ಸೋಮವಾರ, ನವೆಂಬರ್ 09, 2009

ಅರ್ಥ -- ಸೂಕ್ಷ್ಮತೆಯ ಕೊರತೆಯುಳ್ಳ ಅರ್ಥಭರಿತ ಚಿತ್ರ

ಬಿ ಸುರೇಶ್ ನಿರ್ದೇಶನದ ಅರ್ಥ ಚಲನಚಿತ್ರವನ್ನು ಕೈಲಾಶ್ ಚಿತ್ರಮಂದಿರದಲ್ಲಿ ಜರುಗುತ್ತಿರುವ ಸಮುದಾಯ ಚಿತ್ರೋತ್ಸವದಲ್ಲಿ ನೋಡುವ ಅವಕಾಶ ಒದಗಿ ಬಂತು. ಹೇಳಬೇಕೆಂದಿರುವ ಸಂದೇಶಕ್ಕೆ ಪೂರಕ ಕಥೆಯನ್ನು ಹೆಣೆದಿದ್ದಾರಾದರೂ, ಚಿತ್ರವನ್ನು ನಿರೂಪಿಸುವಲ್ಲಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣಿಸುತ್ತದೆ. ಸಂದೇಶ ಉತ್ತಮವಾದದ್ದಾದರೂ, ಯಾವುದೋ ಒಂದು ಕೋಮು ಅಥವಾ ಒಂದು ಸಂಸ್ಥೆಯ ಬಗ್ಗೆ ಪೂರ್ವಾಗ್ರಪೀಡಿತ ಮನಸ್ಸಿನಿಂದ, ಒಂದು ಕೋಮನ್ನು ಅಥವಾ ಒಂದು ರಾಜಕೀಯ ಪಕ್ಷವನ್ನು ಸಂತುಷ್ಟಿಸಲು ಚಿತ್ರವನ್ನು ಮಾಡಿಬಿಟ್ಟಿದ್ದಾರೆಯೇ ಎಂಬ ಸಂದೇಹ ಉಳಿದುಬಿಡುತ್ತದೆ.

[caption id="attachment_627" align="aligncenter" width="215" caption="http://www.viggy.com/news/images/Artha_Suresh.jpg"]http://www.viggy.com/news/images/Artha_Suresh.jpg[/caption]

ಚಿತ್ರಕಥೆಗೆ ಬಂದರೆ, ಚಲನಚಿತ್ರದಲ್ಲಿ ಬಡತನ, ಜಾಗತೀಕರಣ, ವಿದೇಶಿ ವ್ಯಾಮೋಹ, ಅನಕ್ಷರಸ್ಥತೆ, ಕೋಮುದಳ್ಳುರಿ, ಕೌಟುಂಬಿಕ ಕಲಹ, ಉಳ್ಳವರ ದಬ್ಬಾಳಿಕೆ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು ಪ್ರಾಮಾಣಿಕ ಪ್ರಯತ್ನವಾಗಿದೆ. ಸೀನಪ್ಪ(ರಂಗಾಯಣ ರಘು) ಆಟೋ (ತ್ರಿಚಕ್ರ ವಾಹನ) ಚಾಲಕ. ಆಟೋ ಮಾಲೀಕನಿಗೆ ದಿನಕ್ಕೆ ೧೫೦/- ರುಪಾಯಿಗಳನ್ನು ಕೂಡ ಸಂಪಾದಿಸಿ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವನಿಗೆ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ