ಶುಕ್ರವಾರ, ಅಕ್ಟೋಬರ್ 27, 2006

ಈಗ ಕನ್ನಡ ಕರಣನ ಸರದಿ

ನನ್ನ ಈ ಬ್ಲಾಗು ಸ್ವಲ್ಪ ಚಟುವಟಿಕೆಯಿಂದ ಇರಲಿ ಅಂತ ಈ ಹಿಂದೆ ಬರೆದಿದ್ದನ್ನೆಲ್ಲಾ ಈಗ ಪ್ರಕಟಿಸ್ತಾ ಇದ್ದೀನಿ...

ಈಗ ಕನ್ನಡ ಕರಣನ ಸರದಿ

ಈ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿ ಕಾಣಬಹುದು!!! ಆದರೆ ನೀವು ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ ಐಶ್ವರ್ಯ ನೋಡಿದ್ದರೆ ನಿಮಗೆ ಸುಳಿವು ಸಿಕ್ಕಿರುತ್ತೆ. ಹೌದು ಇದು ನಮ್ಮ ಕನ್ನಡದ ಕರಣ್ ಜೋಹರ್ ಎಂದೇ ಕರೆಯಬಹುದಾದ ಇಂದ್ರಜಿತ್ ಲಂಕೇಶರ(ನಿರ್ದೇಶನದ) ಮೂರನೆ ಸಾಹಸ 'ಐಶ್ವರ್ಯ' ಚಿತ್ರದ ವಿಮರ್ಶೆ!!!

ಈ ಚಿತ್ರದಲ್ಲಿ ಬಹಳ ಕಡೆ Itch gaurd ಜಾಹೀರಾತಿನ ಬಳಕೆ ಆಗಿದೆ. ಬಹುಶಃ ನಿರ್ದೇಶಕರು ಮೊದಲೇ ಊಹೆ ಮಾಡಿದ ಹಾಗಿದೆ!! ಈ ಚಿತ್ರ ನೋಡಿ ಜನ ಮೈ ಕೈ ಪರಚಿಕೊಳ್ಳೋದ್ ಅಂತು ನಿಜಾ.. ಯಾಕೆ ಇದಕ್ಕೆ ಪೂರಕವಾದ ಒಂದು ಉತ್ಪನ್ನಕ್ಕೆ ಜಾಹೀರಾತು ಪ್ರಚಾರಕ ಆಗ್ಬಾರ್‍ದು ಅಂತಾ?? ಬಹಳ ನಿಜ ನಿರ್ದೇಶಕರೇ.. ನಿಮ್ಮ ಊಹೆ ಸಂಪೂರ್ಣ ನಿಜ.. ನಾವೆಲ್ಲಾ ಮೈ ಕೈ ಪರ್ಚ್ಕೊಂಡಿದ್ದಂತೂ ಸತ್ಯ!! ನಮ್ಗೆ ಮುಂಚಿತವಾಗಿ ಗೊತ್ತಿರ್‍ಲಿಲ್ಲ..Itch gaurd ತಗೊಂಡ್ ಹೋಗ್ಬೇಕು ಅಂತ.. ಇನ್ನು ಮುಂದೆ ಹೋಗೋರ್‍ಗೆ ಸಹಾಯ ಆಗ್ಲಿ ಅನ್ನೊ ಉದ್ದೇಶವೇ ಈ ವಿಮರ್ಶೆ.

ಇನ್ನು ಸಂಭಾಶಣೆಯಂತೂ ಬಹಳ ಹಳಸು ಮತ್ತೆ ಎಳಸು.. ಹಳಸು ಯಾಕಂದ್ರೆ ಬಹಳ ಚಿತ್ರ ವಿಮರ್ಶೆಗಳಲ್ಲಿ ಬರ್‍ದಿದಾರೆ.. (ಉದಾ: ಪ್ರಜಾವಾಣಿ) ಬಹುಶಃ ಎಲ್ಲ ಹಾಸ್ಯ ದೃಶ್ಯಗಳೂ/ಸಂಭಾಷಣೆ ತಮಿಳು ತೆಲುಗು ಚಿತ್ರಗಳಿಂದ(ಉದಾ: ಗಝನಿ.. ಇದೂ ಕೂಡ ಆಂಗ್ಲ ಚಲನಚಿತ್ರ memento ದ ನಕಲು ಅನ್ನೋದ್ನ ಮರೀಬಾರ್‍ದು) ಯಥಾವತ್ತಾಗಿ ಎತ್ತಿರೋದಂತೆ!!! ಇನ್ನು ಎಳಸು ಯಾಕಂದ್ರೆ ಯಾವ ಸಂಭಾಷಣೆಯೂ ಮನಸ್ಸಿಗೆ ಮುದ ಕೊಡೊಲ್ಲಾ.. ಬದಲಿಗೆ ಬರೀ ಹಿಂಸೆ(ಮನಸ್ಸಿಗೆ ಹಿಂಸೆ)!!! ಉಪೇಂದ್ರನ ನಟನೆ ಮತ್ತೆ ಸಂಭಾಷಣೆ ಎಣ್ಣೆ ಸೀಗೆಕಾಯಿ...

ಇನ್ನು ಬಹಳ ಹೊಲಸು ಎಂದರೆ ಓಮ್ ಪ್ರಕಾಶ್ ರಾವ್ ರವರ ನಟನೆ.. ಕೆರ್‍ಕೊಂಡಿದ್ದೆಲ್ಲಾ ಗಾಯ ಆಗೋದು ಈ ಮಹಾಶಯ ಚಿತ್ರದಲ್ಲಿ ಬರೋ ೧೫ ನಿಮಿಷಗಳ ಸಮಯದಲ್ಲಿ.. ಬಹಳ ಅತಿರೇಕದ ನಟನೆ.. ಯಾವಾಗ ಕಣ್ಮರೆ(ಚಿತ್ರದಿಂದ) ಆಗ್ತಾನೋ ಅಂತ ಜನ ಕಾಯ್ತಾ ಇರ್‍ತಾರೆ.. ಓಮ್ ಪ್ರಕಾಶ್ ರಾವ್ ರವರೆ ಎಲ್ಲಾ ನಿರ್ದೆಶಕನೂ ನಟ ಆಗೋಕ್ ಆಗೊಲ್ಲಾ... ಎಲ್ಲರೂ ಉಪ್ಪಿ ಆಗೋಕ್ ಆಗೊಲ್ಲಾ...

ಶರಣ್ ಬರ್‍ತಾರೆ.. ಹೊಗ್ತಾರೆ... ಯಾರೂ ನಗೋಲ್ಲಾ.. ಅಂತಾ ಉತ್ತಮ ಹಾಸ್ಯನಟನನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡಿರೋದೆ ಹಾಸ್ಯಾಸ್ಪದ..

ಇನ್ನು ದೊಡ್ಡಣ್ಣ ಮತ್ತೆ ಕೋಮಲ್ ಕೂಡ ಇದಕ್ಕೆ ಹೊರತಲ್ಲ.. ಆದರೆ ತಕ್ಕ ಮಟ್ಟಿಗೆ ಪರವಾಗಿಲ್ಲ ಎನ್ನಬಹುದು..

ಡೈಸಿ ಬೊಪಣ್ಣಂದೂ ಅದೇ ಕಥೆ... ಹಿಂಸೆ!!!

ಮೊದಲೆ ಹೇಳ್ದೆ ಉಪ್ಪಿ ಬಗ್ಗೆ.. ಆದ್ದರಿಂದ ಉಪ್ಪಿ ಸಾಧಾರಣ ಅನ್ನಬಹುದು...

ಇನ್ನು ಸಾಧುಕೋಕಿಲ ಒಂದತ್ತು ನಿಮಿಷ ಕಚಗುಳಿ ಕೊಡುತ್ತಾರೆ ಎನ್ನುವುದು ಸಮಾಧಾನದ ವಿಷಯ..

ನಾವು ಹೊಗಿದ್ದ್ ಬೇರೆ ಆ ಕಿತ್ತೋದ್ ಚಿತ್ರ ಮಂದಿರ ಸಾಗರ್!!!! ಅಲ್ಲಿ ಕಾಲು ಅಲ್ಲಾಡಿಸ್ದ್ರೆ ಸಾಕು ಎದ್ರೂಗ್ ಕೂತ ಮಹರಾಯ ಚಿತ್ರ ನೊಡೋದ್ ಬಿಟ್ಟು ನನ್ನ ಕಾಲೇ ನೋಡ್ಕೋಂಡ್ ಕೂತ್ ಬಿಡ್ತಿದ್ದ.. ನಂಗೆ ಕೆರ್‍ಕೊಳ್ಳೊಕ್ಕೂ ಆಗ್ದು ಬಿಡೊಕ್ಕೂ ಆಗ್ದು!!! ಸರಿ ಸರಿ ಇದು ಚಿತ್ರ ಮಂದಿರದ ವಿಮರ್ಶೆ ಆಗೋದು ಬೇಡ.. ಇದ್ನ ಇಷ್ಟೊಂದು ದುಖದಿಂದ ಯಾಕ್ ಹೆಳ್ತಾ ಇದ್ದೀನಿ ಅಂದ್ರೆ ಈ ಮಹಾ ನಿರ್ದೇಶಕನ ಎಲ್ಲ ಕೆಟ್ಟ ಚಿತ್ರಗಳನ್ನೂ (ತುಂಟಾಟ, ಮೊನಾಲೀಸಾ, ಐಶ್ವರ್ಯ) ಈ ಕೆಟ್ಟ ಚಿತ್ರ ಮಂದಿರದಲ್ಲೇ ದುಡ್ಡು ಕೊಟ್ಟು ನೋಡಿದ್ದು.. :-( ಆ ದುಖಃ ತಡ್ಕೋಳ್ಳಾಕ್ ಆಗ್ದೆ ಹೇಳ್ಬಿಟ್ಟೆ..

ಇನ್ನು ಮನಸ್ಸಿಗೆ ಮುದ ಕೊಡುವ ಸಂಗತಿ ಚಿತ್ರದಲ್ಲಿ ಅಂದ್ರೆ ೩ ಹಾಡುಗಳು.. ಕಣ್ ಮನಗಳನ್ನು ತಣಿಸುತ್ತವೆ.. ಇವು ಇಲ್ಲಿ ಸ್ವಾಭಾವಿಕ Itch gaurd ಎಂದೇ ಹೇಳಬಹುದು.. ಚಲನಚಿತ್ರದ ಆಕರ್ಷಣೆ ಈ ಮೂರು ಹಾಡುಗಳು ಮತ್ತು ದೀಪಿಕಾ ಪಡುಕೋಣೆ ಎಂಬ ಬೆಡಗಿಯ ಅದ್ಭುತ ಸೌಂದರ್ಯ!!
ಕುನಾಲ್ ಗಾಂಜಾವಾಲ್ ರವರ ಗಾಯನ ಬಹಳ ಚೆನ್ನಾಗಿದೆ.
ಹಾಡುಗಳೆಂದರೆ ಹುಡುಗಿ ಹುಡುಗಿ.. ಇದು ದೀಪಿಕಾಳ ಮುಖ ಸೌಂದರ್ಯಕ್ಕೆ ಮೀಸಲಾದರೆ ಇನ್ನೆರಡು ಹಾಡುಗಳು (ಮನ್ಮಥಾ,ಐಶ್ವರ್ಯ ಐಶ್ವರ್ಯ) ಅಂಗ ಸೌಂದರ್ಯವನ್ನು ಮೆರೆಯುತ್ತವೆ.. ಇವುಗಳನ್ನು ವಿವರಿಸೋಕ್ಕೆ ಪುಟಗಳೆ ಬೇಕು.. ನೀವೆ ಕಣ್ಣಾರೆ ಸವಿಯುವುದು ವಾಸಿ.. :D

ಈ 'ಪದ ಜೋಡನೆ' (ಈಗಿನ ಹಾಡುಗಳಿಗೆ ಇನ್ನೊಂದು ಹೆಸರು) ಬಹಳ ಕೆಟ್ಟದಾಗಿದೆ.. 'ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ'.. ಪ್ರೀತಿ ನಾಮಪದ/ಗುಣಾತ್ಮಕ/ಕ್ರಿಯಾಪದಗಳಾಗಿ ಬಳಕೆಯಾಗಿದೆ.. ಇದನ್ನ ಬರೆದವ ಇದ್ನೆ ಸೃಜನಶೀಲತೆ ಅಂದ್ಕೊಂಡ್ ಬಿಟ್ಟಿದಾನೇನೊ?? ಇದು ಬಹಳ ವಿಷಾದಕರ ಸಂಗತಿ.. ಈ ರೀತಿ ಕನ್ನಡವನ್ನು ಕನ್ನಡ ಚಿತ್ರಗಳಲ್ಲೆ ಕೊಲ್ತಾ ಇರೋದು :-(

ಪಡುಕೋಣೆಯ ನಟನೆ ಪರವಾಗಿಲ್ಲ.. ಮೊದಲನೆ ಚಿತ್ರವಾದರೂ ಅಬ್ಬರದ ನಟನೆ ಇಲ್ಲಾ.. ಇನ್ನೂ ಸುಧಾರಿಸಿಕೊಳ್ಳಬಹುದಿತ್ತು.. ಆದರೆ ಜನರಿಗೆ ಬೇಕಾದ್ದನ್ನು ಅವರು ಕೊಟ್ಟಿದ್ದಾರೆ.. ಅವರು ತಮ್ಮ ಕಾರ್ಯದಲ್ಲಿ ಸಫಲಗೊಂಡಿದ್ದಾರೆ ಎನ್ನಬಹುದು..

ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ್ದ ಛಾಪನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಇದ್ದಾರೆ ಅನ್ನೋದಕ್ಕೆ ಈ ಚಿತ್ರ ಇನ್ನೊಂದು ನಿದರ್ಶನ...

ಜೇಬಲ್ಲಿ ಜಾಸ್ತಿ ದುಡ್ಡು ಕಡೀತಾ ಇದ್ರ್‍ಎ... ಇಂದ್ರಜಿತ್ ಕೈಲೇ ಕೆರ್‍ಸ್ಕೋಬೇಕು ಅನ್ನೋ ಮನಸ್ಸಿದ್ದರೆ ನೋಡಬಹಿದಾದ ಚಿತ್ರ...

ನನ್ನ ದುಖಃ ನಾ ತೋಡ್ಕೊಂಡೆ.. ನೋಡೋದು ಬಿಡೋದು ನಿಮಗೆ ಬಿಟ್ಟಿದ್ದು...

ಕಿರು ಸೂಚನೆ: ಈ ಮೇಲಿನದ್ದೆಲ್ಲಾ ನನ್ನ ವ್ಯಯಕ್ತಿಕ ಅಭಿಪ್ರಾಯಗಳಾಗಿರುತ್ತವೆ. ನೀವು ಕರಣ್, ಇಂದ್ರಜಿತ್, ಉಪ್ಪಿಯವರ ಅಭಿಮಾನಿಗಳಾಗಿದ್ದು ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ..

ಗುರುಪ್ರಸಾದ್ ಡಿ ಎನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ