ಶನಿವಾರ, ಜೂನ್ 25, 2011

ಭೂಮಿಗುದುರಿತೆ ಜೀವ ಮತ್ತು ಇತರ ಪ್ರಶ್ನೆಗಳು - ಲೋಕಾರ್ಪಣೆ



ಮತ್ತೊಮ್ಮೆ, ಕೊನೆಯದಾಗಿ ಪ್ರೀತಿಯ ಆಗ್ರಹ, ಆಹ್ವಾನ.. ಪುಸ್ತಕ ಬಿಡುಗಡೆಗೆ ಬನ್ನಿ...


ಭೂಮಿಯ ಮೇಲೆ ಜೀವಬೀಜ ಬಿತ್ತನೆ ಹೇಗಾಯಿತು ಎಂಬ ಕೌತುಕದ ಭೂಮಿಗುದುರಿತೇ ಜೀವ? ಪ್ರಶ್ನೆಯಿಂದ ಇಲ್ಲಿನ ಲೇಖನ ಮಾಲೆ ಆರಂಭವಾಗುತ್ತದೆ. ಬೇರಾವುದೋ ಲೋಕದಿಂದ ಸೂಕ್ಷ್ಮಜೀವಿಗಳು ಬಂದು ಸೌರವ್ಯೂಹದ ಎಲ್ಲ ಗ್ರಹಗಳಿಗೆ ಜೀವಸಿಂಚನ ಮಾಡಿದವು (ಕೆಲವು ತಜ್ಞರ ಪ್ರಕಾರ ಈಗಲೂ ಮಾಡುತ್ತಿವೆ) ಎಂಬ ವಾದವನ್ನು ಒಪ್ಪಿಕೊಂಡರೆ ನಮ್ಮ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ಅವು ಬದುಕಿ ವಿಕಾಸವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ನಮ್ಮಲ್ಲಿ ಏಳುತ್ತದೆ. ಅದಕ್ಕೆ ಉತ್ತರ ರೂಪವಾಗಿ ಕೊನೆಯ ಲೇಖನವಿದೆ. ಜೀವಲೋಕದ ಈ ಆದಿ-ಅಂತ್ಯಗಳ ನಡುವೆ ಅರಿವಿನ ವಿರಾಟ್ ಜಗತ್ತನ್ನು ತೋರಿಸುವ ಇತರ ೨೫ ಆಸಕ್ತಿದಾಯಕ ಲೇಖನಗಳ ಸರಮಾಲೆ ಈ ಸಂಕಲದಲ್ಲಿದೆ. ಕೊನೆಗೊಂದು ವಿಶಿಷ್ಟ ಹಿನ್ನುಡಿಯೂ ಇದೆ. ಇಲ್ಲಿಂದ ಆರಂಭಿಸಿ ಅಲ್ಲಿಯವರೆಗೂ ಕ್ರಮಿಸಿ, ಅರಿವಿನ ಹೊಸಹೊಸ ಮಜಲುಗಳನ್ನು ಮುಟ್ಟಿ ಬರುವ ಅವಕಾಶ ಕನ್ನಡ ಓದುಗರಿಗಿದೆ.
---- ನಾಗೇಶ ಹೆಗಡೆ (ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು ಪುಸ್ತಕ ಮುನ್ನುಡಿಯಿಂದ)


ಸೋಮವಾರ, ಜೂನ್ 20, 2011

"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ




ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ

ಅಧ್ಯಕ್ಷತೆ : ಶ್ರೀ ನಾಗೇಶ ಹೆಗಡೆ
ಕೃತಿ- ಕರ್ತೃ ಪರಿಚಯ : ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ
ಕೃತಿ ಲೋಕಾರ್ಪಣೆ : ಶ್ರೀ ಟಿ ಆರ್ ಅನಂತರಾಮು

ಪೆನ್ ಸರ್ಕಲ್ ಗೌರವಾರ್ಪಣೆ

ಪ್ರೊ ಜೆ ಆರ್ ಲಕ್ಷ್ಮಣರಾವ್
ಪ್ರೊ ಅಡ್ಯನಡ್ಕ ಕೃಷ್ಣಭಟ್
ಶ್ರೀ ಆರ್ ಎಸ್ ರಾಜಾರಾಮ್
(ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ ಲಿ ಪರವಾಗಿ)

ಸನ್ಮಾನಿತರ ಪರಿಚಯ
ಶ್ರೀಮತಿ ಸುಮಂಗಲ ಮುಮ್ಮಿಗಟ್ಟಿ

ಕಾರ್ಯಕ್ರಮ ನಿರ್ವಹಣೆ
ಶ್ರೀ ಟಿ ಜಿ ಶ್ರೀನಿಧಿ

ನಿಮ್ಮ ನೆಜ್ಜಿನ ವಿಜ್ಞಾನ ಲೇಖಕರನ್ನೆಲ್ಲಾ ಒಟ್ಟಿಗೆ ಕಾಣಲು ಸದವಕಾಶ..
ನಾಲ್ಕು ವರೆಗೆ ಲಘು ಉಪಾಹಾರ ಇದೆ..
ದಯವಿಟ್ಟು ಜೊತೆಗೂಡಿ..


ನಯನ ಸಭಾಂಗಣ,
ಕನ್ನಡ ಭವನ,
ಜೆ ಸಿ ರಸ್ತೆ,
ಬೆಂಗಳೂರು - ೧,
ರವೀಂದ್ರ ಕಲಾಕ್ಷೇತ್ರದ ಪಕ್ಕ
ಸಂಜೆ ೫ ಕ್ಕೆ