ಶುಕ್ರವಾರ, ಮೇ 28, 2010

ಮೈಸೂರು ಪುಸ್ತಕೋತ್ಸವ -- ಆಕೃತಿ ಪುಸ್ತಕದಿಂದ ಕನ್ನಡ ಪುಸ್ತಕಗಳ ಮಾರಾಟ

ಪುಸ್ತಕ ಪ್ರಿಯರಿಗೆ ಮತ್ತೊಂದು ಹಬ್ಬ!
ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ (ಅರಮನೆ ಎದುರಿನ - ದರಸಾ ವಸ್ತು ಪ್ರದರ್ಶನ ನಡೆಯುವ ಮೈದಾನ) ಮೇ ೨೯ ೨೦೧೦ ರಿಂದ ಜೂನ್ ೦೬ ೨೦೧೦ ರ ವರೆಗೆ ಮೈಸೂರು ಪುಸ್ತಕ ಮೇಳ ಜರುಗಲಿದೆ.

ಸಮಯ : ಮಧ್ಯಾಹ್ನ 2 ಘಂಟೆಯಿಂದ ರಾತ್ರಿ 9 ರವರೆಗೆ
ಆಕೃತಿ ಪುಸ್ತಕದ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಅಭಿರುಚಿಯ ಪುಸ್ತಕಗಳನ್ನು ಕೊಂಡೊಯ್ಯಿರಿ, ರಿಯಾಯಿತಿ ದರದೊಂದಿಗೆ!
ಎಂದಿನಂತೆ ೧೦೦೦/- ಮೌಲ್ಯಕ್ಕಿಂತಲೂ ಹೆಚ್ಚು ಪುಸ್ತಕ ಕೊಂಡವರಿಗೆ ಒಂದು ಚಂದದ "ಆಕೃತಿ ಪುಸ್ತಕ ಜೋಳಿಗೆ" ಉಚಿತ!


ಶನಿವಾರ, ಮೇ 15, 2010

ನನಸಾದ ಪ್ರಕಾಶ್ ರೈ ಸವಿಗನಸು!

ಕನ್ನಡ ಚಿತ್ರರಂಗದ ಮಟ್ಟಿಗೆ, ಕನ್ನಡ ಪ್ರೇಕ್ಷಕರಿಗೆ ಈ ಮಾದರಿ ಚಿತ್ರಗಳು ಕನಸೇ ಎನ್ನಬಹುದು. ಈ ಕನಸನ್ನು ನನಸು ಮಾಡಿರುವುದು ನೆನ್ನೆ ತೆರೆ ಕಂಡಿರುವ ಪ್ರಕಾಶ್ ರೈ ರವರ ಚೊಚ್ಚಲ ನಿರ್ದೇಶನದ ಚಲನಚಿತ್ರ "ನಾನೂ ನನ್ನ ಕನಸು". ಇದು ಕನ್ನಡ ಚಿತ್ರರಂಗಕ್ಕೆ ಭರವಸೆ ಒದಗಿಸಿರುವ ಚಿತ್ರ ಎಂದರೆ ತಪ್ಪಾಗಲಾರದು.

ಚಲನಚಿತ್ರ ಎಂದರೆ ರೋಚಕ ತಿರುವುಗಳು, ಅತಿರಂಜಕ ಅಂತ್ಯ, ಭಾವತಿರೇಕದ ದೃಶ್ಯಗಳು ಎಂಬ ಅತೀ ಸಾಧಾರಣ ಸಿದ್ಧ ಸೂತ್ರಗಳಿಗೆ ಲಕ್ಷ್ಯ ಕೊಡದೆ ಅಪ್ಪ ಮತ್ತು ಮಗಳ ಪ್ರೀತಿಯನ್ನು ಭಾನಾತ್ಮಕ ನೆಲೆಯಲ್ಲಿ ಹಿಡಿದಿಟ್ಟಿರುವ ಚಿತ್ರ ಪ್ರೇಕ್ಷಕರಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ, ಜೀವನೋತ್ಸಾಹದ ಅಲೆಯನ್ನೆಬ್ಬಿಸುತ್ತದೆ.
ಮುಂದೆ ಓದಿ

ಶುಕ್ರವಾರ, ಮೇ 07, 2010

ಏರಿಳಿತವಿಲ್ಲದ ಇಜ್ಜೋಡು

ಕನ್ನಡ ಚಿತ್ರರಂಗದ ಈ ವಿರೋಧಾಭಾಸವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ! ಸಾಮಾನ್ಯವಾಗಿ ವ್ಯವಹಾರಿಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಿಡುಗಡೆಯಾಗುವ ಚಲನಚಿತ್ರಗಳಲ್ಲಿ ಅನಗತ್ಯ, ವಿಪರೀತಿ ಏರಿಳಿತ, ಇನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾದ ಬಹು ನಿರೀಕ್ಷಿತ? ಚಲನಚಿತ್ರ ಎಂ ಎಸ್ ಸತ್ಯು ನಿರ್ದೇಶನದ ಸುಮಾರು ೯೦ ನಿಮಿಷದ ಇಜ್ಜೋಡು ಚಲನಚಿತ್ರ ಕತೆಗ ಅಗತ್ಯವಾದ, ಬೇಕಾದ ಏರಿಳಿತಗಳೇ ಇಲ್ಲವೆಂದೆನಿಸುತ್ತದೆ.
ಮುಂದೆ ಓದಿ