ನು ಮದುವೆಯಾಗುತ್ತಾನೆ. ಆದರೆ ಅಕಾಲ ಮರಣ ಹೊಂದುತ್ತಾನೆ. ಆಗ ವಿಶ್ವಣ್ಣ ತನ್ನ ಗೆಳೆಯ ವೆಂಕಟೇಶ್‌ನ ಹೆಂಡತಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾನೆ. ಅನಿತಾ (ಸೋನು) ವಿಶ್ವಣ್ಣನ ಮಗಳು. ಜಾಣ ಹುಡುಗಿ, ಸಂಭಾವಿತೆ. ಅಶ್ವಿನ್ (ಅನೀಶ್ ತೇಜೇಶ್ವರ್) ವೆಂಕಟೇಶ್ ನ ಮಗ. ಪೊರ್ಕಿ, ತರಲೆ, ಹೊರಟ. ಆದರೂ ವಿಶ್ವಣ್ಣನೆಂದರೆ ಭಯ ಭಕ್ತಿ, ಗೌರವ.


ಮುಂದೆ ಓದಿ

ರಾಮ್ : ಅಪ್ಪು ಮತ್ತೆ ಹಾದಿಗೆ!

ಭರ್ಜರಿ ನೃತ್ಯ, ಹಾಸ್ಯಭರಿತ ಸಂಭಾಷಣೆ, ಮಚ್ಚು ಬಿಟ್ಟು ಹಾದಿಗೆ ಬಂದಿರುವ ಪುನೀತ್, ಮೊದಲ ಬಾರಿಗೇ ಕನ್ನಡ ಚಿತ್ರದಲ್ಲಿ ಮಿಂಚಿರುವ ಸುಂದರಿ ಪ್ರಿಯಾಮಣಿ - ಒಟ್ಟಿನಲ್ಲಿ ಹೇಳುವುದಾದರೆ "ರಾಮ್" ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ರಸದೌತಣ ಬಡಿಸುವ ಚಿತ್ರ.

[caption id="attachment_709" align="aligncenter" width="600" caption="ಚಿತ್ರ ಕೃಪೆ : http://www.123musiq.com/Ram.html"]ಚಿತ್ರ ಕೃಪೆ : http://www.123musiq.com/Ram.html[/caption]

ಎರಡು ವಾರದಿಂದ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಹು ನಿರೀಕ್ಷಿತ ಚಿತ್ರ "ರಾಮ್" ಚಿತ್ರವನ್ನು ವೀಕ್ಷಿಸಿದ ಮೇಲೆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ವಂಶಿ, ರಾಜ್ ಮುಂತಾವ ಮಚ್ಚು-ಕೊಚ್ಚು ಚಿತ್ರಗಳನ್ನು ಕೊಟ್ಟು ಅಭಿಮಾನಿಗಳಿಗೆ ಬೇಸರ ತರಿಸಿದ್ದ ಪುನೀತ್ ಈ ಬಾರಿ ಉತ್ತಮ ಪಾತ್ರವನ್ನು/ಚಿತ್ರವನ್ನು ಆಯ್ದುಕೊಂಡು ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಒಲ್ಲದ ಮದುವೆಯನ್ನು ತಪ್ಪಿಸಿ ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾಗುವ ರಾಮ್, ತಪ್ಪು ಕಲ್ಯಾಣ ಮಂಟಪಕ್ಕೆ ಹೋಗಿ ಬೇರೆ ಯಾವುದೋ ಹುಡುಗಿಯನ್ನು (ಪ್ರಿಯಾಮಣಿ) ಅಲ್ಲಿಂದ ಹೊತ್ತು ತರುತ್ತಾನೆ. ಆ ಹುಡುಗಿಗೆ ಇಬ್ಬರು ಮಾವಂದಿರು. ಇಬ್ಬರೂ ಪ್ರತ್ಯೇಕವಾಗಿ ಅವಳನ್ನು ಹುಡುಕುತ್ತಿರುತ್ತಾರೆ. ರಾಮ್ ಗೆ ನಾಯಕಿಯನ್ನು ರಕ್ಷಿಸುವ ಹೊಣೆ. ಕೊನೆಗೆ ಒಬ್ಬ ಮಾವ ಆ ಹುಡುಗಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಫಲವಾಗುತ್ತಾನೆ. ನಂತರ ನಾಯಕ, ನಾಯಕಿಯ ಇಬ್ಬರ ಮಾವಂದಿರ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಲೆಕ್ಕಿಗನ (ರಂಗಾಯಣ ರಘು) ಸಹಾಯಕನಾಗಿ ಅವರುಗಳ ಮನೆ ಹೊಕ್ಕಿ, ತಂತ್ರವನ್ನು ಹೂಡಿ ನಾಯಕಿಯನ್ನು ವರಿಸಿಕೊಳ್ಳುತ್ತಾನೆ.


ನೀವಿಲ್ಲಿಗೆ ಊಹಿಸಿರುವಂತೆ ಕಥೆಯಲ್ಲಿ ಏನೂ ಹೊಸತನವಿಲ್ಲ, ರೋಚಕವೂ ಇಲ್ಲ. ಆದರೂ ಚಿತ್ರವನ್ನು ಗೆಲ್ಲಿಸಬಲ್ಲ ಅಂಶಗಳು ಸಾಕಷ್ಟಿವೆ.


ಮುಂದೆ ಓದಿ

ಶುಕ್ರವಾರ, ಜನವರಿ 01, 2010

ಶುಭಾಶಯಗಳು

ಬಂತೋ ಬಂತು ಹೊಸ ವರುಷ..
ನಿರೀಕ್ಷೆಯಲಿ
ಹೊಸ ವರ್ಷ ತರುವುದೆಂದ ಹೆಚ್ಚಿನ ಹರುಷ

ಬೆಳೆಯಲಿ ಕ್ಷಮಿಸುವ ಗುಣ
ತೊಲಗಲಿ ದೂರುವುದನ
ಹೆಚ್ಚಲಿ ವ್ಯಾಯಾಮ ಮಾಡುವ ದಿನ
ಕರಗಲಿ ಹೊಟ್ಟೆಯ ಸುತ್ತಿರುವ ಕೊಬ್ಬಿನ ಘನ
ದೂರವಾಗಲಿ ಸೋಮಾರಿತನ
ಕೆಲಸದಲ್ಲಿ ಕಾಣಲಿ ಹೊಸತನ
ಮರೆಯುವ ನೋವನ್ನ
ಹಂಚುವ ನಲಿವನ್ನ
ಇನ್ನೂ ಉತೃಷ್ಟವಾದದ್ದನ್ನ ಬರೆಯೋಣ
ತುಂಬಿರಲಿ ಚೇತನ ಪ್ರತಿಕ್ಷಣ

ಎಲ್ಲರಿಗೂ ಹೊಸ ವರ್ಷದ/ದಶಕದ ಹಾರ್ದಿಕ ಶುಭಾಶಯಗಳು..