ಸೋಮವಾರ, ಜುಲೈ 20, 2009

ಸಮರಸದಲ್ಲಿ ಬರಹ ವಾಸುರವರ ಸಂದರ್ಶನ

ಲಿಪ್ಯಂತರ ಆಧಾರಿತ ಬರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮೊದಲ ಬಾರಿಗೆ ಕನ್ನಡವನ್ನು ಗಣಕತಂತ್ರಕ್ಕೆ ಸುಲಭವಾಗಿ ಹರಿಸಿದ ಹರಿಕಾರರು ಶೇಷಾದ್ರಿ ವಾಸು. ಗಣಕ ತಂತ್ರದಲ್ಲಿ ಕನ್ನಡ ಬಳಸುವ ಬಹುಷಃ ಎಲ್ಲರಿಗೂ ಬರಹದ ಅನುಭವ ಆಗಿರುತ್ತದೆ. ಈಗಿನ ತಂತ್ರಜ್ಞರಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಬರಹ ತಂತ್ರಜ್ಞಾನ ಮತ್ತು ವಾಸುರವರು ಮಾದರಿಯಾಗಬಹುದು, ಹೆಚ್ಚಿನ ಸ್ಪೂರ್ಥಿ, ಉತ್ತೇಜನಗಳನ್ನು ನೀಡಬಹುದು ಎಂದೆನೆಸಿ ಆ ಉತ್ಪನ್ನದ ಹಿಂದಿನ ಶ್ರಮ, ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಅವರಿಗಿದ್ದ ಪ್ರೇರಣೆ, ಇಂದಿನ ದಿನದ ಕನ್ನಡ ತಂತ್ರಜ್ಞಾನದ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಬರಹ ವಾಸುರವರಲ್ಲಿ ಕೇಳಬೇಕೆಂಬುದು ಸಮರಸ ಇಚ್ಛೆಯಾಗಿತ್ತು. ವಾಸುರವರ ಕರ್ಮಭೂಮಿ ಅಮೇರಿಕ ಆಗಿರುವುದರಿಂದ ನಾವು ಸಂದರ್ಶನಕ್ಕೆ ತಯಾರಿಸಿದ್ದ ಪ್ರಶ್ನೆಗಳನ್ನು ವಿ - ಅಂಚೆ ಮೂಲಕ ಕಳುಹಿಸಿ ಕೊಟ್ಟೆವು. ವಾಸುರವರು ತಮ್ಮ ಕಾರ್ಯನಿರತ ಜೀವನದ ಹೊರತಾಗಿಯೂ ನಮ್ಮ ಸಂದರ್ಶನಕ್ಕೆ ಸ್ಪಂದಿಸಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಶನವನ್ನು ಎರಡು ಭಾಗದಲ್ಲಿ ಓದುಗರಿಗೆ ಒದಗಿಸಲಾಗುತ್ತದೆ. ವಾಸುರವರ ಬಹು ಸಣ್ಣ ಹಿನ್ನಲೆಯೊಂದಿಗೆ ಸಂದರ್ಶನದ ಮೊದಲನೆ ಸಂಚಿಕೆ ನಿಮ್ಮ ಮುಂದೆ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ