ಶುಕ್ರವಾರ, ಜನವರಿ 23, 2009

ಎಲ್ಲರು ಮಾಡುವುದು ಹೊಟ್ಟೆಗಾಗಿ?

two tyred? too tired?

ನಿಮ್ಮ ಗೆಳೆಯ ನಿಮ್ಮನ್ನು ಎದುರಾದಾಗ ನಿಮ್ಮ ಹೊಟ್ಟೆಯ ಮೇಲೆ ಪ್ರೀತಿಪೂರ್ವಕವಾಗಿ ಹೊಡೆದು ಮಾತಾನಾಡಿಸುತ್ತಿದ್ದಾನೆಯೆ? (ಬೆನ್ನಿನ ಮೇಲೆ ಬೀಳಬೇಕಾದ ಆ ಗುದ್ದು ಹೊಟ್ಟೆಯ ಕಡೆಗೆ ಜಾರಿದೆಯೆ?) ಸ್ವಲ್ಪ ದೂರ ನಡೆದರೆ ’ಉಸ್ಸಪ್ಪ’ ಎನ್ನುವಂತಾಗಿದೆಯೆ? ಬಗ್ಗುವುದು, ವ್ಯಾಮಮಗಳು ಇವುಗಳನ್ನೆಲ್ಲಾ ಜಗತ್ತಿನಿಂದ ಬಹಿಷ್ಕರಿಸಬೇಕೆನ್ನಿಸುತಿದೆಯೆ? ನಿಮ್ಮ ಕೆಳ ಉಡುಪುಗಳು ಬಿಗಿಯಾದವೆ? ಸೊಂಟ ಪಟ್ಟಿಯ ಅವಶ್ಯಕತೆ ಇಲ್ಲದಾಯಿತೆ? ನೆಲದ ಮೇಲೆ ಸರಳ ಪದ್ಮಾಸನ ಹಾಕಿ ಕೂತು ಊಟ ಮಾಡುವುದ್ದಕ್ಕಾಗುತ್ತಿಲ್ಲವೆ?

ಎಚ್ಚರಿಕೆಯೆ ಘಂಟೆ/ತೂಗುಕತ್ತಿ ನಿಮ್ಮ ನೆತ್ತಿಯ ಮೇಲೆ ನೇತಾಡುತ್ತಿದೆ!

ಒಂದು ಕಾಲವಿತ್ತು, ಹೊಟ್ಟೆ ಮುಂದೆ ಇರುವವರು ಅತೀವ ಗೌರವವನ್ನು ಸಂಪಾದಿಸುತ್ತಿದರು. (ಅದು ಸದೃಢ ಆರ್ಥಿಕತೆಯ ಸಂಕೇತವಾಗಿತ್ತು.) ಕಾಲ ಬದಲಾದಂತೆ, ಜಾಗತೀಕರಣದ ತಂಪು ಪಸರಿಸಿದಂತೆ ಬಹುತೇಕ ಜನರ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತಾ ಬಂದತೆ, ಹೊಟ್ಟೆ ಸಂಪಾದಿಸುತ್ತಿದ್ದ ಗೌರವ ಕಡಿಮೆಯಾಗುತ್ತಾ ಹೋಗಿ, ಇಂದು ಹೊಟ್ಟೆ ಬೆಳೆಸಿಕೊಂಡವರು ಒಂದು ರೀತಿಯ ಅಸಹನೀಯ (ಅಸಹನೀಯ ಎಂದರೆ ಸ್ವಲ್ಪ ಅತಿರೇಕವಾಗಬಹುದು, ಹಾಸ್ಯಸ್ಪದ ಎನ್ನಬಹುದು) ರೀತಿಯಲ್ಲಿ ನೋಡಲ್ಪಡುತ್ತಿದ್ದಾರೆ.

ಹೊಟ್ಟೆ ಬೆಳೆಸಿಕೊಳ್ಳಲು ಹಲವಾರು ಕಾರಣಗಳಿವೆ. ಆಲಸ್ಯತನ, ಆರೋಗ್ಯದ ಬಗೆಗಿನ ಉದಾಸೀನತೆ, ಹೊಟ್ಟೆಬಾಕತನ, ಜೀವನದಲ್ಲಿನ ಉಡಾಫೆತನ (ಇರುವಷ್ಟು ದಿನ ಚೆನ್ನಾಗಿ ತಿಂದು ಉಂಡು ಮಲಗಿ ಹಾಯಾಗಿ ಕಾಲ ಕಳೆಯಬೇಕೆನ್ನುವ ಮಾನಸಿಕ ಅವಸ್ಥೆ!) ಇತ್ಯಾದಿಗಳು. ಹಿಂದೆ ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರಲಿಲ್ಲ. ಕಾಳಜಿ ಇದ್ದದ್ದಿಲ್ಲ ಎನ್ನುವದಕ್ಕಾಗದಿದ್ದರೂ, ಆಗಿನ ಬಡತನದಲ್ಲಿ ದುಡ್ಡು, ಹೆಸರು ಗಳನ್ನು ಸಂಪಾದಿಸುವುದೇ ಮೇಲಾಗಿತ್ತು. (ಇಂದು ಹೇರಳವಾಗಿ ದುಡ್ಡಿದ್ದವರಿಗೆ, ಇದು ಇಲ್ಲ ಎಂದೇನಿಲ್ಲ). ಇದಕ್ಕೆ ಅವಶ್ಯಕವಾದ ಕಷ್ಟ ಪಡಬೇಕಾಗಿದ್ದದರಿಂದ (ಬಹಳಷ್ಟು ಸಮಯ ದೈಹಿಕವಾಗಿಯೇ ಕಷ್ಟ ಪಡಬೇಕಾಗಿತ್ತು), ದೈಹಿಕವಾಗಿ ಸಂಬಂಧಿಸಿದ ಅನಾರೋಗ್ಯ (ನಿರ್ಧಿಷ್ಟವಾಗಿ ಹೇಳಬೇಕಾದರೆ ಬೊಜ್ಜಿಗೆ ಸಂಭಂದಿಸಿದ ತೊಂದರೆಗಳು) ಕಡಿಮೆಯಿದ್ದವು. ಈಗ ಕಾಲ ಚಕ್ರ ವೈಙ್ನಾನಿಕ ಪ್ರಗತಿಯತ್ತ ತಿರುಗಿದೆ. ಓಡಾಡಲು ಮೋಟಾರು ವಾಹನಗಳಿವೆ. ದೈಹಿಕವಾಗಿ ಮಾಡುತ್ತಿದ್ದ ಬಹುತೇಕ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿವೆ. ಆದುದರಿಂದು ಇಂದು ಹಣ ಹೆಸರು ಇತ್ಯಾದಿಗಳನ್ನು ಗಳಿಸಲು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮಾನಸಿಕ ಶ್ರಮ ಮತ್ತು ಸಮಯ ಉಳಿತಾಯ! ಇದಕ್ಕೆ ಪೂರಕವಾಗಿ ಬಹಳಷ್ಟು ಜನ ಈ ಬೊಜ್ಜಿಗೆ ದಾಸರಾಗಿ, ಬೊಜ್ಜಿಗೆ ಸಂಭಂದಿಸಿದ ಹೃದಯ, ಮೂತ್ರಪಿಂಡ, ಸಕ್ಕರೆ ಖಾಯಿಲೆ, ರಕ್ತದೊತ್ತಡ ಮುಂತಾದವುಗಳಿಗೆ ಬಲಿಯಾಗುತ್ತಿರುವು ದುರದೃಷ್ಟಕರ!

ಸ್ವಲ್ಪ ಮಾಸಿಕ ಜಾಗೃತಿ, ದೈಹಿಕ ವ್ಯಾಮಗಳಿಂದ ಈ ಖಾಯಿಲೆಗಳನ್ನು ತಡೆಗಟ್ಟಬಹುದು, ಇಲ್ಲವೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು? ಕೇಳಿ ಓದಿ ತಿಳಿದು ಆಚರಿಸಿದ ಕೆಲವೊಂದು ಸಲಹೆಗಳು!

೧) ಮೊದಲನೆಯ ಸಲಹೆ ಹೆತ್ತವರಿಗೆ! ಮಕ್ಕಳು ಓದಿ ಓದಿ ಬೆಳೆದು ನಿಮ್ಮ ನಂಟರು ಮತ್ತು ನೆರೆ ಹೊರೆಯ ಮಕ್ಕಳಿಗಿಂತ ಜಾಸ್ತಿ ಅಂಕ ತೆಗೆದರೆ ಕೋಡೇನೂ ಮೂಡುವುದಿಲ್ಲ. ಅಂದರೆ ಚೆನ್ನಾಗಿ ಓದಬಾರದೆಂದಲ್ಲ!, ತಂದೆ ತಾಯಿಗಳ ಮೌಢ್ಯಕ್ಕೆ ಮಕ್ಕಳು ಬಲಿಯಾಗುವುದು ಬೇಡ! ಸುಮ್ಮನೆ ನೆರೆಯವರಿಗೆ ಹೋಲಿಕೆ ಮಾಡಿ ಮಕ್ಕಳ ಮೇಲೆ ಅನಾವಶ್ಯಕ ಒತ್ತಡವನ್ನು ಎಂದೂ ತರಬಾರದು. ಯಾರೇ ಆದರೂ ನೆನಪಿನಲ್ಲಿಡಿ, ಮಕ್ಕಳು ಮೊದಲು ಚೆನ್ನಾಗಿ ಆಟವಾಡಬೇಕು. ಮಕ್ಕಳಿಗೆ ಆಟಕ್ಕಿಂತ ಒಳ್ಳೆಯ ವ್ಯಾಯಾಮವಿಲ್ಲ! ಚೆನ್ನಾಗಿ ಆಟವಾಡಿದ ಮೇಲೆ ಎರಡನೆಯ ಪ್ರಾಮುಖ್ಯತೆ ಓದುವುದು!
೨)೨೫ - ೩೦ ವರ್ಷಗಳಾದ ನಂತರ ನಿಯತವಾಗಿ ವ್ಯಾಯಾಮ ಅವಶ್ಯಕ! ೨೦ - ೨೫ ವಯೋಮಿತಿಯವರೂ ಕೂಡ ವ್ಯಾಯಾಮ ಮಾಡಲೇಬೇಕು ಇಂದಿನ ದಿನಗಳಲ್ಲಿ!
೩)೧/೨ ದಿಂದ ೧ ಘಂಟೆ ವ್ಯಾಮಕ್ಕಾಗಿ ಮೀಸಲಿಡುವುದು ಒಳ್ಳೆಯದು. ಓಡುವುದು, ವೇಗವಾಗಿ ನಡೆಯುವುದು ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳು. ಯೋಗಾಸನ, ವ್ಯಾಯಾಮ ಶಾಲೆಗಳೂ ಕೂಡ ಒಳ್ಳೆಯವೆ. ಇವಲ್ಲದೆ ಬಹಳ ಹೊತ್ತು ಕುಣಿಯುವುದು, ಆಟವಾಡುವುದು (ಕಾಲ್ಚೆಂಡು - Foot Ball, ಚೀಲಚೆಂಡು - Basket ball, - ಕನ್ನಡ ಅನುವಾದಗಳು ಅಸಮರ್ಪಕ ಎನ್ನಿಸಬಹುದು ಕ್ಷಮಿಸಿ) ಕೂಡ ದೈಹಿಕ ವ್ಯಾಯಾಮಗಳೇ.

ಜಾಗೃತರಾಗೋಣ!
ನಮ್ಮ ಕಾರ್ಯನಿರತ ಒತ್ತಡದ ಜೀವನದಲ್ಲಿ ಬೊಜ್ಜಿಗೆ ಬಲಿಯಾಗಿ, ಅನಾರೋಗ್ಯಕ್ಕೆ ಗುರಿಯಾಗಿ ಮುಂದಿನ ಪೀಳಿಗೆಗೆ ಹೊರೆಯಾಗುವುದು ಒಳಿತಲ್ಲ. ಆರೋಗ್ಯ ಉಳಿದೆಲ್ಲಕ್ಕಿಂತಾ ಮಹತ್ವವಾದದ್ದು ಎಂಬುದನ್ನು ಮನದಟ್ಟು ಮಾಡಿಕೊಳ್ಳೋಣ! ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗೋಣ. ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ಆಚರಿಸೋಣ.

ದಾಸರು ಅಂದು ಹೇಳಿದ್ದು "ಎಲ್ಲರು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಇಂದು ಅಪ್ರಸ್ತುತವಾಯಿತೇನೋ, "ಎಲ್ಲರು ಮಾಡಬೇಕಾಗಿರುವುದು ಹೊಟ್ಟೆ ಕರಗಿಸುವುದಕ್ಕಾಗಿ (ಆರೋಗ್ಯಕ್ಕಾಗಿ)!" ಎಂದೆನಿಸುತ್ತಿದೆ!

ನೀವೇನೆನ್ನುತ್ತೀರಾ?

5 ಕಾಮೆಂಟ್‌ಗಳು:

  1. GurugaLe,

    Thaavu aarogyada bagge eega bahaLa kaaLaji vahisuvanthe kaaNuttide. Vyaayaama mukhya. Adakkintha mukhya vyaayaamavannu dinavu thappade maaduvenu ennuva druDha nirNaya. Hurupininda aarambhisida vyaayaamavannu nillisadanthe noDikoLLabEku. bahuShaha bahutheka janara samasye ee sakalpa shakthiya koratheye endu nanna abhipraaya.

    ಪ್ರತ್ಯುತ್ತರಅಳಿಸಿ
  2. raveesha, neenu hELida maatu satya. vyaayamavannu tappade, madhye biDade maaDuvudu bahala mukhya!

    ಪ್ರತ್ಯುತ್ತರಅಳಿಸಿ
  3. "ಎಲ್ಲರು ಮಾಡಬೇಕಾಗಿರುವುದು ಹೊಟ್ಟೆ ಕರಗಿಸುವುದಕ್ಕಾಗಿ" ಅಂದದ್ದು ಚೆನ್ನಾಗಿತ್ತು.. ಇಪ್ಪತ್ತೈದು ಮೂವತ್ತರ ನಂತರ ವ್ಯಾಯಾಮ ಖಂಡಿತ ಅವಶ್ಯ... ಚೆನ್ನಾಗಿ ಬರೆದಿದ್ದೀರಿ..

    ಪ್ರತ್ಯುತ್ತರಅಳಿಸಿ
  4. ಪ್ರಭುರವರೆ,

    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ