ಶನಿವಾರ, ಅಕ್ಟೋಬರ್ 28, 2006

ಬೆಂಗಳೂರು ಯಾರಿಗೆ ಸೇರ್‍ಬೇಕು ???

ಬೆಂಗಳೂರು ಯಾರಿಗೆ ಸೇರ್‍ಬೇಕು ???
ಈ ಸ್ವಲ್ಪ ದಿನದ ಹಿಂದೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಬಹಳ ವಿಜೃಂಭಣೆಯಿಂದ ನಡೆಯಿತು. ಅದರ ಜೊತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಒಂದು ಬೃಹತ್ ಸಮಾವೇಶ ಕೂಡ ಜರುಗಿ ಅದರಲ್ಲಿ ಮಹಾರಾಷ್ಟ್ರದ ಸದರಿ ಉಪಮುಖ್ಯಮಂತ್ರಿ ಭಾಗವಹಿಸಿ ಅಸಂಭದ್ಧ ಭಾಷಣ ಕೂಡ ಬಿಗಿದ್ರು.. ಬಿಗ್ದ ಅನ್ನೋದ್ ಸೂಕ್ತ ಅನ್ಸುತ್ತೆ. ಬೆಳಗಾವಿಯಲ್ಲಿ ಮರಾಠಿಗಳು ಇರೋದ್ರಿಂದ ಅದ್ನ ಮಹಾರಾಷ್ಟ್ರಕ್ಕೆ ಸೇರಿಸ್ಬೇಕಂತೆ.. ಎಂತಹ ದುರುದೃಷ್ಟಕರ ಉದ್ದೇಶ!!! ಹಾಗಾದ್ರೆ ನಾವು ಊಟಿ (ಇದರ ಮೂಲ ಹೆಸರು ಉದಕ ಮಂಡಲ.. ಕನ್ನಡದ್ದು) , ಸೊಲ್ಲಾಪುರ, ಕಾಸರಗೋಡು ಇವೆಲ್ಲಾ ಕಡೆಗಳಲ್ಲೂ ಜಗಳ ತೆಗಿಬೋದಲ್ವ!! ಆದರೆ ಕನ್ನಡಿಗರು ಉದಾರರು.. ಸೌಜನ್ಯರು.. ಆದ್ದರಿಂದಲೇ ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಬರೀ ಶೇಕಡ ೨೮!! ಆಶ್ಚರ್ಯ ಆಗ್ಬೋದು.. ಆದ್ರೆ ಕನ್ನಡಿಗರಿಗೆ ದುಖಃ ಆಗೋಲ್ಲಾ.. ನಮ್ಮವರು ಪರೋಪಕಾರಿಗಳು.. ಪರರ ಉಪಕಾರಕ್ಕಾಗಿ ತಮ್ಮ ಭಾಷೇನೆ ಮರೆತು ಇತರ ಭಾಷೆಗಳನ್ನು ಕಲಿಯೊವಷ್ಟು ಉದಾರ ಮನೋಭಾವನೆ.. ಎಷ್ಟೇ ಆಗ್ಲಿ ಉದಾರೀಕರಣ ಯುಗ ಅಲ್ವೇ.. ನಮ್ಮ ಕನ್ನಡಿಗರ ನರ ನಾಡಿಗಳಲ್ಲೂ ಹರೀತಾ ಇದೆ ಉದಾರೀಕರಣ ರಕ್ತ.. ಸರಿ ವಿಷಯದಿಂದ ಪಲ್ಲಟ ಆಗೋದು ಬ್ಯಾಡ..

ನಾ ಹೇಳ್ಬೇಕು ಅಂತಾ ಇದ್ದಿದ್ದು ಇಷ್ಟು.. ಹೀಗೇ ಬೆಳಗಾವಿ ಅಧಿವೇಶನ ನಡಿತಾ ಇರೋ ಸಂಧರ್ಭದಲ್ಲಿ ನಾವು (ನಾನು, ನಿತಿನ, ರವೀಶ, ಶ್ರೀಹರ್ಷ) ಎಂದಿನಂತೆ ಮಧ್ಯಾಹ್ನದ ಭೋಜನ ಮುಗಿಸಿ ರಾಜ್ಯದ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡ್ತಾ ಕೂತೊ. ಹೀಗೆ ಮಹಾರಾಷ್ಟ್ರ ಬೆಳಗಾವೀನ ನುಂಗೋಕ್ಕೆ ಹೂಡ್ತಾ ಇರೋ ಸಂಚು, ಶಿವರಾಜ್ ಪಾಟೀಲ್ ಒತ್ತಡಕ್ಕೆ ಮಣಿದು ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಾಜನ್ ವರದಿ ಅನುಷ್ಟಾನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದ್ದು ಎಲ್ಲಾ ಚರ್ಚೆ ಆಗ್ತಾ ಇತ್ತು.

ಆಗ ಒಂದು ಯೋಚ್ನೆ ಬಂತು ನಿತಿನನ ತಲೇಗೆ.. ಹೀಗೆ ಆಯಾ ಪ್ರದೇಶದ ಭಾಷಾ ಜನಸಾಂದ್ರತೆ (ಒಂದು ಪ್ರದೇಶದಲ್ಲಿ ಒಂದು ಭಾಷೆಯನ್ನು ಬಳ್ಸೋ ಮಂದಿ (ಭಾಷಿಕರು) ಜಾಸ್ತಿ ಇರೋ ಆಧಾರದ ಮೇರೆಗೆ) ಪ್ರಕಾರ ಹೀಗೆ ಕಿತ್ತಾಡ್ತಾ ಹೋದ್ರೆ
ಬೆಂಗ್ಳೂರ್‍ನ ಯಾವ ರಾಜ್ಯಕ್ಕೆ ಸೇರಿಸ್ಬೇಕು??? ಬಸವನಗರದಲ್ಲಿ ಬಹು ಮಂದಿ ಕೇರಳಾದ ಜನ ಇದಾರೆ.. ಅವರಿಗೆ ಬಹು ಮಂದಿಗೆ ಕನ್ನಡ ಬರೋದೆ ಇಲ್ಲ.. ಇದ್ನ ಕೇರಳಕ್ಕೆ ಕೊಟ್ಬಿಡೋಣ?? ಇನು ಶ್ರೀರಾಮಪುರ, ಚಾಮರಾಜ ಪೇಟೆ ಹೀಗೆ ಇಲ್ಲೆಲ್ಲಾ ಬರೀ ತಮಿಳರೇ ಇರೋದು.. ಅದ್ನ ತಮಿಳ್ನಾಡಿಗೆ ಕೊಟ್ಬಿಡೋಣ??

ಒಂದು ಕೈ ಮುಂದೆ ಹೋಗಿ ನಮ್ಮ ನಮ್ಮ ದುಷ್ಟ ರಾಜಕಾರಣಿಗಳು ಶಿವಾಜಿನಗರದಲ್ಲಿ ಬಹುಮಂದಿ ಉರ್ದು ಭಾಷಿಕರೇ ಇರೋದು ಇದ್ನ ಕಾಶ್ಮೀರಕ್ಕೆ ಸೇರ್ಸಿ ಅಂದ್ರೆ??? ಒಂದು ಹೆಜ್ಜೆ ಇನ್ನೂ ಮುಂದೆ ಹೋಗಿ ಪಾಕೀಸ್ತಾನಕ್ಕೆ ಸೇರ್ಸಿ ಅಂದ್ಬಿಟ್ರೆ, ಇಲ್ಲೂ ಒಂದು ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿ ಮಾಡೋ ಅಂತ ನೀಚತನಕ್ಕೆ ನಮ್ಮ ರಾಜಕಾರಣಿಗಳು ಇಳಿಯೋಲ್ಲ ಅನ್ನೋಕ್ಕೆ ಆಗೊಲ್ಲ!!! (ಮೊನ್ನೆ ಉಗ್ರಗಾಮಿಗೆ ಗಲ್ಲು ಶಿಕ್ಷೆ ಕೊಡಬೇಡಿ... ಕ್ಷಮಾದಾನ ಕೊಡಿ.. ಅಂತ ದೇಶಾದಾದ್ಯಂತ ಒಡಕು ಸೃಷ್ಟಿಸಿದ ನೀಚರು ಈ ಹೇಸಿಗೆ ಕೆಲ್ಸಕ್ಕೂ ಕೈ ಹಾಕಲಾರರೆ??).. ಆಮೇಲೆ ಮಹಾತ್ಮ ಗಾಂಧಿ ರಸ್ತೆ ಸುತ್ತ ಮುತ್ತಲ ಪ್ರದೇಶಗಳನ್ನು ಇಂಗ್ಲೆಂಡಿಗೆ ಕೊಟ್ಟು ನಾವು ಕನ್ನಡಿಗರು ಎಲ್ಲಿ ಹೋಗುವ???

ಬೆಳಗಾವಿಯಲ್ಲಿ ಮರಾಠಿಗರಿಗೇನು ಮರಾಠಿ ಶಾಲೇಗಳ ಕೊರತೆ ಇಲ್ಲ.. ಜನ ಸಾಮಾನ್ಯರಿಗೆ ಅಲ್ಲಿ ಕನ್ನಡ ಮರಾಠಿ ಎರಡೂ ಒಂದೆ.. ಬೇರೆ ಬೇರೆ ಅಲ್ಲ.. ಎಲ್ಲರಿಗೂ ಸಾಮಾನ್ಯವಾಗಿ ಎರಡೂ ಭಾಷೆಗಳಲ್ಲಿ ಪ್ರಾವೀಣ್ಯತೆ ಇರುತ್ತೆ.. ಕರ್ನಾಟಕದಲ್ಲಿ ಅವರಿಗೆ ಎನೂ ಕೊರತೆ ಇಲ್ಲ... ಇನ್ನು ಕೊರತೆ ಯಾರೀಗ್ ಇರೋದು?? ಮಹಾರಾಷ್ಟ್ರದ ರಾಜಕಾರಣಿಗಳಿಗೆ!! ಮಹಾರಾಷ್ಟ್ರ ಏಕೀಕರಣ ಸಮಿತಿ ಅಂತ ಮಾಡ್ಕೋಂಡು ಧಾಂಧಲೆ ಎಬ್ಬಿಸ್ತಾ ಇರೋ ತಲೆ ಹಿಡುಕರಿಗೆ!!

ಇದಕ್ಕೆ ಪರಿಹಾರ ಏನು??? ಒಂದು ಬಾರಿ ಭಾಷಾವಾರು ಪ್ರಾಂತ್ಯ ರಚನೆ ಆದಮೇಲೆ ಅದನ್ನ ಎಲ್ಲಾರು ಒಪ್ಪಿಕೊಳ್ಳಬೇಕು.. ಅದನ್ನ ರಾಜಾಕೀಯ ದುರುದ್ದೇಶಕ್ಕೆ ಬಳಸೋದು ಸಲ್ಲ... ಯಾರು ಎಷ್ಟೆ ಅರಚಿ ಕಿರುಚಿದರೂ ಬೆಳಗಾವಿ ನಮ್ಮದು ಎಂಬ ಪ್ರತ್ಯುತ್ತರವನ್ನು ಸಮರ್ಪಕವಾಗಿ ಕೊಡ್ಬೇಕು!!! ಯಾವ ಏನ್ ತಿಪ್ಪೂರ್ ಲಾಗ ಹೊಡೆದ್ರೂ ಮಹಾಜನ್ ವರದಿಯೇ ಅಂತಿಮ (ಈ ಆಯೋಗ ಎರಡೂ ರಾಜ್ಯಗಳ ಒಪ್ಪಿಗೆಯಿಂದ ರಚಿಸಲ್ಪಟ್ಟಿದ್ದು ಎಂಬುದು ಪ್ರಮುಖ ಅಂಶ) ಅನ್ನೋ ನಿಳುವಳಿ ಯನ್ನು ತಾಳಿ ಬೆಳಗಾವಿಯಲ್ಲಿರೋ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಲು ಶ್ರಮ ಪಡಬೇಕು.. ಕನ್ನಡಿಗರೆಲ್ಲಾ ಒಂದಾಗಿ ಭಾಷಾಭಿಮಾನ ಪ್ರದರ್ಶಿಸಬೇಕು.. ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಯಶಸ್ವಿ ಬಂದ್ ಒಂದು ಉದಾಹರಣೆ. ಅದರಿಂದ ಸ್ವಲ್ಪ ನಷ್ಟ ಆಗಿರ್‍ಬೋದು.. ಆದರೆ ಭಾಷೆ, ರಾಜ್ಯ ಬೆಳವಣಿಗೆ ಆ ನಷ್ಟ ತೃಣ ಸಮಾನ!!! ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬಲ್ಲೆವು ಅಂತ ಸ್ಪಷ್ಟ ಸಂದೇಶ ಕೊಟ್ಟಿದ್ದೀವಿ ಇಡೀ ದೇಶಕ್ಕೆ....

ಜೈ ಕರ್ನಾಟಕ ಮಾತೆ!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ