ಶುಕ್ರವಾರ, ಜುಲೈ 03, 2009

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಹಿರಿಯ ಪ್ರಾಥಮಿಕ ಶಾಲೆಯ ಒಂದು ತರಗತಿಯಲ್ಲಿ ಒಂದು ಪಾಠ ನನಗೆ ಬಹಳ ಇಷ್ಟವಾಗಿತ್ತು. ತಿಳಿ ಹಾಸ್ಯದಿಂದ ಕೂಡಿದ ಆ ಪಾಠ, ಬಹಳ ಆಸಕ್ತಿ ಮೂಡಿಸಿದ್ದ ಕೆಲವೇ ಪಾಠಗಳಲ್ಲಿ ಒಂದು. ಅದನ್ನು ಬರೆದಿದ್ದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು. ಆ ಪಾಠವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಬರೆದಿರುವ ಅಪೂರ್ವ ಪ್ರವಾಸ ಕೃತಿ “ಅಮೇರಿಕಾದಲ್ಲಿ ಗೊರೂರು” ನಿಂದ ಆರಿಸಿದ್ದು. ಮುಂದೆ ಓದಿ


ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ

ಒಮ್ಮೆ ಕನ್ನಡದ ಒಂದು ಪ್ರಖ್ಯಾತ ಅಂತರ್ಜಾಲ ತಾಣದಲ್ಲಿ ಒಬ್ಬರು ಬರೆದಿದ್ದರು. ಆ ಬರವಣಿಗೆ ಈ ರೀತಿ ಇತ್ತು. ಅವರು ಆವರಣ ಓದಿದ್ದಾರೆ. ತಮ್ಮ ವಿಚಾರಧಾರೆಗೆ ಬಹಳ ಹೋಲಿಕೆಯಿದ್ದ ಕೃತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಭೈರಪ್ಪನವರ ಇತರ ಕೃತಿಗಳನ್ನು ಬಹಳವಾಗಿ ಮೆಚ್ಚಿದ್ದಾರೆ. ಹೀಗೆ ಕುತೂಹಲದಿಂದ ಕನ್ನಡ ನಾಡಿನ ಇತರ ಸಾಹಿತಿಗಳ, ಆವರಣದ ಬಗೆಗಿನ ಅಭಿಪ್ರಾಯಗಳನ್ನು ತಿಳಿದಿಕೊಳ್ಳುವ ತವಕ. ಇವರಿಗೆ ಮೊದಲು ಪೂರ್ಣಚಂದ್ರ ತೇಜಸ್ವಿ ಕೂಡ ನೆಚ್ಚಿನ ಕೃತಿಕಾರರೆಂದು ಕರೆದುಕೊಳ್ಳುತ್ತಾರೆ. ಆದರೆ ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಒಂದು ಹೇಳಿಕೆ “undigestible stuff” (ಜೀರ್ಣವಾಗದ ಸಂಗತಿಗಳು) ಇವರಿಗೆ ಇಷ್ಟವಾಗುವುದಿಲ್ಲ. ಇದು ಸಹಜ. ಆದರೆ ಇವರು ಒಂದು ಹೆಜ್ಜೆ ಮುಂದೆ ಹೋಗಿ, ಭೈರಪ್ಪ ಮತ್ತು ತೇಜಸ್ವಿಯವರ ಕೃತಿಗಳ ಸಮಗ್ರ ಅವಲೋಕನ ಮಾಡಿ ಭೈರಪ್ಪನವರೇ ಉತ್ತಮ ಎಂಬ ತೀರ್ಪು ಕೊಟ್ಟುಬಿಡುತ್ತಾರೆ. ಇದಕ್ಕೆ ಇವರು ಹೇಳುವುದು ಹೀಗೆ.. ತೇಜಸ್ವಿ ಬರೆದಿದ್ದೇನು? ಕೆಲವು ಅನುವಾದ, ಇನ್ನು ಕೆಲವು ಪಕ್ಷಿ ಪುಕ್ಕದ ಕಥೆ, ಒಂದು ಪ್ರವಾಸ ಕಥನ ಅಷ್ಟೆ. ಆದರೆ ಭೈರಪ್ಪನವರು ಇತಿಹಾಸಕಾರ, ತತ್ವಜ್ಞಾನಿ. ಬಹಳ ಸಂಶೋಧನೆ ಮಾಡಿ ಬರೆಯುತ್ತಾರೆ. ಅದಕ್ಕೆ ಭೈರಪ್ಪ ತೇಜಸ್ವಿಗಿಂತ ಉತ್ತಮ ಎನ್ನುತ್ತಾರೆ. ಎಷ್ಟು ಎಳಸು ವಾದ ಅನ್ನಿಸುವುದಿಲ್ಲವೇ? ಭೈರಪ್ಪ ಮತ್ತು ತೇಜಸ್ವಿ ಇಬ್ಬರ ಕ್ಷೇತ್ರ ಸಂಪೂರ್ಣ ಬೇರೆ ಬೇರೆ. ತಮ್ಮ ಕ್ಷೇತ್ರಗಳಲ್ಲಿ ಇಬ್ಬರೂ ಅಭೂತಪೂರ್ವ ಕೃತಿಗಳನ್ನು ಬರೆದಿದ್ದಾರೆ. ಭೈರಪ್ಪ ಕೆಲವು ಕೃತಿಗಳನ್ನು ಬರೆಯಬೇಕಾದರೆ ಎಷ್ಟೋ ವರ್ಷಗಳ ಕಾಲ ಹಿಮಾಲಯದಲ್ಲಿದ್ದು ಸಂಶೋಧನೆ ಮಾಡಿ ಬರೆದಿದ್ದಾರೆ. ತೇಜಸ್ವಿ ಪಕ್ಷಿಗಳ ಬಗ್ಗೆ ಬರೆಯಬೇಕಾದರೆ ಕಾಡು ಮೇಡುಗಳನ್ನು ಸುತ್ತಿ, ಪಕ್ಷಿಗಳನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿ ಬರೆಯುತ್ತಾರೆ. ಯಾವುದೋ ಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಸುತ್ತ ಕಾಡು ಬೆಳಸಿ, ಕೆರೆ ಕಟ್ಟಿ ಪಕ್ಷಿಗಳನ್ನು ಆಕರ್ಷಿಸಿ ಅವುಗಳ ಅಧ್ಯಯನಕ್ಕೆ ಬಹಳ ಶ್ರಮ ಪಡುತ್ತಾರೆ. ಹೀಗೆ ಇಬ್ಬರದೂ ಶ್ರಮದ ಹಾದಿಯೇ. ನನಗೆ ಒಬ್ಬರು ವಿಭೂತಿಪುರುಷರಾದರು ಎಂಬ ಮಾತ್ರಕ್ಕೆ ಇಬ್ಬರನ್ನೂ ಒಂದು ವಾಕ್ಯದಲ್ಲಿ ವಿಮರ್ಶೆ ಮಾಡಿ ತೀರ್ಪು ಕೊಡುವುದು ಎಷ್ಟು ತಪ್ಪಲ್ಲವೇ? ಆಷ್ಟಕ್ಕೂ ಆ ಬರಹಗಾರರು ಬರೆಯಬೇಕಾಗಿದ್ದುದು ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಹೇಳಿಕೆ ತಪ್ಪು ಎಂದು. ಅದರ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಿದ್ದರೆ ಎಲ್ಲರೂ ಒಪ್ಪಿಕೊಳ್ಳಬಹುದಿತ್ತು! ಮುಂದೆ ಓದಿ

೩೨ ನೇ ವಿಜ್ಞಾನೋತ್ಸವ ನಡೆಯುತ್ತಿದೆ — ನೆನಪಿರಲಿ

ದಿವಂಗತ ಪದ್ಮಭೂಷಣ ಡಾ ಹೆಚ್ ನರಸಿಂಹಯ್ಯನವರಿಂದ ಸ್ಥಾಪಿತವಾದ ಬೆಂಗಳೂರು ವಿಜ್ಞಾನ ವೇದಿಕೆಯ ವತಿಯಿಂದ ವಿಜ್ಞಾನೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಖ್ಯಾತ ವಿಜ್ಞಾನಿಗಳ ಉಪನ್ಯಾಸಗಳಿರುತ್ತವೆ.

ಸ್ಥಳ: ಡಾ ಹೆಚ್ ಎನ್ ಸಭಾಂಗಣ
ನ್ಯಾಶನಲ್ ಕಾಲೇಜು
ಬಸವನಗುಡಿ
ದಿನಾಂಕ: ೦೧- ೦೭- ೨೦೦೯ ರಿಂದ ೩೧-೦೭-೨೦೦೯ ಪ್ರತಿದಿನ
ಸಮಯ: ಸಂಜೆ ೬ ಘಂಟೆಗೆ

ಬಹಳಷ್ಟು ಕಾರ್ಯಕ್ರಮಗಳ ಭಾಷಾ ಮಾಧ್ಯಮ ಆಂಗ್ಲವೇ ಆದರೂ ಕನ್ನಡಕ್ಕೆ ಕೊರತೆಯಿಲ್ಲ. ಸ್ವಾಗತ ಭಾಷಣ ವಾಗುವುದು ಆಪ್ತ ಕನ್ನಡದಲ್ಲೇ. ಬಹಳಷ್ಟು ಉಪನ್ಯಾಸಗಳು ಕನ್ನಡದಲ್ಲೂ ಇವೆ. ಕನ್ನಡದ ಕಂಪು ಇದ್ದೇ ಇರುತ್ತದೆ.

ಬೇರೆ ಆಯೋಜಕರು ಈ ಕಾರ್ಯಕ್ರಮ ಆಯೋಜಿಸಿದ್ದರೆ ಸಾವಿರಾರು ರೂಗಳನ್ನೂ ದಂಡ ತೆತ್ತಿದ್ದರೂ ಇಂತಹ ಬಹಳಷ್ಟು ಉಪನ್ಯಾಸಗಳನ್ನು ಕೇಳಲು ಸಿಗುವುದಿಲ್ಲ. ಇಂತಹ ಸದವಕಾಶವನ್ನು ವಿಜ್ಞಾನ ಆಸಕ್ತರು ತಪ್ಪಿಸಿಕೊಳ್ಳಬಾರದೆಂದು ಸಮರಸದ ಆಶಯ. ಕಾರ್ಯಕ್ರಮ ಪಟ್ಟಿ

ನೆನ್ನೆ ವಿಜ್ಞಾನೋತ್ಸವದಲ್ಲಿ

ಡಾ ಎಸ್ ಸಿತಾರಾಮ ಅಯ್ಯಂಗಾರ್ ರವರ ವಿಜ್ಞಾನ ಮತ್ತು ಅಂತರ್ಜಾಲ ಸಲಕರಣೆಗಳು (Science and Cybertools) ಎಂಬ ವಿಷಯದ ಮೇಲೆ ಉಪನ್ಯಾಸವಿತ್ತು. (ಇದು ವಿಜ್ಞಾನೋತ್ಸವದ ೨೨೫೧ ನೇ ವಿಜ್ಞಾನ ಉಪನ್ಯಾಸ).ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ