ಬುಧವಾರ, ಜೂನ್ 24, 2009

ಪ್ರಶ್ನೆಪತ್ರಿಕೆ ಬಟಾ ಬಯಲು!

ಸಮರಸ ಹಾಸ್ಯ ಅಂಕಣದಲ್ಲಿ ಸಂಪಾದಕರು, ಪರೀಕ್ಷೆಗೆ ಮುಂಚೆ ಪ್ರಶ್ನೆ ಪತ್ರಿಕೆ ಬಯಲಾಗದೆ ಇರುವುದಕ್ಕೆ ಏನು ಮಾಡಬೇಕೆಂಬ ಚರ್ಚೆ ಇಲ್ಲಿದೆ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೆಶ್ನೆಪತ್ರಿಕೆ ಪರೀಕ್ಷೆಗೆ ಮುಂಚಿತವೇ ಬಯಲಾದ ಘಟನೆಯನ್ನು ವಿಷ್ಲೇಶಿಸಲು ಸಮರಸ ಟೀವಿ ಯಲ್ಲಿ ವಿಶೇಷ ಚರ್ಚೆಯನ್ನು ಏರ್ಪಡಿಸಿದ್ದೆವು. ಚರ್ಚೆಯಲ್ಲಿ ಭಾಗವಹಿಸಿದ್ದ (ನ)ಗಣ್ಯರು (ಕು)ಖ್ಯಾತ ರಾಜಕಾರಿಣಿ ಢಾ.ಕು.ಶಾ ಕುಮಾರ್, (ಕು)ಖ್ಯಾತ ಚಿಂತಕ ಜೋ. ಕೆ . ಗೋ ರಾವ್, (ಅ)ಸಂಸ್ಕೃತ ಪಂಡಿತ ನಾನೆ ಆಚಾರ್ಯ, ಜ್ಯೋತಿಷಿ ಸೋಮಾರಿಯಾಜಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಘನವೆತ್ತ ವಿದ್ಯಾರ್ಥಿಗಳು.

ಪ್ರಶ್ನೆ ಪತ್ರಿಕೆ ಬಯಲಾಗುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಸಮರಸ ಟೀವಿಯವರು ನಾನೆ ಅಚಾರ್ಯ ರವರಿಗೆ ಕೇಳಿದಾಗ,

ನಾನೆ ಆಚಾರ್ಯರವರು, ನೋಡಿ ಈಗಿನ ಶಿಕ್ಷಣ ಪದ್ಧತಿ ಇದೆಯೆಲ್ಲಾ ಇದು ಶೂನ್ಯ. ನಾವು ೧೦೦೦ - ಒಂದರ ಮುಂದೆ ಮೂರು ಶೂನ್ಯ ವರ್ಷ ಹಿಂದೆ ಹೋಗಿ ನೋಡಬೇಕು. ಆಗಿನ ಗುರು-ಕುಲ ಪದ್ಧತಿಗೆ ಈಗಿನ ಶಿಕ್ಷಣ ಪದ್ಧತಿ ಸಾಟಿಯಿಲ್ಲ. ಆಗ ವಿದ್ಯಾರ್ಥಿಗಳು ಮರಳಿನ ಮೇಲೆ ತಿದ್ದಿ ವಿದ್ಯೆ ಕಲಿಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಎಲ್ಲಿ? ಅದು ಬಯಲಾಗುವುದು ಎಲ್ಲಿ? ಇಂದು ನಾವು ಆ ಮರಳಿನ ಮೇಲೆ ತಿದ್ದುವ ಶಿಕ್ಷಣಕ್ಕೆ ಮರಳಿ ಹೋಗಬೇಕೆಂದರು. ಹೀಗೆಂದ ಕ್ಷಣ ಘನವೆತ್ತ ವಿದ್ಯಾರ್ಥಿಗಳು ತಮ್ಮ ಮುಂದೆ ಕುಳಿತವರ ಬೆನ್ನು ತಟ್ಟಿ ನಾನೆ ಆಚಾರ್ಯರ ಮಾತುಗಳನ್ನು ಸಮರ್ಥಿಸಿದ್ದು ವಿಶೇಷ. ಮುಂದೆ ಓದಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ