ಬುಧವಾರ, ಡಿಸೆಂಬರ್ 30, 2009

ಇನ್ನು ಕನ್ನಡ ಕಾವ್ಯಗಳನ್ನು ಜನ ಸಾಮಾನ್ಯರಿಗೆ ಹತ್ತಿರ ತರುವವರು ಯಾರು?

ಕನ್ನಡ ಕಾವ್ಯವನ್ನು ಸುಗಮ ಸಂಗೀತ, ಭಾವಗೀತೆ ಎಂಬಿತ್ಯಾದಿ ಹೆಸರುಗಳಿಂದ ಹಾಡಿ ಸಾಮಾನ್ಯರ ಸಮೀಪಕ್ಕೆ ತಂದು ತನು ಮನಗಳನ್ನು ತುಂಬಿದ್ದ ಸಿ ಅಶ್ವಥ್ ಇಂದು ದೂರವಾಗಿದ್ದಾರೆ. ಬರೀ ಸುಗಮ ಸಂಗೀತ ಲೋಕಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ, ಕಾವ್ಯ, ಸಂಗೀತ ಒಟ್ಟಿನಲ್ಲಿ ಕರ್ನಾಟಕಕ್ಕೇ ಇದು ತುಂಬಲಾರದ ನಷ್ಟ ಹೌದು.

[caption id="attachment_702" align="aligncenter" width="544" caption="ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್"]ಚಿತ್ರಕೃಪೆ: ಡಿ ಜಿ ಮಲ್ಲಿಕಾರ್ಜುನ್[/caption]


ಶಿಶುನಾಳ ಶರೀಫರ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿ ಕನ್ನಡಿಗರ ಮನಸೂರೆಗೊಂಡಿದ್ದ ಸಂಗೀತಗಾರ ಕಣ್ಮರೆಯಾದ ಮೇಲೆ, ಶರೀಫರ ಉಳಿದ ಹಾಡುಗಳಿಗೆ ಸ್ವರ ಹಾಕುವವರು ಯಾರು? ಜೆ ಎಸ್ ಶಿವರುದ್ರಪ್ಪನವರ ರವರ "ಎಲ್ಲೋ ಹುಡುಕಿದೆ ಇಲ್ಲದ ದೇವರ", ಯಾವುದೀ ಪ್ರವಾಹವೂ, ಆಕಾಶದ ನೀಲಿಯಲ್ಲಿ, ಬೇಂದ್ರೆಯವರ ’ಶ್ರಾವಣ, ಕುರುಡು ಕಾಂಚಾಣ, ನೀ ಹಿಂಗ ನೋಡಬ್ಯಾಡ ನನ್ನ, ಕೆ ಎಸ್ ನರಸಿಂಹಸ್ವಾಮಿಯವರ "ಮೊದಲ ದಿನ ಮೌನ", ಅಡಿಗರ "ಮೌನ ತಬ್ಬಿತು ನೆಲವ ಜುಮ್ಮನೆ" ಕುವೆಂಪುರವರ ಬಾ ಇಲ್ಲಿ ಸಂಭವಿಸು, ನೂರು ದೇವರನೆಲ್ಲಾ ನೂಕಾಚೆ ದೂರ, ಚನ್ನವೀರ ಕಣವಿಯವರ ಬಾ ಮಲ್ಲಿಗೆ, ಮುಂಜಾವಿನಲಿ ತುಂತುರಿನ ಸೋನೆ ಮಳೆ, ಬಿ ಆರ್ ಲಕ್ಷ್ಮಣ್ ರಾವ್ ರವರ ಜಾಲಿ ಬಾರಿನಲ್ಲಿ, ಸುಬ್ಬಭಟ್ಟರ ಮಗಳೆ ಹಾಡುಗಳನ್ನೆಲ್ಲಾ ಇನ್ಮುಂದೆ ಧ್ವನಿ ಸುರಳಿಯಲ್ಲಿ ಮಾತ್ರ ಕೇಳಬೇಕೆ? ಅಶ್ವಥ್ಥರ ಕಂಚಿನ ಕಂಠದಿಂದ ನೇರವಾಗಿ ಕೇಳುವ ಅವಕಾಶ ಮುಗಿದು ಹೋಯಿತೇ?


ಮುಂದೆ ಓದಿ

ಮಂಗಳವಾರ, ಡಿಸೆಂಬರ್ 29, 2009

ಕುವೆಂಪು ಜಯಂತಿ

ಇಂದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರ ಜನ್ಮ ದಿನ.

kuvempu

ಕುವೆಂಪುರವರ ಬಗ್ಗೆ ಹಿಂದೆ ಬರೆದ ಎರಡು ಕಿರು ಲೇಖನಗಳನ್ನು ಇಲ್ಲಿ ಓದಿ.

ಕುವೆಂಪು - ೧

ಕುವೆಂಪು - ೨


ಕುವೆಂಪು ರವರ ಬಗ್ಗೆ ಕನ್ನಡದ ದೈತ್ಯ ಕಾದಂಬರಿಕಾರ "ಅ ನ ಕೃ" ರವರು ಹೀಗೆನ್ನುತ್ತಾರೆ. (ಕನ್ನಡ ಕುಲರಸಿಕರು ಪುಸ್ತಕದಿಂದ ಆರಿಸಿಕೊಂಡದ್ದು)

"

ಕೆ. ವಿ. ಪುಟ್ಟಪ್ಪನವರ ಕೃತಿಗಳ ಬಗ್ಗೆ ಪ್ರಸ್ತಾಪಿಸುತ್ತಾ ರಾಜರತ್ನಂ ಅವರನ್ನು ’ಕನ್ನಡದ ದೈತ್ಯ’ (Titan) ಎಂದು ಸಂಬೋಧಿಸಿದರು. ಕುವೆಂಪು, ಅವರ ಕಾವ್ಯಸೃಷ್ಟಿಯ ಅಗಾಧತೆಯನ್ನು ಕಂಡವರಿಗೆ ಈ ಮಾತು ಅಕ್ಷರಶಃ ಸತ್ಯವೆನಿಸದಿರಲಾರದು.


ಮುಂದೆ ಓದಿ

ಸೋಮವಾರ, ಡಿಸೆಂಬರ್ 21, 2009

ಮನೆಯಂಗಳದಲ್ಲಿ ಮಾತುಕತೆಯಲ್ಲಿ ಪ್ರೊ.ವಿವೇಕ್ ರೈ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳಿನ ಮೂರನೇ ಶನಿವಾರದಂದು ನಯನ ಸಭಾಂಗಣದಲ್ಲಿ ಪ್ರಸ್ತುತ ಪಡಿಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ೧೦೭ ನೆ ಸಂಚಿಕೆಯಲ್ಲಿ ಭಾಗವಹಿಸಿದ್ದವರು ಪ್ರೊ. ವಿವೇಕ್ ರೈ ರವರು. ಕನ್ನಡ ವಿ ವಿ ಯ ಮಾಜಿ ಕುಲಪತಿಗಳಾದ ವಿವೇಕ್ ರೈ ರವರು ಸದ್ಯಕ್ಕೆ ಜರ್ಮನಿಯ ವೂಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ, ಕನ್ನಡ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

maneyamgaladalli-maatukathe

ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆ ನಿರ್ದೇಶಕರಾದ ಮನು ಬಳಿಗಾರ್ ರವರು ವಿವೇಕ್ ರೈ ರವರನ್ನು ಸ್ವಾಗತಿಸಿ, ವಿವೇಕ್ ರೈರವರ ಕಿರು ಪರಿಚಯವನ್ನು ಮಾಡಿ ಕೊಟ್ಟರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನಲೆಯಲ್ಲಿ, ಸಂಶೋಧನೆಗೆಂದು ಮುಖ್ಯಮಂತ್ರಿಗಳು ಘೋಷಿಸಿದ ೧೧ ಕೋಟಿ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ವಿವೇಕ್ ರೈ ರವರ ಮಾರ್ಗದರ್ಶನದಲ್ಲಿ ಕಾರ್ಯಸೂಚಿಯನ್ನು ಸಿದ್ಧಪಡಿಸಿ, ಅನುದಾನವನ್ನು ೧೧ ವಿಶ್ವವಿದ್ಯಾಲಯಗಳಿಗೆ ಹಂಚಿದ್ದನ್ನು ನೆನಪಿಸಿಕೊಂಡರು. ಆ ವಿಶ್ವವಿದ್ಯಾಲಯಗಳು ವಿವೇಕ್ ರೈ ರವರ ಕಾರ್ಯಸೂಚಿಯಂತೆಯೇ ಕಾರ್ಯವನ್ನು ನಿರ್ವಹಿಸುತ್ತಿರುವದನ್ನ ನೆನೆದರು.



ಮುಂದೆ ಓದಿ

ಭಾನುವಾರ, ಡಿಸೆಂಬರ್ 13, 2009

ರತ್ನನ ಪದಗಳು - ವಿಚಾರ, ಸತ್ವ, ತತ್ವ - ಭಾಗ - ೧ ( ರತ್ನನ ಮೊಕಾಬಿಲೆ)

ರತ್ನನ ಪದಗಳು ಕನ್ನಡ ಸಾಹಿತ್ಯದ ಒಂದು ರತ್ನ, ವಜ್ರ ಎಂದೇ ಪ್ರಖ್ಯಾತ. ಇದರಲ್ಲಿ ಒಟ್ಟು ೭೭ ಪದಗಳಿವೆ. ಆಡು ಗ್ರಾಮೀಣ ಭಾಷೆಯಲ್ಲಿ ರಚಿತವಾಗಿರುವ ಈ ಪದ್ಯಗಳು ಓದುತ್ತಾ ಹೋದಾಗ, ಇವುಗಳ ಶೈಲಿ ಮನಸ್ಸಿಗೆ ಮುದ ನೀಡುವುದಲ್ಲದೆ, ಜೀವನೋತ್ಸಾಹವನ್ನು ಸಾರುವಂತಹ ತತ್ವವನ್ನು ಈ ಪದಗಳು ಅಡಗಿಕೊಂಡಿರುವುದು ಕಂಡು ಬರುತ್ತದೆ. ಇವು ೫ ವಿಭಾಗಗಳಾಗಿವೆ. ರತ್ನನ ಮೊಕಾಬಿಲೆ, ಬುಂಡೇ ಬಕ್ತ ರತ್ನ, ಮುನಿಯನ್ ಗಿರಾಕಿ ರತ್ನ, ಪುಟ್ನಂಜಿ ರತ್ನ, ರುಸ್ತುಂ ರತ್ನ.

ratnan-padgol

ರತ್ನನ ಮೊಕಾಬಿಲೆಯಲ್ಲಿ ರತ್ನನ ಪರಿಚಯವಾಗುತ್ತದೆ ನಮಗೆ. ಇಲ್ಲಿ ೬ ಪದಗಳಿವೆ. ರತ್ನನ ಮನೋಭಾವವನ್ನು ಸೂಚಿಸುವ ಪದ್ಯಗಳಿವು.

ಮೊದಲನೆಯಯ ಪದದಲ್ಲಿ, ರತ್ನನ ಪರಿಚಯದ ಜೊತೆಗೆ ರತ್ನನ ಪದಗಳನ್ನು ಬರೆದುಕೊಳ್ಳುವೆ ಬೇವರ್ಸಿಯ ಪರಿಚಯವೂ ಆಗುತ್ತದೆ.


"ಮೊಟ್ಮೊದಲು"

ನನ್ಗೂನೆ ಯೊಂಡಕ್ಕು ಬಲ್ ಬಲೆ ದೋಸ್ತಿ.

ಕುಡದ್‌ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.

ನಂಗ್ ಎಸರು ಯೇಳ್ತಾರೆ - ರ‍್ರರ‍್ರರ‍್ರರ‍್ರರ್ರತ್ನ.

ನಾನ್ ಆಡೋ ಪದಗಳು ಯೆಂಡದ್ ಪ್ರಯತ್ನ.


ಮಾಬಾರ‍್ತ ಬರೆಯಾಕೆ ಯಾಸಂಗ್ ಇನಾಯ್ಕ

ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ

ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್ದು.

ಏನ್ ಐತೊ ಯಾರ್ ಬಲ್ರು ಔಂಗ್ ಇರೋ ದರ‍್ದು!

...........

...........


ಮುಂದೆ ಓದಿ

ಭಾನುವಾರ, ಡಿಸೆಂಬರ್ 06, 2009

ರತ್ನನ ಪದಗಳ ಭಾಷಾ ಶೈಲಿ

raajaratnam-padya

ಯೇಳ್ಕೊಳ್ಳಾಕ್ ಒಂದ್ ಊರು

ತಲೇಮೇಗ್ ಒಂದ್ ಸೂರು

ಮಲಗಾಕೆ ಭೂಮ್ತಾಯಿ ಮಂಚ

ಕೈ ಯಿಡದೋಳ್ ಪುಟ್ನಂಜಿ

ನೆಗನೆಗತ ಉಪ್ಗಂಜಿ

ಕೊಟ್ರಾಯ್ತು ರತ್ನನ್ ಪರ್ಪಂಚ


ರತ್ನನ ಪದಗಳು ಮೈಸೂರು ಪ್ರಾಂತ್ಯದ ಗ್ರಾಮೀಣ ಆಡುಭಾಷೆಯಲ್ಲಿ ರಚಿತವಾಗಿವೆ ಎಂದು ಬಲ್ಲ ತಜ್ಞರು ಹೇಳುವುದುಂಟು. ಈ ಪದಗಳ ವಿಶೇಷತೆಯೆಂದರೆ, ಹಾಡಿಕೊಳ್ಳಲು ಅಷ್ಟು ಸರಳವಾಗಿರುವುದು ಮತ್ತು ಆ ಸರಳ ಪದಗಳಲ್ಲಿ ಅಷ್ಟೋಂದು ತತ್ವವನ್ನು ಅಷ್ಟೇ ಸರಳವಾಗಿ ಸೇರಿಸಿರುವುದು. ಹೆಚ್ಚಿನ ಪದಗಳಲ್ಲಿ ಒಬ್ಬ ವ್ಯಕ್ತಿ ಕುಡಿದಾಗ ಹೇಗೆ ಹಿಂದನ ಘಟನೆಗಳು ಮತ್ತು ಮುಂದೆ ನಡೆಯುವುದನ್ನು ಮರೆತು ವರ್ತಮಾನವನ್ನು ಸಂತೋಷವಾಗಿ ಕಳೆಯುವನೋ ಅದೇ ತತ್ವವಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ತತ್ವದ ಮಾತನ್ನು ಬದಿಗಿಟ್ಟರೆ ಆ ಪದಗಳ ಗ್ರಾಮ್ಯ ಭಾಷೆ ಹಾಡಿಕೊಂಡಾಗ ಮನಸ್ಸಿಗೆ ಬೇಗ ನಾಟುತ್ತವೆ. ಕೆಲವೆಡೆ ಹಿಂದಿ ಪದಗಳ ಮಿಶ್ರಣವಿದ್ದರೂ ಅವು ಆ ಪದಕ್ಕೆ ಒದಗಿಸಬಹುದಾದ ಪ್ರಾಸಕ್ಕಾಗಿ, ಮತ್ತು ಆ ಪದದ ಅಂದವನ್ನು ಹೆಚ್ಚಿಸಲು.


ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!

ಎಲ್ಲಾ ಕೊಚ್ಕೊಂಡ್ ಓಗ್ಲಿ!

ಪರ್ಪಂಚ್ ಇರೋ ತನಕ ಮುಂದೆ

ಕನ್ನದ್ ಪದಗೊಳ್ ನುಗ್ಲಿ!


ಹೀಗೆ ಅಪಾರ ಖ್ಯಾತಿಯನ್ನು ಗಳಿಸಿದ ರತ್ನನ ಪದಗಳನ್ನು ಹಲವು ಜನರ ಅದರ ಭಾಷಾ ಶೈಲಿಗೆ ಟೀಕಿಸಿದ್ದುಂಟಂತೆ. ಆ ಪದ್ಯಗಳಿದ್ದ ವಸ್ತುವನ್ನು ಒಪ್ಪಿಕೊಂಡ ಎಷ್ಟೋ ಮಹಾನುಭಾವರುಗಳು, ಭಾಷೆಯ ಬಗ್ಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರಂತೆ. ಕನ್ನಡ ಭಾಷೆಯನ್ನು ಹಾಳು ಮಾಡುತ್ತಿರುವ ಈ ಪದಗಳನ್ನು ಸಾಂಪ್ರದಾಯಿಕ ಭಾಷೆಯಲ್ಲಿ ಬರೆಯಬಾರದೇ ಎಂದದ್ದೂ ಉಂಟಂತೆ. ಇದಕ್ಕೆ ಉತ್ತರಿಸಲು ರಾಜರತ್ನಂರವರೇ ಸ್ವತಃ ತಮ್ಮ ಒಂದೆರಡು ರತ್ನನ ಪದಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬರೆದು ಪ್ರಕಟಿಸಿದ್ದರಂತೆ. ಅದನ್ನು ಒದಿದ ಮೇಲೆ ಗ್ರಾಮೀಣ ಶೈಲಿಯ ಪದ್ಯಗಳೇ ಉತ್ತಮವಾಗಿವೆ ಎಂದರಂತೆ.


ಮುಂದೆ ಓದಿ

ಶನಿವಾರ, ಡಿಸೆಂಬರ್ 05, 2009

ರತ್ನನ ಜಯಂತಿ

ಇಂದು ಜೆ ಪಿ ರಾಜರತ್ನಂ ರವರ ಜಯಂತಿ

rajaratnam

ಹಿಂದೆ ಬರೆದ ಎರಡು ಲೇಖನಗಳು,

ರಾಜರತ್ನಂ - ೧

ರಾಜರತ್ನಂ - ೨


ರಾಜರತ್ನಂರವರ ಸಮಾಧಾನ ಪದ್ಯವನ್ನು ಈ ಕೆಳಗಿನ ಲೇಖನದ ಎರಡನೇ ಭಾಗದಲ್ಲಿ ಓದಿ

http://samarasa.net/samarasa/?p=395


ನಮ್ಮ ನಾಡಿನ ಹಿರಿಯ ಸಾಹಿತಿಗಳು ರಾಜರತ್ನಂ ಬಗ್ಗೆ ಬರೆದ ಕೆಲವು ಸಾಲುಗಳು


ನಮ್ಮ ರಾಜಣ್ಣ


ಇನ್ನು ರಾಜಣ್ಣ. ಈ ಉಳಿದವರ ರೀತಿಯಲಿ

ಇವರಾದರೂ ಪಂಡಿತರೆ. ಜೊತೆಗೆ ತಮ್ಮದೇ

ಒಂದೆರಡು ಬೇರೆ ಶಕ್ತಿಗಳ ಪಡೆದಿಹರಹುದು.

ಕಷ್ಟಗಳ ಕಂಡು ಅವುಗಳ ಕಾವಿನಲಿ ಕರಗಿ

ಕಡುಬಡವ ಕಡೆ ಕಡಮೆಯೆಂಬವರ ನೋವುಗಳು

ತಮ್ಮವೇ ಎಂಬಂತೆ ಅನುಭವಿಸಿ ಮರುಗುವರು.


ಮುಂದೆ ಓದಿ

ಭಾನುವಾರ, ನವೆಂಬರ್ 22, 2009

ಮಾತೃಭಾಷಾ ಪ್ರೇಮ ಪ್ರ‍ೇಮದಿಂದ ಹರಡಲಿ

[caption id="attachment_610" align="aligncenter" width="545" caption="ಚಿತ್ರಕೃಪೆ : http://ellakavi.files.wordpress.com/2006/11/04_kannada_flag_unfurled.jpg"]ಚಿತ್ರಕೃಪೆ : http://ellakavi.files.wordpress.com/2006/11/04_kannada_flag_unfurled.jpg[/caption]

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆಯವರ ಎಂ ಎನ್ ಎಸ್ ಕಾರ್ಯಕರ್ತರು, ಸಮಾಜವಾದಿ ಶಾಸಕನ ಮೇಲೆ ಹಲ್ಲೆ ನಡೆಸಿದ್ದು, ಆ ಸಮಾಜವಾದಿ ಶಾಸಕ ಮರಾಠಿಯನ್ನು ಧಿಕ್ಕರಿಸಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇ ತನ್ನ ಜೀವನದ ಮಹತ್ಕಾರ್ಯ ಎಂಬಂತೆ ಆಡಿದ್ದು, ಶಿವಸೇನೆ ಕಾರ್ಯಕರ್ತರು ಐ ಬಿ ಎನ್ ಕಛೇರಿಯ ಮೇಲೆ ಹಲ್ಲೆ ನಡೆಸಿದ್ದು, ಭಾಳಾ ಠಾಕ್ರೆ ಅದ್ಯಾವುದೋ ಕೆಲವೇ ಮರಾಠಿಗರು ಓದುವ ಸಾಮ್ನಾ ಎಂಬ ಪತ್ರಿಕೆಯಲ್ಲಿ ಗೀಚಿದ್ದೆಲ್ಲಾ ಯಾವುದೋ ದೊಡ್ಡ ಸುದ್ದಿಯೆಂಬಂತೆ ಎಲ್ಲಾ ತಲೆ ಕೆಟ್ಟ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚಿಸುವುದು ಒಂದು ಆತಂಕಕಾರಿ ಬೆಳವಣಿಗೆಯೇ ಎನ್ನಬಹುದು. ಆತಂಕಕಾರಿ ಏಕೆಂದರೆ ಒಂದು ನಿಟ್ಟಿನಲ್ಲಿ ಇದು ನಮ್ಮದೇ ದೇಶದ ಪ್ರಜೆಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದರೆ, ಮಾತೃಭಾಷೆಯ ಮೇಲೆ ನಿಜವಾದ ಅಭಿಮಾನವುಳ್ಳವರನ್ನು ಅನುಮಾನಿಸುವ, ಅವಮಾನಿಸುವ ಪ್ರಸಂಗ ಬಂದೊದಗುತ್ತಿರುವುದು ಒಂದು ದುರಂತವೇ!

ಮುಂದೆ ಓದಿ

ಬುಧವಾರ, ನವೆಂಬರ್ 11, 2009

ಗಾಳಿಗೇ ಗುದ್ದಿದ ಎಂ.ಎನ್.ಎಸ್ ಕಾರ್ಯಕರ್ತರು!

ಇಂದು ಚಂಡಮಾರುತ ಮುಂಬೈ ನಗರಕ್ಕೆ ಬಂದಪ್ಪಳಿಸಿದ್ದೇ ಒಂದು ವಿಶೇಷ ಸುದ್ದಿ ಎಂದು ಬಿಂಬಿಸುತ್ತಿರುವ ಸತ್ವಹೀನ ಟೀವಿ ಮಾಧ್ಯಮಗಳ ಮಧ್ಯೆ ವಿಭಿನ್ನವಾಗಿ ನಿಲ್ಲಿವ ಸಮರಸ ಟೀವಿ ನಿಮಗೆ ಹೊಸ, ರೋಚಕ, ಸ್ಪೋಠಕ, ಭಯಾನಕ ಸುದ್ದಿಯನ್ನು ಹೊತ್ತು ತಂದಿದೆ. ಮುಂದೆ ಓದಿ.

chanda-maaruta

ಫ್ಯಾನ್ ಚಂಡಮಾರುತ ಮುಂಬೈಗೆ ಅಪ್ಪಳಿಸಿದ ಸುದ್ದಿಯನ್ನು ಮರಾಠಿ ಸಮರಸ ವಾಹಿನಿಯಲ್ಲಿ ಕೇಳಿ ತಿಳಿದ ಕೆಲವು ಎಂ ಎನ್ ಎಸ್ ಕಾರ್ಯಕರ್ತರು ನಮ್ಮ ಕಛೇರಿಗೆ ಕರೆ ಮಾಡಿ ತೀವ್ರ ಆಕ್ಷೇಪಣೆಯನ್ನು ವ್ಯಕ್ತ ಪಡಿಸಿದ್ದಲ್ಲದೆ, ಶೀಘ್ರದಲ್ಲೇ ಮುಂಬೈಗೆ ಅಪ್ಪಳಿಸಿದ ಚಂಡಮಾರುತವನ್ನು ಮರಾಠಿ ಹೆಸರಿನಲ್ಲಿ ನಾಮಕರಣ ಮಾಡಿ ಸುದ್ದಿಯನ್ನು ಮರು ಪ್ರಸಾರ ಮಾಡದೆ ಹೋದರೆ, ನಿಮ್ಮ ಕಛೇರಿಯಲ್ಲಿ ದಾಂಧಲೆ ಎಬ್ಬಿಸುವೆವು ಎಂಬ ಬೆದರಿಕೆಯನ್ನು ಹಾಕಿರುತ್ತಾರೆ. ಪುಂಡಾಟಿಕೆಗೆ ಹೆದರದ ಸಮರಸ ಟೀವಿ ಸುದ್ದಿ ಸಂಪಾದಕರು, ಚಂಡಮಾರುತಕ್ಕೆ ಹೆಸರಿಟ್ಟಿರುವವರು ಹವಾಮಾನ ಇಲಾಖೆಯ ಅಧಿಕಾರಿಗಳು, ತಾವು ತಮ್ಮ ಧೀರತೆಯನ್ನೂ ಅವರಲ್ಲೇ ಪ್ರದರ್ಶಿಸಬೇಕು ಎಂದು ನಯವಾಗಿ ಹೇಳಿದ್ದಲ್ಲದೆ, ದೂರವಾಣಿ ಕರೆಯನ್ನೂ ಕೂಡ ಖಂಡ ತುಂಡಾಗಿ ಕತ್ತರಿಸಿ ಹಾಕಿದ್ದಾರೆ!



ಹವಾಮಾನ ಇಲಾಖೆಗೆ ತ್ವರಿತದಲ್ಲೇ ದೂರವಾಣಿ ಕರೆ ಮಾಡಿದ ಎಂ ಎನ್ ಎಸ್ ಕಾರ್ಯಕರ್ತರು, ಇಲಾಖೆಯಿಂದ "Phyan Cyclone is leaving Bombay" ಎಂಬ ಉತ್ತರವನ್ನು ಕೇಳಿ ವ್ಯಘ್ರರಾಗಿ, ಜೋರು ಮಳೆಯಲ್ಲಿ ಹವಾಮಾನ ಇಲಾಖೆಗೆ ದೌಡಾಯಿಸಲಾಗದೆ, ತಮ್ಮ ಅಸಹಾಕತೆಯನ್ನೂ ಪ್ರದರ್ಶಿಸಲಾಗದೆ ತಮ್ಮ ಕಛೇರಿಯಿಯ ಕಿಟಕಿಯಿಂದಲೇ ಕೈಯನ್ನು ಹೊರಹಾಕಿ ಮುಂಬೈನಿಂದ ತೆರಳುತ್ತಿದ್ದ ಚಂಡಮಾರುತ/ಗಾಳಿಗೇ ಗುದ್ದಿ ತಮ್ಮ ಧೀರತೆಯನ್ನು ಪ್ರದರ್ಶಿಸಿದ್ದಾರೆ.ಅಲ್ಲದೆ ಚಂಡಮಾರುತಕ್ಕೆ ಮರಾಠಿ ಭಾಷೆಯ ಹೆಸರಿನಲ್ಲಿ ನಾಮಕರಣ ಮಾಡಿ ಮತ್ತೆ ಮುಂಬೈಗೆ ಬರುವಂತೆ ಮಾಡಬೇಕೆಂದು ಹವಾಮಾನ ಇಲಾಖೆಗೆ ಆಗ್ರಹಿಸಿದ್ದಾರೆ.ಇಂತಹ ಧೀರತೆಯನ್ನು ಮೆರೆದ ಎಂ ಎನ್ ಎಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಅನ್ಯಪಕ್ಷಗಳ ಜೊತೆ ಗುದ್ದಾಡುವ ಅವಕಾಶವನ್ನು ಕೊಡುವುದಾಗಿ ರಾಜ್ ಠಾಕ್ರೆಯವರು ಮರಾಠಿಯಲ್ಲೇ ಘೋಷಿಸಿದ್ದಾರೆ. ಚಂಡಮಾರುತ ಮುಂದೊಂದು ಬಾರಿ ಅಪ್ಪಳಿಸಿದರೆ, ಚಂಡಮಾರುತದ ವಿರುದ್ಧ ಭಾರಿ ಹೋರಾಟ ನಡೆಸುವುದಾಗಿಯೂ ಹೇಳಿಕೊಂಡಿದ್ದಾರೆ.

ಮುಂದೆ ಓದಿ

ಮಂಗಳವಾರ, ನವೆಂಬರ್ 10, 2009

ಮುತ್ತಯ್ಯ ಭಾಗವತರ ಕೀರ್ತನೆಗಳ ಪುಸ್ತಕ ಬಿಡುಗಡೆ, ಪುಸ್ತಕ ಪರಿಚಯ

ಶಾರದಾ ಸಂಗೀತ ಶಾಲೆ ಮತ್ತು ಪ್ರಿಸಮ್ ಬುಕ್ಸ್ ಪ್ರೈ ಲಿ ವತಿಯಿಂದ, ವಿದುಷಿ ಸುಧಾ ವಿ ಮೂರ್ತಿ ಯವರು ಸಂಗ್ರಹಿಸಿರುವ ಮುತ್ತಯ್ಯ ಭಾಗವತರ "ಶಿವಾಷ್ಟೋತ್ತರ ಮತ್ತು ನವಗ್ರಹ ಕೀರ್ತನೆಗಳು" ಪುಸ್ತಕ ಶನಿವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಯಿತು. ಇದರ ಜೊತೆಗೆ ಮುತ್ತಯ್ಯ ಭಾಗವಾತರ ಕೀರ್ತನೆಗಳ ಎರಡು ಸಿಡಿ ಗಳು ಕೂಡ ಬಿಡುಗಡೆಯಾದವು.


bidugade


ವೇದಿಕೆ ಮೇಲೆ ನೆರೆದಿದ್ದ ಗಣ್ಯರು,

*ಡಾ| ರಂಗನಾಥ್ : ಸಂಸ್ಕೃತ ಪಂಡಿತರು, ಪುಸ್ತಕದ ಶಿವಾಷ್ಟೋತ್ತರದ ಸಂಸ್ಕೃತ ಶ್ಲೋಕಗಳಿಗೆ ಕನ್ನಡ ವಿವರಣೆಯನ್ನು ನೀಡಿದ್ದಾರೆ. ವಿಶ್ವದ ಪ್ರಮುಖರು ಸಂಗೀತದ ಮಹತ್ವದ ಬಗ್ಗೆ ಉಲ್ಲೇಖಿಸಿರುವ ಮಾತುಗಳನ್ನು ನೆನೆದರು.

*ಕೆರೋಡಿ ಅಮರನಾಥ್: ಅಧ್ಯಕ್ಷತೆಯನ್ನು ವಹಿಸಿದ್ದರು. ತಮ್ಮ ಸಣ್ಣ ಅಧ್ಯಕ್ಷೀಯ ಭಾಷಣದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಗೀತ ಗ್ರಂಥಗಳು ರಚನೆಯಾಗಬೇಕಾದ ಅವಶ್ಯಕತೆಯಿದೆ ಎಂದರು.

*ವಿದ್ವಾನ್ ಎಸ್. ಕೃಷ್ಣಮೂರ್ತಿ : ಅತಿಥಿಗಳು, ತಮ್ಮ ಭಾಷಣದಲ್ಲಿ, ತಮ್ಮ ತಾತನವರಾದ ಮೈಸೂರು ವಾಸುದೇವಾಚಾರ್ಯ ಮತ್ತು ಮುತ್ತಯ್ಯ ಭಾಗವತರ ಒಡನಾಟದ ಕೆಲವು ರೋಚಕ ಘಟನೆಗಳನ್ನು ತಿಳಿಸಿದರು. ಮುತ್ತಯ್ಯ ಭಾಗವತರು ಮತ್ತು ತಮ್ಮ ತಾತನವರು ಒಮ್ಮೆ ಕಾಂಬೋಧಿ ರಾಗವನ್ನು ಒಟ್ಟಿಗೆ ಹಾಡಿದ ಬಗೆಯನ್ನು ಮೆಲುಕು ಹಾಕಿದರು. ತಮ್ಮ ತಾತನವರು ಶಂಕರಾಭರಣದಲ್ಲಿ ರಚಿಸಿದ್ದ ಹರಿಭಜನೆ ಎಂಬ ಕೀರ್ತನೆಯನ್ನು ತಾತನವರಲ್ಲೇ ಒಂದು ವಾರವೆಲ್ಲಾ ಕೇಳಿ, ಮುತ್ತಯ ಭಾಗವತರು ಶಂಕರಾಭರಣದಲ್ಲಿ ಸಹಜ ಗುಣ ರಾಮ ಕೀರ್ತನೆಯನ್ನು ರಚಿಸಿದ್ದು, ಅದನ್ನು ಕೇಳಿ ತಮ್ಮ ತಾತನವರ ಕಣ್ಣಲ್ಲಿ ನೀರು ಹರಿದು ತಲೆದೂಗಿದ ಘಟನೆ, ಒಮ್ಮೆ ಮುತ್ತಯ್ಯ ಭಾಗವತರ ವರ್ಣಚಿತ್ರ ಬರೆದುದ್ದಕ್ಕೆ ಕೃಷ್ಣಮೂರ್ತಿಯವರಿಗೆ ೩೦ ರೂಗಳ ಬಹುಮಾನವನ್ನು ಮುತ್ತಯ್ಯಭಾಗವತರು ನೀಡಿದ ಘಟನೆಯನ್ನೂ ನೆನೆಸಿಕೊಂಡರು.
ಮುಂದೆ ಓದಿ

ಸೋಮವಾರ, ನವೆಂಬರ್ 09, 2009

ಅರ್ಥ -- ಸೂಕ್ಷ್ಮತೆಯ ಕೊರತೆಯುಳ್ಳ ಅರ್ಥಭರಿತ ಚಿತ್ರ

ಬಿ ಸುರೇಶ್ ನಿರ್ದೇಶನದ ಅರ್ಥ ಚಲನಚಿತ್ರವನ್ನು ಕೈಲಾಶ್ ಚಿತ್ರಮಂದಿರದಲ್ಲಿ ಜರುಗುತ್ತಿರುವ ಸಮುದಾಯ ಚಿತ್ರೋತ್ಸವದಲ್ಲಿ ನೋಡುವ ಅವಕಾಶ ಒದಗಿ ಬಂತು. ಹೇಳಬೇಕೆಂದಿರುವ ಸಂದೇಶಕ್ಕೆ ಪೂರಕ ಕಥೆಯನ್ನು ಹೆಣೆದಿದ್ದಾರಾದರೂ, ಚಿತ್ರವನ್ನು ನಿರೂಪಿಸುವಲ್ಲಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣಿಸುತ್ತದೆ. ಸಂದೇಶ ಉತ್ತಮವಾದದ್ದಾದರೂ, ಯಾವುದೋ ಒಂದು ಕೋಮು ಅಥವಾ ಒಂದು ಸಂಸ್ಥೆಯ ಬಗ್ಗೆ ಪೂರ್ವಾಗ್ರಪೀಡಿತ ಮನಸ್ಸಿನಿಂದ, ಒಂದು ಕೋಮನ್ನು ಅಥವಾ ಒಂದು ರಾಜಕೀಯ ಪಕ್ಷವನ್ನು ಸಂತುಷ್ಟಿಸಲು ಚಿತ್ರವನ್ನು ಮಾಡಿಬಿಟ್ಟಿದ್ದಾರೆಯೇ ಎಂಬ ಸಂದೇಹ ಉಳಿದುಬಿಡುತ್ತದೆ.

[caption id="attachment_627" align="aligncenter" width="215" caption="http://www.viggy.com/news/images/Artha_Suresh.jpg"]http://www.viggy.com/news/images/Artha_Suresh.jpg[/caption]

ಚಿತ್ರಕಥೆಗೆ ಬಂದರೆ, ಚಲನಚಿತ್ರದಲ್ಲಿ ಬಡತನ, ಜಾಗತೀಕರಣ, ವಿದೇಶಿ ವ್ಯಾಮೋಹ, ಅನಕ್ಷರಸ್ಥತೆ, ಕೋಮುದಳ್ಳುರಿ, ಕೌಟುಂಬಿಕ ಕಲಹ, ಉಳ್ಳವರ ದಬ್ಬಾಳಿಕೆ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು ಪ್ರಾಮಾಣಿಕ ಪ್ರಯತ್ನವಾಗಿದೆ. ಸೀನಪ್ಪ(ರಂಗಾಯಣ ರಘು) ಆಟೋ (ತ್ರಿಚಕ್ರ ವಾಹನ) ಚಾಲಕ. ಆಟೋ ಮಾಲೀಕನಿಗೆ ದಿನಕ್ಕೆ ೧೫೦/- ರುಪಾಯಿಗಳನ್ನು ಕೂಡ ಸಂಪಾದಿಸಿ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವನಿಗೆ. ಮುಂದೆ ಓದಿ

ಗುರುವಾರ, ನವೆಂಬರ್ 05, 2009

ದಾಸದಾಸರ ಮನೆಯ ದಾಸಿಯರ ಮಗ ನಾನು

ದಾಸದಾಸರ ಮನೆಯ ದಾಸಿಯರ ಮಗ ನಾನು

ಸಾಸಿರ ನಾಮದೊಡೆಯ ರಂಗಯ್ಯನ ಮನೆಯ


ಶಂಕುದಾಸರ ಮನೆಯ ಮಂಕುದಾಸನು ನಾನು

ಮಂಕುದಾಸನು ನಾನು ಮರಳುದಾಸ|

ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ

ಬಿಂಕದಿ ಬಾಗಿಲ ಕಾಯ್ವ ಬಡದಾಸ ನಾನಯ್ಯ


ಕಾಳಿದಾಸರ ಮನೆಯ ಕೀಳುದಾಸನು ನಾನು

ಆಳು ದಾಸನು ನಾನು ಮೂಳ ದಾಸ|

ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ

ಆಳಿನಾಳಿನ ದಾಸನಡಿದಾಸ ನಾನಯ್ಯ


ಹಲವು ದಾಸರ ಮನೆಯ ಹೊಲೆಯ ದಾಸನು ನಾನು

ಕುಲವಿಲ್ಲದ ದಾಸ ಕುರುಬದಾಸ|

ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗ ದಾಸ

ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ


ಹೀಗೆ ತಾವು ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದಿದ್ದರೂ, ತಾನು ಇನ್ನೂ ಸಣ್ಣವರೆಂದು ಹಾಡಿಕೊಂಡ, "ಎನಗಿಂತ ಕಿರಿಯರಿಲ್ಲ" ಎಂಬ ವಚನವಾಣಿಯನ್ನು ನೆನಪಿಗೆ ತರುವ ಈ ಪದ್ಯದ ರಚನಕಾರ ಕನಕದಾಸರ ಜಯಂತಿ ಇಂದು.

kanakadasa

ಇನ್ನು, ಕರ್ನಾಟಕ ಸಂಗೀತ ಪಿತಾಮಹರೆನಿಸಿಕೊಂಡ ಪುರಂದರದಾಸರು, ಕನಕದಾಸರನ್ನು ಹಾಡಿ ಹೊಗಳಿದ ಈ ದೇವರನಾಮವನ್ನೋದಿ.


ಮುಂದೆ ಓದಿ

ಬುಧವಾರ, ನವೆಂಬರ್ 04, 2009

ನಡವಳಾತ್ಮಕ ಜಾಹೀರಾತು -- ಒಂದು ನೋಟ

ಇಂದಿನ ಅಂತರ್ಜಾಲ ಯುಗದಲ್ಲಿ, ಅಂತರ್ಜಾಲ ಮುದ್ರಣ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಜಾಹೀರಾತುಗಳು ಕಾಗದ ಮುದ್ರಣದಿಂದ ಅಂತರ್ಜಾಲ ಮುದ್ರಣಕ್ಕೆ ರೂಪಾಂತರಗೊಳ್ಳುತ್ತಿರುವುದು ಇಂದಿಗೆ ಸ್ವಲ್ಪ ಹಳೆಯ ಮಾತೇ ಎನ್ನಬಹುದು. ನಾವು ಕೆಲವು ಅಂತರ್ಜಾಲ ತಾಣಗಳನ್ನು ಜಾಲಾಡುವಾಗ, ಬೇಕಾದ ಮಾಹಿತಿಗಿಂದ ಬೇಡವಾದ ಜಾಹೀರಾತುಗಳನ್ನು ಬೇಕಾಬಿಟ್ಟಿ ಪ್ರಕಟವಾಗಿರುವುದನ್ನು ಕಾಣುತ್ತೇವೆ. ಆ ಅಂತರ್ಜಾಲದ ತಾಣದ ಕದವನ್ನು ದಿನಕ್ಕೆ ಎಷ್ಟು ಜನ ತಟ್ಟುತ್ತಾರೆ ಎಂಬ ವೀಕ್ಷಕ ದಟ್ಟಣೆಯ ಆಧಾರದ ಮೇಲೆ ಆ ತಾಣದ ಜನಪ್ರಿಯತೆ, ಮತ್ತು ಆ ತಾಣ ಗಳಿಸುವ ಜಾಹೀರಾತುಗಳ ಸಂಖ್ಯೆಗಳು ಅವಲಂಬಿಸಿರುತ್ತದೆ. ಈ ಜಾಹೀರಾತುಗಳನ್ನು ಸಾಮಾನ್ಯವಾಗಿ, ಭೌಗೋಳಿಕ ಗುಣಲಕ್ಷಣಗಳ ಅಧ್ಯಯನ (Geographical) ಅಥವಾ ಜನಸಂಖ್ಯೆಯ ಲಕ್ಷಣಗಳ ಅಧ್ಯಯನದ (Demographical) ಅಧಾರಿತವಾಗಿ ಪ್ರಕಟಿಸಿರುತ್ತಾರೆ. ಈ ಮಾದರಿಯ ಜಾಹೀರಾತಿನ ಅತಿ ದೊಡ್ಡ ಹಿನ್ನಡೆಯೆಂದರೆ, ಬಹಳಷ್ಟು ಸಮಯದಲ್ಲಿ ಜನರ ರುಚಿಯನ್ನು ಅರಿತು ಜಾಹೀರಾತು ಪ್ರಕಟಿಸುವುದು ಕಷ್ಟವಾಗುತ್ತದೆ. ಆಗ ಆ ಜಾಹೀರಾತಿನ ಕೊಂಡಿಯನ್ನು ಒತ್ತಿ ಬಳಸಿ ಮುನ್ನಡೆಯುವವರೂ ಕಡಿಮೆ!

advertising

ಈ ಹಿನ್ನಡೆಯನ್ನು ಮೆಟ್ಟಲು, ಕೆಲ ವರ್ಷಗಳಿಂದ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಆಧಾರಿತ ಮಾದರಿಯೇ ನಡವಳಾತ್ಮಕ ಜಾಹೀರಾತು (Bihavioural Advertising). ಒಬ್ಬ ಅಂತರ್ಜಾಲ ವೀಕ್ಷಕನ ನಡತೆಯ (ಅಂತರ್ಜಾಲವನ್ನು ಜಾಲಾಡುವ ರೀತಿ/ನಡತೆ ಎಂದು ಓದಿಕೊಳ್ಳಬೇಕು) ಅಧ್ಯಯನದಿಂದ ಅದೇ ಕ್ಷಣದಲ್ಲಿ, ಅವನ ರುಚಿಗೆ ತಕ್ಕಂತೆ ಜಾಹೀರಾತನ್ನು ಪ್ರಕಟಿಸುವುದೇ ಈ ಮಾದರಿ ತಂತ್ರಜ್ಞಾನದ ಸವಾಲು ಮತ್ತು ಹಿರಿಮೆ. ಮುಂದೆ ಓದಿ

ಮಂಗಳವಾರ, ನವೆಂಬರ್ 03, 2009

ಕಂಟಿನ್ಯೂಯಸ್ ಕಂಪ್ಯೂಟಿಂಗ್ ಸಂಸ್ಥೆಯಿಂದ ನೇರ ನೆರೆ ಪರಿಹಾರ

ನಮ್ಮ ಸಂಸ್ಥೆಯ (ಕಂಟಿನ್ಯೂಯಸ್ ಕಂಪ್ಯೂಟಿಂಗ್) ನೌಕರರ ಪರವಾಗಿ ಸಂಗ್ರಹಿಸಲಾಗಿದ್ದ ಪ್ರವಾಹ ಪರಿಹಾರ ನಿಧಿಯ ಪ್ರತಿ ಪೈಸೆಯೂ ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ, ನವೆಂಬರ್ ೧ ಕನ್ನಡ ರಾಜ್ಯೋತ್ಸವ ದಿನದಂದು, ಪ್ರವಾಹ ಪೀಡಿತ ಒಂದು ಹಳ್ಳಿಯಾದ ಬಗ್ಗೂರಿಗೆ ಭೇಟಿಯಿತ್ತು ಪರಿಹಾರ ನಿಧಿಯಿಂದ ಕೊಂಡ ಆಹಾರ ಸಾಮಗ್ರಿಗಳನ್ನು ಬಗ್ಗೂರಿನ (ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ) ೭೫ ಕುಟುಂಬಗಳಿಗೆ ಹಂಚಿದೆವು. ಈ ನಿಟ್ಟಿನಲ್ಲಿ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುವುದಲ್ಲದೇ, ಈ ಅಳಿಲು ಸೇವೆಯ ಹಾದಿಯಲ್ಲಿ ನಮಗೆ ದೊರೆತ ಪ್ರೋತ್ಸಾಹ ಮತ್ತು ನಿರುತ್ಸಾಹದ ಬಗ್ಗೆ ಒಂದೆರಡು ಮಾತುಗಳನ್ನು ಬರೆದರೆ ಮುಂದೆ ಪರಿಹಾರವನ್ನು ನೇರವಾಗಿ ಜನರಿಗೆ ತಲುಪಿಸಲು ಇಚ್ಛಿಸುವವರಿಗೆ ನೆರವಾಗಬಲ್ಲದೇನೋ!

[caption id="attachment_604" align="aligncenter" width="448" caption="ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು"]ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು[/caption]

* ನಾವು ನೆರೆ ಪರಿಹಾರಕ್ಕೆ ಹಣ ಸಂಗ್ರಹವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸಿದರೂ, ನಮ್ಮ ಸಂಸ್ಥೆಯಲ್ಲಿನ ನೌಕರರು ಸ್ವಇಚ್ಛೆಯಿಂದ ಉದಾರವಾಗಿ ದೇಣಿಗೆ ನೀಡಿ ಮಾನವೀಯತೆಯನ್ನು ಮೆರೆದರು. ಇದಕ್ಕೆ ಅಮೇರಿಕಾದಲ್ಲಿ ಓದುತ್ತಿರುವ ನಮ್ಮ ಗೆಳೆಯನೊಬ್ಬ ಕೂಡ ಕೈಜೋಡಿಸಿದ್ದ.


* ಸಂಸ್ಥೆಯ ಗಾತ್ರ ಚಿಕ್ಕದಾದದ್ದರಿಂದ ಸಂಗ್ರಹಗೊಂಡ ಮೊತ್ತ, ಬೆಂಗಳೂರಿನ ಬೇರೆ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಹೋಲಿಸಿದರೆ, ಅಷ್ಟೇನು ಹೆಚ್ಚಿರಲಿಲ್ಲ. ಆದುದರಿಂದ ಅದನ್ನು ಸರ್ಕಾರಕ್ಕೋ ಅಥವಾ ಬೇರೆ ಯಾವುದೋ ಸಂಸ್ಥೆಗೋ ದೇಣಿಗೆ ನೀಡುವುದೇ ಸರಿ ಎಂಬ ಒತ್ತಡ ಹೆಚ್ಚಿತ್ತು.


* ಪರಿಹಾರ ನಿಧಿ ಸರ್ಕಾರದ ಮೂಲಕ ಹೋದರೆ ಅದು ಅಲ್ಲಿ ಇಲ್ಲಿ ಸೋರಿ ಹೋಗುವುದೆಂಬ ಆತಂಕದಿಂದ, ನಾನು ಮತ್ತು ಸಹೋದ್ಯೋಗಿಗಳಾದ ಪ್ರತಾಪ್, ಶ್ರೀನಿವಾಸ್, ರಾಮ್ ಬಾಬು ಒಂದು ವಾರಾಂತ್ಯ, ಪ್ರವಾಹ ಪೀಡಿತ ಹಳ್ಳಿಗೆ ಪ್ರಯಾಣ ಮಾಡಿ ಪರಿಹಾರವನ್ನು ಜನರಿಗೆ ನೇರವಾಗಿ ತಲುಪಿಸಬೇಕೆಂದು ನಿಶ್ಚಯಿಸಿಕೊಂಡೆವು. ನೆರೆ ಹಾವಳಿಯಿಂದ ಉಂಟಾಗಿರುವ ದುಸ್ಥಿತಿಯನ್ನು ನಮ್ಮ ಕಣ್ಣಾರೆ ನೋಡಿ, ನಮ್ಮ ಕೈಲಾದ ಸಣ್ಣ ಸಹಾಯವನ್ನು ಮಾಡಬೇಕೆಂಬುದು ಎಲ್ಲರ ಮನಸಿನಲ್ಲೂ ಇತ್ತು.

ಮುಂದೆ ಓದಿ

ಮಂಗಳವಾರ, ಅಕ್ಟೋಬರ್ 27, 2009

ದ ಡಿಫಿಕಲ್ಟಿ ಆಫ್ ಬಿಯಿಂಗ್ ಗುಡ್ -- ಪುಸ್ತಕ ಪರಿಚಯ

diifficulty-of-being-good

ಟೈಮ್ಸ್ ಆಫ್ ಇಂಡಿಯಾ ಆಂಗ್ಲ ನಿಯತಕಾಲಿಕೆಯಲ್ಲಿ ಅಂಕಣಕಾರರಾಗಿ ಪ್ರಖ್ಯಾತರಾಗಿರುವ, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ’ಗುರುಚರಣ ದಾಸ್’ ರವರ ಹೊಸ ಪುಸ್ತಕ "The Diffuculty Of Being Good" ಭಾರತದ ಪ್ರಾಚೀನ ಗ್ರಂಥ ’ಮಹಾಭಾರತ’ದ ಆಳವಾದ ಅಧ್ಯಯನದದಿಂದ ಕೂಡಿದ ವಿಮರ್ಶಾತ್ಮಕ ಶೈಲಿಯಲ್ಲಿ ಹೊರಹೊಮ್ಮಿರುವ ಪುಸ್ತಕ ಎನ್ನಬಹುದು. ಮಹಾಭಾರತದ ಪ್ರಮುಖ ಪಾತ್ರಗಳು ವಿವಿಧ ಸನ್ನಿವೇಶಗಳಲ್ಲಿ ತೋರುವ ಮನೋಭಾವದ, ನಡತೆಯ ಸುತ್ತ ಪುಸ್ತಕವನ್ನು ಹೆಣೆದಿದ್ದು ಇಂದಿನ ದಿನಕ್ಕೆ ಆ ಸನ್ನಿವೇಶಗಳು, ಆ ಪಾತ್ರಗಳಲ್ಲಿದ್ದ ಸಂದಿಗ್ಧತೆ, ಹೇಗೆ ಅನ್ವಯವಾಗುತ್ತವೆ? ಈ ದಿನಗಳಲ್ಲಿನ ಪ್ರಪಂಚದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾಗಿರುವ ತಲ್ಲಣಗಳಿಗೂ, ಮಹಾಭಾರತಕ್ಕೂ ತಳುಕು ಹಾಕಿ ನೋಡುತ್ತಾರೆ. ನಮ್ಮ ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮಹಾಭಾರತದ ಪ್ರಸಂಗಗಳು, ಪಾತ್ರಗಳು ಯಾವ ರೀತಿಯಲ್ಲಾದರೂ ಸಹಾಯ ಮಾಡುತ್ತವೆಯೇ ಎಂಬುದರ ಅಧ್ಯಯನವಿದೆ ಈ ಪುಸ್ತಕದಲ್ಲಿ.


ಮುಂದೆ ಓದಿ

ಬುಧವಾರ, ಅಕ್ಟೋಬರ್ 21, 2009

ಒಗಟು ಬಿಡಿಸೋ ಜಾಣ,

2eggs

ನನ್ನ ಹತ್ತಿರ ೧೦೦ ಅಂತಸ್ತಿನ ಮನೆಯಿದೆ (ದಯವಿಟ್ಟು ಸಂತೋಷ್ ಹೆಗಡೆಯವರಿಗೆ ಹೇಳಬೇಡಿ!), ಒಂದು ಅಂತಸ್ತಿನ ಮಹಡಿ, ತನ್ನ ಮೇಲಿನ ಅಥವಾ ಕೆಳಗಿನ ಮಹಡಿಯಿಂದ ಸಮ ದೂರದಲ್ಲಿರುತ್ತದೆ. (ಇದು ಒಗಟು ಬಿಡಿಸಲು ಬೇಕಾದ ಪೂರ್ವ ಮಾಹಿತಿ ಅಷ್ಟೆ! ಇದಕ್ಕೂ ಬಿಡಿಎ ನಿಯಮಗಳಿಗೂ ಸಂಬಂಧವೇನಿಲ್ಲ!). ನಿಮಗೆ ಯಾವುದೇ ಅಂತಸ್ತಿಗೆ ತೆರಳಲು ಸ್ವಾತಂತ್ರವಿದೆ. ಮೆಟ್ಟಿಲು ಹತ್ತಬೇಕಷ್ಟೆ.

ಮತ್ತು ನನ್ನಲ್ಲಿ ೨ ಮೊಟ್ಟೆಗಳಿವೆ (ಇತ್ತೀಚಿನ ದಿನಗಳಲ್ಲಿ ಮೊಟ್ಟೆ ಸಸ್ಯಾಹಾರವಂತೆ!) ಮುಂದೆ ನೋಡಿ

ಶುಕ್ರವಾರ, ಅಕ್ಟೋಬರ್ 09, 2009

ವೈಚಾರಿಕ ಮನಸ್ಸಿನ ಹತ್ತು ಹಲವು ಮುಖಗಳು

ಪ್ರಸಿದ್ಧ ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ, ಪತ್ರಕರ್ತ, ಕವಿ, ವಿಜ್ಞಾನ ಬರಹಗಾರ, ನಾಟಕಕಾರ, ರಾಜಕಾರಣಿ, ಸಂಗೀತಕಾರ, ಚಿತ್ರಕಾರ, ವ್ಯಂಗ್ಯಚಿತ್ರಕಾರ, ಶಿಶು ಸಾಹಿತಿ, ಪ್ರವಾಸ ಸಾಹಿತಿ, ಪುಸ್ತಕ ಪ್ರಕಾಶಕ, ಚಲನಚಿತ್ರಗಾರ, ನೇರ ದಿಟ್ಟ ಸತ್ಯವಂತ ವಿಚಾರವಂತ ಹೀಗೆ ಬಹುಮುಖ ಪ್ರತಿಭೆ. "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಗಾದೆಗೆ ಸಮಾನವಾಗಿ "ಕಾರಂತ ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ" ಎಂಬ ಗಾದೆ ಇಂದು ಕರ್ನಾಟಕದಲ್ಲಿ ಮನೆಮಾತಾಗಿದೆ. ಹೀಗಿದ್ದೂ ತನ್ನ ಸಾಧನೆಯನ್ನೆಲ್ಲಾ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎಂಬ ಅರ್ಧ ಆತ್ಮಕಥೆಯಲ್ಲಿ ಬಿಡಿ ಬಿಡಿಯಾಗಿ ದಾಖಲಿಸಿದ ವಿನಯವಂತ, ಧೀಮಂತ ವ್ಯಕ್ತಿತ್ವದ ಡಾ| ಶಿವರಾಮ ಕಾರಂತ ಕೋಟ ರವರ ಜನ್ಮ ದಿನ ಇಂದು. ಡಾ| ಶಿವರಾಮ ಕಾರಂತ .ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ ೧೯೦೨ ರ ಅಕ್ಟೋಬರ್ ೧೦ ರಂದು ಜನಿಸಿದ್ದು.

karanta

ಕಾರಂತರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸಾಯ ಮಾಡಿದ್ದರೂ ಹೆಚ್ಚು ಪ್ರಸಿದ್ಧಿಯಾದದ್ದು ತಮ್ಮ ವೈಚಾರಿಕ ಕಾದಂಬರಿಗಳಿಂದಲೇ ಎನ್ನಬಹುದು. ಅವರ ಕೆಲವು ಕಾದಂಬರಿಗಳನ್ನು ಹೆಸರಿಸಿದರೆ, ಅಳಿದ ಮೇಲೆ, ಆಳ ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಒಡ ಹುಟ್ಟಿದವರು, ಒಂಟಿ ದನಿ, ಔದಾರ್ಯದ ಉರುಳಲ್ಲಿ, ಕನ್ಯಾಬಲಿ ಅಥವಾ ಸೂಳೆಯ ಸಂಸಾರ, ಕರುಳಿನ ಕರೆ, ಕುಡಿಯರ ಕೂಸು, ಗೊಂಡಾರಣ್ಯ, ಚಿಗುರಿದ ಕನಸು, ಚೋಮನ ದುಡಿ, ಜಗದೋದ್ಧಾರ-ನಾ, ಜಾರುವ ದಾರಿಯಲ್ಲಿ, ದೇವದೂತರು, ನಂಬಿದವರ ನಾಕ ನರಕ, ನಿರ್ಭಾಗ್ಯ ಜನ್ಮ, ಭತ್ತದ ತೊರೆ, ಬೆಟ್ಟದ ಜೀವ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಕಜ್ಜಿಯ ಕನಸುಗಳು, ಮೊಗಪಡೆದ ಮನ, ವಿಚಿತ್ರಕೂಟ, ಶನೀಶ್ವರನ ನೆರಳಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ, ಮೈಮನಗಳ ಸುಳಿಯಲ್ಲಿ, ಗೆದ್ದ ದೊಡ್ಡಸ್ತಿಕೆ ಇತ್ಯಾದಿ. ಮುಂದೆ ಓದಿ

ಮಂಗಳವಾರ, ಅಕ್ಟೋಬರ್ 06, 2009

ಹುಯಿಲಗೋಳ ನಾರಾಯಣರಾಯರ ಬಗೆಗೆ ಇನ್ನೊಂದಿಷ್ಟು ಮಾಹಿತಿಗಳು

huyolu2


ಮಹಾತ್ಮ ಗಾಂಧಿಯವರು ೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯೆಂದು ಸ್ವೀಕರಿಸಲಾದ "ಉದಯವಾಗಲಿ" ಗೀತೆಯ ಭಾವಾರ್ಥ ಕೇಳಿ ತಿಳಿದು ನಾರಾಯಣರಾಯರನ್ನು ಮೆಚ್ಚಿಕೊಂಡು ಹೂವಿನ ಹಾರ ಹಾಕಿ ಗೌರವಿಸಿದ್ದರಂತೆ.


ಅಪರಿಮಿತ ದೇಶಭಕ್ತರಾಗಿದ್ದ ಹುಯಿಲಗೋಳ ನಾರಯಣರಾಯರು, ಕರ್ನಾಟಕ ಏಕೀಕರಣಕ್ಕೇ ಅಲ್ಲದೇ ಸ್ವಂತತ್ರ ಹೋರಾಟಕ್ಕೂ ಶ್ರಮಿಸಿದ್ದರು. ಇವರು ಕನ್ನಡ ನಾಡಿನ ಬಗೆಗಿನ ಪದ್ಯಗಳನ್ನು ರಚಿಸಿದುದ್ದಲ್ಲದೆ ದೇಶಭಕ್ತಿಯನ್ನು ಹೊಮ್ಮಿಸುವ ಪದ್ಯಗಳನ್ನೂ ರಚಿಸಿದ್ದಾರೆ. ಓದುಗರ ಪರಿಚಯಕ್ಕಾಗಿ "ಧ್ವಜಗೀತೆ"ಎಂಬ ಈ ಅತ್ಯುತ್ತಮ ದೇಶಭಕ್ತಿಗೀತೆ!


ಧ್ವಜಗೀತೆ



ಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ|

ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ ||ಪ||


ಹಾಸಿ ಮನೆಯಲಿ ನೇಯ್ದ ಖದ್ದರದ ಬಟ್ಟೆಯಲಿ|

ಕೇಸರಿ ಬಿಳಿ ಹಸಿರು ಬಣ್ಣಗಳ ಪಟ್ಟಿಯಲಿ|

ಸೂಸಿ ನೀಲಿಯಿಟ್ಟು, ಚಕ್ರ ನಡುವೆ ಮೆಟ್ಟಿನಲಿ|

ಬೀಸುತಿಹ ಗಾಳಿಯಲಿ ಭಾರತದ ನಿಟ್ಟೆಯಲಿ||


ಸತ್ಯ, ದಮೆ, ದಯೆ, ಶಾಂತಿ, ಪ್ರೇಮಗಳ ಗುರುತೆಂಬ|

ಸ್ತುತ್ಯ ಬಣ್ಣದ ನಡುವೆ ಧರ್ಮಚಕ್ರದ ಬಿಂಬ|

ನಿತ್ಯ ಅಭಯ ಅಹಿಂಸೆಗಳ ತೋರ್ಪಧ್ವಜ ಕಂಬ|

ಪ್ರತ್ಯಕ್ಷದಲಿ ನೋಡಿ ವಂದಿಸಿರಿ ಮನದುಂಬ||


ಖಡಖಡನೆ ಗಾಳಿಯಲಿ ಬೀಸಿ ಶಬ್ದವ ಮಾಡಿ|

ಛಡಛಡನೆ ಹಗೆಗಳೆಡೆ ಬಿರಿವಂತೆ ಹಾರಾಡಿ|

ಒಡೆಯ ಗದುಗಿನ ವೀರ ನಾರಾಯಣನ ಪಾಡಿ|

ಗುಡಿ ತನ್ನ ಮೊಗವೆತ್ತಿ ನಿಲುವಂತೆ ಮೇಲ್ಮಾಡಿ||


ಹುಯಿಲಗೋಳ ನಾರಾಯಣರಾಯರು ಏಕೀಕರಣದ ನಂತರ ರಚಿಸಿದ ಈ ಒಂದು ಸುಂದರ ಕವನವನ್ನೋದಿ ಆನಂದಿಸಿ.



ಮೂಡಿದುದು ಮೂಡಿದುದು ಕನ್ನಡದ ರವಿಬಿಂಬ

ಮುಂದೆ ಓದಿ

ಮುಖ್ಯಮಂತ್ರಿ ಹಾಲಲ್ಲಿ.. ಜನ ಜಾನುವಾರುಗಳು ನೀರಲ್ಲಿ!

nere-haavali


ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ತತ್ತರಿಸಿ, ಅನ್ನ ನೀರಿಲ್ಲದೆ(ರಾಜಕಾರಣಿಗಳಿಗಾಗಿ ಸ್ಪಷ್ಟಣೆ, ನೀರಿಲ್ಲದೆ ಎಂದರೆ ಕುಡಿಯುವ ನೀರಿಲ್ಲದೆ ಎಂದು ತಿಳಿಯಬೇಕು) ಪ್ರಾಣ ಬಿಡುತ್ತಿದ್ದಾಗ ಯಡಿಯೂರಪ್ಪನವರು ಕರ್ನಾಟಕ ಹಾಲು ಒಕ್ಕೂಟದ ವತಿಯಿಂದ "ಕ್ಷೀರಬಂಧು" ಬಿರುದನ್ನು ಸೋಮಶೇಖರ ರೆಡ್ಡಿಯವರಿಂದ ಸನ್ಮಾನಿಸಿಕೊಳ್ಳುವುದರಲ್ಲಿ ಕಾರ್ಯನಿರತರಾಗಿದ್ದರು. ಅ ದಿನಕ್ಕೂ ಮುಂಚೆ ನಾಡಿಗೆ ಏನೇ ಆದರೂ ತಲೆ ಬಿಸಿಯಿಂದ ಮುಕ್ತನಾಗಿರಬೇಕು ಎಂದು ಸುತ್ತೂರು ಮಠದಲ್ಲಿ "ಯೋಗ" ಮತ್ತಿನ್ಯಾವುದೋ ವಿಷಯಗಳ ಮೇಲಿನ ಕಾರ್ಯಾಗಾರದಲ್ಲಿ ಕಾರ್ಯನಿರತರಾಗಿದ್ದರು!


ನಾವೇನು ನೆರೆ ಪೀಡಿತರಿಗೆ ಮುಖ್ಯಮಂತ್ರಿ ಸಹಾಯ ಮಾಡಬೇಕು ಎಂದಾಗ, ಅವರು ನೆರೆ ಹಾಳಿ ಪ್ರದೇಶಕ್ಕೆ ಭೇಟಿಯಿತ್ತು ತಮ್ಮ ತಲೆಯ ಮೇಲೆ ಎಲ್ಲರನ್ನೂ ಹೊತ್ತುಕೊಂಡು ಬರಬೇಕೆಂದು ನಿರೀಕ್ಷಿಸುತ್ತಿಲ್ಲ. ಕನಿಷ್ಟ ಪಕ್ಷ ಯೋಗ ತರಬೇತಿಗಳು, ಸನ್ಮಾನ ಕಾರ್ಯಕ್ರಮಗಳನ್ನು ಬದಿಗಿಟ್ಟು ಅತಿವೄಷ್ಟಿಯಿಂದ ಹಾನಿಗೊಳಗಾದವರನ್ನು ರಕ್ಷಿಸಲು ಯೋಜನೆಗಳನ್ನಾದರೂ ರೂಪಿಸಬಹುದಿತ್ತು. ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲೇ ಕೂತು ನಿರ್ವಹಿಸಬಹುದಿತ್ತು. ಅಧಿಕಾರಿಗಳು ಮಾಡುವುದಿಲ್ಲವೇ? ಎಂದರೆ ಅದರ ಮೇಲ್ವಿಚಾರಣೆಯನ್ನಾದರೂ ಮಾಡಬೇಕಲ್ಲವೇ? ಇಷ್ಟು ವರ್ಷ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಂಡಿಲ್ಲವೇ? ಹಾಗೆಂದು ರಾಜಕಾರಣಿಗಳು ಅಧಿಕಾರಿಗಳಿಗಿಂತ ಉತ್ತಮರೆಂದಲ್ಲ. ಸಾಮಾನ್ಯರ, ರೈತರ ನಾಯಕ ಎಂದು ಹೇಳಿಕೊಳ್ಳುವ ಯಡ್ಡಿಯೂರಪ್ಪನವರು ತಮ್ಮ ವ್ಯಕ್ತಿ ವಿಕಸನ ಕಾರ್ಯಕ್ರಮಗಳನ್ನು ಮತ್ತು ಬಿರುದು ಬಿಮ್ಮಾನಗಳ ವಿಕಸನ ಕಾರ್ಯಕ್ರಮಗಳನ್ನು ಮೊಟುಕುಗೊಳಿಸಿ, ಹಾನಿಗೊಳಗಾದ, ನಿರಾಶ್ರಿತರಾದ ಜನಗಳಿಗೆ ಸಹಾಯ ತಲುಪುತ್ತಿದೆಯೇ ಎಂಬುದರ ಮೇಲ್ವಿಚಾರಣೆ ಮಾಡಿದ್ದರೆ ಅವರು ಜನಸಮಾನ್ಯರಿಗೆ ಇನ್ನೂ ಹತ್ತಿರವಾಗುತ್ತಿದ್ದುದರಲ್ಲಿ ಸಂಶಯವಿರಲಿಲ್ಲ! ಆದರೆ ಪ್ರತಿಪಕ್ಷಗಳ ಬೇರೆ ಸಂದರ್ಭಗಳಲ್ಲಿ ಮಾಡಿದ್ದ ಅರ್ಥವಿಲ್ಲದ ಟೀಕೆಗಳಿಗೆ ಹೆದರುವುದಿಲ್ಲ ಎಂಬಂತೆ ಪ್ರತಿಪಕ್ಷಗಳ ಜೊತೆಗೆ ಜಿದ್ದಿಗೆ ಬಿದ್ದಿರುವಂತೆ ಕಾಣುತ್ತಿರುವ ಯಡ್ಡಿಯೂರಪನವರಿಗೆ ನಿಯತ್ತಿನ ಟೀಕೆಗಳಿಗೂ ಕಿವುಡರಾಗಿಬಿಟ್ಟಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ನಾನ್ನುಡಿಯಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಜಿದ್ದಿನಲ್ಲಿ ಜನಸಾಮಾನ್ಯರು ನರಳುತ್ತಿದ್ದಾರೆ ಅಷ್ಟೆ!


ಮುಂದೆ ಓದಿ

ಭಾನುವಾರ, ಅಕ್ಟೋಬರ್ 04, 2009

ಚೆಲುವ ಕನ್ನಡ ನಾಡಿನ ಕವಿಯ ೧೨೫ನೇ ಜಯಂತೋತ್ಸವ

h-n-r

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ||ಪ||


ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು


ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು*


ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು.


(*ವಿದ್ಯಾರಣ್ಯ)


ಹುಯಿಲುಗೋಳ ನಾರಾಯಣರಾವ್ (೧೮೮೪-೧೯೭೧)

ಮುಂದೆ ಓದಿ

ಶನಿವಾರ, ಅಕ್ಟೋಬರ್ 03, 2009

ಮಹಾತ್ಮ ಗಾಂಧಿ - ಕೈಲಾಸಂ ಕವನ

ಮಹಾತ್ಮ ಗಾಂಧಿಯವರ ಬಗ್ಗೆ ನಾವು ಏನು ಬರೆದರೂ ಅದರ ತೂಕ ಅಷ್ಟಕ್ಕಷ್ಟೆಯೇ. ಅದಕ್ಕೆ ಮಹಾತ್ಮ ಗಾಂಧಿಯವರ ಬಗ್ಗೆ ಮತ್ತೊಬ್ಬ ದೊಡ್ಡ ವ್ಯಕ್ತಿ, ಕನ್ನಡದ ಸಾಹಿತಿ "ಟಿ ಪಿ ಕೈಲಾಸಂ" ಆಂಗ್ಲ ಭಾಷೆಯಲ್ಲಿ ಬರೆದ "The Recipe" ಕವಿತೆ, ಮತ್ತದನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕನ್ನಡದ ರತ್ನನ ("ರಾಜರತ್ನಂ") ಅನುವಾದ ಕವಿತೆಯನ್ನೂ ಓದಿ.

mahatma_gandhi

The Recipe
ಮುಂದೆ ಓದಿ

ಶುಕ್ರವಾರ, ಅಕ್ಟೋಬರ್ 02, 2009

ಕನ್ನಡದ ಧೀಮಂತ ಸಾಹಿತಿಯ ಜನ್ಮೋತ್ಸವ

ಕಾದಿರುವಳು ಶಬರಿ,

ರಾಮ ಬರುವನೆಂದು,

ತನ್ನ ಪೂಜೆಗೊಳುವನೆಂದು..


ಶಬರಿ ಪದ್ಯ, ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪಿದೆಯೇ?


visee


ಮುಂದೆ ಓದಿ

ಸೋಮವಾರ, ಸೆಪ್ಟೆಂಬರ್ 28, 2009

ಸಿಂಗರಿಸಿಕೊಂಡ ಬೆಂಗಳೂರು ಗೋಡೆಗಳು..

ಸಮರಸ ಸಂಪಾದಕೀಯದಲ್ಲಿ..

ಬಿ ಬಿ ಎಂ ಪಿ ಪ್ರಾರಂಭಿಸಿರುವ, ಗೋಡೆಗಳ ಸ್ವಚ್ಚತೆ ಆಂದೋಲನಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಹೇಳಬೇಕು. ಆಂಟಿಸಿದ ಚಲನಚಿತ್ರದ ಜಾಹೀರಾತಿನ, ಧರಣಿಗಳ ಭಿತ್ತಿಪತ್ರಗಳು, ಕೆಲವೆಡೆ ಅವುಗಳು ಹರಿದು ಕುಲಗೆಟ್ಟ ಗೋಡೆಗಳನ್ನು ನೋಡಿ ಅಸಹ್ಯವೆನಿಸುತ್ತಿದ್ದಾಗ, ಆ ಗೋಡೆಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳನ್ನು, ಕಲೆಗಳನ್ನು ಹಾಗೂ ಇತರೆ ಸಾಮಾನ್ಯ ಕಲಾಕೃತಿಗಲನ್ನು ಗೋಡೆಗಳ ಮೇಲೆ ಸುಂದರವಾಗಿ ಚಿತ್ರಿಸಲಾಗುತ್ತಿದೆ. ಇದರಿಂದ ಗೋಡೆ ಮತ್ತು ಬೆಂಗಳೂರು ನಗರದ ಅಂದ ಹೆಚ್ಚುವುದಲ್ಲದೆ, ಸಾಕಷ್ಟು ಜನಕ್ಕೆ ಗೊತ್ತಿಲ್ಲದ ಪ್ರವಾಸಿ ಸ್ಥಾನಗಳ ಒಂದು ಸಣ್ಣ ಚಿತ್ರಣ ಕೂಡ ದೊರಕುತ್ತಿದೆ. ಬಿ ಬಿ ಎಂ ಪಿ ಯಷ್ಟೇ ಅಲ್ಲದೇ ಗೋಡೆಗಳ ಮೇಲೆ ಅತ್ಯುತ್ತಮವಾಗಿ ಚಿತ್ರ ಬಿಡಿಸುತ್ತಿರುವ ಕಲಾವಿದರಿಗೂ ನಮನ.


bird


ದಾರಿ ತಪ್ಪಿದ ಲೇಖನ


ಪ್ರಕಾಶ್ ಬೆಳವಾಡಿಯವರು ಡಿ ಎನ್ ಎ ದೈನಿಕ ಪತ್ರಿಕೆಯ ೨೨/ಸೆಪ್ಟಂಬರ್/೨೦೦೯ ರ ಸಂಪಾದಕೀಯದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಗೋಡೆಗಳನ್ನು ಅಂದಗೊಳಿಸುವ ಇಡೀ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ. ಕಲೆಯ ಕೊಲೆ ಎಂದಿದ್ದಾರೆ(Art attack). ಆದರೆ ಈ ಲೇಖನವನ್ನು ಓದಿದ ಮೇಲೆ ಅನ್ನಿಸುವುದು, ಯಾವುದೋ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ, ಬಿ ಬಿ ಎಂ ಪಿ ಮೇಲಿನ ಅಸಹನೆಯಿಂದಲೋ(ಬೇರೆ ಯಾವುದೋ ಕಾರಣಕ್ಕೆ), ಅಥವಾ ಕಲಾವಿದಯ ಆಯ್ಕೆಯ ಪ್ರಕ್ರಿಯೆ ತಮಗೆ ಇಷ್ಟವಾಗಿಲ್ಲವೆಂದೋ, ಅಥವಾ ಕಲಾವಿದರ ನಡುವಿನ ಮತ್ಸರವೋ, ಅಥವಾ ಗೋಡೆ ಮೇಲೆ ಬರೆಯುವ ಕಲಾವಿದರೆಂಬ ಅಸಡ್ಡೆಯೋ ಬರೆದಿರುವ ಚಿತ್ರಗಳು ಕಳಪೆಯೆಂದು ಸಾರಾಸಗಟಾಗಿ ಟೀಕಿಸಿದ್ದಾರೆ. ಬಿ ಬಿ ಎಂ ಪಿ, ಗೋಡೆಗಳನ್ನು ಅಂದಗೊಳಿಸುವ ಕ್ರಿಯೆಯಲ್ಲಿ ದಾರಿ ತಪ್ಪಿದೆ ಎಂದಿದ್ದಾರೆ. ಆದರೆ ಇವರ ಆಧಾರರಹಿತ ಟೀಕೆಗಳನ್ನು ಓದಿದಾಗ ದಾರಿ ತಪ್ಪಿರುವುದು ಬೆಳವಾಡಿಯವರ ಲೇಖನವೆಂದೆನಿಸುತ್ತದೆ.

ಮುಂದೆ ಓದಿ

ಭಾನುವಾರ, ಸೆಪ್ಟೆಂಬರ್ 27, 2009

ಮೊದ ಮೊದಲ್ ಓದಿದ ಗಣೇಶಯ್ಯ ಪುಸ್ತಕ

ಸಮರಸದ "ಪುಸ್ತಕ ಪ್ರೀತಿ" ವಿಭಾಗದಲ್ಲಿ ರವೀಶ, ಗಣೇಶಯ್ಯನವರ ಹೊಸ ಕಾದಂಬರಿ "ಕರಿಸಿರಿಯಾನ" ದ ಪರಿಚಯ ಮಾಡಿಕೊಡುತ್ತಾರೆ.

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು


>karisiriyaana_k_n_ganeshayya_bookcover

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ಮುಂದೆ ಓದಿ..

ಶುಕ್ರವಾರ, ಸೆಪ್ಟೆಂಬರ್ 25, 2009

ರವೀಶ ಕಂಡ "ಮನಸಾರೆ"

ಸಮರಸದಲ್ಲಿ ಮನಸಾರೆ ಚಲನಚಿತ್ರ ವಿಮರ್ಶೆ ಓದಿ..

ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.

ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.. ಮುಂದೆ ಓದಿ

ಮಂಗಳವಾರ, ಸೆಪ್ಟೆಂಬರ್ 22, 2009

ಕಲಾತ್ಮಕ ಪರ್ಯಾಯ ಚಲನಚಿತ್ರಗಳಲ್ಲಿ ಮನರಂಜನೆಯ ಕೊರತೆಯೇ?

ಸಮರಸ ಸಂಪಾದಕೀಯದಲ್ಲಿ,

art_films


ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯ ಹಿನ್ನಲೆಯಲ್ಲಿ ಮತ್ತೆ ಪರ್ಯಾಯ/ಕಲಾತ್ಮಕ ಚಲನಚಿತ್ರಗಳ ಚರ್ಚೆ ಪ್ರಾರಂಭವಾಗಿದೆ. ಕಲಾತ್ಮಕ ಚಲನಚಿತ್ರ ನಟರ, ನಿರ್ದೇಶಕರ, ನಿರ್ಮಾಪಕರ ಮತ್ತು ಇತರೆ ತಂತ್ರಜ್ಞರ ಪ್ರಶಂಸೆ ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಆದರೆ ಆ ಚಲನಚಿತ್ರಗಳ ನಿರ್ಮಾಪಕರ, ನಿರ್ದೇಶಕರ, ನಟರ ಕೊರಗು ಹಲವು. ನಮ್ಮ ಚಲನಚಿತ್ರಗಳನ್ನು ಜನ ಸ್ವೀಕರಿಸುವುದಿಲ್ಲ. ನಮ್ಮ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಹಣಗಳಿಕೆಯಲ್ಲಿ ಮುಂದಿಲ್ಲ. ಹೀಗೆ ಪಟ್ಟಿಗೆ ಕೊನೆಯಿಲ್ಲ.


ಈ ಪರ್ಯಾಯ ಚಲನಚಿತ್ರಗಳು, ವ್ಯವಹಾರಿಕ ಚಲನಚಿತ್ರಗಳಿಗಿಂತ ಹೇಗೆ ವಿಭಿನ್ನ ಎಂದು ಚಿಂತಿಸುತ್ತಾ ಹೋದರೆ, ಸಾಮಾನ್ಯವಾಗಿ ಈ ಕಲಾತ್ಮಕ ಚಲನಚಿತ್ರಗಳು ಒಂದು ಕಾದಂಬರಿಯನ್ನೋ,ಅಥವಾ ಒಬ್ಬ ಸಾಹಿತಿಯ ಕಥೆಯನ್ನೋ ಆಧರಿಸಿದ್ದಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ವ್ಯವಹಾರಿಕ ಚಲನಚಿತ್ರಗಳಿಗೆ ಕಥೆಗೆ ಹೆಚ್ಚಿನ ಪ್ರಾಧ್ಯಾನವೇನೂ ಇಲ್ಲ. ಪ್ರಾಧ್ಯಾನತೆ ಕೊಟ್ಟರೆ ಜನರ ಪುಣ್ಯ! ಪರ್ಯಾಯ ಚಲನಚಿತ್ರಗಳ ಇಡೀ ಕಥೆ, ನಿರೂಪಣೆ ಒಂದು ಸಮಸ್ಯೆಯ ಸುತ್ತಲೋ, ಒಂದು ವಸ್ತುವಿನ ಸುತ್ತಲೋ ಹೆಣೆದಿರುತ್ತವೆ.ಆ ಚಲನಚಿತ್ರಗಳು ಒಂದು ಸಂದೇಶವನ್ನು ಕೊಡಲು ಬದ್ಧವಾಗಿರುತ್ತವೆ. ಆದರೆ ವ್ಯವಹಾರಿಕ ಚಿತ್ರಗಳು ಚಿತ್ರಾನ್ನವೆನ್ನಬಹುದು. ಚಿತ್ರ ಗೆಲ್ಲಲು, ಹಣ ಗಳಿಸಲು ಏನು ಬೇಕೋ ಅಷ್ಟೆ! ಸಾಮಾನ್ಯವಾಗಿ ಪರ್ಯಾಯ ಚಲನಚಿತ್ರಗಳಲ್ಲಿ ನಟನೆ ಗಂಭೀರ. ಹಾಸ್ಯ ಅಥವಾ ಸಂಗೀತಕ್ಕೆ ಕಡಿಮೆ ಆದ್ಯತೆ. ಅವುಗಳು ಚಲನಚಿತ್ರಗಳಲ್ಲಿ ಸ್ಥಾನ ಪಡೆದರೂ ಚಲನಚಿತ್ರ ಕೊಡುವ ಸಂದೇಶಕ್ಕೆ ಪೂರಕವಾಗಿರುತ್ತವೆ. ಈ ನಿಯಮಬದ್ಧ ಚೌಕಟ್ಟಿನ ಅವಶ್ಯಕತೆ ವ್ಯವಹಾರಿಕ ಚಲನಚಿತ್ರಗಳಿಗಿಲ್ಲ. ಚಲನಚಿತ್ರಕ್ಕೆ ಸಂಬಂಧವಿಲ್ಲದ ಹಾಸ್ಯ, ನೃತ್ಯ ದೄಶ್ಯಗಳು ಕಂಡುಬರುವುದು ಸಾಮಾನ್ಯ.


ಈ ಭಿನ್ನತೆಯನ್ನು ಗಮನಿಸಿದಾಗ, ಒಂದು ಕಲಾತ್ಮಕ ಚಲನಚಿತ್ರವನ್ನು ನೋಡಲು ಒಂದು ಚಂದದ ಮನಸ್ಥಿತಿಯ ಅವಶ್ಯಕತೆ ಇರುತ್ತದೆ. ಚಲನಚಿತ್ರ ಕೊಡುವ ಸಂದೇಶವನ್ನು ಅರಿಯಲು, ಚಲನಚಿತ್ರವನ್ನು ಗಂಭೀರವಾಗಿ ವೀಕ್ಷಿಸಬೇಕಾದ, ಕೆಲವೊಮ್ಮೆ ಚಲನಚಿತ್ರದ ಬಗ್ಗೆ ಚರ್ಚಿಸಬೇಕಾದ ಅವಶ್ಯಕತೆ ಇರುತ್ತದೆ. ಕಲಾತ್ಮಕ ಚಲನಚಿತ್ರಗಳು ಮನರಂಜನೆ ಒದಗಿಸಬಲ್ಲವಾದರೂ, ಆ ಮನರಂಜನೆಯನ್ನು ಅನುಭವಿಸಬೇಕಾದರೆ, ಆ ಚಲನಚಿತ್ರ ಕೊಡುವ ಸಂದೇಶವನ್ನು ಅನುಭವಿಸಬೇಕಾಗುತ್ತದೆ. ಆ ಚಲನಚಿತ್ರ ತನ್ನ ಸಂದೇಶ ಜನರಿಗೆ ತಲುಪಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ (ನಟನೆ, ನಿರೂಪಣೆ ಮುಂತಾದ ಚಲನಚಿತ್ರದ ಅಂಗಗಳು ಇದರಲ್ಲಿ ಸೇರಿಸಬಹುದಾದರೂ), ಮತ್ತು ಅದನ್ನು ಪ್ರೇಕ್ಷಕ ಪ್ರಂಶಸಿಸಬಲ್ಲನೇ ಎಂಬುದರ ಮೇಲೆ ಆ ಚಲಚಿತ್ರ ಒದಗಿಸಬಲ್ಲ ಮನರಂಜನೆ ಅವಲಂಬಿತವಾಗಿದೆ. ಆದರೆ ಎಷ್ಟೋ ಬಾರಿ ಸಾಮಾನ್ಯ ಪ್ರೇಕ್ಷಕನಿಗೆ ಗಂಭೀರವಾಗಿ ಚಲನಚಿತ್ರಗಳನ್ನು ನೋಡುವ ವ್ಯವಧಾನ ಕಡಿಮೆ. ಇದಕ್ಕೆ ಸಾಕಷ್ಟು ಆರ್ಥಿಕ, ಸಾಮಾಜಿಕ ಕಾರಣಗಳಿವೆ. ಆದುದರಿಂದ ಒಂದು ವ್ಯಾವಾಹಾರಿಕ ಚಲನಚಿತ್ರದಲ್ಲಿ ಕಂಡುಬರುವ ಒಂದು ಉತ್ತಮ ಹಾಡು ಮತ್ತು ನೃತ್ಯವೋ, ಒಂದು ಹಾಸ್ಯ ದೃಶ್ಯಾವಳಿಯೋ, ಒಂದು ಭಾವಾತಿರೇಕದ ದೃಶ್ಯಾವಳಿಯೋ ಜನರಿಗೆ ಸುಲಭವಾಗಿ ಮುದ ನೀಡಬಲ್ಲುದು. ಈ ಕಾರಣದಿಂದ ಹಣ ಮಾಡುವುದನ್ನೇ ಮಾನದಂಡವಾಗಿಟ್ಟುಕೊಂಡರೆ, ಈ ರೀತಿಯ ಚಿತ್ರಾನ್ನದ ಚಲನಚಿತ್ರಗಳು ಸುಲಭವಾಗಿ ಗೆಲ್ಲುತ್ತವೆ.

ಮುಂದೆ ಓದಿ

ಸೋಮವಾರ, ಸೆಪ್ಟೆಂಬರ್ 21, 2009

ದನದ ದೊಡ್ಡಿಯಲ್ಲ.. ಕುರಿ ಮಂದೆ!

dana_kuri


ಕಾಂಗ್ರೆಸ್‌ ಸಂಸದರು ಋಷಿಮುನಿಗಳ ಜೀವನವನ್ನು ಅಳವಡಿಸಿಕೊಳ್ಳುವಂತೆ(ಕೇಸರಿ ಬಟ್ಟೆಯನ್ನು ಧರಿಸುವುದನ್ನು ಹೊರತುಪಡಿಸಿ!) ಕೇಂದ್ರ ಸರ್ಕಾರ ಕೊಟ್ಟ ಆದೇಶಕ್ಕೆ, ಮೊದಲ ಬಲಿ"ಪಶು"ವಾದ ’ಶಶಿ ತರೂರ್’ ರವರು ಟ್ವೀಟ್ ಮಾಡಿದಂತೆ, ವಿಮಾನದ ಅಗ್ಗದ ವಿಭಾಗದ(ಎಕಾನಮಿ ಕ್ಲಾಸ್) ದನದ ದೊಡ್ಡಿಯಲ್ಲಿ ದನಗಳ ಜೊತೆ ಇನ್ನು ಮುಂದೆ ಪ್ರಯಾಣಿಸುತ್ತೇನೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಭಾರಿ ತಳಮಳ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಸೋನಿಯಾ ಗಾಂಧಿಯವರು ಅಗ್ಗದ (ಎಕಾನಮಿ ಕ್ಲಾಸ್‌) ವಿಭಾಗದಲ್ಲಿ ಪ್ರಯಾಣಿಸಿದ್ದು, ಅವರನ್ನೇ ಗುರಿಯಾಗಿಟ್ಟುಕೊಂಡು ಕೊಟ್ಟ ಹೇಳಿಕೆಯೇ (ಬರೆದ ಟ್ವೀಟೆ!) ಎಂಬ ಸಂಶಯ, ಕಾಂಗ್ರೆಸ್ ಅಂಬಾ ಅಂಬಾ ಎಂದು ಅರಚಲು ಕಾರಣವೇ? ಬಲ್ಲ ಮೂಲಗಳ ಪ್ರಕಾರ, ಕಾರಣ ಅದಲ್ಲ. ಶಶಿ ತರೂರ್ ಕೇರಳದ ಸಂಸದ. ಕೇರಳ ದನಗಳ ಕಸಾಯಿಖಾನೆಗೆ ಬಹಳ ಪ್ರಸಿದ್ಧಿ. ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷಕ್ಕೂ ದನಗಳಿಗೂ ಅಷ್ಟಕ್ಕಷ್ಟೇ! ಇನ್ನು ದನಗಳು ವಿಮಾನದಲ್ಲಿ ಪ್ರಯಾಣ ಮಾಡುವ ಕಲ್ಪನೆಯೇ ಕಾಂಗ್ರೆಸ್ ಪಕ್ಷಕ್ಕೆ ಆಗಿ ಬರುವುದಿಲ್ಲ! ಇನ್ನು ಕೇರಳದಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಪೆಟ್ಟು ಬೀಳಬಹುದೆಂಬ ದೂ(ದು)ರಾಲೋಚನೆ ಶಶಿ ತರೂರ್ ರವರ ಮೇಲೆ ಕಾಂಗ್ರೆಸ್ ಗುರ್ ಗುರ್ ಅನ್ನಲು ಕಾರಣವಂತೆ. ಪಾಪ ಶಶಿ ತರೂರ್ ಎಂಬ ದನ ಕಾಂಗ್ರೆಸ್ ಎಂಬ ಹಳೆ ಹುಲಿಗೆ ಹೆದರಿ, ಬರೆದ ಟ್ವೀಟಿಗೆ ತಪ್ಪಲಾರೆನು, ಬರೆದ ಟ್ವೀಟನು ಅಳಿಸಲಾರೆನು, ಟ್ವೀಟಿನಲ್ಲಿ ಕಟ್ಟಕಡೆಗೆ ಕ್ಷಮೆಯ ಕೇಳ್ವೆನು ಎಂದು ಗೋವಿನ ಹಾಡಿನಲ್ಲಿ ಬಿನ್ನವಿಸಿಕೊಂಡಿದ್ದಾರಂತೆ!

ಮುಂದೆ ಓದಿ

ಸೋಮವಾರ, ಸೆಪ್ಟೆಂಬರ್ 07, 2009

ಪುಸ್ತಕಗಳನ್ನು ನಿಷೇಧಿಸುವುದು ಸರಿಯೇ?

banned_books


ಇತ್ತೀಚೆಗೆ ಜಸ್ವಂತ್ ಸಿಂಗ್ರವರು ಬರೆದ "ಇಂಡಿಯಾ - ಪಾರ್ಟಿಷನ್ ಇಂಡಿಪೆಂಡೆನ್ಸ್" ಪುಸ್ತಕವನ್ನು ಗುಜರಾತ್ ಸರ್ಕಾರ ನಿಷೇಧಿಸಿದ ಹಿನ್ನಲೆಯಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯ ಗುಜರಾತ್ ಸರ್ಕಾರಕ್ಕೆ ನಿಷೇದಿಸಲು ಕಾರಣದ ವಿವರಣೆಯನ್ನು ಕೇಳಿ ನೋಟೀಸ್ ಜಾರಿ ಮಾಡಿದ ಈ ಹಿನ್ನಲೆಯಲ್ಲಿ ಈ ಲೇಖನ ಬರುತ್ತಿದ್ದರೂ, ಹಿಂದೆ ಬಹಳಷ್ಟು ಪುಸ್ತಕಗಳು ಭಾರತದಲ್ಲೂ, ಹಲವು ಪುಸ್ತಕಗಳು ವಿದೇಶಗಳಲ್ಲೂ ನಿಷೇಧಿಸಿರುವ ಉದಾಹರಣೆಗಳಿವೆ. ಇದು ಎಷ್ಟು ಸರಿ? ಎಷ್ಟು ತಪ್ಪು ? ಒಂದು ಚಿಂತನೆ!


ಪುಸ್ತಕಗಳು ಧರ್ಮನಿಂದನೆ/ದೈವನಿಂದನೆ ಆಧಾರದ ಮೇಲೆ ದೂರಿಸಿಕೊಂಡು ನಿಷೇಧಗೊಳ್ಳುವುದು ಸಾಮಾನ್ಯ. ಇದಕ್ಕೆ ಪ್ರಖ್ಯಾತ ಉದಾಹರಣೆಗಳೆಂದರೆ, ಸಲ್ಮಾನ್ ರಶ್ದಿ ಯವರ "ದ ಸಟಾನಿಕ್ ವರ್ಸಸ್" ಪುಸ್ತಕವನ್ನು ಇಸ್ಲಾಮ್ ಧರ್ಮದ ನಿಂದನೆ ಆಧಾರದ ಮೇಲೆ ಭಾರತದಲ್ಲಿ ನಿಷೇಧಿಸಿರುವುದು. ಅಲ್ಲದೆ ಅವರ ವಿರುದ್ಧ ಇರಾನ್ ದೇಶದ ಅಧ್ಯಕ್ಷರೊಬ್ಬರು ಸಲ್ಮಾನ್ ರಶ್ದಿಯ ವಿರುದ್ಧ ಫತ್ವಾ ಹೊರಡಿಸಿದ್ದು, ಸಲ್ಮಾನ್ ರಶ್ದಿ ಭೂಗತಕ್ಕೆ ಹೋದದ್ದು, ಆ ಪುಸ್ತಕದ ಜಪಾನಿನ ಅನುವಾದಕನನ್ನು ಕೊಂದದ್ದು ಈಗ ದಂತಕಥೆ. ಮತ್ತೊಂದು ಉದಾಹರಣೆಯೆಂದರೆ ಬಾಂಗ್ಲಾ ದೇಶದ ಲೇಖಕಿ ತಸ್ಲೀಮಾ ನಸ್ರೀನ್ ರವರ ಲಜ್ಜಾ ಕಾದಂಬರಿಯನ್ನು ಬಾಂಗ್ಲಾ ದೇಶದಲ್ಲಿ ನಿಷೇಧಿಸಿ ಅವರನ್ನು ಗಡಿಪಾರು ಮಾಡಿದ್ದು, ಅವರು ಬಂದು ಭಾರತದಲ್ಲಿ ನೆಲೆಯೂರಿದ್ದು, ನಂತರ ಒಂದು ಸರ್ಕಾರದ ಧೋರಣೆಯಿಂದಾಗಿ, ಅವರಿಗೆ ಭಾರತದಲ್ಲಿ ತಂಗಲು ಅವಕಾಶ ನಿರಾಕರಿಸಿದ್ದು! ಡ್ಯಾನ್ ಬ್ರೌನ್ ರವರ ’ಡಾ ವಿನ್ಚಿ ಕೋಡ್’ ಪುಸ್ತಕವನ್ನು ಭಾರತದ ಒಂದು ರಾಜ್ಯದಲ್ಲಿ ನಿಷೇಧಿಸುವ ಚಿಂತನೆ ನಡೆದು ಕೊನೆಗೆ ನಿಷೇಧದ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲಾಯಿತು. ಈಗಲೂ ಈ ಪುಸ್ತಕ ಲೆಬನಾನ್ ದೇಶದಲ್ಲಿ ಕ್ಯಾಥೋಲಿಕ್ ಕ್ರಿಸ್ಚಿಯನ್ನರ ವಿರೋಧಿಯೆಂದು ನಿಷೇಧಿಸಲಾಗಿದೆಯಂತೆ.

ಮುಂದೆ ಓದಿ

ಸೋಮವಾರ, ಆಗಸ್ಟ್ 24, 2009

ಕಂತನಹಳ್ಳಿ ಗೃಹ ವಿಶ್ರಾಂತಿಧಾಮ (ಹೋಮ್ ಸ್ಟೇ)

ನೀವು ಮಲೆನಾಡಿನ ಪ್ರಕೃತಿ ಸೊಬಗಿನಲ್ಲಿ ವಿಶ್ರಾಂತಿಯನ್ನು ಪಡೆಯಲು ಬಯಸುತ್ತಿರುವಿರಾದರೆ, ಇಲ್ಲೊಂದು ವಿಶ್ರಾಂತಿಧಾಮವಿದೆ. ನಿಮಗೆ ಮಲೆನಾಡಿನ ಮನೆಯ ವಾತಾವರಣ, ಅತ್ಮೀಯ ಆತಿಥ್ಯ, ಮಲೆನಾಡಿನ ಊಟ - ಅದೂ ಅಡಿಗೆ ಮನೆಯಲ್ಲೇ, ಇವುಗಳೆಲ್ಲಾ ನಿಮ್ಮನ್ನು ಆಕರ್ಷಿಸುವುದಾದರೆ ಶಿವಮೊಗ್ಗದ ಸೊರಬದಿಂದ ಸುಮಾರು ೧೦ ಕಿ ಮೀ ದೂರದಲ್ಲಿರುವ ಕಂತನಹಳ್ಳಿ ಗೃಹ ವಿಶ್ರಾಂತಿಧಾಮಕ್ಕೆ ಒಮ್ಮೆ ಹೋಗಿ ವಿಶ್ರಮಿಸಬಹುದು.

ಸುಮಾರು ೪೦ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಸಾಯವನ್ನು ಮಾಡಿಕೊಂಡಿರುವ ’ಶ್ರೀನಿವಾಸ ಮೂರ್ತಿ (ಗನು)’ ಮತ್ತು ’ವಿನೂತನ’ ದಂಪತಿಗಳು ಬಂದು ನೆಲೆಸುವವರಿಗೆ ಅಚ್ಚುಕಟ್ಟಾದ ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಜನ ಹೆಚ್ಚಿದಾಗ ತಮ್ಮ ಮನೆಯ ಉಪ್ಪರಿಗೆಯ ಮೇಲೂ ಮಲಗಲು ಅವಕಾಶ ಕೊಡುತ್ತಾರಂತೆ. ಮುಂದೆ ಓದಿ

ಸೋಮವಾರ, ಆಗಸ್ಟ್ 17, 2009

ಸಮರಸ ಸಂಪಾದಕೀಯದಲ್ಲಿ, ಕನ್ನಡ ಮಾಧ್ಯಮ x ಆಂಗ್ಲ ಮಾಧ್ಯಮ -- ಒಂದು ಚಿಂತನೆ..

ಇತ್ತೀಚೆಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡಬೇಕೆಂಬ ಕರ್ನಾಟಕ ಸರ್ಕಾರದ ಧೋರಣೆಗೆ ನ್ಯಾಯಾಲಯಗಳು ತಡೆಒಡ್ಡಿರುವ ಹಿನ್ನಲೆಯಲ್ಲಿ ಈ ಚರ್ಚೆ ಹೆಚ್ಚಿನ ಮಹತ್ವ ಮತ್ತು ತೀಕ್ಷಣತೆಯನ್ನು ಪಡೆಯುತ್ತಿದೆ. ಪರ ಮತ್ತು ವಿರೋಧದ ಎರಡು ಗುಂಪುಗಳಾಗಿ ತಮ್ಮ ನಿಲುವಿನ ಉತ್ತಮ ಅಂಶಗಳನ್ನು ಮತ್ತು ವಿರೋಧರ ನಿಲುವಿನ ತಪ್ಪು ಅಂಶಗಳನ್ನು ಎತ್ತಿ ಹಿಡಿಯುತ್ತಾ ಚರ್ಚಿಸುತ್ತಾ ಬಂದಿದ್ದಾರೆ. ಈ ವಿಷಯದ ಮೇಲೆ ಚಿಂತನೆ ನಡೆಸಲು ಸಮರಸವೂ ಒಂದು ಪ್ರಯತ್ನ ಮಾಡುತ್ತಿದೆ.

ಈ ಗೊಂದಲ ಪ್ರಾರಂಭವಾದದ್ದು ಯಾಕೆ?
ಕೆಲವು ಶಾಲೆಗಳು ಕನ್ನಡ ಮಾಧ್ಯಮವನ್ನು ಪ್ರಾರಂಭಿಸುವುದಾಗಿ, ಸರ್ಕಾರದ ಅನುಮತಿ ಪಡೆದು ಆಂಗ್ಲ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವ ಅಂಶ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸರ್ಕಾರ ಶಾಲೆಗಳನ್ನು ಮುಚ್ಚುವುದಾಗಿ ಗುಡುಗುತ್ತದೆ. ಹೌದು, ಕಾನೂನಿಗೆ ತಪ್ಪಿ ನಡೆದುಕೊಳ್ಳುವುದು ನ್ಯಾಯ. ಯಾವ ಮಾಧ್ಯಮಕ್ಕೆ ಅನುಮತಿ ಪಡೆದಿದ್ದರೋ ಅದೇ ಮಾಧ್ಯಮದಲ್ಲಿ ಶಾಲೆ ನಡೆಸಬೇಕಿತ್ತು. ಈ ಅಂಶ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರ ಸಂಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕಡ್ಡಾಯ ಎಂಬ ಕಾನೂನು ತರಲು ಯೋಚಿಸುತ್ತದೆ. ಇತ್ತ ಕಡೆ ತಪ್ಪು ಮಾಡಿರುವ ಈ ಖಾಸಗಿ ಶಾಲೆಗಳು ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆದು ತರುತ್ತವೆ. ಅನುಮತಿಗೆ ವಿರೋಧವಾಗಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಶಾಲೆಗಳನ್ನು ನಿಷೇಧಿಸುವ ವಿಷಯಕ್ಕೆ ಸೀಮಿತವಾಗಬೇಕಾಗಿದ್ದ ವಾದ, ಇಡೀ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕೆ ಬೇಡವೇ ಎಂಬ ವಾದಕ್ಕೆ ತಿರುಗುತ್ತದೆ. ಮೂಲ ತೊಂದರೆ ಕಾಣೆಯಾಗಿರುತ್ತದೆ. ಮುಂದೆ ಓದಿ

ಗುರುವಾರ, ಆಗಸ್ಟ್ 13, 2009

ಅಕ್ಕ ಪಕ್ಕದವರು ಕಾಣೆಯಾಗಿಬಿಟ್ಟರು



ಫೋಟೋ ಕೃಪೆ : http://blogtown.portlandmercury.com


ಶ್ರೇಷ್ಠ ಗೊತ್ತಲ್ಲ? ಅವನ ಶಾಲೆಯವರು ಮುಂಜಾಗ್ರತಾ ಕ್ರಮವಾಗಿ, ಹಂದಿ ಜ್ವರ ಹರಡದಂತೆ ತಡೆಯುವ ಮುಖವಾಡವನ್ನು ಧರಿಸಿ ಬರಲು ಹೇಳಿದ್ದರು. ನಾನು ಏನೂ ಬೇಡ ಪುಟ್ಟ, ಅದು ಜ್ವರ ಬಂದಿರೋರ್ಗೆ ಹೇಳಿರ್ತಾರೆ ಅಷ್ಟೆ, ಎಲ್ಲರಿಗೂ ಅಲ್ಲ ಎಂದು ಎಷ್ಟು ಗೋಗರೆದರೂ ಬಿಡಲೇ ಇಲ್ಲ. ಕೊನೆಗೂ ಔಷಧಿ ಅಂಗಡಿಗೆ ಹೋಗಲೇ ಬೇಕಾಯಿತು. ಅಲ್ಲಿ ತುಂಡರಿಸಿದಂತೆ ಹೇಳೇಬಿಟ್ಟ, ಇಲ್ಲಾ ಸಾರ್ .. ಎಲ್ಲೂ ಸಿಕ್ತಾ ಇಲ್ಲ.. ಸಿಕ್ಕಾಪಟ್ಟೆ ಬೇಡಿಕೆ ಇದೆ. ಮುಂದಿನ ಶಾಲೆಗೆ ಹೋಗಿ ಬಂದು ಪಟ್ಟು ಹಿಡಿದೇ ಬಿಟ್ಟ, ಬೇಕೇ ಬೇಕು, ಎಲ್ಲಾ ಮಕ್ಕಳು ಅದನ್ನು ಹಾಕ್ಕೊಂಡು ಬಂದಿದ್ರು ಅಂತ. ನಾನು ಸ್ವಲ್ಪ ಕಷ್ಟ ಪಟ್ಟು ಸುತ್ತ ಮುತ್ತ ಸುತ್ತಾಡಿ ಕೊನೆಗೂ ಒಂದು ಔಷಧಾಲಯಕ್ಕೆ ಹೋಗಿ

ಗುರು "ಸ್ವೈನ್ ಫ್ಳೂ ಮಾಸ್ಕ್" ಇದ್ಯಾ ಅಂದೆ?
ಅವ ಇದೆ ಸಾರ್... ೨೫೦ ರುಪಾಯಿ ಅಂದ.. ಸದ್ಯ ದುಡ್ಡು ತೆಗೆದುಕೊಂಡು ಹೋಗಿದ್ದೆ.
ದುಡ್ಡು ಕೊಟ್ಟು ಕೊಂಡು, ಪಕ್ಕದಲ್ಲಿ ನೋಡ್ತೀನಿ,

ಪಕ್ಕದಲ್ಲಿ ನಿಂತಿದ್ದ ಇಬ್ಬರೂ ಆಸಾಮಿಗಳು ಪರಾರಿ.. ಇಬ್ಬರೂ ಹೋಗಿ ಔಷಧಾಲಯದ ಮತ್ತೊಂದು ದ್ವಾರದಲ್ಲಿ ನಿಂತುಬಿಟ್ಟಿದ್ದಾರೆ.

ನಂತರ ಅವರಿಗೆ ಕೇಳುವಂತೆ ಜೋರಾಗಿ, ನನ್ನ ಸೋದರಳಿಯನ ಶಾಲೆಯಲ್ಲಿ ಮುಖವಾಡ ಧರಿಸಿ ಬರುವಂತೆ ಹೇಳಿದ್ದಾರೆ ಎಂದು ಕೂಗಿ ಹೇಳಿ ಅಲ್ಲಿಂದ ಹೊರಟೆ.


ಆದರೂ ನನಗೆ ಸಮಾಧಾನ ಇಲ್ಲ, ಶಾಲೆಯವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದರೆ, ತಾತ್ಕಾಲಿಕವಾಗಿ ಶಾಲೆಗೆ ೧೫ ದಿನ ರಜ ಕೊಡಬಹುದು. ಅದನ್ನು ಬಿಟ್ಟು LKG/UKG ಮಕ್ಕಳಿಗೆ ಮುಖವಾಢ ಧರಿಸಿ ಬನ್ನಿ ಎಂದರೆ, ಅವರಿಗೆ ಮುಖವಾಡವನ್ನು ಬಳಸವು ವಿಧಾನವನ್ನು ಕಲಿಸಿಕೊಡಲು ಸುಲಭವೇ? ಕಲಿಸಿಕೊಟ್ಟರೂ ಅದನ್ನು ಅವರು ಪಾಲಿಸುತ್ತಾರೆಯೇ? ಅದೇ ಮುಖವಾಡವನ್ನು, ಪಿಸ್ತೊಲ್ ಮಾಡಿಕೊಂಡೋ, ಚೆಂಡು ಮಾಡಿಕೊಂಡೋ ಆಟವಾಡಲು ಪ್ರಾರಂಭಿಸಿದರೆ ತೊಂದರೆ ಹೆಚ್ಚಾಗುವುದಲ್ಲವೇ?

ಅಯ್ಯೋ, ಶಾಲೆಯವರು ಏನಾದ್ರು ಮಾಡ್ಕೋಳ್ಲಿ, ನೀವು ಶಾಲೆಗೆ ಕಳಿಸಬೇಡಿ ಅಂತೀರ?

ಬುಧವಾರ, ಆಗಸ್ಟ್ 05, 2009

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮರುಜೀವ ತುಂಬುವರು ಯಾರು?

ಸಮರಸದಲ್ಲಿ ರಾಜ್ ಬರೆಯುತ್ತಾರೆ!

ಕಳೆದ ಎರಡು ವಿದಾನಸಭೆ ಚುನಾವಣೆಗಳಲ್ಲಿ ಸೋಲು, ಮರುಚುನಾವಣೆಯಲ್ಲಿ ಮುಖಭಂಗ, ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ.ಸುಮಾರು ಒಂದು ದಶಕದಿಂದ, ಕರ್ನಾಟಕದ ಕೈ ಪಕ್ಷ ಅಧಃಪತನದ ಹಾದಿ ತುಳಿಯುತ್ತಿರುವುದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ. ೫೦ ಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಪಕ್ಷದಲ್ಲಿ ನಾಯಕರಿಗೆ ಕೊರತೆಯೇ? ಅಥವಾ ಅಧಿಕಾರ ಲಾಲಸೆಗಾಗಿ ಕಚ್ಚಾಟವೆ, ಎಲ್ಲರೂ ನಾಯಕರೆನಿಸುವ ಚಪಲವೇ? ನಿಷ್ಟರ ಮತ್ತು ವಲಸಿಗರ ತಿಕ್ಕಾಟವೇ? ಕಾಂಗ್ರೆಸ್ ಹಳೆಯ ಪಕ್ಷವಾಯಿತು ಎಂದು ಜನ ಬೇಸತ್ತರೆ? ಇವುಗಳ ಒಟ್ಟು ಸಮ್ಮೇಳವೇ? ಈ ಎಲ್ಲಾ ತೊಂದರೆಗಳನ್ನು ಮೆಟ್ಟಿ ಮುಂಬರುವ ವಿಧಾನಸಭಾ ಮರುಚುನಾವಣೆ ಮತ್ತು ಬಿ ಬಿ ಎಂ ಪಿ ಚುನಾವಣೆಗಳಲ್ಲಿ ಕಾಂಗ್ರೆಸ್ ಮರುಜೀವ ಪಡೆದುಕೊಳ್ಳಲು ಸಾಧ್ಯವೇ? ಅದು ಒಂದು ಪಕ್ಷ ಸಾಧ್ಯವಾದರೆ ಯಾರಿಂದ? ಎಂಬಿತ್ಯಾದಿ ಪ್ರಶ್ನೆಗಳಿಗೆ, ಬುದ್ಧಿಗೆ ಚಿಂತನೆಯನ್ನು ಒಡ್ಡಬಲ್ಲ ಚರ್ಚೆ, ಒಂದು ಅವಲೋಕನ. ಮುಂದೆ ಓದಿ

ಮಂಗಳವಾರ, ಆಗಸ್ಟ್ 04, 2009

ಭಾರತೀಯ ಶಾಸ್ತ್ರೀಯ ಕಲೆಗಳು ಜನಸಾಮಾನ್ಯರನ್ನು ತಲುಪುತ್ತಿವೆಯೇ?

ಸಮರಸ ಸಂಪಾದಕೀಯದಲ್ಲಿ,

ಇತ್ತೀಚೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೇಳುವವರು ಕಡೆಮೆಯಾಗಿದೆ. ಭರತನಾಟ್ಯ ನೋಡುವವರ ಸಂಖ್ಯೆಗಿಂತ ಮಾಡುವವರ ಸಂಖ್ಯೆಯೇ ಹೆಚ್ಚು. ಭಾರತೀಯ ಶಾಸ್ತ್ರೀಯ ಕಲೆಗಳು ನಶಿಸಿ ಹೋಗುತ್ತಿವೆ. ಸಿನಿಮಾ, ದೂರದರ್ಶನ - ಸಣ್ಣತೆರೆಯ ಮಾಧ್ಯಮಗಳಿಗೆ ಜನ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಎಂಬತೆಲ್ಲಾ ಕೊರಗಿದೆ. ಇದಕ್ಕೆ ಸಾಮಾನ್ಯ ಶ್ರೋತೃಗಳಷ್ಟೇ ಕಾರಣವೆ? ಇದರಲ್ಲಿ ಕಲಾವಿದನ, ಕಲಾವಿಮರ್ಶಕನ ಪಾತ್ರವೇನೂ ಇಲ್ಲವೇ? ಒಂದು ಚರ್ಚೆ. ಮುಂದೆ ಓದಿ

ಸೋಮವಾರ, ಆಗಸ್ಟ್ 03, 2009

ಸೂರ್ಯನ ವರ್ಣನೆ

ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?

ನೋಡಿ, ಸೂರ್ಯೋದಯದ ಈ ಛಾಯಾಚಿತ್ರಕ್ಕೆ ಪಂಜೆಮಂಗೇಶ ರಾಯರ “ಉದಯರಾಗ” ಕವನ ಎಷ್ಟು ಅದ್ಭುತವಾಗಿದೆಯಲ್ಲವೇ? “ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು ’ಏರಿದವನು ಚಿಕ್ಕವನಿರಬೇಕಲೆ’ ಎಂಬಾ ಮಾತನು ಸಾರುವನು” ಎಂಬ ಸಾಲುಗಳು ಆಹಾ ರಮಣೀಯತೆಯ ಜೊತೆಗೆ ಎಷ್ಟು ಅರ್ಥಪೂರ್ಣವಲ್ಲವೇ? ಇನ್ನು ಸೂರ್ಯಾಸ್ತವನ್ನು ಕಂಡ ಜಿ ಪಿ ರಾಜರತ್ಮಂ ರವರ ಮನಸ್ಸು, ಸೂರ್ಯನೂ ಕುಡುಕನೆಂದು “ಸಮಾದಾನ” ಪಟ್ಟುಕೊಳ್ಳುವ ಈ ಕವಿತೆಯನ್ನೋದಿ, ಎಂತಹ ಹೋಲಿಕೆ, ಎಂತಹ ರೂಪಕ! ಅಯ್ಯೋ ಛಂದಸ್ಸನ್ನು ಮೀರಿ ಖುಷಿ ಕೊಡುವ ಪದ್ಯಗಳಿವು. ಛಾಯಾಚಿತ್ರದ ಜೊತೆ ಪದ್ಯಗಳನ್ನೋದಿ ಆನಂದಿಸಿ. ಮೊದಲನೆ ಪದ್ಯದಲ್ಲಿ ಸೂರ್ಯ ಹುಟ್ಟಿ ಸುತ್ತಲೂ ನೆತ್ತರು ಮಾಡಿ ಕುಣಿದರೆ, ಎರಡನೆಯದರಲ್ಲಿ ಸೂರ್ಯ ಕುಡಿದು ಸಂಜೆ ಕಣ್ಣು ಕೆಂಪಾಗಿಸಿಕೊಂಡು ತೂರಾಡ್ತಾ ಇದ್ದಾನೆ!

ಮುಂದೆ ಓದಿ/ನೋಡಿ..

ಶನಿವಾರ, ಆಗಸ್ಟ್ 01, 2009

ಮೂಕಜ್ಜಿಯ ಕನಸುಗಳನ್ನು ಮೂರನೆ ಬಾರಿ ಓದಿದಾಗ,



ಡಾ. ಕೆ. ಶಿವಾರಾಮ ಕಾರಂತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ನಾನು ಮೊದಲನೆ ಬಾರಿಗೆ ಓದಬೇಕೆಂದುಕೊಂಡಿದ್ದು, ಇಷ್ಟು ಚಿಕ್ಕ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿಯೇ ಎಂಬ ಕುತೂಹಲಕ್ಕಾಗಿ. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾನ್ನುಡಿ ಈ ಪುಸ್ತಕಕ್ಕೇ ಹೇಳಿ ಮಾಡಿಸಿದಂತಿದೆ ಎಂದು ತಿಳಿದಿಕೊಳ್ಳಲು ಕೆಲವೇ ಪುಟಗಳ ಓದು ಸಾಕಾಗಿತ್ತು. ಇನ್ನು ಎರಡನೇ ಮತ್ತು ಮೂರನೇ ಬಾರಿ ಓದಿದ್ದು, ಏಕೆಂದು ಸಮಂಜಸವಾಗಿ ಹೇಳಲಾರೆ. ಅದೇನೋ ಎಷ್ಟು ಬಾರಿ ಓದಿದರೂ ಹೊಸ ಹೊಸ ವಿಚಾರಗಳ ಮಂಥನ ನಡೆಸುತ್ತದೆ ಮನಸ್ಸು. ಕಾದಂಬರಿಯನ್ನು ಹೊಸೆದಿರುವ ಶೈಲಿ, ಭಾಷೆ, ಬರವಣಿಗೆಯ ಸರಳತೆ ಮತ್ತೊಮ್ಮೆ, ಮಗದೊಮ್ಮೆ ಓದುವಂತೆ ಪ್ರೇರಿಪಿಸಿತು ಎನ್ನಲೆ? ಅಥವಾ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವ ವಿಚಾರಧಾರೆ ಇರುವ ನನಗೆ, ಕಾದಂಬರಿಯಲ್ಲೂ ಇಂತಹ ವಿಚಾರಧಾರೆ ಇರುವುದು ಇಷ್ಟವಾಗಿ ಮತ್ತೊಮ್ಮೆ ಓದಿದೆನೇ? ನನ್ನ ಯಾವ ಹಿರಿಯರಲ್ಲೂ ’ಎಲ್ಲವನ್ನೂ ವಿಚಾರ ಮಾಡಿ’ ನೋಡುವ ಗುಣ ಕಾಣದೆ ಇದ್ದುದ್ದನ್ನು, ಈ ಮೂಕಜ್ಜಿಯಲ್ಲಿ ಕಂಡು ಈ ಪುಸ್ತಕವೇ ನನ್ನ ಅಜ್ಜಿಯಾಗಿಬಿಟ್ಟಿತೇ, ಪುಸ್ತಕವನ್ನು ಓದುವುದೇ ಅಜ್ಜಿಯೊಂದಿಗೆ ಮಾತನ್ನಾಡುತ್ತಿರುವಂತೆ ಎಂದು ಕಲ್ಪಿಸಿಕೊಂಡೆನೇ? ಈ ಪ್ರಶ್ನೆಗಳಿಗೆ ಉತ್ತರಗಳು ನನಗೆ ಬೇಕಂತಿಲ್ಲ, ಈ ಪುಸ್ತಕ ಕೊಟ್ಟ ಆ ಅದ್ಭುತ ಓದಿನ ಅನುಭವಕ್ಕೆ ಕಾರಣಗಳನ್ನು ಹುಡುಕುವ ಅವಶ್ಯಕತೆಯಿಲ್ಲ. ಹೆಚ್ಚು ಕೊರೆಯೊಲ್ಲ ನಿಮ್ಮನ್ನು. ಈ ಪುಸ್ತಕದ ಸಣ್ಣ ಪರಿಚಯ ಇಲ್ಲಿ. ಮುಂದೆ ಓದಿ.

ಗುರುವಾರ, ಜುಲೈ 23, 2009

ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ?

ಸಮರಸ ವಿಶೇಷ ಅಂಕಣ ವಸ್ತುನಿಷ್ಠದಲ್ಲಿ....

ಇತ್ತೀಚೆಗೆ ಬಹಳಷ್ಟು ಕನ್ನಡ ಲೇಖನಗಳನ್ನು (ಸಾಮಾನ್ಯವಾಗಿ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಕೆಲವು ಪುಸ್ತಕರೂಪದಲ್ಲಿ ಪ್ರಕಟವಾದ ಕಥೆ ಕಾದಂಬರಿಗಳಲ್ಲಿ ಕೂಡ) ಆಂಗ್ಲ ಪದಗಳ ಮಿಶ್ರಣ ಕಂಡು ಬರುತ್ತಿದೆ ಅಲ್ಲವೇ? ಇದು ಸಮಸ್ಯೆಯೇ? ಅಥವಾ ಉತ್ತಮ ರೂಡಿಯೇ/ಬಳಕೆಯೇ? ಈ ರೂಢಿ, ಆ ಲೇಖನಕ್ಕೆ ಮೆರುಗು ಕೊಡುತ್ತದೆಯೇ? ಅಥವಾ ಓದುವ ಪ್ರಕ್ರಿಯೆಯನ್ನು ಜಟಿಲಗೊಳಿಸುತ್ತಾ? ಅಥವಾ ಕನ್ನಡ ಭಾಷೆಯನ್ನು ನಿಸ್ಸಾರಗೊಳಿಸುತ್ತಾ? (dilute ಮಾಡುತ್ತಾ). ಇದಕ್ಕೆ ಕಾರಣಗಳೇನು - ನಾವು ಇತ್ತೀಚೆಗೆ ಮಾತನಾಡುವಾಗ ಹೆಚ್ಚಿನ ಆಂಗ್ಲ ಪದಗಳನ್ನು ಬಳಸುವುದರಿಂದ ಬರವಣಿಗೆಯಲ್ಲಿಯೂ ಅದೇ ಚಲಾವಣೆಗೆ ಬರುತ್ತದೆಯೇ? ಅಥವಾ ಇದು ಒಂದು ಆಕರ್ಷಕ ಶೈಲಿಯೇ? ಅಥವಾ ಬಹಳಷ್ಟು ಆಂಗ್ಲ ಪದಗಳಿಗೆ ಸಮರ್ಪಕ ಕನ್ನಡ ಸಮಾನಾರ್ಥಕ ಪದಗಳಿಲ್ಲವೇ? ಹೀಗೊಂದು ಚಿಂತನೆ. ಮುಂದೆ ಓದಿ

ಶ್ರೇಷ್ಠ ಕಲಿಸಿಕೊಟ್ಟ ಹೊಸ, ಕನ್ನಡ ಚುಟುಕು ಪದ್ಯ

ಶ್ರೇಷ್ಠ ಗೊತ್ತಲ್ಲವೇ? ಹಿಂದೆ ಎರಡು ಬಾರಿ ನಿಮಗೆ ಪರಿಚಯ ಮಾಡಿಕೊಟ್ಟಿದ್ದೆ, ಹಾಳು ಮರೆವು ಎನ್ನುತ್ತೀರ, ಕೆಳಗಿನ ಕೊಂಡಿಗಳನ್ನು ಒತ್ತಿ ಒಮ್ಮೆ ಕಣ್ಣಾಡಿಸಿ.
ಆಂಗ್ಲ ಭಾಷೆಯ ಒಂದಕ್ಷರದ ’ಹೆಸರು’
ಶ್ರೇಷ್ಠ ಹನುಮಂತನಾಗಿದ್ದು!

ಇಷ್ಟೆಲ್ಲಾ ಆಗಲ್ಲಪ್ಪ ಅಂತೀರ?, ಶ್ರೇಷ್ಠ ನನ್ನ ಸೋದರಳಿಯ .ಯು ಕೆ ಜಿ ಯಲ್ಲಿ ಓದುತ್ತಾ ಇದ್ದಾನೆ. ಹೋದ ವಾರ ಇವರ ಶಾಲೆಯಲ್ಲಿ ಅದೇನೋ ’Rhymes Day' ಅಂತ ಮಾಡಿದ್ರು. ಅದಕ್ಕೆ ಎಲ್ಲರೂ ಮನೆಯಲ್ಲಿ ಯಾವುದಾದರೂ ಒಂದು ರೈಮ್ ಕಲಿತುಕೊಂಡು ಬರಲು ಹೇಳಿದ್ದರು. ಅವರು ಹೇಳಿಕಳಿಸ್ಸಿದ್ದಷ್ಟೆ. ನಾನು ಜಾಸ್ತಿ ವಿಚಾರ ಮಾಡದೆ ಹೆಡ್ಡನಂತೆ, ಅವನ ಪಠ್ಯದಲ್ಲೇ ಇರುವ, ಅವರ ಶಾಲೆಯಲ್ಲಿ ಆಗಲೇ ಹೇಳಿಕೊಟ್ಟಿರುವ ಒಂದು ಆಂಗ್ಲ ಪದ್ಯವನ್ನು ಅವನ ಬಾಯಲ್ಲೇ ಹೇಳಿಸಿ, ಕಲಿಸಿಕೊಟ್ಟೆನೆಂದು ಸಂತೋಷಗೊಂಡು ಸುಮ್ಮನಾದೆ. ಅವ ಮುಂದಿನ ದಿನ ಬಂದು ಅಯ್ಯೋ, ಬೇರೆ ರೈಮ್ ಕಲಿತುಕೊಂಡು ಬರಬೇಕಂತೆ ಎಂದಾಗಲೇ ನನಗೆ ಗೊಂದಲ ಶುರು ಆಗಿದ್ದು. ಆಯ್ಯೋ ಬಿಡಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ಬೇಡಿ.

ಅವನ ಶಾಲೆಯಲ್ಲಿ ಅವನ ಗೆಳತಿ ತನ್ವಿ, ಒಂದು ಕನ್ನಡ ರೈಮ್ (ಚುಟುಕು ಪದ್ಯವನ್ನು) ಕಲಿತು, ಎಲ್ಲಾ ಮಕ್ಕಳಿಗೂ ಕಲಿಸಿ ಕೊಟ್ಟಿದ್ದಾಳೆ. ಬಹಳ ಸುಂದರವಾಗಿದೆ, ಇನ್ನು ಮಕ್ಕಳು ಅದನ್ನು ನಾಟಕೀಯವಾಗಿ ಹಾಡಿದರಂತೂ ಹೊಗಳಲು ಪದಗಳಿಲ್ಲ. ಇಲ್ಲಿಯವರೆಗೂ ಈ ಚುಟುಕು ಪದ್ಯ ನನ್ನ ಗಮನಕ್ಕೆ ಬಂದಿರಲಿಲ್ಲ,

ಈ ರೀತಿ ಇದೆ ಆ ಪದ್ಯ,

ಪೆನ್ಸಿಲ್ ಗೊಂದು ಮೊದಲನೆ ಶತ್ರು, ಅಳಿಸೋ ರಬ್ಬರ್ರು,
ತಪ್ಪು ಬರೆದರೆ ಒಪ್ಪೋದಿಲ್ಲ, ಎಷ್ಟೇ ಹೇಳಿದ್ರೂ..

ಪೆನ್ಸಿಲ್ ಗೊಂದು ಎರಡನೆ ಶತ್ರು, ಎರೆಯೋ ಮೆಂಡರ್ರು,
ಮೆಂಡ್ ಆಗಿರದು, ಬಿಡೋದೆ ಇಲ್ಲ ಎಷ್ಟೇ ಬಡ್ಕೊಂಡ್ರು..


ಇಷ್ಟು ಶ್ರೇಷ್ಟ ಹೇಳಿದರೆ, ಈ ಮೂರನೆ ಪಂಕ್ತಿ ಹೀಗಿರಬಹುದೆಂದು ನಾನು ಊಹೆ ಮಾಡ್ತಾ ಇದ್ದೆ..

ಪೆನ್ಸಿಲ್ ಗೊಂದು ಮೂರನೆ ಶತ್ರು, ಬರೆಯೋ ಪೇಪರ್ರು
ಪೂರ್ತಿ ಬರೆಯದೆ ಬಿಡೋದೆ ಇಲ್ಲ, ಎಷ್ಟೇ ಸುಸ್ತಾದ್ರು.. ಉಫ್...


ಈ ಪದ್ಯನಾ ಮಕ್ಕಳು ಎಷ್ಟು ಖುಷಿ ಖುಷಿ ಇಂದ ಹೇಳ್ತವೇ ಅಂತೀರಾ.. ನಿಮ್ಮ ಮನೆಯ ಮಕ್ಕಳಿಗೂ ಗೊತ್ತಿಲ್ಲದಿದ್ದರೆ ಕಲಿಸಿಕೊಡಿ..

ಇನ್ನು ನಮ್ಮ ಶ್ರೇಷ್ಠ, ಅವನಿಗೂ ಒಂದು ಹೊಸ ಕನ್ನಡ ಪದ್ಯ ಕಲಿಸಿ ಕೊಡುವುದಕ್ಕೆ ನನಗೆ ದುಂಬಾಲು ಬಿದ್ದಿದಾನೆ. ಆಗಲೆ, ’ನಾಯಿ ಮರಿ ನಾಯಿ ಮರ”, ’ಒಂದು ಎರಡು ಬಾಳೆಲೆ ಹರಡ”, ಇನ್ನೂ ಕೆಲವು ಪದ್ಯಗಳನ್ನು ಆಗಲೇ ಕೆಲವು ಮಕ್ಕಳು ಹೇಳಿ ಆಗಿದೆಯಂತೆ. ಬಣ್ಣದ ತಗಡಿನ ತುತ್ತೂರಿ, ಹುಲಿ ಬೇಟೆ ಇವು ಯಾವುವೂ ಬೇಡವಂತೆ. ಏಕೆಂದರೆ ಅವನ ಷರತ್ತು, ಪದ್ಯ ಚಿಕ್ಕದಾಗಿರಬೇಕಂತೆ.

ಕೊನೆಗೆ ಜಿ ಪಿ ರಾಜರತ್ನಂ ರವರದ್ದೇ ಆದ,

ಝಣ! ಝಣ! ಝಣ!
ಜೇಬು ತುಂಬ ಹಣ!
ಮೇಲಕೆತ್ತಿ
ಬಿಡಲು ಸದ್ದು
ಠಣ್ ! ಠಣ! ಠಣ!

ನದಿಯಲೊಂದು ಬಕ
ಮುದುರಿಕೊಂಡು ಮೊಕ
ಕಾಲನೆತ್ತಿ
ಕುಣಿಯುತಿತ್ತು
ತಕಾ! ತಕ್ಕ! ತಕ!

ಸುತ್ತ ಹಸುರು ವನ!
ನಡುವೆ ಮೇವ ದನ!
ಮರದ ಬಳಿ!
ಗೊಲ್ಲನುಲಿ!
ತಾನ ! ನಾನ! ನನ!

ಪದ್ಯವನ್ನು ಹೇಳಿಕೊಡಲು ಪ್ರಯತ್ನಿಸುತ್ತಿದ್ದೇನೆ.

ನಿಮ್ಮ ಬಳಿ ಯಾವುದಾದರೂ ಇನ್ನೂ ಸರಳವಾದ, ಸಣ್ಣದಾದ, ಹೆಚ್ಚು ಆಸಕ್ತಿ ಮೂಡಿಸುವ ಪದ್ಯ ಇದ್ರೆ ಹೇಳ್ರೀ!

ಸೋಮವಾರ, ಜುಲೈ 20, 2009

ಸಮರಸದಲ್ಲಿ ಬರಹ ವಾಸುರವರ ಸಂದರ್ಶನ

ಲಿಪ್ಯಂತರ ಆಧಾರಿತ ಬರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮೊದಲ ಬಾರಿಗೆ ಕನ್ನಡವನ್ನು ಗಣಕತಂತ್ರಕ್ಕೆ ಸುಲಭವಾಗಿ ಹರಿಸಿದ ಹರಿಕಾರರು ಶೇಷಾದ್ರಿ ವಾಸು. ಗಣಕ ತಂತ್ರದಲ್ಲಿ ಕನ್ನಡ ಬಳಸುವ ಬಹುಷಃ ಎಲ್ಲರಿಗೂ ಬರಹದ ಅನುಭವ ಆಗಿರುತ್ತದೆ. ಈಗಿನ ತಂತ್ರಜ್ಞರಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಬರಹ ತಂತ್ರಜ್ಞಾನ ಮತ್ತು ವಾಸುರವರು ಮಾದರಿಯಾಗಬಹುದು, ಹೆಚ್ಚಿನ ಸ್ಪೂರ್ಥಿ, ಉತ್ತೇಜನಗಳನ್ನು ನೀಡಬಹುದು ಎಂದೆನೆಸಿ ಆ ಉತ್ಪನ್ನದ ಹಿಂದಿನ ಶ್ರಮ, ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಅವರಿಗಿದ್ದ ಪ್ರೇರಣೆ, ಇಂದಿನ ದಿನದ ಕನ್ನಡ ತಂತ್ರಜ್ಞಾನದ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಬರಹ ವಾಸುರವರಲ್ಲಿ ಕೇಳಬೇಕೆಂಬುದು ಸಮರಸ ಇಚ್ಛೆಯಾಗಿತ್ತು. ವಾಸುರವರ ಕರ್ಮಭೂಮಿ ಅಮೇರಿಕ ಆಗಿರುವುದರಿಂದ ನಾವು ಸಂದರ್ಶನಕ್ಕೆ ತಯಾರಿಸಿದ್ದ ಪ್ರಶ್ನೆಗಳನ್ನು ವಿ - ಅಂಚೆ ಮೂಲಕ ಕಳುಹಿಸಿ ಕೊಟ್ಟೆವು. ವಾಸುರವರು ತಮ್ಮ ಕಾರ್ಯನಿರತ ಜೀವನದ ಹೊರತಾಗಿಯೂ ನಮ್ಮ ಸಂದರ್ಶನಕ್ಕೆ ಸ್ಪಂದಿಸಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಶನವನ್ನು ಎರಡು ಭಾಗದಲ್ಲಿ ಓದುಗರಿಗೆ ಒದಗಿಸಲಾಗುತ್ತದೆ. ವಾಸುರವರ ಬಹು ಸಣ್ಣ ಹಿನ್ನಲೆಯೊಂದಿಗೆ ಸಂದರ್ಶನದ ಮೊದಲನೆ ಸಂಚಿಕೆ ನಿಮ್ಮ ಮುಂದೆ. ಮುಂದೆ ಓದಿ

ಸೋಮವಾರ, ಜುಲೈ 13, 2009

ಸಮರಸ ಸಂಪಾದಕೀಯದಲ್ಲಿ : "ಸ್ವಹಿತಾಸಕ್ತಿಗೆ ಇತರೆ ಆಸಕ್ತಿಗಳು"

ನಾವು ಮಾಡುವ ಕೆಲಸಗಳು ಬಹಳಷ್ಟು ವಿಧ. ಹೆಚ್ಚಿನ ಸಮಯದಲ್ಲಿ ನಾವು ಮಾಡುವ ಕೆಲಸ ನಮ್ಮ ಆಸಕ್ತಿಗೆ ತದ್ವಿರುದ್ಧವಾಗಿರುತ್ತದೆ. ಆಗ ನಾವು ಮಾಡುವ ಕೆಲಸದ ಬಗ್ಗೆ ಕೊರಗುವುದು ಸಾಮಾನ್ಯ. ನಮ್ಮ ಯೋಗ್ಯತೆಗೆ ಇನ್ನೂ ಒಳ್ಳೆಯ ಕೆಲಸ ಮಾಡಬೇಕೆಂಬುದು, ನಾವು ನಮ್ಮ ವೃತ್ತಿಜೀವನದಲ್ಲಿ ಎಷ್ಟೇ ಬೆಳೆದರೂ ನಮ್ಮ ಜೊತೆಯಲ್ಲೇ ಉಳಿದುಕೊಳ್ಳುವಂತಹ ಕೊರಗು. ಈ ಕೊರಗು ಮನುಷ್ಯ ವೃತ್ತಿಜೀವನದಲ್ಲಿ ವೃದ್ಧಿ ಹೊಂದುವುದಕ್ಕೆ ಕೆಲವೊಮ್ಮೆ ಸಹಕರಿಸಿದರೂ, ಸಾಮಾನ್ಯವಾಗಿ ಕೊರಗುವುದು ಮಾನಸಿಕ ಯಾತನೆಗೆ ಎಡೆ ಮಾಡಿಕೊಡುತ್ತದೆ.ಒಂದು ಕಾಲವಿತ್ತು, ಹೆಚ್ಚು ಹಣ ಸಂಪಾದನೆ ಮಾಡುವೆ ಕೆಲಸವನ್ನು ಎಲ್ಲರೂ ಎದುರು ನೋಡುತ್ತಿದ್ದರು. ಕಾಲ ಬದಲಾದಂತೆ ಹಣದ ಮಹತ್ವ ಎಷ್ಟೇ ಹೆಚ್ಚಾದರೂ, ಮನುಷ್ಯನ ಸಂತೋಷಕ್ಕೆ ಅದು ಎಷ್ಟೇ ಸವಲತ್ತುಗಳನ್ನು, ಭೋಗ ವಸ್ತುಗಳನ್ನು ಕೊಂಡು ಕೊಟ್ಟರೂ, ತಾನು ಮಾಡುತ್ತಿರುವ ಕೆಲಸದ ಮಹತ್ವ ಹಣಕ್ಕಿಂತಾ ಹೆಚ್ಚಾಗುತ್ತಾ ಹೋಯಿತು. ಮುಂದೆ ಓದಿ

ಸೋಮವಾರ, ಜುಲೈ 06, 2009

ರಸ್ತೆ, ವಾಹನಗಳ ರಣರಂಗವೇ?

ನೀವು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸುತ್ತೀರಾ? ಅಥವಾ ಸುಮ್ಮನೆ ವಾಹನ ದಟ್ಟನೆಯನ್ನು ಶಪಿಸುತ್ತೀರಾ? ಮಧುರ್ ರಾಜ್ ಬೆಂಗಳೂರಿನಲ್ಲಿ ಸಂಚಾರದ ಅನುಭವದ ಮೇಲೆ ’ಸಮರಸ ವಿಶೇಷ ಅಂಕಣ - ಭಾವತರಂಗದಲ್ಲಿ’ ಬೆಳಕು ಚೆಲ್ಲುತಾರೆ.

ಜನ ಸಂಖ್ಯಾಸ್ಫೋಟದಿಂದ, ವಾಹನಾ ಸಂಖ್ಯಾಸ್ಪೋಟ ಉಂಟಾಗುವುದು ಸಹಜ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ, ವಾಹನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುವುದು ಒಂದು ಸಾಹಸವೇ ಸರಿ. ನಾವು ಸ್ವತಃ ಚಾಲಕರಾಗಿದ್ದರೆ, ನಮ್ಮ ಗುರಿಯನ್ನು ತಲುಪಿದ ನಂತರ, ಈ ಸಾಹಸದ ಅನುಭವ ಹೆಚ್ಚಿನ ರೀತಿಯಲ್ಲಿ ವ್ಯಕ್ತವಾಗುವುದು. ವಾಹನ ಚಾಲನೆ ಒಂದು ಅಹ್ಲಾದಕರವಾದ ಅನುಭವವಾಗಿರಬೇಕು. ಪಯಣ ಸಾಹಸವಾದಲ್ಲಿ, ಈ ಅನುಭವ ಕುಂದಿ ಹೋಗುವುದು. ಇಂತಹ ಅಹಿತಕ್ಕೆ ರಸ್ತೆ ನಿಯಮ ಉಲ್ಲಂಘನೆ, ರಸ್ತೆ ದುರಸ್ತೆ, ಅಸಹನೆ, ಅವ್ಯವಸ್ತಿತ ವಾಹನ ಚಾಲನೆ, ಅಜ್ಞಾನ ಹೀಗೆ ಕಾರಣ ಹಲವು. ಈ ಅಂಕಣವನ್ನು ಓದಿದ ನಂತರ ನಿಮ್ಮ ಚಾಲನೆ, ಆಹ್ಲಾದಕರ ಹಾಗು ಅಪಾಯಕಾರಿಯಾಗದಿರುವಂತೆ ಪ್ರಯತ್ನಿಸುವೆ. ಮುಂದೆ ಓದಿ

ಶುಕ್ರವಾರ, ಜುಲೈ 03, 2009

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಹಿರಿಯ ಪ್ರಾಥಮಿಕ ಶಾಲೆಯ ಒಂದು ತರಗತಿಯಲ್ಲಿ ಒಂದು ಪಾಠ ನನಗೆ ಬಹಳ ಇಷ್ಟವಾಗಿತ್ತು. ತಿಳಿ ಹಾಸ್ಯದಿಂದ ಕೂಡಿದ ಆ ಪಾಠ, ಬಹಳ ಆಸಕ್ತಿ ಮೂಡಿಸಿದ್ದ ಕೆಲವೇ ಪಾಠಗಳಲ್ಲಿ ಒಂದು. ಅದನ್ನು ಬರೆದಿದ್ದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು. ಆ ಪಾಠವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಬರೆದಿರುವ ಅಪೂರ್ವ ಪ್ರವಾಸ ಕೃತಿ “ಅಮೇರಿಕಾದಲ್ಲಿ ಗೊರೂರು” ನಿಂದ ಆರಿಸಿದ್ದು. ಮುಂದೆ ಓದಿ


ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ

ಒಮ್ಮೆ ಕನ್ನಡದ ಒಂದು ಪ್ರಖ್ಯಾತ ಅಂತರ್ಜಾಲ ತಾಣದಲ್ಲಿ ಒಬ್ಬರು ಬರೆದಿದ್ದರು. ಆ ಬರವಣಿಗೆ ಈ ರೀತಿ ಇತ್ತು. ಅವರು ಆವರಣ ಓದಿದ್ದಾರೆ. ತಮ್ಮ ವಿಚಾರಧಾರೆಗೆ ಬಹಳ ಹೋಲಿಕೆಯಿದ್ದ ಕೃತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಭೈರಪ್ಪನವರ ಇತರ ಕೃತಿಗಳನ್ನು ಬಹಳವಾಗಿ ಮೆಚ್ಚಿದ್ದಾರೆ. ಹೀಗೆ ಕುತೂಹಲದಿಂದ ಕನ್ನಡ ನಾಡಿನ ಇತರ ಸಾಹಿತಿಗಳ, ಆವರಣದ ಬಗೆಗಿನ ಅಭಿಪ್ರಾಯಗಳನ್ನು ತಿಳಿದಿಕೊಳ್ಳುವ ತವಕ. ಇವರಿಗೆ ಮೊದಲು ಪೂರ್ಣಚಂದ್ರ ತೇಜಸ್ವಿ ಕೂಡ ನೆಚ್ಚಿನ ಕೃತಿಕಾರರೆಂದು ಕರೆದುಕೊಳ್ಳುತ್ತಾರೆ. ಆದರೆ ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಒಂದು ಹೇಳಿಕೆ “undigestible stuff” (ಜೀರ್ಣವಾಗದ ಸಂಗತಿಗಳು) ಇವರಿಗೆ ಇಷ್ಟವಾಗುವುದಿಲ್ಲ. ಇದು ಸಹಜ. ಆದರೆ ಇವರು ಒಂದು ಹೆಜ್ಜೆ ಮುಂದೆ ಹೋಗಿ, ಭೈರಪ್ಪ ಮತ್ತು ತೇಜಸ್ವಿಯವರ ಕೃತಿಗಳ ಸಮಗ್ರ ಅವಲೋಕನ ಮಾಡಿ ಭೈರಪ್ಪನವರೇ ಉತ್ತಮ ಎಂಬ ತೀರ್ಪು ಕೊಟ್ಟುಬಿಡುತ್ತಾರೆ. ಇದಕ್ಕೆ ಇವರು ಹೇಳುವುದು ಹೀಗೆ.. ತೇಜಸ್ವಿ ಬರೆದಿದ್ದೇನು? ಕೆಲವು ಅನುವಾದ, ಇನ್ನು ಕೆಲವು ಪಕ್ಷಿ ಪುಕ್ಕದ ಕಥೆ, ಒಂದು ಪ್ರವಾಸ ಕಥನ ಅಷ್ಟೆ. ಆದರೆ ಭೈರಪ್ಪನವರು ಇತಿಹಾಸಕಾರ, ತತ್ವಜ್ಞಾನಿ. ಬಹಳ ಸಂಶೋಧನೆ ಮಾಡಿ ಬರೆಯುತ್ತಾರೆ. ಅದಕ್ಕೆ ಭೈರಪ್ಪ ತೇಜಸ್ವಿಗಿಂತ ಉತ್ತಮ ಎನ್ನುತ್ತಾರೆ. ಎಷ್ಟು ಎಳಸು ವಾದ ಅನ್ನಿಸುವುದಿಲ್ಲವೇ? ಭೈರಪ್ಪ ಮತ್ತು ತೇಜಸ್ವಿ ಇಬ್ಬರ ಕ್ಷೇತ್ರ ಸಂಪೂರ್ಣ ಬೇರೆ ಬೇರೆ. ತಮ್ಮ ಕ್ಷೇತ್ರಗಳಲ್ಲಿ ಇಬ್ಬರೂ ಅಭೂತಪೂರ್ವ ಕೃತಿಗಳನ್ನು ಬರೆದಿದ್ದಾರೆ. ಭೈರಪ್ಪ ಕೆಲವು ಕೃತಿಗಳನ್ನು ಬರೆಯಬೇಕಾದರೆ ಎಷ್ಟೋ ವರ್ಷಗಳ ಕಾಲ ಹಿಮಾಲಯದಲ್ಲಿದ್ದು ಸಂಶೋಧನೆ ಮಾಡಿ ಬರೆದಿದ್ದಾರೆ. ತೇಜಸ್ವಿ ಪಕ್ಷಿಗಳ ಬಗ್ಗೆ ಬರೆಯಬೇಕಾದರೆ ಕಾಡು ಮೇಡುಗಳನ್ನು ಸುತ್ತಿ, ಪಕ್ಷಿಗಳನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿ ಬರೆಯುತ್ತಾರೆ. ಯಾವುದೋ ಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಸುತ್ತ ಕಾಡು ಬೆಳಸಿ, ಕೆರೆ ಕಟ್ಟಿ ಪಕ್ಷಿಗಳನ್ನು ಆಕರ್ಷಿಸಿ ಅವುಗಳ ಅಧ್ಯಯನಕ್ಕೆ ಬಹಳ ಶ್ರಮ ಪಡುತ್ತಾರೆ. ಹೀಗೆ ಇಬ್ಬರದೂ ಶ್ರಮದ ಹಾದಿಯೇ. ನನಗೆ ಒಬ್ಬರು ವಿಭೂತಿಪುರುಷರಾದರು ಎಂಬ ಮಾತ್ರಕ್ಕೆ ಇಬ್ಬರನ್ನೂ ಒಂದು ವಾಕ್ಯದಲ್ಲಿ ವಿಮರ್ಶೆ ಮಾಡಿ ತೀರ್ಪು ಕೊಡುವುದು ಎಷ್ಟು ತಪ್ಪಲ್ಲವೇ? ಆಷ್ಟಕ್ಕೂ ಆ ಬರಹಗಾರರು ಬರೆಯಬೇಕಾಗಿದ್ದುದು ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಹೇಳಿಕೆ ತಪ್ಪು ಎಂದು. ಅದರ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಿದ್ದರೆ ಎಲ್ಲರೂ ಒಪ್ಪಿಕೊಳ್ಳಬಹುದಿತ್ತು! ಮುಂದೆ ಓದಿ

೩೨ ನೇ ವಿಜ್ಞಾನೋತ್ಸವ ನಡೆಯುತ್ತಿದೆ — ನೆನಪಿರಲಿ

ದಿವಂಗತ ಪದ್ಮಭೂಷಣ ಡಾ ಹೆಚ್ ನರಸಿಂಹಯ್ಯನವರಿಂದ ಸ್ಥಾಪಿತವಾದ ಬೆಂಗಳೂರು ವಿಜ್ಞಾನ ವೇದಿಕೆಯ ವತಿಯಿಂದ ವಿಜ್ಞಾನೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಖ್ಯಾತ ವಿಜ್ಞಾನಿಗಳ ಉಪನ್ಯಾಸಗಳಿರುತ್ತವೆ.

ಸ್ಥಳ: ಡಾ ಹೆಚ್ ಎನ್ ಸಭಾಂಗಣ
ನ್ಯಾಶನಲ್ ಕಾಲೇಜು
ಬಸವನಗುಡಿ
ದಿನಾಂಕ: ೦೧- ೦೭- ೨೦೦೯ ರಿಂದ ೩೧-೦೭-೨೦೦೯ ಪ್ರತಿದಿನ
ಸಮಯ: ಸಂಜೆ ೬ ಘಂಟೆಗೆ

ಬಹಳಷ್ಟು ಕಾರ್ಯಕ್ರಮಗಳ ಭಾಷಾ ಮಾಧ್ಯಮ ಆಂಗ್ಲವೇ ಆದರೂ ಕನ್ನಡಕ್ಕೆ ಕೊರತೆಯಿಲ್ಲ. ಸ್ವಾಗತ ಭಾಷಣ ವಾಗುವುದು ಆಪ್ತ ಕನ್ನಡದಲ್ಲೇ. ಬಹಳಷ್ಟು ಉಪನ್ಯಾಸಗಳು ಕನ್ನಡದಲ್ಲೂ ಇವೆ. ಕನ್ನಡದ ಕಂಪು ಇದ್ದೇ ಇರುತ್ತದೆ.

ಬೇರೆ ಆಯೋಜಕರು ಈ ಕಾರ್ಯಕ್ರಮ ಆಯೋಜಿಸಿದ್ದರೆ ಸಾವಿರಾರು ರೂಗಳನ್ನೂ ದಂಡ ತೆತ್ತಿದ್ದರೂ ಇಂತಹ ಬಹಳಷ್ಟು ಉಪನ್ಯಾಸಗಳನ್ನು ಕೇಳಲು ಸಿಗುವುದಿಲ್ಲ. ಇಂತಹ ಸದವಕಾಶವನ್ನು ವಿಜ್ಞಾನ ಆಸಕ್ತರು ತಪ್ಪಿಸಿಕೊಳ್ಳಬಾರದೆಂದು ಸಮರಸದ ಆಶಯ. ಕಾರ್ಯಕ್ರಮ ಪಟ್ಟಿ

ನೆನ್ನೆ ವಿಜ್ಞಾನೋತ್ಸವದಲ್ಲಿ

ಡಾ ಎಸ್ ಸಿತಾರಾಮ ಅಯ್ಯಂಗಾರ್ ರವರ ವಿಜ್ಞಾನ ಮತ್ತು ಅಂತರ್ಜಾಲ ಸಲಕರಣೆಗಳು (Science and Cybertools) ಎಂಬ ವಿಷಯದ ಮೇಲೆ ಉಪನ್ಯಾಸವಿತ್ತು. (ಇದು ವಿಜ್ಞಾನೋತ್ಸವದ ೨೨೫೧ ನೇ ವಿಜ್ಞಾನ ಉಪನ್ಯಾಸ).ಮುಂದೆ ಓದಿ

ಸೋಮವಾರ, ಜೂನ್ 29, 2009

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

ಸಮರಸ ವಿಶೇಷ ಸಂಪಾದಕೀಯದಲ್ಲಿ, ಕನ್ನಡಕ್ಕೆ ಬೇಕಾಗುರುವ ಅಂತರ್ಜಾಲ ಕೈಪಿಡಿ ಬಗ್ಗೆ ರವೀಶ ರವರು ಚರ್ಚಿಸುತ್ತಾರೆ.ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು ಆಗಲೇ ಈ ಗು೦ಪಿನಲ್ಲಿರುವ ಪದವೊ೦ದನ್ನು ಉಪಯೋಗಿಸುತ್ತಿದ್ದೇನೆ ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೀರಾ? ಆದರೆ ಮಾಹಿತಿ ತ೦ತ್ರಜ್ನಾನ(IT), ಅ೦ತರ್ಜಾಲ(Internet) ದ ಬಗ್ಗೆ ಕನ್ನಡದಲ್ಲಿರುವ ಪರಿಭಾಷೆ ತಿಳಿಯದಿರುವವನಿಗೆ ಈ ಪದಗಳನ್ನು ಕೇಳಿ ಯಾವ ಪದವನ್ನು ಉಪಯೋಗಿಸಬೇಕೆ೦ದು ಗೊ೦ದಲವಾಗುವುದು ಸಹಜ. ಹಾಗೆಯೇ ನಮ್ಮಲ್ಲಿ ಹೊಸ ತ೦ತ್ರಜ್ನಾನಕ್ಕೆ ಬೇಕಾದ ಹೊಸ ಪದಗಳ ಬಗ್ಗೆ ಒ೦ದು ಅಧಿಕೃತವಾದ ಕೋಶವಿಲ್ಲದಿರುವುದು ಗಮನ ಹರಿಸಬೇಕಾದ ಸ೦ಗತಿ. ಮುಂದೆ ಓದಿ

ರಾಜಕೀಯ ವಿಭಾಗದ ಅಂಕಣದಲ್ಲಿ ರಾಜ್ ರವರು ಕೇಂದ್ರ ಬಿ ಜೆ ಪಿ ಯ ಅವಾಂತರದ ಬಗ್ಗೆ ಬರೆಯುತ್ತಾರೆ
ನೇತಾರನಿಗೆ ಹತ್ತಾರು ವರ್ಷ ಪುಡಾರಿಗೆ ಐದೇ ವರ್ಷ

ಸ್ವಾತಂತ್ರಾ ನಂತರ ಭಾರತ ದೇಶಕ್ಕೆ ’ಕಾಂಗ್ರೆಸ್ ಪಕ್ಷ’ ಅಭಿಷಿಕ್ತ ದೊರೆ. ಭ್ರಷ್ಟ ನಾಯಕರು ದಕ್ಷ ನಾಯಕರನ್ನು ಮೀರಿಸಿ ಬೆಳೆದು ನಿಂತಿದ್ದ ವಾತಾವರಣ ದೇಶದಲ್ಲಿ. ದೇಶದ ಹೆಚ್ಚಿನೆಡೆಗಳಲ್ಲಿ ಅರಾಜಕತೆಯ ರಾಜ್ಯಭಾರ. ಮತಕ್ಕಾಗಿ ಅಲ್ಪಸಂಖ್ಯಾತರ ತುಷ್ಟೀಕರಣ.ಕುಟುಂಬ ರಾಜಕಾರಣ. ಹೀಗೆ ಹಲವು ಹತ್ತಾರು ಕಾರಣಗಳಿಂದ ಕಾಂಗ್ರೆಸ್ ಗೆ ಪರ್ಯಾಯವಾಗಿ ಮತ್ತೊಂದು ರಾಷ್ಟ್ರೀಯ ಪಕ್ಷ ಜನಿಸಬೇಕೆಂಬ ಅಗತ್ಯ ಆ ದಿನಗಳಲ್ಲಿತ್ತು.ಮುಂದೆ ಓದಿ

ಗುರುವಾರ, ಜೂನ್ 25, 2009

ನಾವು ಪೋಷಕರು..

ನಾವು ಪೋಷಕರು ಮಕ್ಕಳ ಬಗ್ಗೆ ನಡೆದುಕೊಳ್ಳುವ ರೀತಿ ಯಾವಾಗಲು ಸರಿಯೇ? ಸಮರಸ ವಿಷೇಶ ಅಂಕಣ "ವಸ್ತುನಿಷ್ಠ" ದಲ್ಲಿ ಓದಿ.

ತಂದೆ ತಾಯಿ ಮಕ್ಕಳನ್ನು ಕಷ್ಟ ಪಟ್ಟು, ಹೆತ್ತು-ಹೊತ್ತು, ಬೆಳೆಸಿ, ಓದಿಸಿ ಮುಂದೆ ತರುತ್ತಾರೆ, ಆದರೆ ಮಕ್ಕಳು ಅದೇ ಪ್ರೀತಿಯನ್ನು ತಂದೆ ತಾಯಿಗಳಿಗೆ ಧಾರೆಯೆರೆಯುವುದಿಲ್ಲ, ಮಕ್ಕಳು ತಂದೆ ತಾಯಿಗಳಿಂದ ದೂರವಾಗಿಬಿಡುತ್ತಾರೆ ಎಂಬ ಕೂಗು-ಕೊರಗು ಹಿಂದಿನಿಂದ ಇದೆ.ಇದಕ್ಕೆ ಬಹಳಷ್ಟು ಸಮಯದಲ್ಲಿ ಪ್ರೀತಿ, ತತ್ವ ಮತ್ತು ತರ್ಕಗಳ ಆಧಾರವಿರದೆ ಸಿನಿಕ ಭಾವುಕತೆಯ ಮೇಲೆ ಕೇಳಿ ಬರುವಂತಹ ದೂರು. ಇಂತಹ ಒಂದು ಸೂಕ್ಷ್ಮ ವಿಷಯವನ್ನು ಇಂದು ವಸ್ತುನಿಷ್ಠವಾಗಿ ವಿಶ್ಲೇಷಿಸೋಣ.

ಮೊದಲನೆಯದಾಗಿ ನಾವು ನಮ್ಮ ಮಗುವನ್ನು ಹೆತ್ತು ಹೊತ್ತು ಬೆಳೆಸುವುದರಲ್ಲಿ (ಯಾವುದೇ ಮಗುವನ್ನು ಬೆಳೆಸುವುದರಲ್ಲಿ) ಕಷ್ಟ ಎಂಬುದು ಅತಿಶಯದ, ಸತ್ಯಕ್ಕೆ ದೂರವಾದ ಮಾತು. ನಮಗೆ ಒಂದು ಮಗು ಬೇಕೆನ್ನಿಸಿದರೆ ನಮಗೆ ಮಗುವಿನ ಅವಶ್ಯಕತೆಯಿರುತ್ತದೆ. ಇನ್ನು ಮಕ್ಕಳ ಆಟ ಪಾಠ, ಅವುಗಳ ಮುಗ್ಧತೆ ನಮ್ಮ ಕಷ್ಟ ದುಖ: ಗಳನ್ನು ಮರೆಸುತ್ತವೆ. ಸಾಮಾನ್ಯವಾಗಿ ಯಾವ ಮಗುವೂ ತಾನು ೧೦-೧೨ ವರ್ಷ ದಾಟುವವರೆಗೆ ಮುಗ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಪ್ರೀತಿ ತೋರಿ ಬೆಳೆಸುವುದು ಪಾಲಕರ ಕರ್ತವ್ಯ. ಕರ್ತವ್ಯ ಎನ್ನುವುದಕ್ಕಿಂತ ಅದು ಪಾಲಕರಿಗೆ ಸಂತಸ ತರುವ ಕಾಯಕವಾಗಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಪಾಲಕರಿಗೆ ಕೊಡುವ ಸಂತೋಷವನ್ನು ನೆನಪಿನಲ್ಲಿಟ್ಟರೆ ಜೀವನ ಪರ್ಯಂತ ಆ ಸಂತೋಷವನ್ನು ಮೆಲುಕಿ ಹಾಕಿ ಕಾಲ ಕಳೆಯುವಷ್ಟಿರುತ್ತದೆ. ನಮ್ಮಲ್ಲಿ ಇನ್ನೊಂದು ತಪ್ಪು ಕಲ್ಪನೆಯಿದೆ. ಮಕ್ಕಳನ್ನು ಸಂತೋಷವಾಗಿ ಬೆಳೆಸುವುದಕ್ಕೆ ಅಪಾರ ದುಡ್ಡಿರಬೇಕೆಂಬುದು! ಇದು ಅಕ್ಷರಷ: ತಪ್ಪು. ಮಕ್ಕಳಿಗೆ ಬೇಕಾಗಿರುವು ನಿಮ್ಮ ಸನಿಹ, ಪ್ರೀತಿ. ಮುದ್ದೆ ಮಾಡುವ ಕೋಲಿನಿಂದಲೇ ನೀವು ಅವನಿಗೆ ಕ್ರಿಕೆಟ್ ಆಟ ಆಡಿಸಿ ಸಂತಸಪಡಿಸಬಹುದು.ಹೌದು ನಮ್ಮ ಶಕ್ತಿಗಾನುಸಾರವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ. ಆದುದರಿಂತ ಅಷ್ಟು ಹಣವನ್ನು ಸಂಪಾದಿಸಿ, ನಾವು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಮೇಲೆ ನಾವು ಮಗುವನ್ನು ಹೊಂದುವ ಯೋಚನೆ ಮಾಡುವುದು ಒಳಿತು. ಒಂದು ಸುಖ ಬೇಕಾದರೆ ಹಿನ್ನಲೆಯಲ್ಲಿ ಸ್ವಲ್ಪ ಕಷ್ಟ ಪಡಬೇಕಾದೀತು. ಆದರೆ ಆ ಕಷ್ಟಕ್ಕೆ ಮಕ್ಕಳನ್ನು ದೂರುವುದು ಸರಿಯಲ್ಲ.ನಮ್ಮ ಶಕ್ತಿಗನುಗುಣವಾಗಿ ಕಡಿಮೆ ಮಕ್ಕಳನ್ನು ಹೊಂದುವುದು ಮತ್ತೊಂದು ನೆನಪಿನಲ್ಲಿಡಬೇಕಾದ ಅಂಶ. ಮಕ್ಕಳೊಂದಿಗೆ ನಾವೂ ಮಕ್ಕಳಾಟವಾಡಬಹುದಾದ ಸವಿ ಸಮಯ ಇದು. ಮುಂದೆ ಓದಿ

ಬುಧವಾರ, ಜೂನ್ 24, 2009

ಪ್ರಶ್ನೆಪತ್ರಿಕೆ ಬಟಾ ಬಯಲು!

ಸಮರಸ ಹಾಸ್ಯ ಅಂಕಣದಲ್ಲಿ ಸಂಪಾದಕರು, ಪರೀಕ್ಷೆಗೆ ಮುಂಚೆ ಪ್ರಶ್ನೆ ಪತ್ರಿಕೆ ಬಯಲಾಗದೆ ಇರುವುದಕ್ಕೆ ಏನು ಮಾಡಬೇಕೆಂಬ ಚರ್ಚೆ ಇಲ್ಲಿದೆ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೆಶ್ನೆಪತ್ರಿಕೆ ಪರೀಕ್ಷೆಗೆ ಮುಂಚಿತವೇ ಬಯಲಾದ ಘಟನೆಯನ್ನು ವಿಷ್ಲೇಶಿಸಲು ಸಮರಸ ಟೀವಿ ಯಲ್ಲಿ ವಿಶೇಷ ಚರ್ಚೆಯನ್ನು ಏರ್ಪಡಿಸಿದ್ದೆವು. ಚರ್ಚೆಯಲ್ಲಿ ಭಾಗವಹಿಸಿದ್ದ (ನ)ಗಣ್ಯರು (ಕು)ಖ್ಯಾತ ರಾಜಕಾರಿಣಿ ಢಾ.ಕು.ಶಾ ಕುಮಾರ್, (ಕು)ಖ್ಯಾತ ಚಿಂತಕ ಜೋ. ಕೆ . ಗೋ ರಾವ್, (ಅ)ಸಂಸ್ಕೃತ ಪಂಡಿತ ನಾನೆ ಆಚಾರ್ಯ, ಜ್ಯೋತಿಷಿ ಸೋಮಾರಿಯಾಜಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಘನವೆತ್ತ ವಿದ್ಯಾರ್ಥಿಗಳು.

ಪ್ರಶ್ನೆ ಪತ್ರಿಕೆ ಬಯಲಾಗುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಸಮರಸ ಟೀವಿಯವರು ನಾನೆ ಅಚಾರ್ಯ ರವರಿಗೆ ಕೇಳಿದಾಗ,

ನಾನೆ ಆಚಾರ್ಯರವರು, ನೋಡಿ ಈಗಿನ ಶಿಕ್ಷಣ ಪದ್ಧತಿ ಇದೆಯೆಲ್ಲಾ ಇದು ಶೂನ್ಯ. ನಾವು ೧೦೦೦ - ಒಂದರ ಮುಂದೆ ಮೂರು ಶೂನ್ಯ ವರ್ಷ ಹಿಂದೆ ಹೋಗಿ ನೋಡಬೇಕು. ಆಗಿನ ಗುರು-ಕುಲ ಪದ್ಧತಿಗೆ ಈಗಿನ ಶಿಕ್ಷಣ ಪದ್ಧತಿ ಸಾಟಿಯಿಲ್ಲ. ಆಗ ವಿದ್ಯಾರ್ಥಿಗಳು ಮರಳಿನ ಮೇಲೆ ತಿದ್ದಿ ವಿದ್ಯೆ ಕಲಿಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಎಲ್ಲಿ? ಅದು ಬಯಲಾಗುವುದು ಎಲ್ಲಿ? ಇಂದು ನಾವು ಆ ಮರಳಿನ ಮೇಲೆ ತಿದ್ದುವ ಶಿಕ್ಷಣಕ್ಕೆ ಮರಳಿ ಹೋಗಬೇಕೆಂದರು. ಹೀಗೆಂದ ಕ್ಷಣ ಘನವೆತ್ತ ವಿದ್ಯಾರ್ಥಿಗಳು ತಮ್ಮ ಮುಂದೆ ಕುಳಿತವರ ಬೆನ್ನು ತಟ್ಟಿ ನಾನೆ ಆಚಾರ್ಯರ ಮಾತುಗಳನ್ನು ಸಮರ್ಥಿಸಿದ್ದು ವಿಶೇಷ. ಮುಂದೆ ಓದಿ...

ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ!

ಸಮರಸ ವಿಶೇಷ ಅಂಕಣದಲ್ಲಿ 'ಯಾರಿಗೆ ಹಿಂಜರಿತ' ಎಂದು ರವೀಶ ಕೇಳುತ್ತಾರೆ..

ಬಹುಶ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಎಗ್ಗಿಲ್ಲದ೦ತೆ ಬಳಕೆಯಾದ ಪದ ಹಿ೦ಜರಿತ ಅಥವಾ Recession. ಆರ್ಥಿಕ ಹಿ೦ಜರಿತದ ದುಷ್ಪರಿಣಾಮಗಳೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಾಗ ಈ ಸಮಯದಲ್ಲಿ ನಾವು ಕಾಣಬಹುದಾದ ಒಳ್ಳೆಯ ಬೆಳವಣಿಗೆಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಜಗವೇ ನ೦ಬಿಕೆಯ ಮೇಲೆ ನಿ೦ತಿದೆಯಲ್ಲವೇ. ಅದು ಮು೦ಬರುವ ಕಾಲವು ಹಿ೦ದಿಗಿ೦ತ ಚ೦ದವಾಗಿರುದೆ೦ಬ ಅಚಲವಾದ ನ೦ಬಿಕೆಯ ಮೇಲೆ. ಮುಂದೆ ಓದಿ...

ಮಂಗಳವಾರ, ಜೂನ್ 23, 2009

ಶಿಕ್ಷಣ ಪದ್ಧತಿ ಬದಲಾಗಬೇಕಲ್ಲವೆ?

ಶಿಕ್ಷಣ ಮಕ್ಕಳ ಸರ್ವತೋಮುಖಿ ಅಭಿವೃದ್ಧಿಗೆ ಸಹಾಯವಾಗಬೇಕೆಂಬುದು ಎಲ್ಲೆಲ್ಲಿಯೂ ಕೇಳಿ ಬರುವ ಕೂಗು. ಅದಕ್ಕಿಂತ ಮೊದಲು ಶಿಕ್ಷಣ, ಮಕ್ಕಳಲ್ಲಿ ಓದುವುದಕ್ಕೆ ಆಸಕ್ತಿಯನ್ನು ಬೆಳೆಸುವುದಕ್ಕೆ ಪ್ರೇರೇಪಣೆಯಾಗಬೇಕು. ನನಗೆ ನನ್ನ ಪ್ರಾಥಮಿಕ ತರಗತಿಗಳು ನೆನಪಿಗೆ ಬರುತ್ತಿವೆ. ಪದ್ಯ, ಮಗ್ಗಿ, ಕವಿ ಕಾವ್ಯ ಪರಿಚಯವನ್ನು ಬಾಯಿಪಾಠ ಮಾಡುವುದು. ಪಾಠದ ಕೊನೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅವುಗಳನ್ನು ಬಾಯಿ ಪಾಠ ಮಾಡುವುದು. ಹೀಗೆ ಬರೀ ಬಾಯಿ ಪಾಠ ಮಾಡುವುದರಲ್ಲೇ ನಮ್ಮ ಪ್ರಾಥಮಿಕ ಶಿಕ್ಷಣ ಕಳೆದು ಹೋಯಿಯು. ಶಿಕ್ಷಣ ಎಂಬುದು ಒಂದು ರೀತಿಯ ಶಿಕ್ಷೆ ಎಂದೆನಿಸಿ ಬಿಟ್ಟಿತ್ತು.ಇನ್ನು ಓದುವುದಕ್ಕೆ ಸ್ವಂತ ಆಸಕ್ತಿ ಬೆಳೆಯುವುದು ದೂರದ ಮಾತು. ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಟ್ಟು, ರೇಗಿ, ಬೈದು ಬಾಯಿಪಾಠ ಮಾಡುವುದಕ್ಕೆ ಸಹಾಯ ಮಾಡಿದರೆ ಅಂತಹ ಮಕ್ಕಳು ಬುದ್ಧಿವಂತ ವಿದ್ಯಾರ್ಥಿಗಳಾಗುತ್ತಿದ್ದರು. ಎಷ್ಟೋ ಜನರ ಮನೆಯಲ್ಲಿ ಮಕ್ಕಳ ಕಡೆ ಗಮನ ಕೊಡಲಾಗದಂತಹ ಸ್ಥಿತಿ. ಅಂತಹ ಮಕ್ಕಳಿಗೆ ಓದುವುದರಲ್ಲಿ ನಿರಾಸಕ್ತಿ ಉಂಟಾಗಿ ದಡ್ಡರೆನಿಸಿಕೊಳ್ಳುತ್ತಿದ್ದರು. ಇನ್ನು ಸಾಮಾನ್ಯವಾಗಿ ಬೋಧಕರಿಗೆ ಬುದ್ಧಿವಂತ ವಿದ್ಯಾರ್ಥಿಗಳೆಂದರೆ ಪ್ರೀತಿ. (ಎಲ್ಲರೂ ಹೀಗೆ ಎಂದಲ್ಲ, ದಡ್ಡ ವಿದ್ಯಾರ್ಥಿಗಳೆನಿಕೊಂಡವರ ಬಗ್ಗೆ ವಿಶೇಷ ಆಸಕ್ತಿ ತೋರುವ ಶಿಕ್ಷಕರೂ ಇದ್ದಾರೆ, ಆದರೆ ಕಡಿಮೆ). ದಡ್ಡರಿಗೆ ಸಾಮಾನ್ಯವಾಗಿ ಬೆತ್ತದ ಪೆಟ್ಟು. ಓದಿನಲ್ಲಿ ಹೆಚ್ಚಿನ ನಿರಾಸಕ್ತಿ.

ಇದಕ್ಕೆಲ್ಲ ಏನು ಕಾರಣ? ಮುಂದೆ ಓದಿ...

ಮಂಗಳವಾರ, ಜೂನ್ 16, 2009

ಬ್ಳಾಗ್ ಮೌನ, ಸಮರಸ ಜನನ!



ಇಷ್ಟು ದಿನ ಎಲ್ಲಿ ಹಾಳಾಗ್ ಹೋಗಿದ್ನಪ್ಪಾ ಅಂತೀರಾ? ಅಥವಾ RSS ಫೀಡ್ ನಲ್ಲಿ ಯಾವುದೇ ಅಪ್ಡೇಟ್ಸ್ ಕಾಣಿಸಲಿಲ್ಲ ಅಂತ ಈ ಕಡೆ ಬರಲೇ ಇಲ್ಲವ? ಏನಿಲ್ಲ ರೀ, ಜಾಗತಿಕ ಹಿಂಜರಿತ, ನಮ್ಮ ಸಂಸ್ಥೆಯ ಗ್ರಾಹಕರೆಲ್ಲಾ ಓಡಿ ಹೋಗಿಬಿಟ್ಟಿದಾರೆ. ಮಾಡೋಕ್ಕೆ ಕಛೇರಿಲ್ಲಿ ಕೆಲ್ಸ ಇಲ್ಲ.
ಕೆಲ್ಸ ಇಲ್ಲ ಅಂದ್ರೆ ಬ್ಳಾಗ್ ನಲ್ಲಿ ಏನಾದ್ರು ಗೀಚೋಕ್ಕೂ ಸೋಮಾರಿತನನಾ? ಹಾಳಾಗ್ ಹೋಗ್ಲಿ, ನಾವು ಬರೆದಿರೋದನ್ನ ಓದಿ, ಒಂದೆರಡು ಪ್ರತಿಕ್ರಿಯೆ ಬರಿಯೋದಕ್ಕೂ ಮೈಗಳ್ಳತನನಾ? ಇಲ್ಲ ಸ್ವಾಮಿ, ಇಂತಹ ಬಿಡುವಿನ ಸಮಯವನ್ನ ಸದುಪಯೋಗ ಮಾಡ್ಕೊಳ್ಳೋಣ ಅಂತ ಒಂದು ಕೆಲ್ಸ ಮಾಡ್ದೆ, ಹೇಳ್ಕೋಳ್ಳೋಕೆ ಜಾಸ್ತಿ ಏನಿಲ್ಲ..

http://samarasa.net/ ನೋಡಿ, ಹೇಗಿದೆ ಹೇಳಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ. ವಿನ್ಯಾಸ ಮತ್ತು ವಿಷಯದ ವಸ್ತುಗಳನ್ನು ಇನ್ನೂ ಅಭಿವೃದ್ಧಿಪಡಿಸಲು ನಿಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನಿತ್ತು ಸಮರಸವನ್ನು ಸಲಹಿ.

ದಯವಿಟ್ಟು ನೀವೆಲ್ಲರೂ ಹೇರಳವಾಗಿ ನಿಮ್ಮ ಬರವಣಿಗೆಗಳನ್ನು ಸಮರಸಕ್ಕೆ ಕಳುಹಿಸಿ. ಸದ್ಯಕ್ಕೆ ಓದುಗರೇ ನೊಂದಾಯಿಸಿಕೊಳ್ಳುವ ಸೌಲಭ್ಯ ಕೊಟ್ಟಿಲ್ಲ. ಮುಂದೆ ಅದನ್ನು ಒದಗಿಸುವ ಯೋಚನೆಯಿದೆ.

ಕೆಲವು ವಿಭಾಗಗಳಲ್ಲಿ ಲೇಖನಗಳಿಲ್ಲ, ಏನಪ್ಪಾ ಖಾಲಿ ಖಾಲಿ ಅಂತ ಬೈಬೇಡಿ, ಎಲ್ಲಾ ವಿಭಾಗಕ್ಕೂ ಗುಣಮಟ್ಟದ ಲೇಖನಗಳನ್ನು ಸೇರಿಸೋಣ.

ಗೆಳೆಯ ರವೀಶ್ ಮತ್ತು ಮಧುರ್ ಈ ಕಾರ್ಯಕ್ಕೆ ನನ್ನ ಜೊತೆ ಕೈ ಜೋಡಿಸಿದ್ದಾರೆ. ಅವರಿಗೂ ಧನ್ಯವಾದಗಳು.

Internet Explorer ನಲ್ಲಿ ಸಮರಸವನ್ನು ಓದುವಾಗ ಕೆಲವು ನ್ಯೂನ್ಯತೆಗಳು ಕಾಣ್ತಾ ಇವೆ. ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. Mozillaa ದಲ್ಲಿ ಓದುವುದು ಸುಲಭ.

ಇವಲ್ಲದೆ ಇನ್ನೂ ಹಲವು ನ್ಯೂನ್ಯತೆಗಳು ಉಳಿದೆವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಸಹಕಾರವಿರಲಿ.
ವೆಬ್ ಸೈಟ್ ವಿನ್ಯಾಸಕ್ಕೆ Wordpress ಮತ್ತು Mimbo ಗಳನ್ನು ಬಳಸಿದ್ದೇನೆ. ಅವರಿಗೂ ಧನ್ಯವಾದಗಳು.

ಇನ್ನು ಮುಂದೆಯೂ ಇಲ್ಲಿ ಬರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ.

ಗುರುವಾರ, ಮೇ 07, 2009

ಹೊರಗುತ್ತಿಗೆಗೆ ತೆರಿಗೆ (Outsourcing Tax) ಒಂದು ನೋಟ

ಇಲ್ಲಿ ನಾನು ಯಾವುದನ್ನೂ ಸರಿ ತಪ್ಪು ಎಂದು ವಿಶ್ಲೇಷಲು ಹೋಗುವುದಿಲ್ಲ. ಒಬಾಮರವರು ಇತ್ತೀಚೆಗೆ ನೀಡಿದ ಹೇಳಿಕೆ, ಅಮೇರಿಕಾದ ಕಂಪನಿಗಳು ಬೆಂಗಳೂರಿನಲ್ಲಿ ಉದ್ಯೋಗ ಸೄಷ್ಟಿಸುವುದು ಬೇಡ, ನ್ಯೂಯಾರ್ಕ್ ನಲ್ಲೇ ಮಾಡಲಿ ಎಂದು ಹೇಳಿರುವುದು, ಭಾರತೀಯ ಮಾಹಿತಿ ತಂತ್ರಙ್ನಾನ (IT) ವಲಯದಲ್ಲಿ ಅಷ್ಟು ಆತಂಕ ಸೃಷ್ಟಿಸದೇ ಇದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಒಂದು ರಸಭರಿತ ಸುದ್ದಿಯಾಗಿಬಿಟ್ಟಿದೆ. ಒಬಾಮ ಹೊರಗುತ್ತಿಗೆ ಮಾಡುವ ಅಮೇರಿಕಾ ಕಂಪನಿಗಳಿಗೆ ತೆರಿಗೆ ವಿಧಿಸುವುದರಿಂದ ಭಾರತಕ್ಕೆ ಆಷ್ಟೋಂದು ನಷ್ಟವಾದೀತೆ? ಅಥವಾ ಅಮೇರಿಕಾದ ಜನರಿಗೆ ಹೆಚ್ಚಿನ ಉದ್ಯೋಗಗಳು ಸಿಗಬಲ್ಲವೇ?

ಸುಮಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿ, ಹೊರಗುತ್ತಿಗೆ ಆಧಾರಿತ ವ್ಯವಹಾರವನ್ನು ಸಾಕಷ್ಟು ಹತ್ತಿರದಿಂದ ಕಂಡಿರುವ ನನಗೆ ಮೇಲಿನ ಎರಡೂ ಪ್ರಶ್ನೆಗಳಿಗೆ "ಇಲ್ಲ" ಎಂಬ ಉತ್ತರ ಹೊಳೆಯುತ್ತದೆ. ಇಲ್ಲಿ ಒಬಾಮರು, ಜಾಗತಿಕ ಆರ್ಥಿಕ ಹಿಂಜರಿತದಿಂದ ಒದಗಿರುವ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುತ್ತಿದ್ದಾರೇನೋ ಎಂದೆನಿಸುತ್ತದೆ.

ಅಮೇರಿಕಾ ಜಗತ್ತಿನ ಅತೀ ದೊಡ್ಡ ಬಂಡವಾಳಶಾಹಿ(capitalistic) ದೇಶ. ಇಲ್ಲಿನ ಬಹುತೇಕ ಜನರು ಬಂಡವಾಳಶಾಹಿಗಳು. ಹೂಡಿದ ಬಂಡವಾಳಕ್ಕೆ ಲಾಭವನ್ನು ತೆಗೆಯುವುದೇ ಅವರ ಪ್ರಮುಖ ಧ್ಯೇಯ. ಲಾಭ ಮತ್ತು ಆಸ್ತಿಗಳನ್ನು ವ್ಯಯಕ್ತಿಕವಾಗಿ/ ಖಾಸಗಿಯಾಗಿ ಅನುಭವಿಸುವವರು. ಇದೇ ಆ ದೇಶದ ಜನರ ಪ್ರಮುಖ ಮನಸ್ಥಿತಿ. ಈ ಮನಸ್ಥಿತಿಯೇ ಹೊರಗುತ್ತಿಗೆಗೆ ಪ್ರಮುಖ ಕಾರಣ. ಹೀಗಿರುವಾಗ, ಹೊರಗುತ್ತಿಗೆ ತೆರಿಗೆ ವಿಧಿಸಿದರೆ, ಲಾಭ ಮಾಡುವ ಮಾರ್ಗ ಬೇರೆಯಾಗಬಹುದೇ ಹೊರತು ಮನಸ್ಥಿತಿ ಬೇರೆಯಾಗುವುದಿಲ್ಲ.

ಸಣ್ಣ ಉದಾಹರಣ ತೆಗೆದುಕೊಳ್ಳೋಣ. ಲ್ಯೂಸೆಂಟ್ ಅಮೇರಿಕಾದ ಅತಿ ದೊಡ್ದ ದೂರಸಂಪರ್ಕ ತಂತ್ರಙ್ನಾನವನ್ನು ಒದಗಿಸುವ ಸಂಸ್ಥೆ. ಇವರ ತಂತ್ರಙ್ನಾವನ್ನು ಅಮೇರಿಕಾದ ಮತ್ತೊಂದು ದೈತ್ಯ ಸಂಸ್ಥೆ AT&T ಎಂಬ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಸಂಸ್ಥೆ ಕೊಂಡುಕೊಳ್ಳುತ್ತದೆ. (ಈಗ ಲ್ಯೂಸೆಂಟ್ , ಅಲ್ಕಾಟೆಲ್-ಲ್ಯೂಸೆಂಟ್ ಆಗಿದ್ದರೂ ನಮ್ಮ ಚರ್ಚೆಗೆ ಲ್ಯೂಸೆಂಟ್ ಅಮೇರಿಕಾದ ಒಂದು ಸಂಸ್ಥೆಯೇ ಎಂದಿಟ್ಟುಕೊಳ್ಳೋಣ). ಲ್ಯೂಸೆಂಟ್ ಸುಮಾರು ೨೦೦೦ ಇಸವಿಯಲ್ಲಿ, ಮುಳುಗುವ ಅಂಚಿಗೆ ಬಂದು, ತನ್ನೆಲ್ಲಾ ಬಹುತೇಕ ಕಾರ್ಯಕ್ಷೇತ್ರವನ್ನು ಭಾರತಕ್ಕೆ ವಿಸ್ತರಿಸಿ ಈಗ ಇನ್ನೂ ಜೀವಂತವಾಗಿದೆ ಮತ್ತು ಮುಂಚೂಣಿಯಲ್ಲೂ ಇದೆ. ಈಗ ಹೊಸದಾಗಿ ತೆರಿಗೆ ವಿಧಿಸಿರುವುದರಿಂದ, ಲ್ಯೂಸೆಂಟ್ ಗೆ ಎರಡು ಆಯ್ಕೆಗಳಿವೆ. ಹೆಚ್ಚಿನ ತೆರಿಗೆ ಕಟ್ಟುವುದು ಅಥವಾ ಹೊರಗುತ್ತಿಗೆ ಕೆಲಸವನ್ನೆಲ್ಲಾ ಮತ್ತೆ ಹಿಂಪಡೆದು ಅಮೇರಿಕಾದಲ್ಲಿ ನೌಕರರಿಗೆ ಹೆಚ್ಚಿನ ಸಂಬಳ ಕೊಟ್ಟು (ಸಂಬಳವಷ್ಟೇ ಅಲ್ಲದೆ ನಿರ್ವಹಣಾ ವೆಚ್ಚವೂ ದುಬಾರಿ ಅಲ್ಲಿ) ಅಲ್ಲಿಯೇ ತಂತ್ರಙ್ನಾನ ಅಭಿವೃದ್ಧಿ ಮಾಡುವುದು. ಎರಡೂ ಆಯ್ಕೆಗಳಲ್ಲಿ ತಾವು ವೃದ್ಧಿಪಡಿಸಿದ ತಂತ್ರಙ್ನಾದ ಬೆಲೆ ಹೆಚ್ಚಾಗುತ್ತದೆ. AT&T ಸಾರಾಸಗಟಾಗಿ ಹೆಚ್ಚಿನ ಬೆಲೆಯ ತಂತ್ರಙ್ನಾವನನ್ನು ಕೊಳ್ಳಲು ನಿರಾಕರಿಸಿ, ಸ್ವೀಡನ್ ಸಂಸ್ಥೆಯಾದ ’ಎರಿಕ್ಸನ್’ ನಿಂದಲೋ, ಚೈನಾ ಸಂಸ್ಥೆಯಾದ ’ಹ್ಯುವಾವೆ’ ಯಿಂದಲೋ ಕಡಿಮೆ ಬೆಲೆಗೆ ಅದೇ ತಂತ್ರಙ್ನಾವನ್ನು ಪಡೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಉಳಿಯುವುದೇ ಇಂದಿನ ತಂತ್ರಗಾರಿಕೆ. ನಮ್ಮ ದೇಶದ ಸಂಸ್ಥೆ, ಎಂಬ ಭಾವಾವೇಶವೆಲ್ಲಾ ವ್ಯವಹಾರದಲ್ಲಿ ಶೂನ್ಯ. ಇನ್ನು ಅಮೇರಿಕಾ/ಒಬಾಮ ಬೇರೆ ದೇಶದ ಉತ್ಪನ್ನಗಳನ್ನು ನಿಷೇದಿಸುವ ಸಾಹಸಕ್ಕೆ ಕೈ ಹಾಕಲಾರರು. ಜಾಗತಿಕ ಮಾರುಕಟ್ಟೆ, ಭಾರತದಲ್ಲಿ ಮೋಟೋರೋಲಾ ಫೋನುಗಳು ಮಾರಾಟವಾಗುತ್ತಿವೆ ಎಂಬುದು ಅವರಿಗೂ ಗೊತ್ತು. ಭಾರತದ ಏರ್ ಟೆಲ್ ಕಂಪನಿ ತನ್ನ ಸೇವೆಗಳಿಗೆ ಅಲ್ಕಾಟೆಲ್-ಲ್ಯೂಸೆಂಟ್ ಉತ್ಪನ್ನಗಳನ್ನು ಬಳಸುತ್ತದೆ ಎಂಬುದೂ ಗೊತ್ತು. ಕೊನೆಗೆ ಏನಾಯಿತು? ಲ್ಯೂಸೆಂಟ್ ಅಳಿವಿನ ಅಂಚಿಗೆ ಬರುವ ಲಕ್ಷಣಗಳು ಹೆಚ್ಚಾಗುತ್ತವೆ. ಈಗಾಗಲೇ ಜಪಾನ್ ಕಾರ್ ಸಂಸ್ಥೆಗಳು ಕೊಡುತ್ತಿರುವ ಸ್ಪರ್ಧೆಗೆ, ಕಾರ್ ಉದ್ಯಮದಲ್ಲಿ ಅಮೇರಿಕಾ ಸಂಸ್ಥೆಗಳು(GM, FORD) ನಲುಗಿ ಹೋಗಿವೆ. ಇದೇ ಪರಿಸ್ಥಿತಿ ಮಾಹಿತಿ ತಂತ್ರಙ್ನಾನ ಉತ್ಪನ್ನ ಕ್ಷೇತ್ರಕ್ಕೂ ಬರಬಹುದು. ಭಾರತ ಮತ್ತು ಚೈನಾದ ಪ್ರಾಬಲ್ಯ ಸಿಲಿಕಾನ್ ವ್ಯಾಲಿಯಲ್ಲಿ ಹೆಚ್ಚಾಗಿ ಅಮೇರಿಕಾ ಹೆಚ್ಚಿನ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಬಹುದು. ಇದು ನಮ್ಮ ಆಶಾವಾದವೂ ಅಲ್ಲ ಉತ್ಪ್ರೇಕ್ಷೆಯೂ ಅಲ್ಲ. ಬಹುತೇಕ ಜಾಗತಿಕ ವಿಷಯಗಳಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟುರುವ ಅಮೇರಿಕಾ, ಮತ್ತೊಂದು ತಪ್ಪು ಮಾಡಲು ದಾಪುಗಾಲು ಹಾಕುತ್ತಿದೆಯೇ ಎಂಬ ಸಂಶಯ ಬರದೆ ಇರಲಾರದು!

ಇನ್ನು ಕೆಳಗಿರುವುದೆಲ್ಲಾ, ತಮಾಷೆಗಾಗಿ, ಯಾವುದೇ ದುರುದ್ದೇಶದಿಂದ ಕೂಡಿದ್ದಲ್ಲ!

ಕಸ್ತೂರಿ ವಾಹಿನಿಯಲ್ಲಿ ಬರಾಕ್ ಒಬಾಮ ಹೇಳಿಕೆ ಸ್ಪೋಟಕ ಸುದ್ದಿಯಾಗಿ (breaking news ನ ಪದಾನುವಾದ!, ಸಮರ್ಪಕವಲ್ಲ ಎಂದರೆ ಕ್ಷಮೆ ಇರಲಿ) ಬಿತ್ತರಿಸಲಾಗುತ್ತಿದ್ದು, ಇಂತಹ ಸನ್ನಿವೇಶ ಸೃಷ್ಟಿಯಾಗಿರುವುದರಿಂದ ಯಡ್ಡಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕುಮಾರಣ್ಣ ಆಗ್ರಹಿಸಿದ್ದಾರೆ. ಮಾಹಿತಿ ತಂತ್ರಙ್ನಾನ ಮತ್ತು ಮಾಹಿತಿ ತಂತ್ರಙ್ನರು ದೇಶ ಮತ್ತು ರಾಜ್ಯಕ್ಕೆ ಅಮೂಲ್ಯವಾಗಿದ್ದು ಇವರ ರಕ್ಷಣೆಗೆ ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ಧ ಎಂದು ಗೌಡರು ಗುಡುಗಿರುವುದರಲ್ಲಿ ಯಾವುದೇ ರಾಜಕೀಯ ಪ್ರೇರಣೆ ಇಲ್ಲವಂತೆ. ಲೋಕಸಭೆಗೆ ೧೫ ಜನರನ್ನು ಆ(ಹಾ)ರಿಸಿ ಕಳಿಸಿ ಸಾಕು, ಒಬಾಮ ಕೊರಳು ಪಟ್ಟಿಯನ್ನು ಹಿಡಿದು, ಹೊರಗುತ್ತಿಗೆಗೆ ಹಾಕಿರುವ ತೆರಿಗೆಯನ್ನು ಹಿಂತೆಗೆದುಕೊಳ್ಳುವ ಹಾಗೆ ಮಾಡುತ್ತೇವೆ ಎಂದು, ದೇವೇಗೌಡರ ಪಕ್ಕದಲ್ಲೇ ಕುಳಿತಿದ್ದ ರೇವಣ್ಣನವರು ತಮ್ಮ ಸುಲಲಿತ ಆಂಗ್ಲ ಮಾತುಗಳಲ್ಲಿ ನುಡಿದಿದ್ದಾರೆ.

ಈ ಬಗ್ಗೆ ಯಡ್ಡಿಯವರನ್ನು ಪ್ರಶ್ನಿಸಿದಾಗ, ಯಡ್ಡಿಯವರು ತಬ್ಬಿಬ್ಬಾದಂತೆ ಕಂಡುಬಂದರೂ, ಎಂದಿನಂತೆ ತಮ್ಮ ರೋಷದ ದಾಟಿಯಲ್ಲಿ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ. ಒಬಾಮರವರ ಹೇಳಿಕೆಗೂ ಆಪರೇಷನ್ ಕಮಲಕ್ಕೂ ಯವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವುದಲ್ಲದೆ, ಇದು ಗೌಡರು ಮಾಡಿಸಿರುವ ಮಾಟ ಮಂತ್ರದ ಫಲ ಎಂದಿದ್ದಾರೆ! ಎಲ್ಲದಕ್ಕೂ ಮೇ ೧೬ ರ ನಂತರ ಉತ್ತರಿಸುವುದಾಗಿ ಹೇಳಿದ್ದಾರೆ.

ಸಿದ್ಧುರವರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ತಮ್ಮನ್ನು ಕುಳ್ಳರಿಸುವವರೆಗೂ ಈ ಹೇಳಿಕೆಯ ಬಗ್ಗೆ, ಯಡ್ಡಿಯನ್ನು ತರಾಟೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಙ್ನೆ ಮಾಡಿ ಗೋವಾ ದ ರೇಸಾರ್ಟನಲ್ಲಿ ಅಙ್ನಾತವಾಸಕ್ಕೆ ಮೊರೆ ಹೋಗಿರುವುದು, ಕಾಂಗ್ರೆಸ್ಸ್ ಹೈಕಮ್ಯಾಂಡ್ ಗಮನಕ್ಕೆ ಇನ್ನೂ ಬಂದಿಲ್ಲವಂತೆ.

ಇನ್ನು ಖರ್ಗೆಯವರು ತಮ್ಮ ಎಂದಿನ ಶೈಲಿಯಲ್ಲಿ, ಈ ಹೊರಗುತ್ತಿಗೆ ಏನ್ ಅದಾ, ಅದಕ್ಕೆ ತೆರಿಗೆ ಹಾಕಿರೋದು, ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತ ವಿರೋಧಿ ಧೋರಣೆಯ ಪ್ರತಿಫಲ. ಮಾಡಿದ್ದುಣ್ಣೋ ಮಹರಾಯ ಅಂತ ನಿಟ್ಟುಸಿರು ಬಿಟ್ಟರಂತೆ.

ಇನ್ನು ಖ್ಯಾತ ಪತ್ರಕರ್ತ ಪ್ರತಾಪ್ ಸಿಂಹರಿಗೆ ಮಾಹಿತಿ ತಂತ್ರಙ್ನ ಕೂಲಿಗಳಿಗಾಗಬಹುದಾದ ತೊಂದರೆಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾರಂತೆ! ಯಾವುದೇ ಮಾಹಿತಿ ಸಿಗದ ಕಾರಣ, ತಮ್ಮ ಮುಂದಿನ ಪುಸ್ತಕ "ಒಬಾಮ ತುಳಿದ ಹಾದಿ" ಯನ್ನು ಪ್ರಾರಂಭಿಸುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಅಧಿಕೃತ ಪ್ರಕಟಣೆಗಾಗಿ ಕಾದು ನೋಡಬೇಕು.

ಸೋಮವಾರ, ಮೇ 04, 2009

ಹೂವು ಚೆಲುವೆಲ್ಲಾ ತಂದೆಂದಿತು!

ಕೆಲವು ದಿನಗಳಿಂದ ಯಾವುದೇ ಹೊಸ ಪ್ರಕಟನೆಯಿಲ್ಲದೆ ಸೊರಗಿರುವ ನನ್ನ ಬ್ಳಾಗ್ ತಾಣಕ್ಕೆ ಚೇತನ ನೀಡಲು ಈ ಛಾಯಾಚಿತ್ರ ಹಾಕ್ತಾ ಇದ್ದೀನಿ.



ಪಕ್ಕದ ಮನೆಯ ಯಾವುದೋ ಗಿಡದಲ್ಲಿ ಈ ಹೂ ಅರಳಿತ್ತು. ರಾಮೋತ್ಸವ ಸಂಗೀತ ಕಛೇರಿಗಳ ಫೋಟೋಗಳನ್ನು ಸೆರೆ ಹಿಡಿಯಲು, ಎರವಲು ಪಡೆದಿದ್ದ ಗೆಳೆಯ ಕೃಪಾ ಶಂಕರನ ಕ್ಯಾಮರಾ ಮನೆಯಲ್ಲಿತ್ತು. ಬೇರೆ ಯಾವುದೋ ಸಂದರ್ಭದಲ್ಲಿ ಮತ್ತೊಬ್ಬ ಗೆಳೆಯ (ಕುಂಟ) ಕ್ಯಾಮರಾದ ಸೆಟ್ಟಿಂಗ್ಸ್ (ಮ್ಯಾನುಯಲ್ ಮೋಡ್ ದು) ಬದಲಿಸಿ ಕೊಟ್ಟಿದ್ದ. ಹೀಗೆ ಸುಮ್ಮನೆ ಜೂಮ್ ಮಾಡೀ ಫೋಟೋ ಕ್ಳಿಕ್ಕಿಸಿದೆ. ಸೂರ್ಯನ ಪ್ರಖರವಾದ ಬೆಳಕಿನಲ್ಲಿ ತೆಗೆದರೂ, ಬ್ಯಾಕ್ ಗ್ರೌಂಡ್ ಕಪ್ಪಾಗಿ, ಹೂವಿನ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ನನಗೇ ಆಶ್ಚರ್ಯ! ಇನ್ನು ಆರ್ ಎನ್ ಜಯಗೋಪಾಲ್ ರವರಿಂದ ವಿರಚಿತಚಾದ ಈ ಅದ್ಭುತ ಗೀತೆಯ ಮೊದಲನೆ ಸಾಲನ್ನು ಶೀರ್ಷಿಕೆ ಮಾಡಿ, ಪ್ರಕಟಿಸಿಬಿಟ್ಟೆ!

ಸೋಮವಾರ, ಏಪ್ರಿಲ್ 13, 2009

ಸಾಹಸ ಕ್ರೀಡೆಗಳೋ.. ಸಾಯಿಸೊ ಕ್ರೀಡೆಗಳೋ??

ಸ್ವಲ್ಪ ದಿನದ ಹಿಂದೆ ಈ "ಬಂಗೀ ಜಂಪಿಂಗ್" ನ್ನು ಬೆಂಗಳೂರಿನಲ್ಲಿ ಯಾವುದೋ ಒಂದು ಸಂಸ್ಥೆ ಆಯೋಜಿಸುತ್ತಿರುವ ಸುದ್ದಿ ಓದಿ ಪುಳಕಿತಗೊಂಡೆ. ಗೆಳೆಯರನ್ನು ಕೂಡಿಸಿ ಒಮ್ಮೆ ಹೋಗಿ ಬರಬೇಕೆಂದು ಮನಸ್ಸು ಮಾಡಿದ್ದೆ.

ನಾನು ಹಿಂದೆ ಹಲವಾರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ಚಂಡೀಗಢದ ಬಿಯಾಸ್ ನದಿಯಲ್ಲಿ ’ರಾಫ್ಟಿಂಗ್’, ಲಕ್ಷದ್ವೀಪದಲ್ಲಿ ’ಸ್ಕೂಬ ಡೈವಿಂಗ್’, ಗೋವಾ ದಲ್ಲಿ ’ಪ್ಯಾರ ಸೈಲಿಂಗ’, ಬನಾನ ರೈಡ್’, ಕುರುಂಗಡ್ ನಲ್ಲಿ ’ಕಯಾಕಿಂಗ್’,’ವಾಟರ್ ಸರ್ಫಿಂಗ್’ ಇತ್ಯಾದಿ. ಇವುಗಳಲ್ಲಿ ಭಾಗವಹಿಸುವ ಮುಂಚೆ, ಯಾವೊತ್ತೂ ಈ ಸಾಹಸ ಕ್ರೀಡೆಗಳನ್ನು ಆಯೋಜಿಸುವವರು ಯಾರು? ಅವರ ಅನುಭವವೇನು? ಇಂತಹ ವಿಷಯಗಳನ್ನು ವಿವೇಚನೆಯಿಂದ ಯೋಚಿಸಿದ್ದೇ ಇಲ್ಲ. ಎಲ್ಲ ಮಾಡ್ತಾರೆ, ಏನೂ ಆಗೋಲ್ಲ ಎಂಬ ಭಂಢ ದೈರ್ಯ.

ಇಂತಹ ಭಂಢ ಧೈರ್ಯಕ್ಕೆ, ನಡುಕ ಹುಟ್ಟಿಸಿದ್ದು ನೆನ್ನೆಯ ಸುದ್ದಿ. ೨೫ ವರ್ಷದ ಬಾರ್ಘವ ಎಂಬ ಅಭಿಯಂತರ ’ರಿವರ್ಸ್ ಬಂಗೀ ಜಂಪಿಂಗ್’ ಮಾಡಲು ಹೋಗಿ ಮೃತ ಪಟ್ಟ ಸುದ್ದಿ ಓದಿದ ಮೇಲೆ! ಸಚಿನ್ ವೆಂಕಟೇಶಯ್ಯ ಎಂಬುವರು ನಡೆಸುತ್ತಿರುವ ’ಹೆಡ್ ರಶ್’ ಎಂಬ ಸಂಸ್ಥೆ ಇದನ್ನು ಆಯೋಜಿಸಿತ್ತು. ಇದಕ್ಕೆ ಪೋಲೀಸ್ ಅನುಮತಿ ಸಿಕ್ಕಿರಲಿಲ್ಲ ಎಂಬುದು ಇತ್ತೀಚೆಗೆ ಬಯಲಾದ ಸತ್ಯ!

ಆಯೋಜಕರ ಬೇಜವಬ್ದಾರಿತನ ಎಷ್ಟೆಂದರೆ, ಅಲ್ಲಿ ಆ ಸಾಹಸ ಕ್ರೀಡೆಯ ಅನುಭವಕ್ಕಾಕಿ ಬಂದವರಿಗೆ ಆಯೋಜಕರು "ಎಮ್ ಜಿ ರಸ್ತೆ ದಾಟುವುದು, ಬಂಗೀ ಜಂಪಿಂಗ್ ಮಾಡುವುದಕ್ಕಿಂತಲೂ ಅಪಾಯಕರ’ ಎಂಬ ಉಡಾಫೆ ಮಾತುಗಳನ್ನಾಡಿದ್ದಾರೆ. ’ರಿವರ್ಸ್ ಬಂಗೀ ಜಂಪಿಂಗ್’ ಮಾಡಿದಾಗ, ಸೊಂಟಕ್ಕೆ ಕಟ್ಟಿದ್ದ ಪಟ್ಟಿ ಬಿಚ್ಚಿ ಹೋಗಿದೆ. ಬಿದ್ದ ಮೇಲೆ ತುರ್ತು ಆಸ್ಪತ್ರೆಗೆ ಕರೆದೊಯ್ಯಲು, ಒಂದು ’ಆಂಬ್ಯುಲೆಂನ್ಸ್’ ಕೂಡ ಇಲ್ಲ. ಇದಲ್ಲದೆ ತಮಗೆ ಈ ಸಾಹಸಕ್ರೀಡೆಯನ್ನು ೫ ವರ್ಷಗಳು ನಡೆಸಿದ ಅನುಭವವಿದೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಗೆಳೆಯರನ್ನೊದಗೂಡಿ ’ವಂಡರ್ ಲಾ’ ಹೋಗಿದ್ದೆ. ಆಕಾಶದಲ್ಲಿ ಹುಚ್ಚಾಪಟ್ಟೆ ಸುರಳಿ ಸುತ್ತುವ (ಜೈಂಟ್ ವೀಲ್ ಅಲ್ಲ) ಒಂದು ಕ್ರೀಡೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಒಮ್ಮೆ ಮೇಲೆ ಕರೆದುಕೊಂಡು ಹೋಗಿ, ನಮ್ಮನ್ನು ಬೀಳುವಂತೆ ನಿಲ್ಲಿಸುತ್ತಾರೆ. ನಾವು ಕುಳಿತ ಕುರ್ಚಿಗೆ ಹಾಕಿದ ಒಂದು ಪಟ್ಟಿಯಲ್ಲಿ ನೇತಾಡುತ್ತಿರುತ್ತೇವೆ. ಪಕ್ಕದಲ್ಲಿ ಕುಳಿತ ತರಲೆ ಗೆಳೆಯ, ಮಗಾ ಯಾಕೋ "ನಿನ್ನ ಬೆಲ್ಟ್ ಸರಿಯಾಗಿ ಲಾಕ್ ಆಗಿಲ್ಲ ನೋಡ್ಕೋಳ್ಳೋ ಅಂದ!" ಆ ಒಂದು ಮಾತಿನಿಂದಲೇ ಪ್ರಾಣ ಹಾರಿಹೋಗುವಷ್ಟು ಭಯ ಆಗಿತ್ತು!

ಯಾಕೋ ಇನ್ನು ಮುಂದೆ ಇಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ದಿಗಿಲಾಗುತ್ತದೆ. ಅವರಿವರ ಅನುಭವವನ್ನು ಓದಿಯೇ ಸಂತಸ ಪಡುವುದು ಮೇಲೆನ್ನಿಸುತ್ತದೆ. ಅಥವಾ ಸ್ವಲ್ಪ ದಿನದ ನಂತರ ಈ ಕಹಿ ನೆನಪುಗಳು ಸ್ಮೃತಿ ಪಟಲದಿಂದ ಕಾಣೆಯಾಗಬಹುದು, ಮತ್ತದೇ ಭಂಢ ದೈರ್ಯ, ಬೇಜವಬ್ದಾರಿತನ ಮರುಕಳಿಸಬಹುದು!

ಆದರೂ, ನೀವುಗಳು ಇನ್ನೊಮ್ಮೆ ಯಾವುದೇ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದಾಗ, ನಿಮ್ಮ ಕುಟುಂಬ ವರ್ಗದ ಬಗ್ಗೆ ಒಮ್ಮೆ ಯೋಚಿಸಿ. ಆಯೋಜಕರ ಬಗ್ಗೆ ಧೀರ್ಘವಾಗಿ ವಿಚಾರಿಸಿ. ಗೆಳೆಯರ ಊಡಾಫೆ ಮಾತುಗಳಿಗೆ ಮರುಳಾಗಬೇಡಿ. ಗೆಳೆಯರು ಪುಕ್ಕಲ ಎಂದು ಹಾಸ್ಯ ಮಾಡುವರೆಂದು ಧೈರ್ಯ ತಂದುಕೊಳ್ಳಬೇಡಿ. ವಿವೇಚನೆಯಿಂದ ಹೆಜ್ಜೆ ಇಡಿ. ನಿಮ್ಮ ಜೀವನದಲ್ಲಿ ಆ ’ಥ್ರಿಲ್’ ಬೇಕೇ ಬೇಕೆ? ಎಂಬುದನ್ನೆ ಒಮ್ಮೆ ಯೋಚಿಸಿ.

ಸಾಹಸ ಕ್ರೀಡೆಗಳು ಸಾಯಿಸೊ ಕ್ರೀಡೆಗಳಾಗಬಾರದಲ್ಲ?

ಭಾನುವಾರ, ಏಪ್ರಿಲ್ 12, 2009

ಭಕ್ತಿ ಪರವಶಗೊಳಿಸಿದ ಸಂಗೀತ

ನೆನ್ನೆ ಗಾನಕಲಾಭೂಷಣ ಆರ್ ಕೆ ಪದ್ಮನಾಭ (ಆರ್ ಕೆ ಪಿ) ರವರ ಗಾಯನವನ್ನು ಶ್ರೀ ವಾಣಿ ವಿದ್ಯಾ ಕೇಂದ್ರದ ವತಿಯಿಂದ ಆಯೋಜಿಸಿದ ೧೮ ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ, ಕೇಳುವ ಸೌಭಾಗ್ಯ ಒದಗಿ ಬಂತು. ಪಕ್ಕ ವಾದ್ಯಗಳಲ್ಲಿ, ಪಿಟೀಲು ನಳಿನಿ ಮೋಹನ್, ಮೃದಂಗ ವಿ ಅರ್ಜುನ್ ಕುಮಾರ್ ಮತ್ತು ಘಟಂ ನಲ್ಲಿ ಓಂಕಾರ್ ಜಿ ಸಾಥ್ ಕೊಟ್ಟರು.


ಆರ್ ಕೆ ಪಿ ರವರ ಕಿರು ಪರಿಚಯವೆಂದರೆ, ಕರ್ನಾಟಕದ ಮೇರು ವಾಙ್ನೇಯಕಾರರಲ್ಲಿ ಒಬ್ಬರು. ವಾಙ್ನೇಯಕಾರರಲ್ಲದೆ, ಅತ್ಯುತ್ತಮ ಕೀರ್ತನ ರಚನಕಾರರೂ ಹೌದು. ಪದ್ಮನಾಭ ದಾಸ ಎಂಬ ನಾಮದೊಂದಿಗೆ ಕೀರ್ತನೆಗಳನ್ನು ರಚಿಸಿದ್ದಾರೆ. ಬಹಳಷ್ಟು ಕೀರ್ತನೆಗಳು ವಾದಿರಾಜರ ಮೇಲೆ ರಚಿತವಾಗಿವೆ. ಹರಿ ದಾಸರ ನಂತರ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದವರು ಕಡಿಮೆ, ಆ ಕಂದರವನ್ನು ಪದ್ಮನಾಭ ರವರು ೨೦ ನೇ ಶತಮಾನದಲ್ಲಿ ತುಂಬುತ್ತಿರುವುದು, ಕಲಿಯುಗದ ಹಿರಿಮೆ! ಸಂಗೀತ ಕಲಿತದ್ದು ಪ್ರಾಯದ ವಯಸ್ಸಿನಲ್ಲಿ. ಹುಳಿಮಾವಿನಲ್ಲಿ ವಾದಿರಾಜರ ಭವನ, ಹಾಸನದ ರುದ್ರಪಟ್ನಂ ನಲ್ಲಿ ಸಪ್ತ ಸ್ವರ ಹೊಮ್ಮಿಸುವ ತಂಬೂರಿ ಆಕಾರದ ಭವನ ತಾವು ಸಂಘಟಕರಾಗಿ, ವ್ಯವಸ್ಥಾಪಕರಾಗಿ ಮಾಡಿರುವ ಉತ್ತಮ ಕೆಲಸಗಳು.

ನೆನ್ನೆಯ ಕಛೇರಿ, ನೆನಪಿನಲ್ಲುಳಿಯುವಂತದ್ದು. ಆರ್ ಕೆ ಪಿ ತಮ್ಮ ವಿದ್ವತ್ತಿನ ಜೊತೆಗೆ, ಜನಕ್ಕೆ ಬೇಕಾದ ರಂಜನೆಯನ್ನು ಬೆರೆಸಿ, ನೆರೆದಿದ್ದ ಶ್ರೋತೃ ವೃಂದವನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದರು. ಪಕ್ಕ ವಾದ್ಯ ಕಲಾವಿದರೂ ಸಹ ಅತ್ಯುತ್ತಮವಾಗಿ ನುಡಿಸಿದರು.

ಮತ್ತೊಂದು ವಿಶೇಷ ಕಛೇರಿಯಲ್ಲಿ ಹಾಡಿದ್ದು ಹೆಚ್ಚಿನ ಕನ್ನಡ ಕೃತಿಗಳನ್ನು.

ಕಾರ್ಯಕ್ರಮ ಪ್ರಾರಂಭವಾದದ್ದು,
೧) ತಪೋ ವಿದ್ಯಾ ಎಂಬ ವಾದಿರಾಜರ ಉಗಾಭೋಗದಿಂದ
೨) ಜಲಜಾಕ್ಷ ನಿನ್ನೇ
೩) ದಾಸರಾಯ ಪುರಂದರ ದಾಸರಾಯ , ಜಗನ್ನಾಥ ದಾಸರು
ಇದು ಜಗನ್ನಾಥ ದಾಸರು, ಪುರಂದರ ದಾಸರ ಬಗ್ಗೆ ಬರೆದ ಒಂದು ಅಪರೂಪದ ಕೃತಿ. ನಾನು ಮೊದಲ ಬಾರಿಗೆ ಕೇಳಿದ್ದು.
೪) ನಾದೋಪಾಸನ, ತ್ಯಾಗರಾಜರು
೫) ದಾಸನೆಂತಾಗುವೆ ಧರೆಯೊಳಗೆ, ಪುರಂದರ ದಾಸರು
೬) ಸೀತಾಪತೆ ನಾ, ತ್ಯಾಗರಾಜರು,
ಇದನ್ನು ಅಪರೂಪದ ದೇಶಾದಿ ತಾಳದಲ್ಲಿ ಪ್ರಸ್ತುತ ಪಡಿಸಿದರು. ಇತ್ತೀಚೆಗೆ ಈ ತಾಳದಲ್ಲಿ ಹಾಡುವುದು ಕಡಿಮೆಯಾಗಿದೆಯಂತೆ.
೭) ಶಂಬುಧ್ಯುತಿ ರಾಗದ ಆಲಾಪನೆ, ಈ ರಾಗವನ್ನು ಪದ್ಮನಾಭರು ಮೊದಲ ಬಾರಿಗೆ ಹಾಡಿದ್ದಂತೆ.. ಇದನ್ನು ಅಲಾಪಿಸಿದ ರೀತಿ, ಎಲ್ಲರನ್ನೂ
ಮೋಡಿಗೊಳಿಸಿತು.
* ನಿನ್ನ ದಯೆ ಇರಲು ನನಗೇತರ ಚಿಂತೆ, ವಾದಿರಾಜರ ಕುರಿತ ಪದ್ಮನಾಭರ ರಚನೆ,
ಇದರ ಸಾಹಿತ್ಯ ಕೂಡ ಬಹಳ ಸೊಗಸಾಗಿದೆ.
೮) ಸದಾ ನೀ ಪಾದಮೇ ನಮ್ಮಿದಿ
೯) ಮಡಿ ಮಡಿ ಮಡಿಯೆಂದು, ಪುರಂದರ ದಾಸರು
೧೦) ಶೃಂಗಾಪುರದೇಶ್ವರಿ ಶಾರದೆ
೧೧) ಶ್ರೀರಾಮಂ ಸುಗ್ರೀವಂ,
ಇದು ಕನ್ನಡ ಪ್ರತಿಮಾ ನಾಟಕದ ಒಂದು ಪದ್ಯವಂತೆ. ಕನ್ನಡದ ಶ್ರೀಮಂತಿಕೆಯನ್ನು ತೋರಿಸಲು ಕಛೇರಿಗಳಲ್ಲಿ ಸಾಮಾನ್ಯವಾಗಿ ಇದನ್ನು
ಹಾಡುತ್ತೇನೆಂದರು
೧೨) ತಿಲ್ಲಾಣ
೧೩) ಏನು ಸುಕೃತವಾ ಮಾಡಿದಳು ಯಶೋಧೆ
೧೪ ) ಪುರಂದರ ದಾಸರ ಮಂಗಳ ಗೀತೆಯೊಂದಿಗೆ ಕಾರ್ಯಕ್ರಮ ಸುಮಂಗಳವಾಯಿತು

ಹೀಗೆ ೩ ಘಂಟೆಗಳ ಕಾಲ ಕೇಳುಗರನ್ನು ರಂಜಿಸಿ, ಭಕ್ತಿ/ಭಾವ ಪರವಶಗೊಳಿಸಿದ ಆರ್ ಕೆ ಪಿ ರವರಿಗೆ ಅನಂತ ವಂದನೆಗಳು.

ಕಾರ್ಯಕ್ರಮದ ಕೊನೆಯಲ್ಲಿ, ಖ್ಯಾತ ಸಂಗೀತ ವಿಮರ್ಶಕ, ವೈಣಿಕ ಮೈಸೂರು ವಿ ಸುಬ್ರಮಣ್ಯ (ವೀಣೆ ಶೇಷಣ್ಣ ನವರ ಮರಿಮಗ) ಮಾತನಾಡಿ, ಆರ್ ಕೆ ಪಿ ಯವರ ಗಾಯನವನ್ನು ಮನಸಾರ ಕೊಂಡಾಡಿದರು. ಆರ್ ಕೆ ಪಿ ರವರಿಗೆ, ಗಂಡರ ಗಂಡ ಮತ್ತು ಷಣ್ಮುಘ ಎಂಬ ಬಿರುದುಗಳನ್ನು ಕೊಟ್ಟರು. ಆರ್ ಕೆ ಪಿ ಯವರ ಸಂಘಟನಾ ಚಾತುರ್ಯವನ್ನು ನೆನಪಿಸಿ, ಗಾಯನ ಸಮಾಜದಲ್ಲಿ ನಡೆಸಿದ ಘೋಷ್ಠಿ ಗಾಯನವನ್ನು ತಿಳಿಯ ಪಡಿಸಿದರು. ಈ ಘೋಷ್ಠಿ ಗಾಯನವೆಂಬುದು, ತ್ರಾಗರಾಜರ ಕಾಲದಲ್ಲಿ ಪ್ರಚುರ ಗೊಂಡಿದ್ದಲ್ಲ , ಅದಕ್ಕೂ ಹಿಂದೆ ಪುರಂದರ ದಾಸರ ಕಾಲದಲ್ಲೆ ಮಧುಕರ ವೃತ್ತಿ ನಡೆಯುತ್ತಿತ್ತು ಎಂದರು. ಆರ್ ಕೆ ಪಿ ಯವರು ಹುಳಿಮಾವಿನಲ್ಲಿ ಸ್ಥಾಪಿಸಿರುವ ವಾದಿರಾಜ ಭವನ ಮತ್ತು ರುದ್ರಪಟ್ನಂ ನಲ್ಲಿ ನಿರ್ಮಿಸಿರುವ ತಂಬೂರಿ ಆಕಾರದ ಮಂಟಪ ಗಳು ಇಂದು ಉತ್ತಮ ಪ್ರವಾಸಿ ತಾಣಗಳಾಗಿವೆ ಎಂದರು. ಎಲ್ಲಾ ಕಲಾವಿದರ ಸಾಧನೆಗಳನ್ನು ಕೇಳುಗರಿಗೆ ತಿಳಿಸಿದರು.

ಬುಧವಾರ, ಏಪ್ರಿಲ್ 08, 2009

ಶೇಷಾದ್ರಿಪುರಂ ರಾಮೋತ್ಸವದಲ್ಲಿ ವಿದ್ಯಾಭೂಷಣ ಸ್ವಾಮಿಗಳು

ವಿದ್ಯಾಭೂಷಣರ ಕಛೇರಿಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದ ಬಹು ದಿನದ ಆಸೆ ನೆನ್ನೆ ನೆರವೇರಿತು. ಶೇಷಾದ್ರಿಪುರಂ ಕಾಲೇಜಿನ ರಾಮಸೇವಾ ಸಮಿತಿಯವರು ಆಯೋಜಿಸುತ್ತಿರುವ ೬೧ ನೇ ರಾಮೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾಭೂಷಣರ ವಿದ್ವತ್ ಪೂರ್ಣ ಗಾಯನಕ್ಕೆ, ಶೇಷಗಿರಿ ರಾಯರು ಪಿಟೀಲಿನಲ್ಲಿ, ಗಣೇಶ್ ರಾವ್ ರವರು ಮೃದಂಗದಲ್ಲಿ, ಶ್ರೀಶೈಲ ರವರು ಘಟಂ ನಲ್ಲಿ ಅದ್ಭುತ ಸಾಥ್ ನೀಡಿದರು. ಶೇಷಗಿರಿ ರಾಯರ ಪಿಟೀಲಿನಲ್ಲಿ ಹೊಮ್ಮುತ್ತಿದ್ದುದು, ಬರೀ ಪಿಟೀಲಿನ ನಾದವಾಗದೆ, ವಿದ್ಯಾಭೂಷಣರ ಪ್ರತಿದ್ವನಿಯೇನೋ ಎನ್ನುವ ಹಾಗಿತ್ತು. ಗಣೇಶ್ ರಾವ್ ಮತ್ತು ಶ್ರೀಶೈಲ ರವರು ಕೂಡ ಕ್ರಮವಾಗಿ ಮೃದಂಗ ಮತ್ತು ಘಟಂ ಗಳ ಜೊತೆ ತಮ್ಮ ಅದ್ಭುತ ಕೈಚಳಕವನ್ನು ತೋರಿದರು.



ವಿದ್ಯಾಭೂಷಣರವರು ತಮ್ಮ ವಿದ್ವತ್ ಪೂರ್ಣ ಗಾಯನಕ್ಕಲ್ಲದೆ, ಇಷ್ಟವಾಗುವುದು ಮತ್ತೊಂದು ಅತಿ ಪ್ರಮುಖವಾದ ವಿಷಯಕ್ಕೆ. ಅವರ ಯಾವುದೇ ಕಚೇರಿಯಲ್ಲಾದರೂ, ಹೆಚ್ಚು ದಾಸರ ಉಗಾಭೋಗಗಳನ್ನೂ, ಕೀರ್ತನೆಗಳನ್ನು ಹಾಡಿ ಪ್ರಚುರ ಪಡಿಸುತ್ತಾರೆ. ಬಹಳಷ್ಟು ಸಾಮಾನ್ಯ ಜನರಿಗೆ, ಕನ್ನಡದ್ದಲ್ಲದ ಕೀರ್ತನೆಗಳನ್ನು ಅಸ್ವಾದಿಸುವುದು ಕಷ್ಟ. ಏಕೆಂದರೆ ಆ ಸಾಹಿತ್ಯ ನಮ್ಮ ತಲೆಗೆ ಹೊಕ್ಕುವುದಿಲ್ಲ. ನಾವು ಸಂಗೀತವನ್ನು ಎಷ್ಟೇ ಆಹ್ವಾದಿಸಿದರೂ, ಅದಕ್ಕೆ ಸರಳ ಅರ್ಥವಾಗುವ ಸಾಹಿತ್ಯದ ಜೊತೆ ಸಿಕ್ಕಾಗ, ಗಾಯನದ ಇಂಪು ಹೆಚ್ಚಾಗುತ್ತದೆ. ಅದಕ್ಕೆ ನನ್ನ ಪ್ರತಿಪಾದನೆಯೆಂದರೆ, ಕರ್ನಾಟಕದಲ್ಲಿ ಹಾಡುವಾಗ, ಹೆಚ್ಚು ಹೆಚ್ಚು ಕನ್ನಡದ ಕೃತಿಗಳನ್ನು ಹಾಡುವುದು ಎಲ್ಲ ಸಂಗೀತಕಾರರಿಗೂ, ಸಂಗೀತಾಸಕ್ತ ಕೇಳುಗರಿಗೂ ಒಳಿತು. ಹೌದು ಸಂಗೀತಕ್ಕೆ ಭಾಷೆಯಿಲ್ಲ! ತ್ಯಾಗರಾಜರದೂ ಇರಲಿ, ಮುತ್ತು ಸ್ವಾಮಿ ದೀಕ್ಷಿತರದೂ ಇರಲಿ, ಆದರೆ ಪ್ರಾದೇಶಿಕ / ಸಾಮಾನ್ಯ ಜನಕ್ಕೆ ಹೆಚ್ಚು ಅರ್ಥವಾಗುವ ಭಾಷೆಯ ಕೃತಿಗಳು ಹೆಚ್ಚಿರಲಿ!

ಇನ್ನು ಕಛೇರಿ ಪ್ರಾರಂಭವಾಗಿದ್ದು ೧) ವಿಜಯ ವಿಠಲ ದಾಸರ , ಗಜವಧನ ಪಾಲಿಸೋ ಕೃತಿಯಿಂದ
೨) ಭಜನ..
೩) ಮನಸುಲೋನಿ ಮರ್ಮಮು - ತ್ಯಾಗರಾಜರು
೪) ಪೊರೆಯಮ್ಮ ಸ್ವಾಮಿ, ಜಗದಂತರ್ಯಾಮಿ, ಗೋಪಾಲ ದಾಸರು
೫) ಪ್ರಾಣಪತೇ ನೀ ಸಲಹೋ
೬) ಚಿಂತೆ ಯಾಕೆ ಮಾಡುತಿದ್ದಿ, ಚಿನ್ಮಯನಿದ್ದಾನೆ , ಪುರಂದರ ದಾಸರು
೭) ನಾರಾಯಣ ನಿನ್ನ ನಾಮದ, ಪುರಂದರ ದಾಸರು

ಈ ಪುರಂದರ ದಾಸರ ಈ ಕೃತಿಯ ಹಿಂದೆ ಡಿ ವಿ ಜಿ ಯವರು ಹೇಳುವ ಒಂದು ಕಥೆಯಿದೆ. ಹಿಂದೆ ದಾಸರ / ಕನ್ನಡ ಕೃತಿಗಳನ್ನು ಸಂಗೀತ ಕಛೇರಿಗಳಲ್ಲಿ, ವೇದಿಕೆಗಳಲ್ಲಿ ಹಾಡುತ್ತಿರಲಿಲ್ಲವಂತೆ. ದಾಸರ ಕೃತಿಗಳನ್ನು ಮೊದಲ ಬಾರಿಗೆ ಕಛೇರಿಗಳಲ್ಲಿ ಹಾಡಲು ಪ್ರಾರಂಬಿಸಿದವರು ’ಬಿಡಾರಂ ಕೃಷ್ಣಪ್ಪ’ ನವರು. ದ್ವನಿವರ್ಧಕಗಳಿಲ್ಲದ ಆಗಿನ ಕಾಲದಲ್ಲಿ, ಗಾಯಕರಿಗೆ ಬೇಕಾದ ಉತ್ತಮ ಶಾರೀರ ಇವರಲ್ಲಿತ್ತಂತೆ. ಎಷ್ಟೇ ಜನ ಕಿಕ್ಕಿರದು ತುಂಬಿದ್ದರೂ, ಎಲ್ಲರಿಗೂ ಕೇಳಿಸುವ ಹಾಗೆ ಗಟ್ಟಿಯಾಗಿ, ಮಾಧುರ್ಯವಾಗಿ, ಶಾಸ್ತ್ರೀಯವಾಗಿ ಹಾಡುವ ವಿದ್ವತ್ತು ಇತ್ತಂತೆ. ಹೀಗೆ ಒಮ್ಮೆ ಬೆಂಗಳೂರಿನಲ್ಲಿ ನಡೆದ ಒಂದು ಕಛೇರಿಯಲ್ಲಿ ದಾಸರ "ನಾರಾಯಣ ನಿನ್ನ ನಾಮದ ಸ್ಮರಣೆಯ" ಕೃತಿಯನ್ನು ಹಾಡಿದಾಗ ಸಭೆಯಲ್ಲಿ ಕರಾಡತನ. ಮುಂದೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಶಾಸ್ತ್ರೀಯ ಸಂಗೀತ ಸಭೆಗಳಲ್ಲೂ ಅವರನ್ನು ಅನುಕರಿಸಿದ್ದೇ ಅನುಕರಿಸಿದ್ದು!

೮) ಕಂಡೆ ನಾ ಗೋವಿಂದನಾ , ಪುರಂದರ ದಾಸರು
೯) ಹರಿಹರಿಯೆಂದು ಕರೆಯುವುದೇ ತಡ , ಪುರಂದರ ದಾಸರು (ಉಗಾಭೋಗ)
೧೦) ದಾಸನ ಮಾಡಿಕೊ ಎನ್ನ, ಪುರಂದರ ದಾಸರು
೧೧) ಯಮನ್ ಕಲ್ಯಾಣಿಯಲ್ಲಿ, ಕೃಷ್ಣಾ ನೀ ಬೇಗನೆ ಬಾರೋ, ವ್ಯಾಸರಾಯ ತೀರ್ಥರು
೧೧) ನೀ ತಂದೆ ನಾ ಬಂದೆ.. ಹಿಂದಿನ ಜನ್ಮ .. (ಉಗಾಭೋಗ) ಪುರಂದರ ದಾಸರು
೧೨) ಹಲವು ಜೀವನವ ಒಂದೆಲೆ ನುಂಗಿತು, ಕನಕ ದಾಸರು
೧೩) ತೂಗಿರೆ ರಾಯರ
೧೪) ಕಮಲಾಂಬಿಕೆ
೧೫) ಶುಭವಿದು ,ಪುರಂದರ ದಾಸರು ..

ಎಂಬ ಮಂಗಳ ದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.

ಭಾನುವಾರ, ಏಪ್ರಿಲ್ 05, 2009

ಆಂಗ್ಲ ಭಾಷೆಯ ಒಂದಕ್ಷರದ ’ಹೆಸರು’

’Y'

ಕಳೆದ ಶುಕ್ರವಾರ, ನನ್ನ ಸೋದರಳಿಯ ಶ್ರೇಷ್ಠ L K G ತರಗತಿಯಿಂದ ತೇರ್ಗಡೆಗೊಂಡ ಫಲಿತಾಂಶವನ್ನು ಶಾಲೆಯಲ್ಲಿ ಪ್ರಕಟಿಸಿದ್ದರು. ಅಂಕಪಟ್ಟಿ ತರಲು ನಾವು ಶಾಲೆಗೆ ಹೋದೆವು. ಗಣಕೀಕೃತ ಅಂಕಪಟ್ಟಿಯ ಜೊತೆ, A4 ಉದ್ದಗಲದ ಒಂದು ತೇರ್ಗಡೆ ಪ್ರಮಾಣ ಪತ್ರವನ್ನೂ ಕೊಟ್ಟರು. ಆ ಪ್ರಮಾಣ ಪತ್ರದಲ್ಲಿ, ಶ್ರೇಷ್ಠನ ಬಗ್ಗೆ ಅವರ ’ಟೀಚರ್’ ಫೀಡ್ ಬ್ಯಾಕ್ ಕೊಟ್ಟಿದ್ದರು. ಅದರ ಸಾರಾಂಶ ಹೀಗಿತ್ತು. ಮಗು ಎಲ್ಲಾ ವಿಭಾಗದಲ್ಲೂ ಚುರುಕಾಗಿದ್ದಾನೆ, ಆದರೆ ಇಂಗ್ಳಿಷ್ ನಲ್ಲಿ ಮಾತನಾಡಲು ಹಿಂಜರಿಯುತ್ತಾನೆ. ಮನೆಯವರು ಆಂಗ್ಲ ಭಾಷೆಯನ್ನು ಮಾತನಾಡಲು ಪ್ರೋತ್ಸಾಹಿಸಬೇಕೆಂದಿತ್ತು. ಇಕ್ಕಟ್ಟಿಗೆ ಸಿಲುಕಿಕೊಂಡೆವು. ಇಂಗ್ಳಿಷ್ ಕಲಿಯಲಿ ಎಂದು ಶಾಲೆಗೆ ಕಳುಹಿಸದರೆ, ಶಾಲೆಯವರು ನಮಗೇ ಕಲಿಸಿ ಎನ್ನುವುದೇ?

ಸರಿ ಅವೊತ್ತಿನಿಂದಲೇ ನಾನು ಕಲಿತ ಇಂಗ್ಳಿಷನ್ನು ಧಾರೆಯೆರದು ಕೊಡಲು ಮುಂದಾದೆ.

"What is your Name?"
"My name is Shreshta."

ಇವುಗಳನ್ನೆಲ್ಲಾ, ಶಾಲೆಗೆ ಸೇರಿಸುವ ಮುನ್ನವೇ ಶಾಲೆಯಲ್ಲಿ ನಡೆಸುವ ಸಂದರ್ಶನಕ್ಕಾಗಿ ಹೇಳಿಕೊಟ್ಟಿದ್ದೆ. ಅವುಗಳನ್ನೆಲ್ಲಾ ಒಂದು ಬಾರಿ ಪುನರಾವರ್ತನೆ ಮಾಡಿಸಿ, ಅವರ ಶಾಲೆಯಲ್ಲೂ ಒಂದು ಪ್ರಯೋಗ ನಡೆಸಿಯೇ ತೀರಬೇಕೆಂದು ಯೋಚಿಸಿದೆ.

ಅವನಿಗೆ ಅವರ ’ಟೀಚರ್’ ಹೆಸರನ್ನು ’ಇಂಗ್ಳಿಷ್’ ನಲ್ಲಿ ಕೇಳಿಕೊಂಡು ಬರಲು ಪುಸಲಾಯಿಸಿದೆ. (ಈಗ ಬೇಸಿಗೆ ಶಿಬಿರದ ವಿಶೇಷ ಶಾಲೆ, ಚಿತ್ರ ಬರೆಯುವುದು ಮತ್ತು ಬಣ್ಣ ಹಚ್ಚುವುದನ್ನು ಕಲೆಯಲು ಹೋಗುತ್ತಿದ್ದಾನೆ). ಮೊದಲ ದಿನ ಸಂಕೋಚದಿಂದ ಕೇಳದೆ ಹಾಗೆಯೇ ಬಂದು ಬಿಟ್ಟ. ನನಗೆ ಸ್ವಲ್ಪ ಕೋಪ ಬಂದು, ಮುಂದಿನ ದಿನ ಅವನ ಮೇಲೆ ತುಸು ಜೋರು ಮಾಡಿ, ಹೆಸರು ಕೇಳದೆ ಹಾಗೆಯೇ ಬಂದರೆ, ’ಕಂಪ್ಯೂಟರ್ ಗೇಮ್ಸ್’ ರದ್ದು ಎಂದು ಬ್ಳಾಕ್ ಮೈಲ್ ಮಾಡಿದ್ದು ಉಪಯೋಗಕ್ಕೆ ಬಂತು.

ಅಂದು ನಾವು ಕಛೇರಿಯಿಂದ ಮನೆಗೆ ಹಿಂತಿರುಗಿದಾಗ, ಖುಷಿಯಿಂದ ಬಂದು "ನಾನಿವೊತ್ತು ಮಿಸ್ ಹೆಸ್ರು ಕೇಳ್ಕೊಂಡ್ ಬಂದೆ" ಎಂದು ಘೋಷಿಸಿದ.

ನನ್ನ ಬ್ಳಾಕ್ ಮೈಲ್ ತಂತ್ರ ಕೆಲಸ ಮಾಡಿದೆ ಎಂದು ನನಗೆ ಅತೀವ ಸಂತೋಷವಾಯಿತು.

ಏನು ಪುಟ್ಟ ನಿಮ್ಮ ಮಿಸ್ ಹೆಸರು? ಕೇಳಿದೆ.

ಅದಕ್ಕೆ ಶ್ರೇಷ್ಠ,

'Y' ಎಂದ!

ನನಗೆ ತಕ್ಷಣ ನಗು ಬಂದಿತು, ಇದೆಂತಾ ಹೆಸರಪ್ಪ ಅಂತ.

ವಿಚಾರಣೆಗೆ ತೊಡಗಿದೆ, ಏನಂತ ಕೇಳ್ದೆ ಶ್ರೇಷ್ಠ?

ಕಥೆ ಶುರು ಹಚ್ಚಿಕೊಂಡ, ಮಧ್ಯಾಹ್ನ ’ಸ್ನ್ಯಾಕ್ಸ್’ ತಿಂದ ಮೇಲೆ, ಮಿಸ್ ಬಂದ್ರು. ನಾನು

’What is your name Miss?' ಅಂತ ಕೇಳ್ದೆ,

ಅದಕ್ಕೆ ಮಿಸ್ಸು

’My Name? Why?' ಅಂದ್ರಂತೆ,

ಅದಕ್ಕೆ ಇವ O K ಅಂದನಂತೆ!

ಹೀಗೆ ಅವರ ಚಿತ್ರಕಲೆಯ ಗುರುಗಳ ಹೆಸರು ವಿಚಿತ್ರವಾದ ’Y' ಆಗಿ ಹೋಗಿತ್ತು.

ನನಗೆ ಈ "Why" ಪದದ ಅರ್ಥ ವಿವರಸಲು ಸಾಕು ಬೇಕಾಗಿ ಹೋಯಿತು.

ಎಲ್ಲಾ ವಿವರಿಸಿದ ಮೇಲೆ ಅವನು ಹೇಳಿದ್ದಿಷ್ಟು, ನಿನಗೆ ಗೊತ್ತಿಲ್ಲ, ನಮ್ಮ ಮಿಸ್ ಹೆಸ್ರು 'Y' ಅಂತಾನೆ. ಇನ್ಮೇಲೆ ನಾನು ಅವರನ್ನ ’Y' ಮಿಸ್ ಅಂತಾನೆ ಕರ್ಯೋದು ಅಂತ ಕೊನೆಯ ತೀರ್ಪು ಕೊಟ್ಟ.

ನನಗೆ ನಗುವುದನ್ನು ಬಿಟ್ಟು ಬೇರೇನು ಹೊಳೆಯಲಿಲ್ಲ! ಹೀಗೆ ಇವನಿಗೆ ಇಂಗ್ಳಿಷ್ ಕಲಿಸಿಕೊಡುವ ಮೊದಲ ಪ್ರಯತ್ನದಲ್ಲೆ ಸೋಲುಂಡ ಪ್ರಸಂಗವನ್ನು ನೆನೆದು ನಗುತ್ತಲೇ ಇದನ್ನು ಬರೆಯುತ್ತಿದ್ದೇನೆ.

ಆದರೆ ನನಗೆ ಅರ್ಥವಾಗದೆ ಉಳಿದು ಹೋದ ಸಂಶಯವೆಂದರೆ, ವಿದ್ಯಾರ್ಥಿಗಳು, ಶಿಕ್ಷಕಿಯ ಹೆಸರನ್ನು ಕೇಳಿದರೆ? ನನ್ನ ಹೆಸರು ನಿನಗೇಕೆ ಎಂದು ಯಾಕೆ ಕೇಳುತ್ತಾರೆ? ಹೆಸರು ಕೇಳಲು ಕಾರಣ ಬೇಕೆ? ಅಥವಾ ಆ ಶಿಕ್ಷಕಿಯ ಹೆಸರು ನಿಜವಾಗಿಯೂ 'Y' ಅಂತಲೇ? ಇನ್ನೊಮ್ಮೆ ಅವರ ಹೆಸರನ್ನು ಕೇಳಿ ಬರಲು ಇಂದು ಮತ್ತೆ ಪುಸಲಾಯಿಸಿ ಕಳಿಸಿದ್ದೇನೆ, ಕಾದು ನೋಡಬೇಕು!

ಶನಿವಾರ, ಏಪ್ರಿಲ್ 04, 2009

ಸಂಗೀತ ಸುಧೆ ಹರಿಯುತ್ತಿದೆ

ರಾಮನವಮಿಯ ಆಚರಣೆ ಬೆಂಗಳೂರಿನಲ್ಲಿ ವಿಶಿಷ್ಟ. ರಾಮನವಮಿ ಬಂತೆಂದರೆ, ಶಾಸ್ತ್ರೀಯ ಸಂಗೀತಪ್ರಿಯರಿಗೆ, ಹಬ್ಬದ ಸುಗ್ಗಿ ಸ್ವಲ್ಪ ಹೆಚ್ಚು, ಕಾರಣ ರಾಮೋತ್ಸವ ಹೆಸರಿನಲ್ಲಿ ತಿಂಗಳುಗಟ್ಟಲೆ ನಡೆಯುವ ಸಂಗೀತ ಕಾರ್ಯಕ್ರಮಗಳು. ಇದರಲ್ಲಿ ಬಹು ಪ್ರಮುಖವಾದದ್ದು ಚಾಮರಾಜಪೇಟೆಯ ಕೋಟೆ ಶಾಲೆ ಮೈದಾನದಲ್ಲಿ ಜರುಗುವ ಸಂಗೀತ ಕಾರ್ಯಕ್ರಮಗಳು (ಕಾರ್ಯಕ್ರಮ ಪಟ್ಟಿಗೆ ಈ ಕೊಂಡಿಯನ್ನು ಒತ್ತಿ). ಇದು ರಾಮಸೇವಾ ಮಂಡಲಿಯವರು ನಡೆಸುತ್ತಿರುವ ೭೧ ನೇ ರಾಮೋತ್ಸವ ಸಂಗೀತ ಕಾರ್ಯಕ್ರಮ. ಶೇಷಾದ್ರಿಪುರಂ ಕಾಲೇಜಿನ ’ಕುವೆಂಪು ವೇದಿಕೆಯಲ್ಲೂ’, ರಾಮೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.


ಫೋಟೋ ಕೃಪೆ: ಶಿವಾನಂದ ಗಾವಲ್ಕರ್

ಇಂದು ಸ್ಯಾಕ್ಸಾಫೋನ್ ಸಾಮ್ರಾಟ್ ಕದ್ರಿ ಗೊಫಾಲನಾಥ್ ರ ವಾದನದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು.ಇದಕ್ಕೂ ಮೊದಲು ನಿಗದಿಯಂತೆ ೬:೧೫ ಕ್ಕೆ ಸರಿಯಾಗಿ ಭಾಷಣಗಳಿಂದ ಕಾರ್ಯಕ್ರಮ ಉದ್ಘಾಟನೆಯಾಯಿತು. ನಿರೂಪಣೆ ಅಚ್ಚುಕಟ್ಟಾಗಿತ್ತು ಮತ್ತು ಕನ್ನಡದಲ್ಲಿತ್ತು. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರು ಪೋಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್. ವೇದಿಕೆಯ ಮೇಲೆ ನೆರೆದಿದ್ದ ಇತರರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರವೀಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ ಮನು ಬಾಳಿಗಾರ್ ಮತ್ತು ರಾಮ ಸೇವಾ ಮಂಡಲಿ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ. ರವೀಂದ್ರ ರವರು ಸ್ವಾಗತ ಭಾಷಣ ಮಾಡಿ, ಅಜಯ್ ಕುಮಾರ್ ಸಿಂಗ್ ರ ಕನ್ನಡವನ್ನು ಮತ್ತು ಅವರ ಸಾಹಿತ್ಯ ಪ್ರೇಮವನ್ನು ಮನಸಾರೆ ಹೊಗಳಿದರು. ಅಜಯ್ ಕುಮಾರ್ ಸಿಂಗ್ ರವರು ಮಾತನಾಡಿ, ೩೧ ವರ್ಷಗಳ ಹಿಂದೆ ಈ ರಾಮೋತ್ಸವ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಬಂದಿದ್ದರಂತೆ. ಸಂಗೀತ ಎಂಬುದು ಹೃದಯಗಳನ್ನು ಬೆಸೆಯುವ ವಾಹಿನಿ ಎಂಬುವ ಮಾತನ್ನು ಹೇಳಿದರು. ಅಮೀರ್ ಖುಸ್ರೋ ಎಂಬ ೧೦ ನೇ ಶತಮಾನದ ವ್ಯಕ್ತಿ, ಹಿಂದಿಯಲ್ಲಿ ಬರೆದ ಖಯಾಲಿಗಳನ್ನು ಪಾಕಿಸ್ತಾನದ ಸಂಗೀತಗಾರರು ಹಾಡುತ್ತಿದ್ದುದು, ಅದಕ್ಕೆ ಮಲ್ಲಿಕಾ ಸಾರಾಭಾಯಿ ನೃತ್ಯ ಮಾಡುತ್ತಿದ್ದುದನ್ನು ಉದಾಹರಿಸಿ, ಹೇಗೆ ಬೇರೆ ಬೇರೆ ದೇಶ, ಭಾಷೆ, ಧರ್ಮದ ವ್ಯಕ್ತಿಗಳನ್ನು ಸಂಗೀತ ಎಂಬುದು ಒಟ್ಟುಗೂಡಿಸುತ್ತದೆ ಎಂಬುದನ್ನು ಸ್ಮರಿಸಿದರು. ಇಂದು ನಡೆಯುತ್ತಿರುವ ವಿದ್ವಂಸಕ ಕೃತ್ಯಗಳಿಗೆ ಸಂಗೀತ ಪರಿಹಾರವಾಗಬಹುದು ಎಂದರು.ನಂತರ ಮನು ಬಳಿಗಾರ್, ತಾವು ರಾಮ ಸೇವಾ ಮಂಡಲಿಯ ಸಂಗೀತ ಸೇವೆಯನ್ನು ಮೆಚ್ಚಿ, ಸರ್ಕಾರದಿಂದ ಮಂಡಲಿಗೆ ಬರುವ ಅನುದಾನವನ್ನು ೧೦ ಪಟ್ಟು ಹೆಚ್ಚಿಸಿದ್ದೇನೆಂಬ ಅಂಶವನ್ನು ತಿಳಿಸಿದರು. ನಂತರ ಮಾತನಾಡಿದ ಮಣಿ ನಾರಾಯಣ ಸ್ವಾಮಿ ರವರು, ರವೀಂದ್ರರು ತೆಲುಗು ಮಾತೃ ಭಾಷಿಕರಾಗಿದ್ದರೂ, ತಮ್ಮದು ತಮಿಳು, ಅಜಯ್ ರವರದು ಹಿಂದಿ, ಮನು ಬಳಿಗಾರ್ ರವರದು ಕನ್ನಡ ದವರು, "ಸಂಗೀತ ಪ್ರೇಮ", ವೇದಿಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದೆ ಎಂದರು. ಎಲ್ಲರೂ ಕನ್ನಡದಲ್ಲೇ ಮಾತನಾಡಿದ್ದು ವಿಶೇಷ ಮತ್ತು ಸಂತಸದ ಸಂಗತಿ.

ನಂತರ ೧೦ ನಿಮಿಷಗಳ ತಡವಾಗಿ ಸಂಗೀತ ಕಾರ್ಯಕ್ರಮ ಪ್ರಾರಂಭ. ಗೋಪಾಲನಾಥರ ಜೊತೆ ಪಕ್ಕವಾದ್ಯದಲ್ಲಿ, ಪಿಟೀಲು ಕನ್ಯಾಕುಮಾರಿ, ಮೃದಂಗ ಬಿ ಹರಿ ಕುಮಾರ್, ಖಂಜೀರ ದಲ್ಲಿ ಎನ್ ಅಮೃತ್, ಮೋರ್ಸಿಂಗ್ ನಲ್ಲಿ ರಾಜಶೇಖರ್ ಬಿ ಅದ್ಭುತವಾಗಿ ನುಡಿಸಿದರು.

ಕಾರ್ಯಕ್ರಮ ಪ್ರಾರಂಭವಾದದ್ದು ೧) ಮುತ್ತುಸ್ವಾಮಿ ದೀಕ್ಷಿತರ, ಹಂಸಧ್ವನಿ ರಾಗದ ವಾತಾಪಿ ಗಣಪತಿ ಯಿಂದ. ಇದನ್ನು ಕದ್ರಿ ನುಡಿಸಿದಾಗ ಪ್ರತಿ ಶ್ರೋತೃಗಳೂ ತಲೆ ದೂಗುವುದರಲ್ಲಿ ಅನುಮಾನವಿಲ್ಲ.
ನಂತರ ನುಡಿಸಿದ ಕೃತಿಗಳ ಪಟ್ಟಿ,
೨) ರಾಮ ಭಕ್ತಿ ಸಾಮ್ರಾಜ್ಯ, ತ್ಯಾಗರಾಜರು
೩) ಸಾರಮತಿ ರಾಗದಲ್ಲಿ ಮೋಕ್ಷಮು ಗಲದಾ, ತ್ಯಾಗರಾಜರು (ಇದು ನನಗೆ ಅತ್ಯಂತ ಪ್ರಿಯವಾದ ಕೃತಿ)
೪) ಪೂರ್ವಿ ಕಲ್ಯಾಣಿ ರಾಗದಲ್ಲಿ ಙ್ನಾನಮು ಸಗರಾದ
೫) ನಿರವಧಿ ಸುಖಮಾ, ತ್ಯಾಗರಾಜರು
೬) ಅಖಿಲಾಂಡೇಶ್ವರಿ ರಕ್ಷಿತಾಂ, ಮುತ್ತು ಸ್ವಾಮಿ ದೀಕ್ಷಿತರ್
೭ ) ರಘುವಂಶಸುಧಾ, ಪಟ್ನಮ್ ಸುಬ್ರಮಣ್ಯ ಅಯ್ಯರ್
೮) ಮೋಹನ ರಾಗದ ವಿಸ್ತೃತ ಆಲಾಪನೆ, ಮೋಹನ ರಾಮ ಕೃತಿ , ತ್ಯಾಗರಾಜರು , ಇದನ್ನು ನುಡಿಸಿದ ರೀತಿ ಕಿಕ್ಕಿರಿದು ತುಂಬಿದ್ದ ಕೇಳುಗರ ಮನ ಮೋಹಕಗೊಳಿಸಿತು

ನಾನು ದಾಸರ ಕೀರ್ತನೆಗಳಿಗಾಗಿ ಕಾಯುತ್ತಲೇ ಇದ್ದೆ,

೯) ತಿರುಪತಿ ವೆಂಕಟ ರಮಣ, ಪುರಂದರ ದಾಸರು
೧೦) ವೈಷ್ಣವ ಜನತೊ (ಇದರ ಕರ್ತೃ ಯಾರೆಂದು ದಯವಿಟ್ಟು ತಿಳಿಸಿ!)
೧೧) ರಘುಪತಿ ರಾಘವ ರಾಜಾ ರಾಮ್, ವಿಷ್ಣು ದಿಗಂಬರ್ ಪಲುಸ್ಕಾರ್ (ಮೇಲಿನ ಎರಡೂ ಮಹಾತ್ಮ ಗಾಂಧಿ ಯವರಿಗೆ ಪ್ರಿಯವಾಗಿದ್ದವುವು)
೧೨) ಈ ಕೃತಿಯನ್ನು ನಾನು ಗುರಿತಿಸಲಾಗಲಿಲ್ಲ, ಕದ್ರಿಯವರು ತಾವು ನುಡಿಸಿದ್ದು ಯಾವುದೆಂದು ಪ್ರಕಟಿಸಲೂ ಇಲ್ಲ!
೧೩) ಇನ್ನು ದಯಬಾರದೆ , ಪುರಂದರ ದಾಸರು
೧೪) ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಶ್ರೀ ಪಾದರು
೧೫) ಭಾಗ್ಯದಾ ಲಕ್ಷ್ಮಿ ಬಾರಮ್ಮ, ಪುರಂದರ ದಾಸರು

ಹೀಗೆ ಸುಮಾರು ೩ ಘಂಟೆಗಳ ಕಾಲ ಕೇಳುಗರನ್ನು ಸಂಗೀತದ ಅಮೃತ ಸುಧೆಯಲ್ಲಿ ಮುಳಿಗಿಸಿದ ಎಲ್ಲಾ ವಾದ್ಯಗಾರರಿಗೂ, ಆಯೋಜಿಸಿದ ರಾಮ ಸೇವಾ ಮಂಡಲಿಗೂ, ಪ್ರಾಯೋಜಿಸಿದ ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್ ಲಿಮಿಟೆದ್ ಮತ್ತು ಙ್ನಾನ ಮಂದಿರ ಟ್ರಸ್ಟ್ ನವರಿಗೂ ಅನಂತ ಧನ್ಯವಾದಗಳು.

ಮಂಗಳವಾರ, ಮಾರ್ಚ್ 24, 2009

ಅರ್ಧ ಶತಕದ ಹಾದಿಯಲ್ಲಿ,

ಇದು ನನ್ನ ಬ್ಳಾಗ್ ತಾಣದ ೫೦ ನೇ ಅಂಕಣ. ನಾನು ೨೦೦೬ ರಲ್ಲಿ ಬ್ಳಾಗ್ ಲೋಕಕ್ಕೆ ಕಾಲಿಟ್ಟಾಗ ಈ ಬ್ಳಾಗಿಂಗ್ ಬಗ್ಗೆ ಆಶ್ಚರ್ಯ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ನಂತರ ಬರೆದದ್ದು ಒಂದೊಷ್ಟು ಜಳ್ಳು, ಒಂದಷ್ಟು ಗಟ್ಟಿ.

ಮೊದಲಿಗೆ ಕನ್ನಡದಲ್ಲೇ ಪ್ರಾರಂಭಿಸಿದರೂ, (ಕನ್ನಡ ಉಚ್ಚಾರಣೆಯನ್ನು ಆಂಗ್ಲದಲ್ಲಿ ಬರೆದು) ಲಿಪ್ಯಂತರ ಮಾಡಲಿಲ್ಲ. (ದಾಂಡೇಲಿಗೆ ಚಾರಣ - ಇದನ್ನು ಸಂಪೂರ್ಣವಾಗಿ ಬರೆದು ಮುಗಿಸಲೂ ಇಲ್ಲ!). ನಂತರ ಶೇಷಾದ್ರಿ ವಾಸುರವರ ಮಾಂತ್ರಿಕ ತಂತ್ರಙ್ನಾನ ’ಬರಹ’ (Barahapad) ಉಪಯೋಗಿಸಿ ಕನ್ನಡದಲ್ಲೇ ಬರೆಯುತ್ತಾ ಬಂದಿದ್ದೇನೆ. ಆಗಾಗ ಆಂಗ್ಲ ಬಾಷೆಯಲ್ಲೂ ಬರೆದದ್ದುಂಟು.(kurumgad island, The White Tiger Review, The Guru Film Review). ಆದರೆ ಓದುಗರು ಇದ್ದುದರಲ್ಲಿ ಮೆಚ್ಚಿದ್ದು ನಾನು ಕನ್ನಡದಲ್ಲಿ ಬರೆದಿದ್ದನ್ನೆ. ಆದುದರಿಂದ ಈ ಬ್ಳಾಗ್ ತಾಣದಲ್ಲಿ ಸಂಪೂರ್ಣ ಕನ್ನಡದಲ್ಲೆ ಬರೆಯಲು ನಿರ್ಧರಿಸಿದೆ. ಜೂನ್ ೨೦೦೬ ರಿಂದ ಸೆಪ್ಟಂಬರ್ ೨೦೦೮ ರವರೆಗೆ ಬರೆದದ್ದು ಬಹಳ ಕಡಿಮೆ. ಕಾರಣಗಳು ಬಹಳಷ್ಟು, ಅದರ ಚರ್ಚೆಯ ಅಗತ್ಯ ಇಲ್ಲಿಲ್ಲ. ಬರೆದದ್ದು ಬರೀ ೧೪ ಲೇಖನಗಳು! ನಂತರ ಅಕ್ಟೋಬರ್ ೨೦೦೮ ರಿಂದ ಇಲ್ಲಿಯವರೆಗೆ ನಿರಂತರವಾಗಿ, (ನಿರಂತರ ಅಂದರೆ, ಅಂಕಣಗಳ ಮಧ್ಯೆ ಹೆಚ್ಚು ಸಮಯದ ಅಂತರವಿಲ್ಲದೆ ಬರೆಯುತ್ತಾ ಬಂದಿದ್ದೇನೆ.

ಮೊದಲಿಗೆ ಈ ಬ್ಳಾಗ್ ನ ಹೆಸರನ್ನು "ನನ್ನ ಬ್ಳಾಗು" ಎಂದಿದ್ದೆ, ನಂತರ ಬರೆಯುವುದು ಕಡಿಮೆಯಾದಾಗ, ೧೫ ದಿನಗಳಿಗೊಮ್ಮೆ ಬರೆಯೋಣವೆಂದು "ಅಮಾವಾಸ್ಯೆಗೊಂದು ಸಾರ್ತಿ, ಪೊರ್ಣಾಮಿಗೊಂದು ಸಾರ್ತಿ - A Fortnightly Blog" ಎಂದು ಹೆಸರು ಬದಲಾಯಿಸಿದೆ. ಆದರೂ ಹೆಸರಿಗೆ ವ್ಯತಿರಿಕ್ತವಾಗಿ, (ಹೊಂದಿಕೆಯಿಲ್ಲದೆ) ಇತ್ತೇಚೆಗೆ ಹೆಚ್ಚಾಗಿಯೇ ಬರೆಯುತ್ತಿದ್ದೇನೆ.

ಬಹಳಷ್ಟು ಬ್ಳಾಗ್ ತಾಣಗಳು ಒಂದು ವಿಷಯಕ್ಕೆ ಸೀಮಿತಗೊಳ್ಳುತ್ತವೆ! ನನ್ನದು ಅದೇಕೋ ಹಾಗಾಗಲಿಲ್ಲ.ಬಹಳಷ್ಟು ವಿಷಯಗಳ ಚರ್ಚೆಗಳು ಇಲ್ಲಿ ನಡೆದವು. ಓದುಗರು ಇದನ್ನು ವೈವಿಧ್ಯಮಯ ಅನ್ನಬಹುದು ಅಥವಾ ಚಿತ್ರಾನ್ನ ಅಂತಲೂ ಕರೆಯಬಹುದು. ಅವುಗಳ ಒಂದು ಸಣ್ಣ ಅವಲೋಕನ.

ಅಮೇರಿಕೆಯಲ್ಲಿ ಅಕ್ಕ ಸಮ್ಮೇಳನ ನಡೆದಾಗ, ನನ್ನ ಅನಿಸಿಕೆಯನ್ನು ಬರೆದೆ. ಸ್ವಲ್ಪ ದಿನಗಳ ನಂತರ ಅದನ್ನು ಓದಿದಾಗ, ಬರೆದ ವಿಷಯ ಮತ್ತು ಬರೆದ ರೀತಿ ನನಗೇ ಇಷ್ಟವಾಗಲಿಲ್ಲ. ಇದನ್ನು ವಿಕ್ರಾಂತ ಕರ್ನಾಟಕ ಮತ್ತು ದಟ್ಸ್ ಕನ್ನಡ ಅಂತರ್ಜಾಲ ತಾಣಗಳಿಗೆ ಕಳಿಸಿಕೊಟ್ಟಾಗ, ಇದು ವಿಕ್ರಾಂತ ಕರ್ನಾಟಕ ಅಂತರ್ಜಾಲದಲ್ಲಿ ಪ್ರಕಟವಾಯಿತಾದರೂ, ವ್ಯಯಕ್ತಿಕಾವಾಗಿ ಮತ್ತೊಮ್ಮೆ ಓದಿದಾಗ ಇದನ್ನು ಬರೆಯಬಾರದಿತ್ತೆನ್ನಿಸಿತು. ಅದರಲ್ಲಿದ್ದ ಋಣಾತ್ಮಕ ಅಂಶಗಳು ನನಗೇ ಹಿಡಿಸದೆ ಹೋದವು!

ನಂತರ ನಾನು ಬಹಳ ಆಸಕ್ತಿಯಿಂದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದು, ಸಾಹಿತಿಗಳು ಮತ್ತು ಕೆಲವು ಮಾಹಾತ್ಮರ ಬಗೆಗಿನ ವಿಷಯಗಳನ್ನ. ಕೆಲವನ್ನು ಅವರುಗಳ ಜನ್ಮೋತ್ಸವದಂದು ನುಡಿನಮನವಾಗಿ ಬರೆದೆ. ಅವುಗಳು ಈ ರೀತಿಯಲ್ಲಿವೆ,

ಕುವೆಂಪು ೧, ಕುವೆಂಪು ೨
ರಾಜರತ್ನಂ ೧, ರಾಜರತ್ನಂ ೨
ಬೇಂದ್ರೆ ೧, ಬೇಂದ್ರೆ ೨
ಜಿ ಎಸ್ ಶಿವರುದ್ರಪ್ಪ
ಭೀಮ್ ಸೇನ್ ಜೋಷಿ
ಕನಕದಾಸರು
ಡಿ ಎಸ್ ಕರ್ಕಿ
ತೀ ನಂ ಶ್ರೀ
ಡಿ ವಿ ಜಿ

ನಮ್ಮ ಕನ್ನಡ ಮತ್ತು ಆಂಗ್ಲ ಚಲನ ಚಿತ್ರಗಳ ಬಗ್ಗೆ ಚಕಾರವೆತ್ತಿ, ವಿಮರ್ಶೆಗಳನ್ನು ಬರೆದೆ. ಕೆಲವೊಮ್ಮೆ ಈ ವಿಮರ್ಶೆಗಳು ವ್ಯಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಕೂಡ ಹೋದದ್ದುಂಟು, ಅವುಗಳು

ಐಶ್ವರ್ಯ
The Guru
ಗಾಳಿಪಟ
ಪಯಣ
ವಂಶಿ
ಬುದ್ಧಿವಂತ
ಸ್ಲಂಬಾಲ
ಜಂಗ್ಲಿ
ಗುಲಾಬಿ ಟಾಕೀಸ್

ನಾನು ಕನ್ನಡ ಮತ್ತು ಆಂಗ್ಲ ಪುಸ್ತಗಳನ್ನು ಹೆಚ್ಚು ಹೆಚ್ಚಾಗಿ ಓದುವೆನಾದರೂ, ಪುಸ್ತಗಳ ಬಗ್ಗೆ ಬರೆದದ್ದು ಯಾಕೋ ಕಡಿಮೆಯೆ.

The White Tiger
ನಾನು ಓದಿದ ಪುಸ್ತಕಗಳು
ಹಂಪಿ ಎಕ್ಸ್ ಪ್ರೆಸ್

ಕೆಲವು ಪ್ರವಾಸ / ಚಾರಣ ಕಥೆಗಳನ್ನು ಬರೆದೆ,

ದಾಂಡೇಲಿ (ಇದನ್ನು ಪೂರ್ಣಗೊಳಿಸಲಿಲ್ಲ!, ಇದು ಮತ್ತೊಮ್ಮೆ, ನನಗೆ ಮತ್ತೊಮ್ಮೆ ಓದಲು ಹಿಡಿಸದ ಲೇಖನವಾಯಿತು)
Kurumgad Island
ರಂಗನತಿಟ್ಟು ಮತ್ತು ಅತ್ತಿವೇರಿ ಪಕ್ಷಿಧಾಮಗಳು
ಕುಮಾರಪರ್ವತ
ಚಿತ್ರದುರ್ಗ(ಕೊನೆಯ ನಾಲ್ಕು ಪ್ರವಾಸ/ಚಾರಣ ಕಥೆಗಳಲ್ಲಿ ಹೇರಳ ಛಾಯಚಿತ್ರಗಳನ್ನು ಲಗತ್ತಿಸಿದ್ದೇನೆ)

ರಾಜಕೀಯ ಮತ್ತು ಪತ್ರಿಕಾ ಸುದ್ದಿಗಳನ್ನು ವಿಶ್ಲೇಷಿಸಿದ್ದುಂಟು.

ಬೆಳಗಾವಿ ಸಮಸ್ಯೆ
ಕುಮಾರಸ್ವಾಮಿ ೧
ಕುಮಾರಸ್ವಾಮಿ ೨
ಟೀಕೆ ಟಿಪ್ಪಣಿ
ಹವಾ ನಿಯಂತ್ರಿತ ತಂಗುದಾಣ
ಚೂರು ಚಿಂದಿ
ಕನ್ನಡ ಸಾಹಿತ್ಯ ಸಮ್ಮೇಳನ
ಪ್ರತಾಪ್ ಸಿಂಹ ೧
ಪ್ರತಾಪ್ ಸಿಂಹ ೨
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಪಬ್ಬು (ಇದು ಒಬ್ಬ ಕವಿಯ ಕವನವನ್ನು ಅನುಸರಿಸಿ, ವಿಡಂಬನಾ ಶೈಲಿಯಲ್ಲಿ ಬರೆದದ್ದು)
೪ ನೇ ಪೀಳಿಗೆ (ಇದಕ್ಕೆ ತಂತ್ರಙ್ನಾನದ ಹಣೆಪಟ್ಟಿಯನ್ನೂ ಹಚ್ಚಬಹುದು)

ಕೆಲವು ಲಲಿತ ಪ್ರಬಂಧಗಳನ್ನು ಬರೆಯಲು ಪ್ರಯತ್ನಿಸಿದೆ,

ಏಳೆನ್ನ ಮನದನ್ನೆ
ನೃತ್ಯ
ಹೊಟ್ಟೆ (ಜಾಗೃತ ಲೇಖನ!)
ಮಿದ್ದಿಟ್ಟು (ಪಾಕ ಶಾಸ್ತ್ರ!)

ಕಾರ್ಯಕ್ರಮಗಳ ವಿಮರ್ಶೆ, ಟಿಪ್ಪಣಿಗಳನ್ನು ಬರೆದೆ,

ಎದೆ ತುಂಬಿ ಹಾಡಿದೆನು
ವಸುಧೇಂದ್ರ ಸಂವಾದ (ಟಿಪ್ಪಣಿ)

ಇತ್ತೇಚೆಗೆ ಕಾರ್ಯಕ್ರಮಗಳ ವಿವರವನ್ನು ಒದಗಿಸುವ ಪ್ರಯತ್ನ ಮಾಡಿದೆ,

ಪುಸ್ತಕ ಪ್ರದರ್ಶನ
ಪೌರಾಣಿಕ ನಾಟಕಗಳುಡಿ ವಿ ಜಿ ಜಯಂತಿ

ಬಹಳಷ್ಟು ಲೇಖನಗಳನ್ನು ಹಾಸ್ಯಮಯವಾಗಿ ಬರೆಯಲು ಪ್ರಯತ್ನಿಸಿದ್ದುಂಟು, ಮತ್ತು ಹಾಸ್ಯವೇ ಪ್ರಧಾನವಾಗಿಟ್ಟುಕೊಂಡು ಎರಡು ಲೇಖನ ಬರೆದದ್ದುಂಟು, ಅವುಗಳು ಓದುಗರಿಗೆ ಹಾಸ್ಯದ ಕಚಗುಳಿಯಿಟ್ಟವೋ ಅಥವ ಹಾಸ್ಯಾಸ್ಪದವೆನಿಸಿ ಸಮಯ ವ್ಯರ್ಥವೆನಿಸಿದವೋ!

ಬಸ್ಸಿನ ಬೆನ್ನೇರಿ
ನನ್ನ ಪ್ರಬಂಧಕ!

ಎಲ್ ಕೆ ಜಿ ಯಲ್ಲಿ ಓದುತ್ತಿರುವ ನನ್ನ ಸೋದರಳಿಯ ಹನುಮಂತನ ವೇಷ ತೊಟ್ಟ ಪ್ರಸಂಗವನ್ನು ಕೂಡ ಓದುಗರ ಜೊತೆ ಹಂಚಿಕೊಂಡೆ

ಶ್ರೇಷ್ಠ ಹನುಮಂತನಾದದ್ದು

ಹೀಗೆ ಮನಸ್ಸಿಗೆ ತೋಚಿದ್ದೆಲ್ಲಾ ಬರೆಯುತ್ತಾ ಬಂದಿದ್ದೇನೆ. ಮೊದಲೇ ಹೇಳಿದಂತೆ ಒಂದಷ್ಟು ಜಳ್ಳು, ಕೆಲವು ಓದಲು ಯೋಗ್ಯ ಲೇಖನಗಳು. ಈ ವಿಷಯದಲ್ಲಿ "ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬುದು ನನಗೆ ಹೊಂದುವುದಿಲ್ಲ. ನೀವೆಲ್ಲಾ ಓದುತ್ತಾ ಪ್ರೋತ್ಸಾಹ ಪೂರ್ವಕ ಪ್ರತಿಕ್ರೆಯೆಗಳನ್ನು ಕೊಡುತ್ತಾ, ಬೆನ್ನು ತಟ್ಟಿದ್ದೀರಿ. ಧನ್ಯವಾದಗಳು. ಹೀಗೆ ಓದುತ್ತಾ ಇರಿ. ನನ್ನ ಮಿತಿಯಲ್ಲಿ ಆದೊಷ್ಟು ಚೆನ್ನಾಗಿ ಬರೆಯಲು ಮುಂದೆ ಪ್ರಯತ್ನಿಸುತ್ತೇನೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆದರೆ ತಪ್ಪುಗಳನ್ನು ಕೂಡ, ನಿಷ್ಟುರವಾಗಿ ಪ್ರತಿಕ್ರಿಯಿಸುವುದನ್ನು ಮಾತ್ರ ಮರೆಯಬೇಡಿ.

ಜೈ ಕರ್ನಾಟಕ ಮಾತೆ!

ಶನಿವಾರ, ಮಾರ್ಚ್ 21, 2009

ನನ್ನ ಪ್ರಬಂಧಕನ ಪ್ರಸಂಗ

ಅಧಿಕ ಪ್ರಸಂಗ!

ವಿಶೇಷ ಸೂಚನೆ: ಈ ಪ್ರಸಂಗ ಮತ್ತು ಪ್ರಸಂಗದ ಪಾತ್ರಧಾರಿಗಳೆಲ್ಲಾ ಕಾಲ್ಪನಿಕ! ’ನನ್ನ’, ’ನಾನು’ ಎಂಬುದು ಕೂಡ ಕಾಲ್ಪನಿಕ ಪಾತ್ರಧಾರಿಯೆ! ನಿಜ ಜೀವನಕ್ಕೆ ಸಮೀಪದಲ್ಲಿ ಕಂಡು ಬಂದರೆ ಅದು ಕಾಕತಾಳೀಯ ಮಾತ್ರ!

ನನ್ನ ಪ್ರಬಂಧಕನನ್ನು (ದೀಪಕ್ ಎಂದಿಟ್ಟುಕೊಳ್ಳಿರಿ) ಒಂದೇ ಸಾಲಿನಲ್ಲಿ ಬಣ್ಣಿಸುವುದಾದರೆ ’ಬೆಳೆದ ದೇಹ ಮತ್ತು ಬೆಳೆದ ಬುದ್ಧಿಯ ಅಸಮತೋಲನ’ (ಯಾವುದು ದೊಡ್ದದು, ಯಾವುದು ಚಿಕ್ಕದು ಎಂಬುದರ ಸ್ಪಷ್ಟೀಕರಣ ಅಗತ್ಯವಿಲ್ಲ, ಮುಂದೆ ಓದಿ ನಿಮಗೇ ತಿಳಿಯುತ್ತದೆ) ! ಇವನಿಗೆ ಒಂದು ಚಟ - ಹಾಸ್ಯ ಚಟಾಕಿಗಳನ್ನು ಹಾರಿಸುವುದು, ಮತ್ತು ಅದರಲ್ಲಿ ದಯನೀಯವಾಗಿ ಸೋಲುಂಡು ಅಪಹಾಸ್ಯಕ್ಕೀಡಾಗುವುದು. ಹೀಗೆ ಒಮ್ಮೆ ನಡೆದ ಪ್ರಸಂಗ ಓದಿ.

ಕೆಲವು ದಿನಗಳ ಹಿಂದೆ, ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯ ಎಲ್ಲಾ ನೌಕರ ಸಂಬಳಕ್ಕೂ (ಕೆಲವರು ಹೇಳುವಂತೆ ’ಕೂಲಿ ದುಡ್ಡಿ’ಗೆ) ಕತ್ತರಿ ಬಿತ್ತು. ಇಂತಹ ಶೋಕದ ಸನ್ನಿವೇಶದಲ್ಲೂ, ನಮಗೆ ಸಂತಸ ತಂದ ವಿಷಯವೆಂದರೆ, ಪ್ರಬಂಧಕರಿಗೆ ಅಭಿಯಂತರರಿಗಿಂತ ಶೇ ೩ ರಷ್ಟು ಹೆಚ್ಚು ಸಂಬಳ ಕಡಿತವಾಗಿತ್ತು. ನನ್ನ ಸಂಬಳ ಕಡಿತ (ಕ)% ಆದರೆ ನನ್ನ ಪ್ರಬಂಧಕನದು (ಕ+೩)% ಆಗಿತ್ತು. ಕಡಿತ ಹೆಚ್ಚಾದಂತೆ ಕೆರೆತ/ಗಾಯ ಕೂಡ ಹೆಚ್ಚಾಗಬೇಕೆಲ್ಲ!

ಆ ಕರಾಳ ದಿನದಂದು, ಯಾವುದೇ ಮುನ್ಸೂಚನೆಯಿಲ್ಲದೆ, ದೀಪಕ್ ಅಪರಾಹ್ನ ಊಟಕ್ಕೆ ನಮ್ಮ ಜೊತೆ ಬಂದು ಕೂತುಬಿಟ್ಟ. ಅವನು ಬಂದು ಕೂರುವ ಒಂದು ಸಣ್ಣ ಸೂಚನೆ ಸಿಕ್ಕಿದ್ದರೂ, ಅವನಿಗೆ ಕೂರಲಾಗದಂತ ಇಕ್ಕಟ್ಟಿನ ಜಾಗದಲ್ಲಿ ನಾವು ಊಟಕ್ಕೆ ಕುಳಿತುಬಿಡುತ್ತಿದ್ದೆವು! ಏಟುಗಳೇ ಹೀಗೆ, ಬಿದ್ದಾಗ ಒಂದರ ಮೇಲೊಂದು ದಬ ದಬ ಬೀಳುತ್ತವೆ. ಮೊದಲೇ ಜೀರ್ಣಿಸಿಕೊಳ್ಳಲಾಗದ ಸುದ್ದಿಯನ್ನು ಕೇಳಿ ನೊಂದಿದ್ದ ನಮಗೆ, ಇವನು ಬಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿ, ಅವನ ಮುಖವನ್ನು ದುರುಗುಟ್ಟಿ ನೋಡಿ ನಕ್ಕಂತೆ ನಟಿಸಿದ್ದಾಯಿತು.

ಅವನ ನಗೆ ಚಟಾಕಿಗಳನ್ನು ತಡೆಯಬೇಕೆಂದಲೇ, ನನ್ನ ಗೆಳೆಯ ಅವನಲ್ಲಿ, ಸಂಬಳ ಕಡಿತದ ಅಸಮಧಾನವನ್ನು ತೋಡಿಕೊಂಡ. ಆದರೆ ಶ್ವಾನದ ಬಾಲ! ತನ್ನ ಎಂದಿನ ಧಾಟಿಯಂತೆ ದೀಪಕ್,

ಒಮ್ಮೆ ಜೋರಾಗಿ ನಕ್ಕಿ, ನನ್ನದು (ಕ+೩)%, ನನ್ನದೇ ಜಾಸ್ತಿ, ನಿಮ್ಮದೆಲ್ಲಾ ಕಡಿಮೆ ಹ ಹ ಹ ಎಂದು ಮತ್ತೊಮ್ಮೆ ನಕ್ಕ.

ಪಾಪ, ಅದು ತನ್ನ ದು:ಖ ವನ್ನು ಮರೆಯಲು ಪ್ರಯತ್ನಿಸಿದ ಪ್ರಾಮಾಣಿಕ ಪ್ರಯತ್ನವೇನೋ ನನಗೆ ತಿಳಿಯಲಿಲ್ಲ, ಮೊದಲೇ ನನಗೆ ಹಿಂದಿನ ಸಿಟ್ಟಿತ್ತು, ಅದಕ್ಕೆ ನಾನು,

ರೀ ದೀಪಕ್, ಅದಕ್ಕೆ ಯಾಕೆ ಯೋಚನೆ ಮಾಡ್ತೀರಾ? ಅಭಿಯಂತರನಾಗಿ ಹಿಂಬಡ್ತಿ ತೆಗೆದುಕೊಳ್ಳಿ, ಆಗ ನಿಮ್ಮ ಕಡಿತ ಕಡೆಮೆಯಾಗುತ್ತದೆ. ನೀವು ಅದಕ್ಕೆ ಲಾಯಕ್ಕು ಎಂಬರ್ಥದಲ್ಲಿ ಖಾರವಾಗಿ ನುಡಿದೆ!

ಪಕ್ಕದಲ್ಲಿ ಕುಳಿತಿದ್ದವರೆಲ್ಲ ಗೊಳ್ಳೆಂದು ನಕ್ಕರು.
ಆ ಬೃಹಾದಾಕೃತಿಯ ಮುಖ ಸಣ್ಣಗಾಯಿತು ಎಂದು ಹೇಳುವುದಕ್ಕೆ ಬರುವುದಿಲ್ಲ, ಮುಖವನ್ನಂತೂ ಗಂಟಿಕ್ಕಿಕೊಂಡರು.

ಜಟ್ಟಿ ಬಿದ್ದಾಗ ಆಳಿಗೊಂದು ಏಟು ಎಂಬಂತೆ, ನನ್ನ ಗೆಳೆಯ ಎಷ್ಟು ದಿನದಿಂದ ಅದುಮಿಟ್ಟಿಕೊಂಡಿದ್ದನೋ,
ಮುಂಬಡ್ತಿ ಸಿಕ್ಕಾಗ ನಮಗೆ ಕಳಿಸುವ ವಿ-ಅಂಚೆಯನ್ನು ಅಭಿನಯಿಸಿ ಓದಿಬಿಟ್ಟ (ನಮ್ಮ ಸಂಸ್ಥೆಯಲ್ಲಿ, ಯಾರಾದರೂ ಮುಂಬಡ್ತಿ ಪಡೆದಾಗ, ಮುಂಬಡ್ತಿ ಪಡೆದ ನೌಕರನ ಪ್ರಬಂಧಕ, ಆ ಸಿಹಿ ಸುದ್ದಿಯನ್ನು ವಿ - ಆಂಚೆಯ ಮೂಲಕ ಸಮಸ್ತ ನೌಕರರಿಗೂ ಕಳಿಸುತ್ತಾರೆ)

"ಆತ್ಮೀಯರೆ,
ದೀಪಕ್ ನನ್ನು ಅಭಿಯಂತರನಾಗಿ ಹಿಂಬಡ್ತಿ ನೀಡಲು ನನಗೆ ಅತೀವ ಸಂತಸವಾಗುತ್ತಿದೆ. ಅವರು ಕಷ್ಟ ಪಟ್ಟು ದುಡಿದು, ನಿಭಾಯಿಸಿದ (ಬೇ)ಜವಾಬ್ದಾರಿಗಳನ್ನು ಗುರುತಿಸಿ ಸಂಸ್ಥೆ ಈ ಕಾಣಿಕೆಯನ್ನು ಗೌರವಪೂರ್ವಕವಾಗಿ, ಸಂತೋಷದಿಂದ ನೀಡುತ್ತಿದೆ. ನೀವು ಅಡ್ಡಾಡುತ್ತಿರುವಾಗೆಲ್ಲಿಯಾದರೂ ದೀಪಕ್ ಎದುರಾದರೆ, ಅವನಿಗೆ ಶುಭಕೋರಿ ಸಂತೋಷವನ್ನು ಹಂಚಿಕೊಳ್ಳಿ. ಔತಣ ಕೂಟಕ್ಕೆ ಒತ್ತಾಯಿಸಿ."

ಇಲ್ಲಿಯವರೆಗೂ, ಹತೋಟಿಯಲ್ಲಿದ್ದ ನಗೆ ಅತಿಶಯವಾಯಿತು. ಪಕ್ಕದ ಮೇಜುಗಳಲ್ಲಿ ಕುಳಿತವರೆಲ್ಲಾ ನಮ್ಮೆಡೆಗಿ ನೋಡಲು ಪ್ರಾರಂಭಿಸಿದರು. ದೂರದಲ್ಲಿ ಕುಳಿತಿದ್ದ ಒಂದು ತಂಡವಂತೂ ನಮ್ಮ ಅತಿಶಯ ನಗುವನ್ನು ಅಣಕಿಸಲೆಂದೇ ಗಟ್ಟಿಯಾಗಿ ನಕ್ಕರು.

ನಮ್ಮ ಪ್ರಬಂಧಕನನ್ನು ಗೇಲಿ ಮಾಡಿ ವಿಕೃತ ಸಂತೋಷವನ್ನು ಪಡೆದುಕೊಳ್ಳುವ ಆನಂದ ಸಮಯ ನಮ್ಮದಾಗಿತ್ತು.

ನಾವು ಮತ್ತೊಬ್ಬರನ್ನು ಗೇಲಿ ಮಾಡಿ ಸಂತೋಷವನ್ನು ತೆಗೆದುಕೊಳ್ಳಬಹುದಾದರೆ, ನಮ್ಮನ್ನು ಯಾರಾದರೂ ಗೇಲಿ ಮಾಡಿದಾಗ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ದೊಡ್ಡತನವನ್ನು ಬೆಳೆಸಿಕೊಳ್ಳಬೇಕಲ್ಲವೆ? ನಮ್ಮ ಪ್ರಬಂಧಕ ಗೇಲಿಗೆ ಉರಿದು ಹೋದನೋ? ಅಥವಾ ಕ್ರೀಡಾ ಮನೋಭಾವದಿಂದ ತೆಪ್ಪಗಾದನೋ? ಅದನ್ನೂ ಗಮನಿಸದೆ ಊಟ ಮುಗಿಸಿ ಕೈ ತೊಳೆದುಕೊಂಡೊ!

ಶುಕ್ರವಾರ, ಮಾರ್ಚ್ 20, 2009

ರವೀಂದ್ರ ಕಲಾಕ್ಷೇತ್ರದಲ್ಲಿ ಏನೇನು?

ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.







ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳು



ನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.

ಸೋಮವಾರ, ಮಾರ್ಚ್ 16, 2009

ಧೀಮಂತ ಸಾಹಿತಿಯ ಜಯಂತಿ


"ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್!
ಕಾಲದಿಂದ ಮಾಸದಾ ವಿ
ಚಿತ್ರವೆಸಪನಾರ್?"
(ನಿವೇದನ - ನಿವೇದನ ಕವನ ಸಂಕಲನ)


ಎಂದು ಪ್ರಕೃತಿ ಸೊಬಗಿಗೆ ಬೆರಗಾಗಿ ದೇವರನ್ನು ನಿವೇದಿಸಿದ ಕವಿ,


"ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ |
ದೇವದೇವನ ಸೇವೆಗೈತರ್ಪ ಸಾಧುಕುಲಮಂ |
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ |
ಚಂಚಲತೆಗೆಡೆಯೆನೆಸಿ ನೀವಿಂತು ನಿಲುವುದೇಕೆ"
(ಬೇಲೂರಿನ ಶಿಲಾ ಬಾಲಿಕೆಯರು -ನಿವೇದನ ಕವನ ಸಂಕಲನ)


ಎಂದು ಬೇಲೂರು ಶಿಲಾಬಾಲಿಕೆಯರ ಸೌಂದರ್ಯ ಕಂಡು ಮೆಚ್ಚಿದ ಕವಿ,



"ವನಕುಸುಮದೊಳೆನ್ನ ಜೀ |
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ - ಹೇ ದೇವ

ಜನಕೆ ಸಂತಸವೀವ |
ಘನನು ನಾನೆಂದು |
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ||"
(ವನಸುಮ - ನಿವೇದನ ಕವನ ಸಂಕಲನ)


ಎಂದು ತನ್ನ ದೊಡ್ಡತನವನ್ನು ಮರೆಮಾಡುವಂತೆ ದೇವರನ್ನು ಬೇಡಿದ ದಾರ್ಶನಿಕ,



"ಮಗುಗಳಾಟದೆ ಮನಸು ಬೇಸರುವ ಮುನ್ನ
ನಗುವಾತಿನಿಂದಲೆ ವಿಕಸಿಸದ ಮುನ್ನ
ಜಗದಿ ನಾನೊಬ್ಬಂಟಿಯೆಂದೆನಿಮ ಮುನ್ನ
ಮುಗಿಯಲೀ ಬಾಳು
ಮಿಗುವೊಡದು ಗೋಳು"
(ಬಾಳೊಂದು ಗೋಳು - ಕೇತಕೀ ವನ ಕವನ ಸಂಕಲನ)


ಬದುಕಿನ ಗೋಳನ್ನು ಬರೆದ ಸಾಹಿತಿ

"ಆ ಹೊತ್ತಿನ ಊಟ, ಆ ರಾತ್ರಿಯ ನಿದ್ದೆ, ಅಂದಂದಿನ ಚಾಕರಿ, ಅಂದಂದಿನ ಪೇಚಾಟ, ಮಾರನೆ ದಿನ ಬಂದಾಗ ಅದರ ಯೋಚನೆ - ಹೀಗಿರುವುದು ಸರಿಯೇ? ಅಥವಾ ಹೊಟ್ಟೆಯ ಪಾಡಿನ ಯೋಚನೆಗಿಂತ ಮೇಲ್ಪಟ್ಟ ವಿಚಾರ ಏನಾದರೂ ಮನುಷ್ಯನ ಪಾಲಿಗೆ ಉಂಟೋ?"
(ಬದುಕು ಏಕೆ - ಬಾಳಿಗೊಂದು ನಂಬಿಕೆ
)

ಎಂಬ ಪ್ರಶ್ನೆಯನ್ನೆತ್ತಿದ ವಿಚಾರವಾದಿ. ಇದಕ್ಕೆ ಉತ್ತರವನ್ನು ತಿಳಿಸಿ ಸಾಮಾನ್ಯರಲ್ಲಿ ಬಾಳಿಗೊಂದು ನಂಬಿಕೆಯನ್ನು ತುಂಬಿದ ವಿದ್ವಾಂಸ.

"ಹಾ ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; ’ನಾಳೆ’ಯೆಂಬೆಯೊ? -ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ"
(ಉಮರನ ಒಸಗೆ)


ಎಂದು ಒಮರ್ ಖಯ್ಯಾಮನ ಲೋಕೋಪದೇಶವನ್ನು ಉಮರನ ಒಸಗೆಯಾಗಿ ಭಾವಾನುವಾದವನ್ನು ಕನ್ನಡಕ್ಕೆ ತಂದ ಕವಿ.

"ಜಲಡಿಯಲ್ಲಿ ಪಯಣಿಸಿ ನಾನತ್ತ ಆರುವೆನ್ ;
ಬಾಲವಿಲ್ಲದಿಲಿಯ ರೂಪವನ್ನು ತಾಳುವೆನ್;
ಮಾಡುವೆನ್, ಮಾಡುವೆನ್, ಮತ್ತೆ ಮಾಡುವೆನ್. "
(ಕನ್ನಡ ಮ್ಯಾಕ್ ಬೆತ್
)

ಶೇಕ್ಸ್ ಪಿಯರ್ಸ್ ನ ನಾಟಕವನ್ನು ಕನ್ನಡಕ್ಕೆ ತಂದ ನಾಟಕ ರಚನಕಾರ.

"ಎತ್ತಿರಣ್ಣ ಕತ್ತೆಲದ್ದಿಯ -ಸ-
ಮಸ್ತಜನರೆ - ಎತ್ತಿರಣ್ಣ ಕತ್ತೆಲದ್ದಿಯಾ ||
ಎತ್ತಿರಣ್ಣ ಕತ್ತೆಲದ್ದಿ
ಕತ್ತೆ ಬುದ್ಧಿಗೆ ಪ್ರಸಿದ್ಧಿ
ಬುದ್ಧಿಯ ರ್ಸಸಾರ ಲದ್ಧಿ
ಲದ್ದಿಯಿಂದ ಸರ್ವ ಸಿದ್ಧಿ"
(ಗರ್ದಭ ವಿಜಯ - ಪ್ರಹಸನತ್ರಯೀ
)

ಹಾಸ್ಯ ನಾಟಕಗಳನ್ನು ಕೊಟ್ಟ ವಿಕಟ ಕವಿ

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ವವ ಮೆರಸು ಮಂಕುತಿಮ್ಮ ||
(ಮಂಕು ತಿಮ್ಮನ ಕಗ್ಗ
)

ಎಂದು ಮಂಕುತಿಮ್ಮನಾಗಿ,
(ಸ್ವಾಮಿ ಬ್ರಹ್ಮಾನಂದರ ಮಂಕು ತಿಮ್ಮನ ಕಗ್ಗ ದ ಪ್ರವಚನ ಕೇಳಲು ಇಲ್ಲಿ ಒತ್ತಿ)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ|
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ|
ಕುಶಲತೆ ಸಮನ್ವಯವೊ - ಮರುಳ ಮುನಿಯ
(ಮರುಳ ಮುನಿಯನ ಕಗ್ಗ
)

ಎಂದು ಮರುಳ ಮುನಿಯನಾಗಿ

ನನ್ನಂತ ಸಾವಿರಾರು ಮಂಕು ತಿಮ್ಮರಿಗೆ, ಮರುಳ ಮುನಿಯರಿಗೆ ಬುದ್ಧಿವಾದ ಹೇಳಿದ ಹಿರಿಯ ಸಾಹಿತಿ.

"ಯದುವಂಶತಿಲಕನ - ವೇಷವಿದೇನೆ|
ಮದಿರಾಕ್ಷಿ ಮುರಳೀ - ನಾದವಿದೇನೇ||

ಮುರಳೀಗಾನವಿದೇನೆ - ತರಲಾಪಾಂಗವದೇನೆ|
ಸ್ಮರಸಂಭ್ರಮಾನಂದ-ಸ್ಮರಣೆಯಿದೇನೆ||"
(ಮುರಳೀಧರೆ - ಅನ್ತ:ಪುರಗೀತೆ
)


ಎಂದು ಬೇಲೂರಿನ ಚೆನ್ನಕೇಶವ ಗುಡಿಯ ಶಿಲ್ಪಕಲೆಗೆ ಮಾರು ಹೋಗಿ, ಅಲ್ಲಿನ ಕೆತ್ತನೆಯ ಬಹುತೇಕ ಎಲ್ಲಾ ವಿಗ್ರಹ ಗಳ ಮೇಲೂ ಕವಿತೆ ರಚಿಸಿದ ಮಹಾ ಕವಿ

ಮೇಲೆ ಪರಿಚಯಿಸಿದ್ದದ್ದಲ್ಲದೆ, ನಾಸ್ತಿಕರಿಗೆ, ಸಂದೇಹಕರ್ತ ರಿಗೆ (Agnostics) ಸೆಡ್ಡು ಹೊಡೆದು ಆಸ್ತಿಕವಾದ ವನ್ನು ತರ್ಕ ಬದ್ಧವಾಗಿ ಚರ್ಚಿಸಿ ’ದೇವರು’ ಎಂಬ ಪ್ರಬಂಧವನ್ನು, ಮಾಧ್ಯಮದ ಚರಿತ್ರೆ, ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ಚರ್ಚಿಸಿ ’ವೃತ್ತಪತ್ರಿಕೆಯನ್ನು’, ಸಾಮಾನ್ಯತಿಗೆ ಸಾಹಿತ್ಯ ಪ್ರಚಾರಕ್ಕಾಗಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ’ಸಾಹಿತ್ಯ ಶಕ್ತಿ’ ಯನ್ನು, ಸತ್ಯ ಧರ್ಮ ಪ್ರಗತಿ ಸಂಸ್ಕೃತಿ ವಿಷಯಗಳ ಚರ್ಚೆಯನ್ನೊಳಗೊಂಡ ’ಸಂಸ್ಕೃತಿ’ ಯನ್ನು, ’ಈಷೋಪನಿಷತ್ತು’, ’ಭಗವದ್ಗೀತಾ ಸಾರ ಅಥವಾ ಜೀವನ ಧರ್ಮ ಯೋಗ’, ’ಪುರುಷ ಸೂಕ್ತ’ ಗಳನ್ನು ಸಂಸ್ಕೃತದಿಂದ ಸರಳ ಕನ್ನಡಕ್ಕೆ, ರಾಜ್ಯಾಂಗ, ರಾಷ್ಟ್ರ - ರಾಷ್ಟ್ರಕ ನ ಸಂಬಂಧವನ್ನು, ಕರ್ತವ್ಯವನ್ನು ಚರ್ಚಿಸಿದ ’ರಾಜ್ಯಶಾಸ್ತ್ರ’ ವನ್ನು, ಮಕ್ಕಳಿಗಾಗಿ ’ಇಂದ್ರವಜ’ ’ಚಿಕ್ಕೋಜಿ’ ಕಥೆಗಳನ್ನು, ’ದಿವಾನ್ ರಂಗಾಚಾರ್ಲು’ ಮತ್ತು ’ಗೋಪಾಲಕೃಷ್ಣ ಗೋಖಲೆ’ ವಿಚಾರಗಳನ್ನು ಒಳಗೊಂಡ ಆತ್ಮ ಚರಿತ್ರೆಗಳನ್ನು, ’ಗೀತಾ ಶಾಂಕುತಲಂ’ , ’ಶೃಂಗಾರಮಂಗಳಂ’, ’ಶ್ರೀಕೃಷ್ಣಪರೀಕ್ಷಣಂ’ ಎಂಬ ಮಹಾ ಕಾವ್ಯಗಳನ್ನು, ’ವಸಂತ ಕುಸುಮಾಂಜಲಿ’ ಕವನ ಸಂಕಲನವನ್ನು, ತಮಗೆ ತಿಳಿದ ಹಿರಿಯ, ಕಿರಿಯ ಮಹಾನುಭಾವರ ೮ ಸಂಪುಟದ ’ಙ್ನಾಪಕ ಚಿತ್ರ ಶಾಲೆ’ ಯನ್ನು ( ೧) ಸಾಹಿತಿ ಸಜ್ಜನ ಸಾರ್ವ ಜನಿಕರು ೨) ಕಲೋಪಾಸಕರು ೩) ಸಾಹಿತ್ಯೋಪಾಸಕರು ೪) ಮೈಸೂರಿನ ದಿವಾನರುಗಳು ೫) ವೈದಿಕ ಧರ್ಮ ಸಮ್ಪ್ರದಾಯಸ್ಥರು ೬)ಹಲವು ಸಾರ್ವಜನಿಕರು ೭) ಹೃದಯ ಸಂಪನ್ನರು ೮) ಸ್ಮೃತಿ ಚಿತ್ರಗಳು ) ರಚಿಸಿ ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ, ಸಾರ್ವಜನಿಕ ಸೇವೆಯನ್ನು ಮಾಡಿದ ಮಹಾ ಧೀಮಂತ ಸಾಹಿತಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ನವರ ಜನ್ಮದಿನ ನಾಳೆ. (ಮಾರ್ಚ್ -೧೭). ಈ ಸಂದರ್ಭದಲ್ಲಿ ಡಿ ವಿ ಜಿ ಯವರ ಕೃತಿಗಳ ಪರಿಚಯದ ಜೊತೆ ಅವರ ಸಾಹಿತ್ಯದ ಕೆಲವು ತುಣುಕುಗಳನ್ನು ಕೂಡ ಸಂಗ್ರಹಿಸಿ ಒದಗಿಸಿದ್ದೇನೆ. ಓದುಗರು ಡಿ ವಿ ಜಿ ಯವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪ್ರತಿಕ್ರಿಯಿಸುವ ಮೂಲಕ ಹಂಚಿಕೊಳ್ಳಲು ವಿನಂತಿ .

ಸಮಾಜ ಸೇವಕ ಸಮಿತಿಯ ವತಿಯಿಂದ ನಾಳೆ ಅರ್ಥಪೂರ್ಣ ಆಚರಣೆ A D A ರಂಗಮಂದಿರದಲ್ಲಿ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಒತ್ತಿ. ನಾನು ಹಿಂದೆ ಎರಡು ಬಾರಿ ಈ ಸಮಿತಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹಿಂದಿನ ಕಾರ್ಯಕ್ರಮಗಳ ಸಿಹಿ ನೆನಪುಗಳು ಮನಸ್ಸಿನಿಂದ ಇನ್ನೂ ಮಾಸಿಲ್ಲ. ಬನ್ನಿ ಭೇಟಿಯಾಗೋಣ.