ಬುಧವಾರ, ಆಗಸ್ಟ್ 05, 2009

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮರುಜೀವ ತುಂಬುವರು ಯಾರು?

ಸಮರಸದಲ್ಲಿ ರಾಜ್ ಬರೆಯುತ್ತಾರೆ!

ಕಳೆದ ಎರಡು ವಿದಾನಸಭೆ ಚುನಾವಣೆಗಳಲ್ಲಿ ಸೋಲು, ಮರುಚುನಾವಣೆಯಲ್ಲಿ ಮುಖಭಂಗ, ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ.ಸುಮಾರು ಒಂದು ದಶಕದಿಂದ, ಕರ್ನಾಟಕದ ಕೈ ಪಕ್ಷ ಅಧಃಪತನದ ಹಾದಿ ತುಳಿಯುತ್ತಿರುವುದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ. ೫೦ ಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಪಕ್ಷದಲ್ಲಿ ನಾಯಕರಿಗೆ ಕೊರತೆಯೇ? ಅಥವಾ ಅಧಿಕಾರ ಲಾಲಸೆಗಾಗಿ ಕಚ್ಚಾಟವೆ, ಎಲ್ಲರೂ ನಾಯಕರೆನಿಸುವ ಚಪಲವೇ? ನಿಷ್ಟರ ಮತ್ತು ವಲಸಿಗರ ತಿಕ್ಕಾಟವೇ? ಕಾಂಗ್ರೆಸ್ ಹಳೆಯ ಪಕ್ಷವಾಯಿತು ಎಂದು ಜನ ಬೇಸತ್ತರೆ? ಇವುಗಳ ಒಟ್ಟು ಸಮ್ಮೇಳವೇ? ಈ ಎಲ್ಲಾ ತೊಂದರೆಗಳನ್ನು ಮೆಟ್ಟಿ ಮುಂಬರುವ ವಿಧಾನಸಭಾ ಮರುಚುನಾವಣೆ ಮತ್ತು ಬಿ ಬಿ ಎಂ ಪಿ ಚುನಾವಣೆಗಳಲ್ಲಿ ಕಾಂಗ್ರೆಸ್ ಮರುಜೀವ ಪಡೆದುಕೊಳ್ಳಲು ಸಾಧ್ಯವೇ? ಅದು ಒಂದು ಪಕ್ಷ ಸಾಧ್ಯವಾದರೆ ಯಾರಿಂದ? ಎಂಬಿತ್ಯಾದಿ ಪ್ರಶ್ನೆಗಳಿಗೆ, ಬುದ್ಧಿಗೆ ಚಿಂತನೆಯನ್ನು ಒಡ್ಡಬಲ್ಲ ಚರ್ಚೆ, ಒಂದು ಅವಲೋಕನ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ