ಶನಿವಾರ, ಜನವರಿ 31, 2009

ಬೇಂದ್ರೆ ಜಯಂತಿ



ಇಂದು (ಜನವರಿ ೩೧) ಕರ್ನಾಟಕದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮ ದಿನ. ಹಿಂದೊಮ್ಮೆ ಇವರ ಕಿರು ಪರಿಚರ ಮಾಡಿಕೊಟ್ಟಿದ್ದೆ.
http://guruve.blogspot.com/2006/10/blog-post_30.html

ಹೋದ ವರ್ಷ ಸಾಧನಕೇರಿ - ದಾರಾವಾಢದಲ್ಲಿರುವ ಬೇಂದ್ರೆಯವರ ಮನೆ, ಬೇಂದ್ರೆ ನೆನಪಿನ ಸಂಗ್ರಹಾಲಯ, ಮತ್ತು ಬೇಂದ್ರೆಯವರ ಕಾವ್ಯಗಳಿಗೆ ಸ್ಫೂರ್ಥಿಯನ್ನು ಕೊಟ್ಟ ಮನೆಯ ಮುಂದಿನ ಕೆರೆಗಳನ್ನು ನೋಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಅಲ್ಲಿ ಸೆರೆ ಹಿಡಿದ ಕೆಲವು ಭಾವಚಿತ್ರಗಳನ್ನು ನಿಮ್ಮೊಂದಿಗೆ ಈ ದಿನ ಹಂಚಿಕೊಳ್ಳುತ್ತಿದ್ದೇನೆ.













ಬೇಂದ್ರೆಯವರ ಅದ್ಭುತ ಕವನಗಳಿಗೆ ನಾನು ಮಾರು ಹೋಗಿದ್ದೇನೆ. ಬೇಂದ್ರೆಯವರ ಕೆಲೊವೊದು ಕವನಗಳಂತೂ ನನಗೆ ಜೀವನದಲ್ಲಿ ಬಹಳ ಪಾಠಗಳನ್ನು ಕಲಿಸಿಕೊಟ್ಟಿವೆ. ಬೇಂದ್ರೆಯವರ ಕವನಗಳ ಕೆಲೊವೊಂದು ಸಾಲುಗಳಂತೂ ಬೇರೆ ಯಾರ ಕಲ್ಪನೆಗೆ ಸಿಗಲು ಸಾಧ್ಯವೇ ಎಂದೆನೆಸುತ್ತವೆ!
ಕೆಲವೊಂದನ್ನು ಇಲ್ಲಿ ನೆನೆದರೆ,

"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಯಾಕೆ ಬಾರದೊ?"
"ಒಂದೆ ಒಂದು ಜನ್ಮದಲ್ಲಿ .. ಒಂದೆ ಬಾಲ್ಯ ಒಂದೆ ಹರೆಯ.. ನಮಗದಷ್ಟೆ ಏತಕೊ?
"ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-ಪರಮಾಣು ಕೀರ್ತಿ ನಾನು"
"ತುಳುಕ್ಯಾಡತಾವ ತೂಕಡಕಿ,, ಎವಿ ಅಪ್ಪತಾವ ಕಣ್ಣ ದುಡುಕಿ,, ಕನಸು ತೇಲಿ ಬರತಾವ ಹುಡುಕಿ!! ನೀವು ಹೊರಟಿದ್ದೀಗ ಎಲ್ಲಿಗೆ?"
"ನಂದ ನನಗ ಎಚ್ಚರರಿಲ್ಲ.. ಮಂದಿಗೊಡವಿ ಏನs ನನಗs.. ಒಂದೇ ಅಳತಿ ನಡದ ಚಿತ್ತ|| ಹಿಂದ ನೋಡದ ಗೆಳತಿ..."
"ಬಾರೋ ಸಾಧನಕೇರಿಗೆ.. ಮರಳಿ ನಿನ್ನೀ ಊರಿಗೆ"
"ಹರನ ಜಡೆಯಿಂದ.. ಹರಿಯ ಅಡಿಯಿಂದ.. ಋಷಿಯ ತೊಡೆಯಿಂದ ನುಸುಳಿ ಬಾ"
"ನಲ್ಲ! ನಿನ್ನ ಲಲ್ಲೆವಾತು.. ಮೀಸೆಕುಡಿಯಲಲ್ಲೆ ಹೂತು"
"ನಲ್ಲೆ! ನಿನ್ನ ಲಲ್ಲೆವಾತು.. ಮುಗುಳು ನಗೆಯಲಲ್ಲೆ ಹೂತು"
"ಉತ್ತರಧ್ರುವದಿಂ ದಕ್ಷಿಣಧೃವಕೂ.. ಚುಂಬಕ ಗಾಳಿಯು ಬೀಸುತಿದೆ"
"ಸಂಸಾರ ಸಾಗರಾದಾಗ, ಲೆಕ್ಕವಿರದಷ್ಟು ದು:ಖದ ಬಂಡಿ"
"ಅತ್ತಾರೆ ಅತ್ತುಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡೀಯದಿರು ಬಿಕ್ಕ"
"ಕುರುಡು ಕಾಂಚಾಣ ಕುಣಿಯುತಲಿತ್ತು! ಕಾಲಿಗೆ ಬಿದ್ದವರ ತುಳಿಯುತಲಿತ್ತೋ!"
"ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೀಗ ಸಾಗಿತ್ತ;"
"ಇದ್ದದ್ದು ಮರೆಯೋಣ.. ಇಲ್ಲದ್ದು ತೆರೆಯೋಣ.. ಹಾಲ್ಜೇನು ಸುರಿಯೋನ.. ಕುಣಿಯೋಣು ಬಾ"
"ನಾರಿ ನಿನ್ನ ಮಾರೀಮ್ಯಾಗ .. ನಗೀ ನವಿಲು ಆಡತಿತ್ತ"
"ಕಣ್ಣಿನ್ಯಾಗ ಬಣ್ಣದ ನೋಟ.. ತಕ ತಕ ಕುಣಿದಾಡತಿತ್ತ"
"ಕೆನ್ನನ ಹೊನ್ನನ ಬಣ್ಣ - ಬಣ್ಣಗಳ.. ರೆಕ್ಕೆಗಳೆರಡೂ ಪಕ್ಕದಲುಂಟು"
"ಶಾಂತಿರಸವೇ ಪ್ರೀತಿಯಿಂದಾ.. ಮೈದೋರಿತಣ್ಣಾ.. ಇದು ಬರಿ-ಬೆಳಗಲ್ಲೋ ಅಣ್ಣಾ."

ವಿ. ಸೂ : ಸಮಯದ ಅಭಾವದಿಂದ ತುರಾತುರಿಯಲ್ಲಿ ಬರೆದ ಈ ನೆನಪಿನ ಚಿತ್ರದ ಭಾವಚಿತ್ರಗಳಿಗೆ ಶೀರ್ಷಿಕೆಯನ್ನು ಬರೆಲಾಗಿಲ್ಲ. ಕ್ಷಮಿಸಿ.

2 ಕಾಮೆಂಟ್‌ಗಳು: